ನವದೆಹಲಿ: ಕರ್ಣಾಟಕ ಬ್ಯಾಂಕ್ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 20ರಷ್ಟು ಇಳಿಕೆ ಕಂಡು ₹330 ಕೋಟಿಗೆ ತಲುಪಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಲಾಭವು ₹ 412 ಕೋಟಿಯಷ್ಟು ಇತ್ತು. ಒಟ್ಟು ವರಮಾನವು ₹2,031 ಕೋಟಿಯಿಂದ ₹2,276 ಕೋಟಿಗೆ ಏರಿಕೆ ಕಂಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ನಿವ್ವಳ ಬಡ್ಡಿ ವರಮಾನ ₹802 ಕೋಟಿಯಿಂದ ₹ 822 ಕೋಟಿಗೆ ಏರಿಕೆ ಕಂಡಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್ಪಿಎ) ಶೇ 3.36 ರಿಂದ ಶೇ 3.47ಕ್ಕೆ ಏರಿಕೆ ಕಂಡಿದೆ. ಆದರೆ, ನಿವ್ವಳ ಎನ್ಪಿಎ ಶೇ 1.72 ರಿಂದ ಶೇ 1.36ಕ್ಕೆ ಇಳಿಕೆ ಕಂಡಿದೆ ಎಂದು ಬ್ಯಾಂಕ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.