<p><strong>ನವದೆಹಲಿ (ಪಿಟಿಐ): </strong>ನವೋದ್ಯಮಗಳನ್ನು ಸಾಲ ಖಾತರಿ ಯೋಜನೆಯ (ಸಿಜಿಎಸ್) ವ್ಯಾಪ್ತಿಗೆ ತರುವ ಸಂಬಂಧ ಕೇಂದ್ರ ಸರ್ಕಾರವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.</p>.<p>ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ (ಡಿಪಿಐಐಟಿ) ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 6ರಂದು ಅಥವಾ ನಂತರ ಸಾಲ ಮಂಜೂರು ಆಗಿದ್ದರೆ ಅಂತಹ ನವೋದ್ಯಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ.</p>.<p>ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ನೀಡಿರುವ ಸಾಲಕ್ಕೆ ಸರ್ಕಾರವೇ ಖಾತರಿದಾರ ಆಗುವ ಉದ್ದೇಶದಿಂದ ನವೋದ್ಯಮಗಳಿಗೆ ಸಾಲ ಖಾತರಿ ಯೋಜನೆಗೆ (ಸಿಜಿಎಸ್ಎಸ್) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಇಲಾಖೆಯು ತಿಳಿಸಿದೆ.</p>.<p>ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಲು ಈ ಯೋಜನೆಯು ನವೋದ್ಯಮಗಳಿಗೆ ನೆರವಾಗಲಿದೆ. ಪ್ರತಿ ಸಾಲಗಾರನಿಗೆ ನೀಡುವ ಸಾಲದ ಗರಿಷ್ಠ ಮೊತ್ತವು ₹10 ಕೋಟಿಯನ್ನು ಮೀರುವಂತಿಲ್ಲ ಎಂದು ಇಲಾಖೆಯು ಸೂಚನೆ ನೀಡಿದೆ.</p>.<p>ಸ್ಥಿರವಾದ ವರಮಾನ ಹೊಂದಿರುವ, ಒಂದು ವರ್ಷಕ್ಕೂ ಅಧಿಕ ಸಮಯದವರೆಗಿನ ಪ್ರತಿ ತಿಂಗಳ ಲೆಕ್ಕಪರಿಶೋಧಿತ ವರದಿ ಹೊಂದಿರುವ, ಸಾಲಕ್ಕೆ ಉತ್ತರದಾಯಿ ಆಗಿರುವ, ಸಾಲ ಬಾಕಿ ಉಳಿಸಿಕೊಂಡಿರದ ಹಾಗೂ ಆರ್ಬಿಐ ಮಾರ್ಗಸೂಚಿಯ ಪ್ರಕಾರ, ಅನುತ್ಪಾದಕ ಆಸ್ತಿ ಹೊಂದಿರದೇ ಇರುವ ನವೋದ್ಯಮವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.</p>.<p>ನವೋದ್ಯಮಕ್ಕೆ ನೀಡುವ ಸಾಲಕ್ಕೆ ಖಾತರಿ ಆಗುವ ಉದ್ದೇಶದಿಂದ<br />ಕೇಂದ್ರ ಸರ್ಕಾರವು ಒಂದು ಟ್ರಸ್ಟ್ ಅಥವಾ ನಿಧಿಯನ್ನು ಸ್ಥಾಪಿಸಲಿದೆ. ಈ ನಿಧಿಯನ್ನು ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟೀ ಕಂಪನಿಯು ನಿರ್ವಹಣೆ ಮಾಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ನವೋದ್ಯಮಗಳನ್ನು ಸಾಲ ಖಾತರಿ ಯೋಜನೆಯ (ಸಿಜಿಎಸ್) ವ್ಯಾಪ್ತಿಗೆ ತರುವ ಸಂಬಂಧ ಕೇಂದ್ರ ಸರ್ಕಾರವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.</p>.<p>ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ (ಡಿಪಿಐಐಟಿ) ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 6ರಂದು ಅಥವಾ ನಂತರ ಸಾಲ ಮಂಜೂರು ಆಗಿದ್ದರೆ ಅಂತಹ ನವೋದ್ಯಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ.</p>.<p>ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ನೀಡಿರುವ ಸಾಲಕ್ಕೆ ಸರ್ಕಾರವೇ ಖಾತರಿದಾರ ಆಗುವ ಉದ್ದೇಶದಿಂದ ನವೋದ್ಯಮಗಳಿಗೆ ಸಾಲ ಖಾತರಿ ಯೋಜನೆಗೆ (ಸಿಜಿಎಸ್ಎಸ್) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಇಲಾಖೆಯು ತಿಳಿಸಿದೆ.</p>.<p>ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಲು ಈ ಯೋಜನೆಯು ನವೋದ್ಯಮಗಳಿಗೆ ನೆರವಾಗಲಿದೆ. ಪ್ರತಿ ಸಾಲಗಾರನಿಗೆ ನೀಡುವ ಸಾಲದ ಗರಿಷ್ಠ ಮೊತ್ತವು ₹10 ಕೋಟಿಯನ್ನು ಮೀರುವಂತಿಲ್ಲ ಎಂದು ಇಲಾಖೆಯು ಸೂಚನೆ ನೀಡಿದೆ.</p>.<p>ಸ್ಥಿರವಾದ ವರಮಾನ ಹೊಂದಿರುವ, ಒಂದು ವರ್ಷಕ್ಕೂ ಅಧಿಕ ಸಮಯದವರೆಗಿನ ಪ್ರತಿ ತಿಂಗಳ ಲೆಕ್ಕಪರಿಶೋಧಿತ ವರದಿ ಹೊಂದಿರುವ, ಸಾಲಕ್ಕೆ ಉತ್ತರದಾಯಿ ಆಗಿರುವ, ಸಾಲ ಬಾಕಿ ಉಳಿಸಿಕೊಂಡಿರದ ಹಾಗೂ ಆರ್ಬಿಐ ಮಾರ್ಗಸೂಚಿಯ ಪ್ರಕಾರ, ಅನುತ್ಪಾದಕ ಆಸ್ತಿ ಹೊಂದಿರದೇ ಇರುವ ನವೋದ್ಯಮವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.</p>.<p>ನವೋದ್ಯಮಕ್ಕೆ ನೀಡುವ ಸಾಲಕ್ಕೆ ಖಾತರಿ ಆಗುವ ಉದ್ದೇಶದಿಂದ<br />ಕೇಂದ್ರ ಸರ್ಕಾರವು ಒಂದು ಟ್ರಸ್ಟ್ ಅಥವಾ ನಿಧಿಯನ್ನು ಸ್ಥಾಪಿಸಲಿದೆ. ಈ ನಿಧಿಯನ್ನು ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟೀ ಕಂಪನಿಯು ನಿರ್ವಹಣೆ ಮಾಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>