‘ಕಾಫಿ ಉದ್ದಿಮೆಯು ಈಗಾಗಲೇ 2018–19 ಮತ್ತು 2019–20ನೇ ಸಾಲಿನಲ್ಲಿನ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಎರಡು ವರ್ಷಗಳ ಉತ್ಪಾದನೆಯು ಕ್ರಮವಾಗಿ ಶೇ 35 ಮತ್ತು ಶೇ 50ರಷ್ಟು ಕಡಿಮೆಯಾಗಿತ್ತು. ಕೋವಿಡ್ ಲಾಕ್ಡೌನ್ ರೋಬಸ್ಟಾದ ಕೊಯ್ಲು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟಿಲ್ಲ’ ಎಂದು ಕರ್ನಾಟಕ ಪ್ಲ್ಯಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿರೀಷ್ ವಿಜಯೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.