‘ನಾವು ಮಾಡುವ ಕೆಲಸಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ಅನ್ನಿಸುತ್ತಿದೆ. ಜಿಎಸ್ಟಿ ವ್ಯವಸ್ಥೆ ಮತ್ತು ಕೋವಿಡ್ ನಿಯಂತ್ರಿಸಲು ಜಾರಿಗೆ ತಂದ ಲಾಕ್ಡೌನ್
ಗಳಿಂದಾಗಿ ಐದು ವರ್ಷಗಳಿಂದ ನಷ್ಟ ಆಗಿದ್ದು, ಒತ್ತಡದಲ್ಲಿ ಇದ್ದೇವೆ’ ಎಂದು ಹೊಸೂರಿನ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಂಘದ (ಎಚ್ಒಎಸ್ಟಿಐಎ) ಅಧ್ಯಕ್ಷ ಕೆ. ವೇಲುಮುರುಗನ್ ತಿಳಿಸಿದ್ದಾರೆ.