ಬಂಡವಾಳದ ನೆರವು ಹಾಗೂ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯಿಂದ ಸಿಕ್ಕ ಒತ್ತಾಸೆಯ ಕಾರಣದಿಂದಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ಬಾಕಿ ಇರಿಸಿಕೊಂಡಿದ್ದವರ ವಿರುದ್ಧ ಬಿಗಿ ನಿಲುವು ಅನುಸರಿಸಿದವು. ದೊಡ್ಡ ಪ್ರಮಾಣದ ಸಾಲ ತೀರಿಸದೆ ಇದ್ದ ಭೂಷಣ್ ಸ್ಟೀಲ್, ಜೆಟ್ ಏರ್ವೇಸ್, ಎಸ್ಸಾರ್ ಸ್ಟೀಲ್, ರೊಟೊಮ್ಯಾಕ್ನಂತಹ ಕಂಪನಿಗಳು, ನೀರವ್ ಮೋದಿಯಂತಹ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾದವು. ಈ ಎಲ್ಲ ಕ್ರಮಗಳ ಪರಿಣಾಮವಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು ಲಾಭ ಕಾಣುವಂತಾಯಿತು. ಹಿಂದಿನ ಹಣಕಾಸು ವರ್ಷದಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕ್ಗಳು ಷೇರುದಾರರಿಗೆ ಡಿವಿಡೆಂಡ್ ಕೂಡ ನೀಡಿವೆ.