<p><strong>ಬೆಂಗಳೂರು:</strong> ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯುಸರಕು ಸಾಗಣೆ, ಸಾರ್ವಜನಿಕ ಸಾರಿಗೆ, ಆಹಾರ ವಸ್ತುಗಳ ದರ ಏರಿಕೆಗೆ ಕಾರಣವಾಗುತ್ತಿದ್ದು ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 100 ರ ಗಡಿ ದಾಡಿದೆ. ಡೀಸೆಲ್ ದರ ಕೆಲವು ಪ್ರದೇಶಗಳಲ್ಲಿ ₹ 100ನ್ನು ದಾಟಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ₹ 100ರ ಸಮೀಪಕ್ಕೆ ಬಂದಿದೆ.</p>.<p>‘ಕೋವಿಡ್ ಹಾಗೂ ಲಾಕ್ಡೌನ್ಗೂ ಮೊದಲು ನನಗೆ ಪ್ರತಿನಿತ್ಯ ಕಚೇರಿಗೆ ಹೋಗಿಬರಲು ಅಂದಾಜು ₹ 1,500 ಬೇಕಾಗುತ್ತಿತ್ತು. ಪೆಟ್ರೋಲ್ ಬೆಲೆಯಲ್ಲಿ ಶೇಕಡ 40ರಷ್ಟು ಹೆಚ್ಚಳ ಆಗಿರುವುದರ ಕಾರಣದಿಂದಾಗಿ ಈಗ ₹ 2,100 ಬೇಕಾಗುತ್ತಿದೆ’ ಎಂದು ಬೆಂಗಳೂರಿನ ರಾಜಾಜಿನಗರ ನಿವಾಸಿಯೊಬ್ಬರು ಬೆಲೆ ಏರಿಕೆಯ ಬಿಸಿ ತಮಗೆ ತಟ್ಟಿರುವ ಬಗೆಯನ್ನು ವಿವರಿಸಿದರು. ಈ ಅವಧಿಯಲ್ಲಿ ಅವರ ವೇತನ ಕಡಿತ ಆಗಿದೆ, ವೇತನ ಇನ್ನು ಯಾವಾಗ ಮೊದಲ ಸ್ಥಿತಿಗೆ ತಲುಪಬಹುದು ಎಂಬುದು ಅವರಿಗೂ ಗೊತ್ತಿಲ್ಲ.</p>.<p>ಇಂಧನ ದರ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯ ಜೊತೆಗೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಎಕ್ಸೈಸ್ ಸುಂಕ ಮತ್ತು ರಾಜ್ಯಗಳು ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕೂಡ ಕಾರಣ.</p>.<p>ಇಂಧನದ ಮೇಲಿನ ಸುಂಕ ಕೇಂದ್ರ, ರಾಜ್ಯಗಳಿಗೆ ವರಮಾನದ ಪ್ರಮುಖ ಮೂಲ. 2020ರ ಏಪ್ರಿಲ್ನಿಂದ 2021ರ ಮಾರ್ಚ್ವರೆಗಿನ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಮೇಲಿನ ಎಕ್ಸೈಸ್ ಸುಂಕ ಸಂಗ್ರಹವು ₹ 3.35 ಲಕ್ಷ ಕೋಟಿಗೆ ಏರಿಕೆ ಆಗಿದೆ. ಅದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಎಕ್ಸೈಸ್ ಸುಂಕ ಸಂಗ್ರಹವು ₹ 1.78 ಲಕ್ಷ ಕೋಟಿ ಆಗಿತ್ತು. ವರ್ಷದಿಂದ ವರ್ಷಕ್ಕೆ ಎಕ್ಸೈಸ್ ಸುಂಕ ಸಂಗ್ರಹ ಹೆಚ್ಚುತ್ತಲೇ ಇದ್ದು, ಕೇಂದ್ರಕ್ಕೆ ಬರುವ ವರಮಾನವೂ ಹೆಚ್ಚಾಗುತ್ತಿದೆ.</p>.<p>ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಕಳೆದ ವರ್ಷ ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹ 19.98ರಿಂದ ₹ 32.9ಕ್ಕೆ ಏರಿಸಿತು. ಅದೇ ರೀತಿ, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹ 15.83ರಿಂದ ₹ 31.8ಕ್ಕೆ ಹೆಚ್ಚಿಸಿತು. ಈ ಏರಿಕೆಯ ಹೊರೆಯನ್ನು ಕಂಪನಿಗಳು ಇಂಧನ ದರವನ್ನು ಆಗಾಗ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾರಂಭಿಸಿ ದವು. ತಮಿಳುನಾಡು ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆ<br />ಯನ್ನು ಈಚೆಗೆ ₹ 3ರಷ್ಟು ತಗ್ಗಿಸಿದೆ. ಕರ್ನಾಟಕದಲ್ಲಿ ಈ ಬಗೆಯ ಕ್ರಮ ಜಾರಿಗೆ ಬಂದಿಲ್ಲ. ಕೇಂದ್ರ ಸರ್ಕಾರವು ತೈಲೋತ್ಪನ್ನಗಳ ಮೇಲಿನ ಸುಂಕ ಇಳಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯುಸರಕು ಸಾಗಣೆ, ಸಾರ್ವಜನಿಕ ಸಾರಿಗೆ, ಆಹಾರ ವಸ್ತುಗಳ ದರ ಏರಿಕೆಗೆ ಕಾರಣವಾಗುತ್ತಿದ್ದು ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 100 ರ ಗಡಿ ದಾಡಿದೆ. ಡೀಸೆಲ್ ದರ ಕೆಲವು ಪ್ರದೇಶಗಳಲ್ಲಿ ₹ 100ನ್ನು ದಾಟಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ₹ 100ರ ಸಮೀಪಕ್ಕೆ ಬಂದಿದೆ.</p>.<p>‘ಕೋವಿಡ್ ಹಾಗೂ ಲಾಕ್ಡೌನ್ಗೂ ಮೊದಲು ನನಗೆ ಪ್ರತಿನಿತ್ಯ ಕಚೇರಿಗೆ ಹೋಗಿಬರಲು ಅಂದಾಜು ₹ 1,500 ಬೇಕಾಗುತ್ತಿತ್ತು. ಪೆಟ್ರೋಲ್ ಬೆಲೆಯಲ್ಲಿ ಶೇಕಡ 40ರಷ್ಟು ಹೆಚ್ಚಳ ಆಗಿರುವುದರ ಕಾರಣದಿಂದಾಗಿ ಈಗ ₹ 2,100 ಬೇಕಾಗುತ್ತಿದೆ’ ಎಂದು ಬೆಂಗಳೂರಿನ ರಾಜಾಜಿನಗರ ನಿವಾಸಿಯೊಬ್ಬರು ಬೆಲೆ ಏರಿಕೆಯ ಬಿಸಿ ತಮಗೆ ತಟ್ಟಿರುವ ಬಗೆಯನ್ನು ವಿವರಿಸಿದರು. ಈ ಅವಧಿಯಲ್ಲಿ ಅವರ ವೇತನ ಕಡಿತ ಆಗಿದೆ, ವೇತನ ಇನ್ನು ಯಾವಾಗ ಮೊದಲ ಸ್ಥಿತಿಗೆ ತಲುಪಬಹುದು ಎಂಬುದು ಅವರಿಗೂ ಗೊತ್ತಿಲ್ಲ.</p>.<p>ಇಂಧನ ದರ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯ ಜೊತೆಗೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಎಕ್ಸೈಸ್ ಸುಂಕ ಮತ್ತು ರಾಜ್ಯಗಳು ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕೂಡ ಕಾರಣ.</p>.<p>ಇಂಧನದ ಮೇಲಿನ ಸುಂಕ ಕೇಂದ್ರ, ರಾಜ್ಯಗಳಿಗೆ ವರಮಾನದ ಪ್ರಮುಖ ಮೂಲ. 2020ರ ಏಪ್ರಿಲ್ನಿಂದ 2021ರ ಮಾರ್ಚ್ವರೆಗಿನ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಮೇಲಿನ ಎಕ್ಸೈಸ್ ಸುಂಕ ಸಂಗ್ರಹವು ₹ 3.35 ಲಕ್ಷ ಕೋಟಿಗೆ ಏರಿಕೆ ಆಗಿದೆ. ಅದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಎಕ್ಸೈಸ್ ಸುಂಕ ಸಂಗ್ರಹವು ₹ 1.78 ಲಕ್ಷ ಕೋಟಿ ಆಗಿತ್ತು. ವರ್ಷದಿಂದ ವರ್ಷಕ್ಕೆ ಎಕ್ಸೈಸ್ ಸುಂಕ ಸಂಗ್ರಹ ಹೆಚ್ಚುತ್ತಲೇ ಇದ್ದು, ಕೇಂದ್ರಕ್ಕೆ ಬರುವ ವರಮಾನವೂ ಹೆಚ್ಚಾಗುತ್ತಿದೆ.</p>.<p>ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಕಳೆದ ವರ್ಷ ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹ 19.98ರಿಂದ ₹ 32.9ಕ್ಕೆ ಏರಿಸಿತು. ಅದೇ ರೀತಿ, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹ 15.83ರಿಂದ ₹ 31.8ಕ್ಕೆ ಹೆಚ್ಚಿಸಿತು. ಈ ಏರಿಕೆಯ ಹೊರೆಯನ್ನು ಕಂಪನಿಗಳು ಇಂಧನ ದರವನ್ನು ಆಗಾಗ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾರಂಭಿಸಿ ದವು. ತಮಿಳುನಾಡು ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆ<br />ಯನ್ನು ಈಚೆಗೆ ₹ 3ರಷ್ಟು ತಗ್ಗಿಸಿದೆ. ಕರ್ನಾಟಕದಲ್ಲಿ ಈ ಬಗೆಯ ಕ್ರಮ ಜಾರಿಗೆ ಬಂದಿಲ್ಲ. ಕೇಂದ್ರ ಸರ್ಕಾರವು ತೈಲೋತ್ಪನ್ನಗಳ ಮೇಲಿನ ಸುಂಕ ಇಳಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>