<p><strong>ನವದೆಹಲಿ: </strong>ಬಂಡವಾಳ ಮೂಲ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾರ್ಚ್ ತ್ರೈಮಾಸಿಕದಲ್ಲಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 3,200 ಕೋಟಿ ಸಂಗ್ರಹಿಸುವುದಾಗಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶನಿವಾರ ಹೇಳಿದೆ.</p>.<p>ಡಿಸೆಂಬರ್ನಲ್ಲಿ ಅರ್ಹ ಸಾಂಸ್ಥಿಕ ವಿತರಣೆಯ (ಕ್ಯುಐಪಿ) ಮೂಲಕ ₹ 3,788 ಕೋಟಿ ಬಂಡವಾಳ ಸಂಗ್ರಹಿಸಿದೆ. ಇದರ ನಂತರ ಬ್ಯಾಂಕ್ನಲ್ಲಿ ಕೇಂದ್ರ ಸರ್ಕಾರವು ಹೊಂದಿರುವ ಪಾಲು ಶೇ 85.59ರಿಂದ ಶೇ 76.87ಕ್ಕೆ ಇಳಿಕೆಯಾಗಿದೆ.</p>.<p>ಷೇರುಗಳು ಮತ್ತು ಸಾಲಪತ್ರಗಳ ಮಾರಾಟದ ಮೂಲಕ ಒಟ್ಟಾರೆ ₹ 14 ಸಾವಿರ ಕೋಟಿ ಸಂಗ್ರಹಿಸಲು ಒಪ್ಪಿಗೆ ದೊರೆತಿದೆ. ಯೋಜನೆಯಂತೆ ಎಟಿ–1 ಬಾಂಡ್ಗಳನ್ನು ಮಾರಾಟ ಮಾಡುವ ಮೂಲಕ ₹ 3 ಸಾವಿರ ಕೋಟಿ, ಟೈಯರ್ 2 ಬಾಂಡ್ಗಳ ಮೂಲಕ ₹ 4 ಸಾವಿರ ಕೋಟಿ ಹಾಗೂ ಕ್ಯುಐಪಿ ಮೂಲಕ ₹ 7 ಸಾವಿರ ಕೋಟಿ ಸಂಗ್ರಹಿಸಲು ನಿರ್ಧರಿಸಿದೆ.</p>.<p>‘ಟಯರ್ 2 ಬಾಂಡ್ಗಳ ಮೂಲಕ ₹ 4 ಸಾವಿರ ಕೋಟಿ ಹಾಗೂ ಕ್ಯುಐಪಿ ಮೂಲಕ ₹ 3,788 ಕೋಟಿಯನ್ನು ಡಿಸೆಂಬರ್ನಲ್ಲಿ ಸಂಗ್ರಹಿಸಲಾಗಿದೆ. ಜನವರಿಯಲ್ಲಿ ಎಟಿ–1 ಬಾಂಡ್ಗಳ ಮೂಲಕ ₹ 500 ಕೋಟಿ ಸಂಗ್ರಹವಾಗಿದೆ. ಹೀಗಾಗಿ ಉಳಿದ ₹ 2,500 ಕೋಟಿಯನ್ನು ಮಾರ್ಚ್ 31ರ ಒಳಗಾಗಿ ಹೆಚ್ಚುವರಿ ಟೈರ್ 1 ಬಾಂಡ್ಗಳ ಅಡಿಯಲ್ಲಿ ಸಂಗ್ರಹಿಸುವ ವಿಶ್ವಾಸವಿದೆ’ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ.</p>.<p>ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಲಾಭ ₹ 506 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 492 ಕೋಟಿ ನಷ್ಟ ಅನುಭವಿಸಿತ್ತು. ಒಟ್ಟಾರೆ ವರಮಾನ ₹ 15,967 ಕೋಟಿಗಳಿಂದ ₹ 23,298 ಕೋಟಿಗಳಿಗೆ ಏರಿಕೆಯಾಗಿದೆ.</p>.<p>‘ಪ್ರಸಕ್ತ ಹಣಕಾಸು ವರ್ಷದಲ್ಲಿ ವಾರ್ಷಿಕ ಲಾಭ ₹ 2 ಸಾವಿರ ಕೋಟಿಗಳಷ್ಟಾಗುವ ನಿರೀಕ್ಷೆ ಇದೆ’ ಎಂದು ರಾವ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಬಂಡವಾಳ ಮೂಲ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾರ್ಚ್ ತ್ರೈಮಾಸಿಕದಲ್ಲಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 3,200 ಕೋಟಿ ಸಂಗ್ರಹಿಸುವುದಾಗಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶನಿವಾರ ಹೇಳಿದೆ.</p>.<p>ಡಿಸೆಂಬರ್ನಲ್ಲಿ ಅರ್ಹ ಸಾಂಸ್ಥಿಕ ವಿತರಣೆಯ (ಕ್ಯುಐಪಿ) ಮೂಲಕ ₹ 3,788 ಕೋಟಿ ಬಂಡವಾಳ ಸಂಗ್ರಹಿಸಿದೆ. ಇದರ ನಂತರ ಬ್ಯಾಂಕ್ನಲ್ಲಿ ಕೇಂದ್ರ ಸರ್ಕಾರವು ಹೊಂದಿರುವ ಪಾಲು ಶೇ 85.59ರಿಂದ ಶೇ 76.87ಕ್ಕೆ ಇಳಿಕೆಯಾಗಿದೆ.</p>.<p>ಷೇರುಗಳು ಮತ್ತು ಸಾಲಪತ್ರಗಳ ಮಾರಾಟದ ಮೂಲಕ ಒಟ್ಟಾರೆ ₹ 14 ಸಾವಿರ ಕೋಟಿ ಸಂಗ್ರಹಿಸಲು ಒಪ್ಪಿಗೆ ದೊರೆತಿದೆ. ಯೋಜನೆಯಂತೆ ಎಟಿ–1 ಬಾಂಡ್ಗಳನ್ನು ಮಾರಾಟ ಮಾಡುವ ಮೂಲಕ ₹ 3 ಸಾವಿರ ಕೋಟಿ, ಟೈಯರ್ 2 ಬಾಂಡ್ಗಳ ಮೂಲಕ ₹ 4 ಸಾವಿರ ಕೋಟಿ ಹಾಗೂ ಕ್ಯುಐಪಿ ಮೂಲಕ ₹ 7 ಸಾವಿರ ಕೋಟಿ ಸಂಗ್ರಹಿಸಲು ನಿರ್ಧರಿಸಿದೆ.</p>.<p>‘ಟಯರ್ 2 ಬಾಂಡ್ಗಳ ಮೂಲಕ ₹ 4 ಸಾವಿರ ಕೋಟಿ ಹಾಗೂ ಕ್ಯುಐಪಿ ಮೂಲಕ ₹ 3,788 ಕೋಟಿಯನ್ನು ಡಿಸೆಂಬರ್ನಲ್ಲಿ ಸಂಗ್ರಹಿಸಲಾಗಿದೆ. ಜನವರಿಯಲ್ಲಿ ಎಟಿ–1 ಬಾಂಡ್ಗಳ ಮೂಲಕ ₹ 500 ಕೋಟಿ ಸಂಗ್ರಹವಾಗಿದೆ. ಹೀಗಾಗಿ ಉಳಿದ ₹ 2,500 ಕೋಟಿಯನ್ನು ಮಾರ್ಚ್ 31ರ ಒಳಗಾಗಿ ಹೆಚ್ಚುವರಿ ಟೈರ್ 1 ಬಾಂಡ್ಗಳ ಅಡಿಯಲ್ಲಿ ಸಂಗ್ರಹಿಸುವ ವಿಶ್ವಾಸವಿದೆ’ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ.</p>.<p>ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಲಾಭ ₹ 506 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 492 ಕೋಟಿ ನಷ್ಟ ಅನುಭವಿಸಿತ್ತು. ಒಟ್ಟಾರೆ ವರಮಾನ ₹ 15,967 ಕೋಟಿಗಳಿಂದ ₹ 23,298 ಕೋಟಿಗಳಿಗೆ ಏರಿಕೆಯಾಗಿದೆ.</p>.<p>‘ಪ್ರಸಕ್ತ ಹಣಕಾಸು ವರ್ಷದಲ್ಲಿ ವಾರ್ಷಿಕ ಲಾಭ ₹ 2 ಸಾವಿರ ಕೋಟಿಗಳಷ್ಟಾಗುವ ನಿರೀಕ್ಷೆ ಇದೆ’ ಎಂದು ರಾವ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>