<p><strong>ವಾಷಿಂಗ್ಟನ್: </strong>ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನು ಜೂನ್ 5 ರಿಂದ ಜಾರಿಗೆ ಬರುವಂತೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರದ್ದು ಮಾಡಿದ್ದಾರೆ.</p>.<p>ಸಾಮಾನ್ಯ ಆದ್ಯತಾ ವ್ಯವಸ್ಥೆಯಲ್ಲಿ (ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರನ್ಸ್–ಜಿಎಸ್ಪಿ)ಅಮೆರಿಕವು ಭಾರತಕ್ಕೆ ₹ 39,200 ಕೋಟಿ ಮೌಲ್ಯದ ಸರಕುಗಳಿಗೆ ಆಮದು ಸುಂಕದ ವಿನಾಯ್ತಿ ನೀಡಿತ್ತು.</p>.<p>‘ತನ್ನ ಮಾರುಕಟ್ಟೆ ಪ್ರವೇಶಿಸಲು ಅಮೆರಿಕಕ್ಕೆ ಭಾರತವು ಸಮಾನ ಮತ್ತು ಸಮಂಜಸವಾದ ಅವಕಾಶ ನೀಡುತ್ತಿಲ್ಲ ಎನ್ನುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.</p>.<p>ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಯ ಹಾದಿಯಲ್ಲಿ ಇರುವ ಭಾರತದಂತಹ ದೇಶಗಳ ಉತ್ಪನ್ನಗಳಿಗೆ ನೆರವು ನೀಡಲು ಆಮದು ಸುಂಕ ವಿನಾಯ್ತಿ ನೀಡುತ್ತಿವೆ. ಬಡ ದೇಶಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ನೆರವಾಗುವುದು ಇದರ ಉದ್ದೇಶವಾಗಿದೆ. ಭಾರತವು ಇದರ ಬಹುದೊಡ್ಡ ಫಲಾನುಭವಿ ದೇಶವಾಗಿದೆ.</p>.<p>ಒಪ್ಪಂದದಿಂದ ಭಾರತವನ್ನು ಕೈಬಿಡುವುದಾಗಿ ಟ್ರಂಪ್ ಅವರು ಮಾರ್ಚ್ 4ರಂದು ಘೋಷಿಸಿದ್ದರು. 60 ದಿನಗಳ ನೋಟಿಸ್ ಅವಧಿ ಮೇ 3ಕ್ಕೆ ಕೊನೆಗೊಂಡಿತ್ತು.</p>.<p>ಅಮೆರಿಕದ ಆದ್ಯತಾ ಸುಂಕ ವ್ಯವಸ್ಥೆಯ ಪ್ರಯೋಜನಕ್ಕೆ ಅರ್ಹತೆ ಪಡೆದ ದೇಶಗಳ ವಾಹನ ಬಿಡಿಭಾಗ ಮತ್ತು ಜವಳಿ ಉತ್ಪನ್ನಗಳು ಸೇರಿದಂತೆ 2 ಸಾವಿರ ಉತ್ಪನ್ನಗಳಿಗೆ ಯಾವುದೇ ಸುಂಕ ವಿಧಿಸಲಾಗುತ್ತಿಲ್ಲ.</p>.<p>2017ರಲ್ಲಿ ಭಾರತದ ₹ 39,900 ಕೋಟಿ ಮೊತ್ತದ ಸರಕುಗಳ ರಫ್ತು ವಹಿವಾಟು, ಸುಂಕರಹಿತ ಸೌಲಭ್ಯದ ಪ್ರಯೋಜನ ಪಡೆದುಕೊಂಡಿತ್ತು.</p>.<p class="Subhead"><strong>ನಿರ್ಧಾರಕ್ಕೆ ಕಾರಣವೇನು: </strong>ಭಾರತದ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳಿಗೆ ಸಮಾನವಾದ ಅವಕಾಶಗಳನ್ನು ನೀಡಲಾಗುತ್ತಿಲ್ಲ ಎಂದು ಅಮೆರಿಕದ ವೈದ್ಯಕೀಯ ಸಾಧನ ಮತ್ತು ಹೈನು ಉದ್ಯಮಗಳು ದೂರು ನಿಡಿದ್ದವು. ಸ್ಟೆಂಟ್ಗಳಂತಹ ಉತ್ಪನ್ನಗಳ ಮೇಲೆ ಭಾರತವು ದರ ನೀತಿ ವಿಧಿಸುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಅಂಶವನ್ನು ಪರಿಗಣಿಸಿ ಅಮೆರಿಕ ಸರ್ಕಾರ ನಿರ್ಧಾರ ಕೈಗೊಂಡಿದೆ.</p>.<p class="Subhead"><strong>ಮೋದಿ ಪ್ರತಿಕ್ರಿಯಿಸಲಿ:</strong> ಅಮೆರಿಕದ ನಿರ್ಧಾರದಿಂದ ದೇಶದ ರಫ್ತು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಿಕ್ಕಟ್ಟಿನಿಂದ ಹೇಗೆ ಹೊರಬರುವುದು ಎನ್ನುವುದನ್ನು ವಿವರಿಸುವಂತೆ ದೇಶದ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೆಳಿದೆ.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ, ‘ಭಾರತವು ಎರಡು ಆಘಾತಕ್ಕೆ ಒಳಗಾಗಿದೆ.ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇವೆ. ಇದೀಗ ವಿಶೇಷ ವ್ಯಾಪಾರ ಸ್ಥಾನಮಾನವನ್ನೂ ಕಳೆದುಕೊಂಡಿದ್ದೇವೆ’ ಎಂದಿದ್ದಾರೆ.</p>.<p>ಒಪ್ಪಂದ ರದ್ದು ಮಾಡುವ ಬಗ್ಗೆ ಅಮೆರಿಕವು ಮಾರ್ಚ್ನಲ್ಲಿಯೇ ತಿಳಿಸಿತ್ತು. ಹೀಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿ<br />ಸಿದ್ದಾರೆ.</p>.<p><strong>ನಿರ್ಧಾರ ದುರದೃಷ್ಟಕರ: ಭಾರತ</strong><br />ಒಪ್ಪಂದ ರದ್ದು ನಿರ್ಧಾರವು ದುರದೃಷ್ಟಕರ ಎಂದು ಅಮೆರಿಕದ ಆಡಳಿತ ತಳೆದಿರುವ ನಿಲುವಿನ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.</p>.<p>ಅಭಿವೃದ್ಧಿ ಸಾಧಿಸಬೇಕಾಗಿರುವ ಅನಿವಾರ್ಯತೆ ಮತ್ತು ಭಾರತೀಯರ ಉತ್ತಮ ಜೀವನ ಮಟ್ಟದ ದೃಷ್ಟಿಯಿಂದಾಗಿಅಮೆರಿಕ ಜತೆಗಿನ ಆರ್ಥಿಕ ಒಪ್ಪಂದಗಳನ್ನುಬಲಪಡಿಸಿಕೊಳ್ಳುವ ಕೆಲಸಗಳು ಮುಂದುವರಿಯಲಿವೆ ಎಂದೂ ಹೇಳಿದೆ.</p>.<p>ಯಾವುದೇ ರೀತಿಯ ಸಂಬಂಧವಾಗಿರಲಿ, ಅದರಲ್ಲಿಯೂ ನಿರ್ದಿಷ್ಟವಾಗಿ ಆರ್ಥಿಕ ಒಪ್ಪಂದಗಳ ವಿಷಯದಲ್ಲಿ ಸದ್ಯ ನಡೆಯುತ್ತಿರುವ ಆದ್ಯತಾ ಒಪ್ಪಂದದ ಕುರಿತ ವಿವಾದಗಳನ್ನು ಕಾಲ ಕಾಲಕ್ಕೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ವಾಣಿಜ್ಯ ಸಚಿವಾಲಯವು ತಿಳಿಸಿದೆ.</p>.<p>ಅಭಿವೃದ್ದಿ ಹೊಂದಿರುವ ಅಮೆರಿಕದಂತಹ ದೇಶಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ನೀಡುತ್ತಿರುವ ಆದ್ಯತಾ ವ್ಯಾಪಾರದ ಅನುಕೂಲತೆಗಳು ಏಕಪಕ್ಷೀಯವಾಗಿವೆ ಎಂದು ಹೇಳಿದೆ.</p>.<p>ದ್ವಿಪಕ್ಷೀಯ ಚರ್ಚೆಯಲ್ಲಿ ಅಮೆರಿಕದ ಕೆಲವು ಮನವಿಗಳನ್ನುಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತು. ಆದರೆ, ದುರದೃಷ್ಟವಷಾತ್ ಅಮೆರಿಕವು ಅದಕ್ಕೆ ಒಪ್ಪಗೆ ನೀಡಲಿಲ್ಲ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನು ಜೂನ್ 5 ರಿಂದ ಜಾರಿಗೆ ಬರುವಂತೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರದ್ದು ಮಾಡಿದ್ದಾರೆ.</p>.<p>ಸಾಮಾನ್ಯ ಆದ್ಯತಾ ವ್ಯವಸ್ಥೆಯಲ್ಲಿ (ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರನ್ಸ್–ಜಿಎಸ್ಪಿ)ಅಮೆರಿಕವು ಭಾರತಕ್ಕೆ ₹ 39,200 ಕೋಟಿ ಮೌಲ್ಯದ ಸರಕುಗಳಿಗೆ ಆಮದು ಸುಂಕದ ವಿನಾಯ್ತಿ ನೀಡಿತ್ತು.</p>.<p>‘ತನ್ನ ಮಾರುಕಟ್ಟೆ ಪ್ರವೇಶಿಸಲು ಅಮೆರಿಕಕ್ಕೆ ಭಾರತವು ಸಮಾನ ಮತ್ತು ಸಮಂಜಸವಾದ ಅವಕಾಶ ನೀಡುತ್ತಿಲ್ಲ ಎನ್ನುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.</p>.<p>ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಯ ಹಾದಿಯಲ್ಲಿ ಇರುವ ಭಾರತದಂತಹ ದೇಶಗಳ ಉತ್ಪನ್ನಗಳಿಗೆ ನೆರವು ನೀಡಲು ಆಮದು ಸುಂಕ ವಿನಾಯ್ತಿ ನೀಡುತ್ತಿವೆ. ಬಡ ದೇಶಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ನೆರವಾಗುವುದು ಇದರ ಉದ್ದೇಶವಾಗಿದೆ. ಭಾರತವು ಇದರ ಬಹುದೊಡ್ಡ ಫಲಾನುಭವಿ ದೇಶವಾಗಿದೆ.</p>.<p>ಒಪ್ಪಂದದಿಂದ ಭಾರತವನ್ನು ಕೈಬಿಡುವುದಾಗಿ ಟ್ರಂಪ್ ಅವರು ಮಾರ್ಚ್ 4ರಂದು ಘೋಷಿಸಿದ್ದರು. 60 ದಿನಗಳ ನೋಟಿಸ್ ಅವಧಿ ಮೇ 3ಕ್ಕೆ ಕೊನೆಗೊಂಡಿತ್ತು.</p>.<p>ಅಮೆರಿಕದ ಆದ್ಯತಾ ಸುಂಕ ವ್ಯವಸ್ಥೆಯ ಪ್ರಯೋಜನಕ್ಕೆ ಅರ್ಹತೆ ಪಡೆದ ದೇಶಗಳ ವಾಹನ ಬಿಡಿಭಾಗ ಮತ್ತು ಜವಳಿ ಉತ್ಪನ್ನಗಳು ಸೇರಿದಂತೆ 2 ಸಾವಿರ ಉತ್ಪನ್ನಗಳಿಗೆ ಯಾವುದೇ ಸುಂಕ ವಿಧಿಸಲಾಗುತ್ತಿಲ್ಲ.</p>.<p>2017ರಲ್ಲಿ ಭಾರತದ ₹ 39,900 ಕೋಟಿ ಮೊತ್ತದ ಸರಕುಗಳ ರಫ್ತು ವಹಿವಾಟು, ಸುಂಕರಹಿತ ಸೌಲಭ್ಯದ ಪ್ರಯೋಜನ ಪಡೆದುಕೊಂಡಿತ್ತು.</p>.<p class="Subhead"><strong>ನಿರ್ಧಾರಕ್ಕೆ ಕಾರಣವೇನು: </strong>ಭಾರತದ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳಿಗೆ ಸಮಾನವಾದ ಅವಕಾಶಗಳನ್ನು ನೀಡಲಾಗುತ್ತಿಲ್ಲ ಎಂದು ಅಮೆರಿಕದ ವೈದ್ಯಕೀಯ ಸಾಧನ ಮತ್ತು ಹೈನು ಉದ್ಯಮಗಳು ದೂರು ನಿಡಿದ್ದವು. ಸ್ಟೆಂಟ್ಗಳಂತಹ ಉತ್ಪನ್ನಗಳ ಮೇಲೆ ಭಾರತವು ದರ ನೀತಿ ವಿಧಿಸುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಅಂಶವನ್ನು ಪರಿಗಣಿಸಿ ಅಮೆರಿಕ ಸರ್ಕಾರ ನಿರ್ಧಾರ ಕೈಗೊಂಡಿದೆ.</p>.<p class="Subhead"><strong>ಮೋದಿ ಪ್ರತಿಕ್ರಿಯಿಸಲಿ:</strong> ಅಮೆರಿಕದ ನಿರ್ಧಾರದಿಂದ ದೇಶದ ರಫ್ತು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಿಕ್ಕಟ್ಟಿನಿಂದ ಹೇಗೆ ಹೊರಬರುವುದು ಎನ್ನುವುದನ್ನು ವಿವರಿಸುವಂತೆ ದೇಶದ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೆಳಿದೆ.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ, ‘ಭಾರತವು ಎರಡು ಆಘಾತಕ್ಕೆ ಒಳಗಾಗಿದೆ.ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇವೆ. ಇದೀಗ ವಿಶೇಷ ವ್ಯಾಪಾರ ಸ್ಥಾನಮಾನವನ್ನೂ ಕಳೆದುಕೊಂಡಿದ್ದೇವೆ’ ಎಂದಿದ್ದಾರೆ.</p>.<p>ಒಪ್ಪಂದ ರದ್ದು ಮಾಡುವ ಬಗ್ಗೆ ಅಮೆರಿಕವು ಮಾರ್ಚ್ನಲ್ಲಿಯೇ ತಿಳಿಸಿತ್ತು. ಹೀಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿ<br />ಸಿದ್ದಾರೆ.</p>.<p><strong>ನಿರ್ಧಾರ ದುರದೃಷ್ಟಕರ: ಭಾರತ</strong><br />ಒಪ್ಪಂದ ರದ್ದು ನಿರ್ಧಾರವು ದುರದೃಷ್ಟಕರ ಎಂದು ಅಮೆರಿಕದ ಆಡಳಿತ ತಳೆದಿರುವ ನಿಲುವಿನ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.</p>.<p>ಅಭಿವೃದ್ಧಿ ಸಾಧಿಸಬೇಕಾಗಿರುವ ಅನಿವಾರ್ಯತೆ ಮತ್ತು ಭಾರತೀಯರ ಉತ್ತಮ ಜೀವನ ಮಟ್ಟದ ದೃಷ್ಟಿಯಿಂದಾಗಿಅಮೆರಿಕ ಜತೆಗಿನ ಆರ್ಥಿಕ ಒಪ್ಪಂದಗಳನ್ನುಬಲಪಡಿಸಿಕೊಳ್ಳುವ ಕೆಲಸಗಳು ಮುಂದುವರಿಯಲಿವೆ ಎಂದೂ ಹೇಳಿದೆ.</p>.<p>ಯಾವುದೇ ರೀತಿಯ ಸಂಬಂಧವಾಗಿರಲಿ, ಅದರಲ್ಲಿಯೂ ನಿರ್ದಿಷ್ಟವಾಗಿ ಆರ್ಥಿಕ ಒಪ್ಪಂದಗಳ ವಿಷಯದಲ್ಲಿ ಸದ್ಯ ನಡೆಯುತ್ತಿರುವ ಆದ್ಯತಾ ಒಪ್ಪಂದದ ಕುರಿತ ವಿವಾದಗಳನ್ನು ಕಾಲ ಕಾಲಕ್ಕೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ವಾಣಿಜ್ಯ ಸಚಿವಾಲಯವು ತಿಳಿಸಿದೆ.</p>.<p>ಅಭಿವೃದ್ದಿ ಹೊಂದಿರುವ ಅಮೆರಿಕದಂತಹ ದೇಶಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ನೀಡುತ್ತಿರುವ ಆದ್ಯತಾ ವ್ಯಾಪಾರದ ಅನುಕೂಲತೆಗಳು ಏಕಪಕ್ಷೀಯವಾಗಿವೆ ಎಂದು ಹೇಳಿದೆ.</p>.<p>ದ್ವಿಪಕ್ಷೀಯ ಚರ್ಚೆಯಲ್ಲಿ ಅಮೆರಿಕದ ಕೆಲವು ಮನವಿಗಳನ್ನುಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತು. ಆದರೆ, ದುರದೃಷ್ಟವಷಾತ್ ಅಮೆರಿಕವು ಅದಕ್ಕೆ ಒಪ್ಪಗೆ ನೀಡಲಿಲ್ಲ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>