<p><strong>ಬೆಳಗಾವಿ</strong>: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ದ್ರಾಕ್ಷಿ ಇಳುವರಿ ಕುಸಿತ ಕಂಡಿದೆ. ಇದರಿಂದ ಒಣದ್ರಾಕ್ಷಿ ಉತ್ಪಾದನೆಯೂ ಕುಸಿದಿದೆ.</p><p>ಮಾರುಕಟ್ಟೆಯಲ್ಲಿ ಪೂರೈಕೆಯ ಕೊರತೆಯಿಂದಾಗಿ ಒಣದ್ರಾಕ್ಷಿ ದರ ಏರುಗತಿಯಲ್ಲಿದೆ. ಆದರೆ, ಇಳುವರಿ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಒಣದ್ರಾಕ್ಷಿ ಉತ್ಪಾದನೆಯಾಗಿಲ್ಲ. ಹಾಗಾಗಿ, ಬೆಲೆ ಏರಿಕೆಯ ಲಾಭ ಬೆಳೆಗಾರರಿಗೆ ಸಿಗುತ್ತಿಲ್ಲ.</p><p>ಕಳೆದ ವರ್ಷ ಕೆ.ಜಿ ಒಣದ್ರಾಕ್ಷಿಗೆ ₹80ರಿಂದ ₹130 ದರವಿತ್ತು. ಈ ವರ್ಷ ಮಹಾರಾಷ್ಟ್ರದ ತಾಸಗಾಂವ್, ಸಾಂಗ್ಲಿ, ಪಂಢರಪುರ ಮಾರುಕಟ್ಟೆಯಲ್ಲಿ ಕೆ.ಜಿಗೆ ₹180ರಿಂದ ₹300 ಧಾರಣೆ ಇದೆ. ಸರಾಸರಿ ದರ ₹250ರ ವರೆಗೂ ಇದೆ.</p><p>‘2023ರಲ್ಲಿ 5 ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೆ. ಒಟ್ಟು 14.5 ಟನ್ ಒಣದ್ರಾಕ್ಷಿ ಉತ್ಪಾದನೆಯಾಗಿತ್ತು. ಈ ಬಾರಿ 8 ಟನ್ ಒಣದ್ರಾಕ್ಷಿ ಉತ್ಪಾದನೆಯಾಗಿದ್ದು, ಕೆ.ಜಿಗೆ ₹250 ದರದಲ್ಲಿ ಮಾರಾಟವಾಗಿದೆ. ಹೆಚ್ಚಿನ ದರ ಲಭಿಸಿದರೂ ನಿರೀಕ್ಷಿತ ಲಾಭ ಸಿಕ್ಕಿಲ್ಲ’ ಎಂದು ಅಥಣಿ ಒಣದ್ರಾಕ್ಷಿ ಸಂಸ್ಕರಣಾ ಸಂಘದ ಅಧ್ಯಕ್ಷ ಶಹಾಜಹಾನ್ ಡೊಂಗರಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಮೊದಲ ಹಂತದ ಚಾಟ್ನಿ ವೇಳೆ ಬೆಳೆಗೆ ನೀರಿನ ಕೊರತೆಯಾಯಿತು. ಮತ್ತೊಂದು ಹಂತದ ಚಾಟ್ನಿ ವೇಳೆ ಅಕಾಲಿಕ ಮಳೆಯಿಂದ ಬೆಳೆ ಹಾನಿಗೀಡಾಯಿತು. ಇದರಿಂದ ಇಳುವರಿ ಕುಸಿಯಿತು’ ಎಂದರು.</p><p><strong>40 ಸಾವಿರ ಹೆಕ್ಟೇರ್ನಲ್ಲಿ ಫಸಲು: </strong></p><p>ಈ ಬಾರಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ 40 ಸಾವಿರ ಹೆಕ್ಟೇರ್ನಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಈ ಪೈಕಿ ಶೇ 75ರಷ್ಟು ಫಸಲು ಒಣದ್ರಾಕ್ಷಿ ಉತ್ಪಾದನೆಗೆ ಬಳಕೆಯಾಗುತ್ತದೆ. ಎಕರೆಗೆ 3ರಿಂದ 4 ಟನ್ ಒಣದ್ರಾಕ್ಷಿ ಉತ್ಪಾದನೆ ಆಗುತ್ತದೆ.</p><p>‘ಹವಾಮಾನ ವೈಪರೀತ್ಯದಿಂದ ಈ ಬಾರಿ ಶೇ 65ರಷ್ಟು ರೈತರಿಗೆ ದ್ರಾಕ್ಷಿ ಇಳುವರಿ ನಷ್ಟವಾಗಿದೆ. ಶೇ 35ರಷ್ಟು ರೈತರು ಎಕರೆಗೆ 2 ಟನ್ ಒಣದ್ರಾಕ್ಷಿ ಉತ್ಪಾದಿಸಿದ್ದಾರೆ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ ತಿಳಿಸಿದರು.</p><p>‘ಒಣದ್ರಾಕ್ಷಿ ಮಾರಲು ಮಹಾರಾಷ್ಟ್ರಕ್ಕೆ ಒಯ್ದರೆ ಹೆಚ್ಚಿನ ಹಣ ವ್ಯಯಿಸಬೇಕು. ನಮಗೆ ಹೆಚ್ಚು ನಷ್ಟವಾಗುತ್ತದೆ ಹೊರತು ಲಾಭವಾಗುವುದಿಲ್ಲ’ ಎಂದು ಅಥಣಿ ತಾಲ್ಲೂಕಿನ ಐಗಳಿಯ ರೈತ ಎಂ.ಜಿ. ಪಾಟೀಲ ಹೇಳಿದರು.</p>.<div><blockquote>ಇಳುವರಿ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಫಸಲ್ ಬಿಮಾ ಯೋಜನೆಯಡಿ ಕಂತು ಪಾವತಿಸಿದವರಿಗೆ ಹೆಚ್ಚಿನ ವಿಮಾ ಮೊತ್ತ ನೀಡಬೇಕು.</blockquote><span class="attribution">ಅಭಯಕುಮಾರ್ ನಾಂದ್ರೇಕರ, ಅಧ್ಯಕ್ಷ, ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ</span></div>.<div><blockquote>ವರ್ಷಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದರೂ ಅಥಣಿಯಲ್ಲಿ ಒಣದ್ರಾಕ್ಷಿ ಮಾರಾಟಕ್ಕೆ ವ್ಯವಸ್ಥೆ ಇಲ್ಲ. ಸರ್ಕಾರ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು.</blockquote><span class="attribution"> ಎಂ.ಜಿ. ಪಾಟೀಲ, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ದ್ರಾಕ್ಷಿ ಇಳುವರಿ ಕುಸಿತ ಕಂಡಿದೆ. ಇದರಿಂದ ಒಣದ್ರಾಕ್ಷಿ ಉತ್ಪಾದನೆಯೂ ಕುಸಿದಿದೆ.</p><p>ಮಾರುಕಟ್ಟೆಯಲ್ಲಿ ಪೂರೈಕೆಯ ಕೊರತೆಯಿಂದಾಗಿ ಒಣದ್ರಾಕ್ಷಿ ದರ ಏರುಗತಿಯಲ್ಲಿದೆ. ಆದರೆ, ಇಳುವರಿ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಒಣದ್ರಾಕ್ಷಿ ಉತ್ಪಾದನೆಯಾಗಿಲ್ಲ. ಹಾಗಾಗಿ, ಬೆಲೆ ಏರಿಕೆಯ ಲಾಭ ಬೆಳೆಗಾರರಿಗೆ ಸಿಗುತ್ತಿಲ್ಲ.</p><p>ಕಳೆದ ವರ್ಷ ಕೆ.ಜಿ ಒಣದ್ರಾಕ್ಷಿಗೆ ₹80ರಿಂದ ₹130 ದರವಿತ್ತು. ಈ ವರ್ಷ ಮಹಾರಾಷ್ಟ್ರದ ತಾಸಗಾಂವ್, ಸಾಂಗ್ಲಿ, ಪಂಢರಪುರ ಮಾರುಕಟ್ಟೆಯಲ್ಲಿ ಕೆ.ಜಿಗೆ ₹180ರಿಂದ ₹300 ಧಾರಣೆ ಇದೆ. ಸರಾಸರಿ ದರ ₹250ರ ವರೆಗೂ ಇದೆ.</p><p>‘2023ರಲ್ಲಿ 5 ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೆ. ಒಟ್ಟು 14.5 ಟನ್ ಒಣದ್ರಾಕ್ಷಿ ಉತ್ಪಾದನೆಯಾಗಿತ್ತು. ಈ ಬಾರಿ 8 ಟನ್ ಒಣದ್ರಾಕ್ಷಿ ಉತ್ಪಾದನೆಯಾಗಿದ್ದು, ಕೆ.ಜಿಗೆ ₹250 ದರದಲ್ಲಿ ಮಾರಾಟವಾಗಿದೆ. ಹೆಚ್ಚಿನ ದರ ಲಭಿಸಿದರೂ ನಿರೀಕ್ಷಿತ ಲಾಭ ಸಿಕ್ಕಿಲ್ಲ’ ಎಂದು ಅಥಣಿ ಒಣದ್ರಾಕ್ಷಿ ಸಂಸ್ಕರಣಾ ಸಂಘದ ಅಧ್ಯಕ್ಷ ಶಹಾಜಹಾನ್ ಡೊಂಗರಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಮೊದಲ ಹಂತದ ಚಾಟ್ನಿ ವೇಳೆ ಬೆಳೆಗೆ ನೀರಿನ ಕೊರತೆಯಾಯಿತು. ಮತ್ತೊಂದು ಹಂತದ ಚಾಟ್ನಿ ವೇಳೆ ಅಕಾಲಿಕ ಮಳೆಯಿಂದ ಬೆಳೆ ಹಾನಿಗೀಡಾಯಿತು. ಇದರಿಂದ ಇಳುವರಿ ಕುಸಿಯಿತು’ ಎಂದರು.</p><p><strong>40 ಸಾವಿರ ಹೆಕ್ಟೇರ್ನಲ್ಲಿ ಫಸಲು: </strong></p><p>ಈ ಬಾರಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ 40 ಸಾವಿರ ಹೆಕ್ಟೇರ್ನಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಈ ಪೈಕಿ ಶೇ 75ರಷ್ಟು ಫಸಲು ಒಣದ್ರಾಕ್ಷಿ ಉತ್ಪಾದನೆಗೆ ಬಳಕೆಯಾಗುತ್ತದೆ. ಎಕರೆಗೆ 3ರಿಂದ 4 ಟನ್ ಒಣದ್ರಾಕ್ಷಿ ಉತ್ಪಾದನೆ ಆಗುತ್ತದೆ.</p><p>‘ಹವಾಮಾನ ವೈಪರೀತ್ಯದಿಂದ ಈ ಬಾರಿ ಶೇ 65ರಷ್ಟು ರೈತರಿಗೆ ದ್ರಾಕ್ಷಿ ಇಳುವರಿ ನಷ್ಟವಾಗಿದೆ. ಶೇ 35ರಷ್ಟು ರೈತರು ಎಕರೆಗೆ 2 ಟನ್ ಒಣದ್ರಾಕ್ಷಿ ಉತ್ಪಾದಿಸಿದ್ದಾರೆ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ ತಿಳಿಸಿದರು.</p><p>‘ಒಣದ್ರಾಕ್ಷಿ ಮಾರಲು ಮಹಾರಾಷ್ಟ್ರಕ್ಕೆ ಒಯ್ದರೆ ಹೆಚ್ಚಿನ ಹಣ ವ್ಯಯಿಸಬೇಕು. ನಮಗೆ ಹೆಚ್ಚು ನಷ್ಟವಾಗುತ್ತದೆ ಹೊರತು ಲಾಭವಾಗುವುದಿಲ್ಲ’ ಎಂದು ಅಥಣಿ ತಾಲ್ಲೂಕಿನ ಐಗಳಿಯ ರೈತ ಎಂ.ಜಿ. ಪಾಟೀಲ ಹೇಳಿದರು.</p>.<div><blockquote>ಇಳುವರಿ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಫಸಲ್ ಬಿಮಾ ಯೋಜನೆಯಡಿ ಕಂತು ಪಾವತಿಸಿದವರಿಗೆ ಹೆಚ್ಚಿನ ವಿಮಾ ಮೊತ್ತ ನೀಡಬೇಕು.</blockquote><span class="attribution">ಅಭಯಕುಮಾರ್ ನಾಂದ್ರೇಕರ, ಅಧ್ಯಕ್ಷ, ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ</span></div>.<div><blockquote>ವರ್ಷಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದರೂ ಅಥಣಿಯಲ್ಲಿ ಒಣದ್ರಾಕ್ಷಿ ಮಾರಾಟಕ್ಕೆ ವ್ಯವಸ್ಥೆ ಇಲ್ಲ. ಸರ್ಕಾರ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು.</blockquote><span class="attribution"> ಎಂ.ಜಿ. ಪಾಟೀಲ, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>