ಕಶ್ಯಪ್ ಅವರು ಆರ್ಬಿಐನ ಬೆಂಗಳೂರು ಪ್ರಾದೇಶಿಕ ಕಚೇರಿಯ ಮಹಾ ಪ್ರಬಂಧಕ. ಆರ್ಬಿಐ ಸಾಮಾನ್ಯ ಸಂದರ್ಭಗಳಲ್ಲಿ ಖಾಸಗಿ ಬ್ಯಾಂಕುಗಳ ಆಡಳಿತ ಮಂಡಳಿಗೆ ತನ್ನ ಕಡೆಯಿಂದ ನಿರ್ದೇಶಕರನ್ನು ನೇಮಕ ಮಾಡುವುದಿಲ್ಲ. ಧನಲಕ್ಷ್ಮಿ ಬ್ಯಾಂಕ್ನಲ್ಲಿನ ಕೆಲವು ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬ್ಯಾಂಕ್ ನೌಕರರ ಒಕ್ಕೂಟಗಳು, ಆರ್ಬಿಐ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದವು.