<p><strong>ಮುಂಬೈ:</strong> ಮೃತಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗಳು ಮತ್ತು ಲಾಕರ್ಗಳ ಮೇಲಿನ ಕ್ಲೇಮುಗಳನ್ನು 15 ದಿನದೊಳಗೆ ಇತ್ಯರ್ಥಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಪರಿಷ್ಕೃತ ಮಾನದಂಡಗಳನ್ನು ಹೊರಡಿಸಿದೆ. ಕ್ಲೇಮ್ ಇತ್ಯರ್ಥ ವಿಳಂಬವಾದರೆ ನಾಮನಿರ್ದೇಶಿತರಿಗೆ ಪರಿಹಾರವನ್ನು ನಿಗದಿಪಡಿಸಿದೆ. </p>.<p>ಈ ನಿರ್ದೇಶನಗಳು ಮೃತಪಟ್ಟ ಗ್ರಾಹಕರ ಠೇವಣಿ ಖಾತೆಗಳಲ್ಲಿನ ಕ್ಲೇಮುಗಳು, ಸುರಕ್ಷಿತ ಠೇವಣಿ, ಲಾಕರ್ನಲ್ಲಿರುವ ವಸ್ತುಗಳ ಇತ್ಯರ್ಥಕ್ಕೆ ಸಂಬಂಧಿಸಿವೆ ಎಂದು ತಿಳಿಸಿದೆ.</p>.<p>ಮೃತಪಟ್ಟ ಗ್ರಾಹಕರಿಗೆ ಸಂಬಂಧಿಸಿದಂತೆ ಕ್ಲೇಮುಗಳ ಇತ್ಯರ್ಥದಲ್ಲಿ ಬ್ಯಾಂಕುಗಳು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದೆ. ಇದನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಈ ಪರಿಷ್ಕೃತ ಸೂಚನೆಗಳು ಹೊಂದಿವೆ. ಇದು ಗ್ರಾಹಕ ಸೇವೆಯ ಗುಣಮಟ್ಟದಲ್ಲಿ ಸುಧಾರಣೆ ತರಲಿದೆ. ಈ ಪರಿಷ್ಕೃತ ಸೂಚನೆಗಳನ್ನು 2026ರ ಮಾರ್ಚ್ 31ರ ಒಳಗಾಗಿ ಸಾಧ್ಯವಾದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.</p>.<p>ಸೇಫ್ ಡಿಪಾಸಿಟ್ ಲಾಕರ್ಗೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ಕ್ಲೇಮ್ ಇತ್ಯರ್ಥವಾಗದಿದ್ದರೆ ಬ್ಯಾಂಕ್ಗಳು ಗ್ರಾಹಕರಿಗೆ ಪ್ರತಿ ದಿನ ₹5 ಸಾವಿರದಂತೆ ಪರಿಹಾರ ನೀಡಬೇಕು ಎಂದು ಆರ್ಬಿಐ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮೃತಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗಳು ಮತ್ತು ಲಾಕರ್ಗಳ ಮೇಲಿನ ಕ್ಲೇಮುಗಳನ್ನು 15 ದಿನದೊಳಗೆ ಇತ್ಯರ್ಥಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಪರಿಷ್ಕೃತ ಮಾನದಂಡಗಳನ್ನು ಹೊರಡಿಸಿದೆ. ಕ್ಲೇಮ್ ಇತ್ಯರ್ಥ ವಿಳಂಬವಾದರೆ ನಾಮನಿರ್ದೇಶಿತರಿಗೆ ಪರಿಹಾರವನ್ನು ನಿಗದಿಪಡಿಸಿದೆ. </p>.<p>ಈ ನಿರ್ದೇಶನಗಳು ಮೃತಪಟ್ಟ ಗ್ರಾಹಕರ ಠೇವಣಿ ಖಾತೆಗಳಲ್ಲಿನ ಕ್ಲೇಮುಗಳು, ಸುರಕ್ಷಿತ ಠೇವಣಿ, ಲಾಕರ್ನಲ್ಲಿರುವ ವಸ್ತುಗಳ ಇತ್ಯರ್ಥಕ್ಕೆ ಸಂಬಂಧಿಸಿವೆ ಎಂದು ತಿಳಿಸಿದೆ.</p>.<p>ಮೃತಪಟ್ಟ ಗ್ರಾಹಕರಿಗೆ ಸಂಬಂಧಿಸಿದಂತೆ ಕ್ಲೇಮುಗಳ ಇತ್ಯರ್ಥದಲ್ಲಿ ಬ್ಯಾಂಕುಗಳು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದೆ. ಇದನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಈ ಪರಿಷ್ಕೃತ ಸೂಚನೆಗಳು ಹೊಂದಿವೆ. ಇದು ಗ್ರಾಹಕ ಸೇವೆಯ ಗುಣಮಟ್ಟದಲ್ಲಿ ಸುಧಾರಣೆ ತರಲಿದೆ. ಈ ಪರಿಷ್ಕೃತ ಸೂಚನೆಗಳನ್ನು 2026ರ ಮಾರ್ಚ್ 31ರ ಒಳಗಾಗಿ ಸಾಧ್ಯವಾದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.</p>.<p>ಸೇಫ್ ಡಿಪಾಸಿಟ್ ಲಾಕರ್ಗೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ಕ್ಲೇಮ್ ಇತ್ಯರ್ಥವಾಗದಿದ್ದರೆ ಬ್ಯಾಂಕ್ಗಳು ಗ್ರಾಹಕರಿಗೆ ಪ್ರತಿ ದಿನ ₹5 ಸಾವಿರದಂತೆ ಪರಿಹಾರ ನೀಡಬೇಕು ಎಂದು ಆರ್ಬಿಐ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>