ಮಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆರ್ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ. ಮಹೇಶ್, ‘ಈಗಾಗಲೇ ಬಿಡುಗಡೆಗೊಂಡಿರುವ ₹ 100 ಮುಖಬೆಲೆಯ ಸ್ವಚ್ಛವಾದ ಹೊಸ ಸರಣಿಯ ನೋಟುಗಳು ಜನರ ಕೈಯಲ್ಲಿರುವಂತೆ ಮಾಡುವ ಉದ್ದೇಶದಿಂದ ಹಳೆಯ ಸರಣಿಯ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಹೇಳಿದ್ದರು.