ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ₹411 ಕೋಟಿ ಲಾಭ

Last Updated 25 ಮೇ 2022, 20:28 IST
ಅಕ್ಷರ ಗಾತ್ರ

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್‌) ಮಾರ್ಚ್‌ 31ಕ್ಕೆ ಕೊನೆಗೊಂಡ 2021-22ನೆ ಹಣಕಾಸು ವರ್ಷದಲ್ಲಿ ಒಟ್ಟು ₹411.04 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ 0.20ರಷ್ಟು ಪ್ರಗತಿಯಾಗಿದೆ.

2020–21ರಲ್ಲಿ ₹ 2,376.44 ಕೋಟಿ ಆದಾಯ ಗಳಿಸಿದ್ದ ಕಂಪನಿ, 2021–22ರಲ್ಲಿ ₹ 3,006.45 ಕೋಟಿ ಆದಾಯ ಗಳಿಸಿದೆ. ಇದು ಶೇ 26.51ರಷ್ಟು ಹೆಚ್ಚಳವಾಗಿದೆ. ತೆರಿಗೆ ಮುಂಚಿನ ಲಾಭ ₹411.03 ಕೋಟಿ ಆಗಿದ್ದು, ತೆರಿಗೆ ನಂತರದ ಲಾಭ ₹313.41 ಕೋಟಿ ಆಗಿದೆ. 2020–21 ರಲ್ಲಿ ತೆರಿಗೆ ನಂತರದ ಲಾಭ ₹301.17 ಕೋಟಿಯಾಗಿತ್ತು.

‘ಕೆಐಒಸಿಎಲ್‌ ಈ ವರ್ಷ 20.30 ಲಕ್ಷ ಟನ್ ಕಬ್ಬಿಣದ ಉಂಡೆ ತಯಾರಿಸಿದ್ದು, 20.72 ಲಕ್ಷ ಟನ್ ಮಾರಾಟ ಮಾಡಲಾಗಿದೆ’ ಎಂದು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸಾಮಿನಾಥನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT