ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್) ಮಾರ್ಚ್ 31ಕ್ಕೆ ಕೊನೆಗೊಂಡ 2021-22ನೆ ಹಣಕಾಸು ವರ್ಷದಲ್ಲಿ ಒಟ್ಟು ₹411.04 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ 0.20ರಷ್ಟು ಪ್ರಗತಿಯಾಗಿದೆ.
2020–21ರಲ್ಲಿ ₹ 2,376.44 ಕೋಟಿ ಆದಾಯ ಗಳಿಸಿದ್ದ ಕಂಪನಿ, 2021–22ರಲ್ಲಿ ₹ 3,006.45 ಕೋಟಿ ಆದಾಯ ಗಳಿಸಿದೆ. ಇದು ಶೇ 26.51ರಷ್ಟು ಹೆಚ್ಚಳವಾಗಿದೆ. ತೆರಿಗೆ ಮುಂಚಿನ ಲಾಭ ₹411.03 ಕೋಟಿ ಆಗಿದ್ದು, ತೆರಿಗೆ ನಂತರದ ಲಾಭ ₹313.41 ಕೋಟಿ ಆಗಿದೆ. 2020–21 ರಲ್ಲಿ ತೆರಿಗೆ ನಂತರದ ಲಾಭ ₹301.17 ಕೋಟಿಯಾಗಿತ್ತು.
‘ಕೆಐಒಸಿಎಲ್ ಈ ವರ್ಷ 20.30 ಲಕ್ಷ ಟನ್ ಕಬ್ಬಿಣದ ಉಂಡೆ ತಯಾರಿಸಿದ್ದು, 20.72 ಲಕ್ಷ ಟನ್ ಮಾರಾಟ ಮಾಡಲಾಗಿದೆ’ ಎಂದು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸಾಮಿನಾಥನ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.