ತೀರಾ ತುರ್ತಾದ, ಮಧ್ಯಂತರ ಪರಿಹಾರದ ಅಗತ್ಯ ಇಲ್ಲದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ನಡೆಸುವಂತೆ ಸೆಕ್ಷನ್ 12(ಎ) ಹೇಳುತ್ತದೆ ಎಂದು ನ್ಯಾಯಪೀಠ ವಿವರಿಸಿದೆ. ‘ಕೆಲವು ಬಗೆಯ ಅರ್ಜಿಗಳನ್ನು ಮಾತ್ರ ಪ್ರತ್ಯೇಕಿಸಿ, ಅವುಗಳಿಗೆ ಮಾತ್ರ ಮಧ್ಯಸ್ಥಿಕೆ ಕಡ್ಡಾಯ ಎಂದು ಹೇಳಿರುವುದು ಕಾನೂನಿನ ಉದ್ದೇಶ ಈಡೇರಿಕೆಗೆ ಪೂರಕವಾಗಿ ಇದೆ. ನ್ಯಾಯಾಧೀಶರ ಮೇಲಿನ ಹೊರೆ ತಗ್ಗುತ್ತದೆ. ಅವರು ತೀರಾ ತುರ್ತಾಗಿ ಪರಿಹಾರ ಬೇಕಿರುವ ಪ್ರಕರಣಗಳಿಗೆ, ಈಗಾಗಲೇ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳಿಗೆ ಗಮನ ನೀಡಬಹುದು’ ಎಂದು ಪೀಠ ತಿಳಿಸಿದೆ.