ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಸುರಿದ ಮಳೆಯ ಕಾರಣ ಟೊಮೆಟೊಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಊಜಿ ನೊಣ ಆವರಿಸಿಕೊಂಡು ಚುಕ್ಕಿಬೀಳುತ್ತಿದೆ.3–4 ದಿನಗಳಲ್ಲಿ ಕೆಟ್ಟು ಹೋಗುತ್ತಿದೆ. ಚೆನ್ನೈ, ಆಂಧ್ರಪ್ರದೇಶ, ಒಡಿಶಾದಲ್ಲಿ ಮಳೆಯ ಕಾರಣ ಅಲ್ಲಿನ ಮಾರುಕಟ್ಟೆಗಳಲ್ಲೇ ಟೊಮೆಟೊ ಸಂಗ್ರಹವಿದ್ದು, ಬೇಡಿಕೆ ಕುಸಿದಿದೆ. ಹೀಗಾಗಿ, ಅಲ್ಲಿನ ವರ್ತಕರು ಇಲ್ಲಿನ ಮಾರುಕಟ್ಟೆ ಕಡೆಗೆ ಸುಳಿಯುತ್ತಿಲ್ಲ.