<p><strong>ಮೈಸೂರು: </strong>ಕೃಷಿ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಸೆಸ್ ಸಂಗ್ರಹ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ನಿರ್ವಹಣೆ ಕಷ್ಟಕರವಾಗಿರುವುದು ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಯಿತು.</p>.<p>ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಈ ವಿಚಾರವನ್ನುಗಮನಕ್ಕೆ ತರಲಾಯಿತು.</p>.<p>‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ರೈತರು ಹೊರಗಡೆಯೂ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಎಂಪಿಎಂಸಿಯಲ್ಲಿ ವಹಿವಾಟು ತಗ್ಗಿದ್ದು, ಆದಾಯ ಕಡಿಮೆ ಆಗಿದೆ’ ಎಂದು ಇಲಾಖೆ ಉಪನಿರ್ದೇಶಕಿ ಎಸ್.ಸಂಗೀತಾ ತಿಳಿಸಿದರು.</p>.<p>‘2019–20ರ ನವೆಂಬರ್, ಡಿಸೆಂಬರ್, ಜನವರಿ ಅವಧಿಯಲ್ಲಿ ಮೈಸೂರಿನ ಬಂಡೀಪಾಳ್ಯ ಎಪಿಎಂಸಿಯಲ್ಲಿ ₹ 2.01 ಕೋಟಿ ಸೆಸ್ (ಮಾರುಕಟ್ಟೆ ಶುಲ್ಕ ವಸೂಲಿ) ಸಂಗ್ರಹವಾಗಿತ್ತು. ಆದರೆ, 2020–21ರ ಇದೇ ಅವಧಿಯಲ್ಲಿ ಕೇವಲ ₹ 1.47 ಕೋಟಿ ಸಂಗ್ರಹವಾಗಿದೆ. ಜಿಲ್ಲೆಯಲ್ಲಿರುವ ಏಳು ಎಪಿಎಂಸಿ ಸೇರಿ, ಶೇ 50ರಷ್ಟು ಸೆಸ್ ವಸೂಲಿ ಕಡಿಮೆ ಆಗಿದೆ’ ಎಂದು ಮಾಹಿತಿ ನೀಡಿದರು.</p>.<p>‘ಬಂಡೀಪಾಳ್ಯದಲ್ಲಿರುವ ಎಂಪಿಎಂಸಿ ಹೊರತುಪಡಿಸಿ ಜಿಲ್ಲೆಯ ಉಳಿದ ಕಡೆ ಚಟುವಟಿಕೆಗಳು ಕಡಿಮೆ ಆಗಿವೆ. ಎಪಿಎಂಸಿ ನಡೆಸುವುದೇ ಕಷ್ಟಕರವಾಗಿದೆ. ನಿರ್ವಹಣೆಗೂ ಹಣ ಸಾಕಾಗುತ್ತಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.</p>.<p>ಆಗ ಸಚಿವ ಸೋಮಶೇಖರ್, ‘ಎಂಪಿಎಂಸಿಗೆತೊಂದರೆಯಾದರೆ ಸರ್ಕಾರ ನೋಡಿಕೊಳ್ಳುತ್ತದೆ. ಸಿಬ್ಬಂದಿಗೆ ವೇತನನೀಡುತ್ತಿದೆ. ಎಪಿಎಂಸಿ ಹೊರಗಡೆಯೂ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ರೈತರಿಗೆ ಸಹಾಯವಾಗಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>ಅದಕ್ಕೆ ಉತ್ತರಿಸಿದ ಇಲಾಖೆ ಉಪನಿರ್ದೇಶಕರು, ‘ರೈತರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದರು.</p>.<p>ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್, ‘ಕಾಯ್ದೆಯಲಾಭ–ನಷ್ಟ ಬದಿಗಿರಲಿ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಪಡೆಯೋಣ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಗೋದಾಮುಗಳು ಖಾಲಿ ಬಿದ್ದಿವೆ. ಅವುಗಳನ್ನು ಬಾಡಿಗೆ ಕೊಟ್ಟರೆ ಎಪಿಎಂಸಿಗೆ ಆದಾಯವಾದರೂ ಬರುತ್ತದೆ’ ಎಂದು ಸಲಹೆ ನೀಡಿದರು.</p>.<p>2019–20ರಲ್ಲಿ ಮೈಸೂರು ಜಿಲ್ಲೆಯ ಎಪಿಎಂಸಿಗಳಲ್ಲಿ ₹ 21.69 ಕೋಟಿ ಸೆಸ್ ಸಂಗ್ರಹದ ಗುರಿ ಹೊಂದಲಾಗಿತ್ತು. ₹ 21.16 ಕೋಟಿ ಸಂಗ್ರಹವಾಗಿತ್ತು. 2020–21ರಲ್ಲಿ ₹ 24.35 ಕೋಟಿ ಸೆಸ್ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ, ಜನವರಿ ಅಂತ್ಯದವರೆಗೆ ಕೇವಲ ₹ 6 ಕೋಟಿ ಸಂಗ್ರಹವಾಗಿದೆ.</p>.<p>ಈ ಹಿಂದೆ ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ತಂದು ಮಾರಾಟ ಮಾಡಬೇಕಿತ್ತು. ಈಗ ಆ ನಿರ್ಬಂಧ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಕೃಷಿ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಸೆಸ್ ಸಂಗ್ರಹ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ನಿರ್ವಹಣೆ ಕಷ್ಟಕರವಾಗಿರುವುದು ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಯಿತು.</p>.<p>ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಈ ವಿಚಾರವನ್ನುಗಮನಕ್ಕೆ ತರಲಾಯಿತು.</p>.<p>‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ರೈತರು ಹೊರಗಡೆಯೂ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಎಂಪಿಎಂಸಿಯಲ್ಲಿ ವಹಿವಾಟು ತಗ್ಗಿದ್ದು, ಆದಾಯ ಕಡಿಮೆ ಆಗಿದೆ’ ಎಂದು ಇಲಾಖೆ ಉಪನಿರ್ದೇಶಕಿ ಎಸ್.ಸಂಗೀತಾ ತಿಳಿಸಿದರು.</p>.<p>‘2019–20ರ ನವೆಂಬರ್, ಡಿಸೆಂಬರ್, ಜನವರಿ ಅವಧಿಯಲ್ಲಿ ಮೈಸೂರಿನ ಬಂಡೀಪಾಳ್ಯ ಎಪಿಎಂಸಿಯಲ್ಲಿ ₹ 2.01 ಕೋಟಿ ಸೆಸ್ (ಮಾರುಕಟ್ಟೆ ಶುಲ್ಕ ವಸೂಲಿ) ಸಂಗ್ರಹವಾಗಿತ್ತು. ಆದರೆ, 2020–21ರ ಇದೇ ಅವಧಿಯಲ್ಲಿ ಕೇವಲ ₹ 1.47 ಕೋಟಿ ಸಂಗ್ರಹವಾಗಿದೆ. ಜಿಲ್ಲೆಯಲ್ಲಿರುವ ಏಳು ಎಪಿಎಂಸಿ ಸೇರಿ, ಶೇ 50ರಷ್ಟು ಸೆಸ್ ವಸೂಲಿ ಕಡಿಮೆ ಆಗಿದೆ’ ಎಂದು ಮಾಹಿತಿ ನೀಡಿದರು.</p>.<p>‘ಬಂಡೀಪಾಳ್ಯದಲ್ಲಿರುವ ಎಂಪಿಎಂಸಿ ಹೊರತುಪಡಿಸಿ ಜಿಲ್ಲೆಯ ಉಳಿದ ಕಡೆ ಚಟುವಟಿಕೆಗಳು ಕಡಿಮೆ ಆಗಿವೆ. ಎಪಿಎಂಸಿ ನಡೆಸುವುದೇ ಕಷ್ಟಕರವಾಗಿದೆ. ನಿರ್ವಹಣೆಗೂ ಹಣ ಸಾಕಾಗುತ್ತಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.</p>.<p>ಆಗ ಸಚಿವ ಸೋಮಶೇಖರ್, ‘ಎಂಪಿಎಂಸಿಗೆತೊಂದರೆಯಾದರೆ ಸರ್ಕಾರ ನೋಡಿಕೊಳ್ಳುತ್ತದೆ. ಸಿಬ್ಬಂದಿಗೆ ವೇತನನೀಡುತ್ತಿದೆ. ಎಪಿಎಂಸಿ ಹೊರಗಡೆಯೂ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ರೈತರಿಗೆ ಸಹಾಯವಾಗಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>ಅದಕ್ಕೆ ಉತ್ತರಿಸಿದ ಇಲಾಖೆ ಉಪನಿರ್ದೇಶಕರು, ‘ರೈತರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದರು.</p>.<p>ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್, ‘ಕಾಯ್ದೆಯಲಾಭ–ನಷ್ಟ ಬದಿಗಿರಲಿ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಪಡೆಯೋಣ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಗೋದಾಮುಗಳು ಖಾಲಿ ಬಿದ್ದಿವೆ. ಅವುಗಳನ್ನು ಬಾಡಿಗೆ ಕೊಟ್ಟರೆ ಎಪಿಎಂಸಿಗೆ ಆದಾಯವಾದರೂ ಬರುತ್ತದೆ’ ಎಂದು ಸಲಹೆ ನೀಡಿದರು.</p>.<p>2019–20ರಲ್ಲಿ ಮೈಸೂರು ಜಿಲ್ಲೆಯ ಎಪಿಎಂಸಿಗಳಲ್ಲಿ ₹ 21.69 ಕೋಟಿ ಸೆಸ್ ಸಂಗ್ರಹದ ಗುರಿ ಹೊಂದಲಾಗಿತ್ತು. ₹ 21.16 ಕೋಟಿ ಸಂಗ್ರಹವಾಗಿತ್ತು. 2020–21ರಲ್ಲಿ ₹ 24.35 ಕೋಟಿ ಸೆಸ್ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ, ಜನವರಿ ಅಂತ್ಯದವರೆಗೆ ಕೇವಲ ₹ 6 ಕೋಟಿ ಸಂಗ್ರಹವಾಗಿದೆ.</p>.<p>ಈ ಹಿಂದೆ ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ತಂದು ಮಾರಾಟ ಮಾಡಬೇಕಿತ್ತು. ಈಗ ಆ ನಿರ್ಬಂಧ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>