<p><strong>ಮುಂಬೈ (ಪಿಟಿಐ): </strong>ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ದೇಶದ ಶೇ 50ಕ್ಕೂ ಅಧಿಕ ಕಂಪನಿಗಳ ವಹಿವಾಟಿಗೆ ಧಕ್ಕೆಯಾಗಿದ್ದು, ಶೇ 80ರಷ್ಟು ಕಂಪನಿಗಳು ನಗದು ಹರಿವಿನ ಸಮಸ್ಯೆ ಎದುರಿಸುತ್ತಿವೆ ಎಂದುಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ತಿಳಿಸಿದೆ.</p>.<p>ಈ ಮಹಾಮಾರಿಯು ದೇಶದ ಆರ್ಥಿಕತೆಗೆ ಹೊಸ ಸವಾಲನ್ನು ಒಡ್ಡಿದೆ. ಪೂರೈಕೆ ಮತ್ತು ಬೇಡಿಕೆ ಮೇಲೆ ತೀವ್ರತರದ ಪರಿಣಾಮ ಉಂಟುಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಭಾರಿ ಪ್ರಮಾಣದಲ್ಲಿ ಹಿನ್ನಡೆಯುಂಟುಮಾಡಲಿದೆ ಎಂದು ಎಫ್ಐಸಿಸಿಐ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p>ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿ ಬೆಳವಣಿಗೆ ಸ್ಥಿತಿಯಲ್ಲಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಆರು ವರ್ಷಗಳ ಕನಿಷ್ಠ ಮಟ್ಟದ ಪ್ರಗತಿಯಾಗಿದೆ.ಕೊರೊನಾದ ಆರಂಭಿಕ ಹಂತದಲ್ಲಿಯೇ ವಾಣಿಜ್ಯ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪರಿಸ್ಥಿತಿ ಕೈಮೀರಿದರೆ ಇನ್ನೂ ಹೆಚ್ಚಿನ ಸಮಸ್ಯೆ ಆಗಲಿದೆ.</p>.<p>ಸಿಬ್ಬಂದಿ ವೇತನ, ಸಾಲ ಮರುಪಾವತಿ, ಬಡ್ಡಿದರ ಹಾಗೂ ತೆರಿಗೆ ಪಾವತಿಗೂ ಸಮಸ್ಯೆಯಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.</p>.<p><strong>ಕೋವಿಡ್–19 ತುರ್ತು ಸಾಲ: ಎಸ್ಬಿಐ</strong></p>.<p>ಕೊರೊನಾದಿಂದಾಗಿ ದೇಶದಾದ್ಯಂತ ವಾಣಿಜ್ಯ ವಹಿವಾಟು ಇಳಿಮುಖವಾಗಿದೆ. ಹೀಗಾಗಿ ನಗದು ಕೊರತೆ ಬೀಳದಂತೆ ನೋಡಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕೋವಿಡ್–19 ತುರ್ತು ಸಾಲ (ಸಿಇಸಿಎಲ್) ಸೌಲಭ್ಯ ಆರಂಭಿಸಿದೆ.</p>.<p>12 ತಿಂಗಳ ಅವಧಿಗೆ ಶೇ 7.25ರ ಬಡ್ಡಿದರದಲ್ಲಿ ₹200 ಕೋಟಿಯವರೆಗೂ ಸಾಲ ನೀಡಲಾಗುವುದು. ಜೂನ್ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>31 ರಿಂದ 60 ದಿನಗಳವರೆಗೆ ಹಾಗೂ 61 ರಿಂದ 90ದಿನಗಳವರೆಗೆಬಾಕಿ ಪಾವತಿಸದೇ ಇರುವ ಖಾತೆಗಳಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ ಎಂದು ತಿಳಿಸಿದೆ.ಹಾಲಿ ಇರುವ ನಿಧಿ ಆಧಾರಿತ ದುಡಿಯುವ ಬಂಡವಾಳದ ಮೇಲೆ ಗರಿಷ್ಠ ಶೇ 10ರಷ್ಟು ಸಾಲ ಸಿಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ದೇಶದ ಶೇ 50ಕ್ಕೂ ಅಧಿಕ ಕಂಪನಿಗಳ ವಹಿವಾಟಿಗೆ ಧಕ್ಕೆಯಾಗಿದ್ದು, ಶೇ 80ರಷ್ಟು ಕಂಪನಿಗಳು ನಗದು ಹರಿವಿನ ಸಮಸ್ಯೆ ಎದುರಿಸುತ್ತಿವೆ ಎಂದುಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ತಿಳಿಸಿದೆ.</p>.<p>ಈ ಮಹಾಮಾರಿಯು ದೇಶದ ಆರ್ಥಿಕತೆಗೆ ಹೊಸ ಸವಾಲನ್ನು ಒಡ್ಡಿದೆ. ಪೂರೈಕೆ ಮತ್ತು ಬೇಡಿಕೆ ಮೇಲೆ ತೀವ್ರತರದ ಪರಿಣಾಮ ಉಂಟುಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಭಾರಿ ಪ್ರಮಾಣದಲ್ಲಿ ಹಿನ್ನಡೆಯುಂಟುಮಾಡಲಿದೆ ಎಂದು ಎಫ್ಐಸಿಸಿಐ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p>ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿ ಬೆಳವಣಿಗೆ ಸ್ಥಿತಿಯಲ್ಲಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಆರು ವರ್ಷಗಳ ಕನಿಷ್ಠ ಮಟ್ಟದ ಪ್ರಗತಿಯಾಗಿದೆ.ಕೊರೊನಾದ ಆರಂಭಿಕ ಹಂತದಲ್ಲಿಯೇ ವಾಣಿಜ್ಯ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪರಿಸ್ಥಿತಿ ಕೈಮೀರಿದರೆ ಇನ್ನೂ ಹೆಚ್ಚಿನ ಸಮಸ್ಯೆ ಆಗಲಿದೆ.</p>.<p>ಸಿಬ್ಬಂದಿ ವೇತನ, ಸಾಲ ಮರುಪಾವತಿ, ಬಡ್ಡಿದರ ಹಾಗೂ ತೆರಿಗೆ ಪಾವತಿಗೂ ಸಮಸ್ಯೆಯಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.</p>.<p><strong>ಕೋವಿಡ್–19 ತುರ್ತು ಸಾಲ: ಎಸ್ಬಿಐ</strong></p>.<p>ಕೊರೊನಾದಿಂದಾಗಿ ದೇಶದಾದ್ಯಂತ ವಾಣಿಜ್ಯ ವಹಿವಾಟು ಇಳಿಮುಖವಾಗಿದೆ. ಹೀಗಾಗಿ ನಗದು ಕೊರತೆ ಬೀಳದಂತೆ ನೋಡಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕೋವಿಡ್–19 ತುರ್ತು ಸಾಲ (ಸಿಇಸಿಎಲ್) ಸೌಲಭ್ಯ ಆರಂಭಿಸಿದೆ.</p>.<p>12 ತಿಂಗಳ ಅವಧಿಗೆ ಶೇ 7.25ರ ಬಡ್ಡಿದರದಲ್ಲಿ ₹200 ಕೋಟಿಯವರೆಗೂ ಸಾಲ ನೀಡಲಾಗುವುದು. ಜೂನ್ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>31 ರಿಂದ 60 ದಿನಗಳವರೆಗೆ ಹಾಗೂ 61 ರಿಂದ 90ದಿನಗಳವರೆಗೆಬಾಕಿ ಪಾವತಿಸದೇ ಇರುವ ಖಾತೆಗಳಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ ಎಂದು ತಿಳಿಸಿದೆ.ಹಾಲಿ ಇರುವ ನಿಧಿ ಆಧಾರಿತ ದುಡಿಯುವ ಬಂಡವಾಳದ ಮೇಲೆ ಗರಿಷ್ಠ ಶೇ 10ರಷ್ಟು ಸಾಲ ಸಿಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>