<p><strong>ನವದೆಹಲಿ: </strong>‘ಕೇಂದ್ರ ಸರ್ಕಾರವು ನೆರವಿಗೆ ಧಾವಿಸದಿದ್ದರೆ, ದೇಶದ ಮೂರನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆಯಾಗಿರುವ ವೊಡಾಫೋನ್ ಐಡಿಯಾ ಬಾಗಿಲು ಹಾಕುವುದು ಅನಿವಾರ್ಯವಾಗಲಿದೆ’ ಎಂದು ಕಂಪನಿ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.</p>.<p>‘ಸರ್ಕಾರದಿಂದ ನಮಗೆ ಹಣಕಾಸು ನೆರವು ಸಿಗದಿದ್ದರೆ ವೊಡಾಫೋನ್ ವಹಿವಾಟು ಸ್ಥಗಿತಗೊಳಿಸಲಾಗುವುದು’ ಎಂದು ಬಿರ್ಲಾ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://cms.prajavani.net/business/commerce-news/voda-idea-to-shut-688148.html">‘ಸರ್ಕಾರದ ನೆರವು ಸಿಗದಿದ್ದರೆವೊಡಾಫೋನ್ ಐಡಿಯಾ ಸ್ಥಗಿತ’</a></p>.<p>ಬಿರ್ಲಾ ಅವರ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟನ್ನಿನ ದೂರಸಂಪರ್ಕ ದೈತ್ಯ ಸಂಸ್ಥೆ ವೊಡಾಫೋನ್ನ ಭಾರತದ ಅಂಗಸಂಸ್ಥೆ ಕಳೆದ ವರ್ಷಪರಸ್ಪರ ವಿಲೀನಗೊಂಡಿದ್ದವು. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊದ ಉಚಿತ ಕರೆ ಮತ್ತು ತೀರ ಅಗ್ಗದ ಡೇಟಾ ಸೇವೆಗೆ ಸ್ಪರ್ಧೆ ಒಡ್ಡಲು ಈ ವಿಲೀನ ಪ್ರಕ್ರಿಯೆ ನಡೆದಿತ್ತು.</p>.<p>ಕಂಪನಿಯು, ಸೆಪ್ಟೆಂಬರ್ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ₹ 50,921 ಕೋಟಿಗಳಷ್ಟು ನಷ್ಟ ದಾಖಲಿಸಿದೆ. ದೇಶಿ ಕಾರ್ಪೊರೇಟ್ ಸಂಸ್ಥೆಯೊಂದರ ಅತಿದೊಡ್ಡ ನಷ್ಟದ ಪ್ರಮಾಣ ಇದಾಗಿದೆ.</p>.<p>‘ದೊಡ್ಡ ಮೊತ್ತದ ನಷ್ಟಕ್ಕೆ ಗುರಿಯಾದ ನಂತರ ಹೊಸದಾಗಿ ಹಣ ತೊಡಗಿಸುವುದು ಲಾಭದಾಯಕವಾಗಿರುವುದಿಲ್ಲ. ಹೀಗಾಗಿ ನಾವು ವಹಿವಾಟು ಸ್ಥಗಿತಗೊಳಿಸುತ್ತೇವೆ’ ಎಂದು ಬಿರ್ಲಾ ಹೇಳಿದ್ದಾರೆ.</p>.<p>‘ಕೇವಲ ದೂರಸಂಪರ್ಕ ಕ್ಷೇತ್ರಕ್ಕಷ್ಟೆ ಅಲ್ಲದೆ, ಒಟ್ಟಾರೆ ಆರ್ಥಿಕತೆಯನ್ನು ಶೇ 4.5ರಷ್ಟಕ್ಕೆ ಕುಸಿದಿರುವ ಜಿಡಿಪಿಯಿಂದ ಮೇಲಕ್ಕೆತ್ತಲು ಸರ್ಕಾರ ಪರಿಹಾರ ಕೊಡುಗೆ ಘೋಷಿಸಲಿದೆ’ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ಕೇಂದ್ರ ಸರ್ಕಾರವು ನೆರವಿಗೆ ಧಾವಿಸದಿದ್ದರೆ, ದೇಶದ ಮೂರನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆಯಾಗಿರುವ ವೊಡಾಫೋನ್ ಐಡಿಯಾ ಬಾಗಿಲು ಹಾಕುವುದು ಅನಿವಾರ್ಯವಾಗಲಿದೆ’ ಎಂದು ಕಂಪನಿ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.</p>.<p>‘ಸರ್ಕಾರದಿಂದ ನಮಗೆ ಹಣಕಾಸು ನೆರವು ಸಿಗದಿದ್ದರೆ ವೊಡಾಫೋನ್ ವಹಿವಾಟು ಸ್ಥಗಿತಗೊಳಿಸಲಾಗುವುದು’ ಎಂದು ಬಿರ್ಲಾ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://cms.prajavani.net/business/commerce-news/voda-idea-to-shut-688148.html">‘ಸರ್ಕಾರದ ನೆರವು ಸಿಗದಿದ್ದರೆವೊಡಾಫೋನ್ ಐಡಿಯಾ ಸ್ಥಗಿತ’</a></p>.<p>ಬಿರ್ಲಾ ಅವರ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟನ್ನಿನ ದೂರಸಂಪರ್ಕ ದೈತ್ಯ ಸಂಸ್ಥೆ ವೊಡಾಫೋನ್ನ ಭಾರತದ ಅಂಗಸಂಸ್ಥೆ ಕಳೆದ ವರ್ಷಪರಸ್ಪರ ವಿಲೀನಗೊಂಡಿದ್ದವು. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊದ ಉಚಿತ ಕರೆ ಮತ್ತು ತೀರ ಅಗ್ಗದ ಡೇಟಾ ಸೇವೆಗೆ ಸ್ಪರ್ಧೆ ಒಡ್ಡಲು ಈ ವಿಲೀನ ಪ್ರಕ್ರಿಯೆ ನಡೆದಿತ್ತು.</p>.<p>ಕಂಪನಿಯು, ಸೆಪ್ಟೆಂಬರ್ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ₹ 50,921 ಕೋಟಿಗಳಷ್ಟು ನಷ್ಟ ದಾಖಲಿಸಿದೆ. ದೇಶಿ ಕಾರ್ಪೊರೇಟ್ ಸಂಸ್ಥೆಯೊಂದರ ಅತಿದೊಡ್ಡ ನಷ್ಟದ ಪ್ರಮಾಣ ಇದಾಗಿದೆ.</p>.<p>‘ದೊಡ್ಡ ಮೊತ್ತದ ನಷ್ಟಕ್ಕೆ ಗುರಿಯಾದ ನಂತರ ಹೊಸದಾಗಿ ಹಣ ತೊಡಗಿಸುವುದು ಲಾಭದಾಯಕವಾಗಿರುವುದಿಲ್ಲ. ಹೀಗಾಗಿ ನಾವು ವಹಿವಾಟು ಸ್ಥಗಿತಗೊಳಿಸುತ್ತೇವೆ’ ಎಂದು ಬಿರ್ಲಾ ಹೇಳಿದ್ದಾರೆ.</p>.<p>‘ಕೇವಲ ದೂರಸಂಪರ್ಕ ಕ್ಷೇತ್ರಕ್ಕಷ್ಟೆ ಅಲ್ಲದೆ, ಒಟ್ಟಾರೆ ಆರ್ಥಿಕತೆಯನ್ನು ಶೇ 4.5ರಷ್ಟಕ್ಕೆ ಕುಸಿದಿರುವ ಜಿಡಿಪಿಯಿಂದ ಮೇಲಕ್ಕೆತ್ತಲು ಸರ್ಕಾರ ಪರಿಹಾರ ಕೊಡುಗೆ ಘೋಷಿಸಲಿದೆ’ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>