ನವದೆಹಲಿ (ಪಿಟಿಐ): ಕೆಲವು ವಿದೇಶಿ ವರ್ತಕರು ಭಾರತದ ಗೋಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಅದರ ಬೆಲೆ ಜಾಸ್ತಿ ಆಗುವಂತೆ ಮಾಡುವುದನ್ನು ನಿಯಂತ್ರಿಸಲು ಗೋಧಿ ರಫ್ತು ನಿಷೇಧವು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಗೋಧಿ ದಾಸ್ತಾನು ಅಗತ್ಯವಿರುವ ದೇಶಗಳಿಗೆ, ಜಾಗತಿಕ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶ ಕೇಂದ್ರಕ್ಕೆ ಇದೆ ಎನ್ನಲಾಗಿದೆ.
ಚೀನಾದ ವರ್ತಕರು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಈಗಿನ ತೀರ್ಮಾನದ ಪರಿಣಾಮವಾಗಿ ಭಾರತದ ಗೋಧಿಯು ಅಗತ್ಯ ಇರುವ ದೇಶಗಳಿಗೆ ಮಾತ್ರ ತಲುಪುತ್ತದೆ ಎಂಬುದು ಮೂಲಗಳ ವಿವರಣೆ.