ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಮಾನ್ ಮತ್ತು ಉತ್ತರ ಕೊರಿಯಾದ ಎರಡು ಕಂಪನಿಗಳ ಜೊತೆ ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಮೂರು ತಿಂಗಳುಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಮಂಗಳೂರಿನಲ್ಲಿರುವ ತಯಾರಿಕಾ ಘಟಕದ ಶೇ 30ರಿಂದ 40ರಷ್ಟು ಸಾಮರ್ಥ್ಯದ ಮಿತಿಯಲ್ಲಿ ಈ ಕಾರ್ಯ ನಡೆಸಲಾಗುತ್ತದೆ’ ಎಂದರು. ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸುವ ಪ್ರಸ್ತಾವಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಒಂದನೇ ಹಂತದ ತಾತ್ವಿಕ ಅನುಮತಿ ದೊರೆತಿದೆ. ಈ ಗಣಿಯಿಂದ ವಾರ್ಷಿಕ 20 ಲಕ್ಷ ಟನ್ ಕಬ್ಬಿಣದ ಅದಿರು ಪಡೆಯಬಹುದಾಗಿದೆ. ಎರಡನೇ ಹಂತದ ಅನುಮತಿ ಮುಂದಿನ ಮಾರ್ಚ್ ವೇಳೆಗೆ ದೊರೆತರೆ, 2023ರ ಮಾರ್ಚ್ ವೇಳೆ ಗಣಿಗಾರಿಕೆ ಪ್ರಾರಂಭಿಸಬಹುದು ಎಂದರು.