<p> <strong>ಬೆಂಗಳೂರು: ‘</strong>ಭಾರತದ ಕೈಗಾರಿಕೋದ್ಯಮಿಗಳಿಗೆ ದಾನ ಧರ್ಮ ಕಡ್ಡಾಯಗೊಳಿಸುವ ಅಗತ್ಯ ಇಲ್ಲ’ ಎಂದು ಸಾಫ್ಟ್ವೇರ್ ದೈತ್ಯ ಸಂಸ್ಥೆ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್. ಗೋಪಾಲಕೃಷ್ಣನ್ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.<br /> </p>.<p>ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ), ಅಮೆರಿಕದ ಬಂಡವಾಳ ಹೂಡಿಕೆದಾರ ವಾರನ್ ಬಫೆಟ್ ಅವರ ಗೌರವಾರ್ಥ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಮಾತನಾಡುತ್ತಿದ್ದರು. ‘ಉದ್ದಿಮೆದಾರರು ದಾನಶೀಲತೆ ಅನುಸರಿಸುವುದನ್ನು ಕಡ್ಡಾಯಗೊಳಿಸಬೇಕೆಂದು ನನಗೆ ಅನಿಸುವುದಿಲ್ಲ. ದಾನ ನೀಡುವ ಪ್ರವೃತ್ತಿ ರೂಢಿಸಿಕೊಳ್ಳಲು ನಾವು ಜನರನ್ನು ಉತ್ತೇಜಿಸಬೇಕಷ್ಟೆ’ ಎಂದರು.</p>.<p>‘ದಾನ-ಧರ್ಮ ಪ್ರವೃತ್ತಿ ರೂಢಿಸಿಕೊಂಡು ಅದನ್ನು ನಿಷ್ಠೆಯಿಂದ ಪಾಲಿಸುತ್ತಿರುವವರ ಬಗ್ಗೆ ನಾವು ಉತ್ತೇಜಕ ರೀತಿಯಲ್ಲಿ ಮಾತನಾಡಬೇಕು. ದಾನಿಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯಬೇಕು. ದಾನಿಗಳ ಆದರ್ಶ ಇತರರಿಗೆ ಮಾದರಿಯಾಗಬೇಕು. ಇಂತಹ ವಿಷಯದಲ್ಲಿ ಬಫೆಟ್ ಮತ್ತು ಬಿಲ್ ಗೇಟ್ಸ್ ಅತ್ಯುತ್ತಮ ನಿದರ್ಶನವಾಗಿದ್ದಾರೆ.</p>.<p>ಇಂತಹ ಆದರ್ಶ ವ್ಯಕ್ತಿಗಳು ಭಾರತದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇಂತವರ ನಡೆ ನುಡಿ ಬಗ್ಗೆ ನಾವು ಮಾತನಾಡುವುದರಿಂದ ಅವರ ಆದರ್ಶ ಪಾಲಿಸಲು ಇತರರಿಗೆ ಉತ್ತೇಜನ ನೀಡಿದಂತಾಗುವುದು’ ಎಂದರು.<br /> </p>.<p><strong>ಬಫೆಟ್ ಆಶಯ:</strong> ‘ಮತ್ತೊಮ್ಮೆ ಶ್ರೀಮಂತನಾಗಿಯೇ ಜನಿಸುವ ಆಶಯ ನನಗೆ ಇಲ್ಲ’ ಎಂದು ವಾರನ್ ಬಫೆಟ್ ಅಭಿಪ್ರಾಯಪಟ್ಟರು. ‘ನನ್ನ ಉದ್ದಿಮೆ ವಹಿವಾಟಿನ ಸಾಹಸಗಳಲ್ಲಿ ನಾನು ತುಂಬ ಅದೃಷ್ಟಶಾಲಿಯಾಗಿರುವೆ. ನನ್ನಲ್ಲಿ ಅದೃಷ್ಟದ ಗುಣಾನು(ಜೀನ್ಸ್)ಗಳಿವೆ. <br /> </p>.<p>ಆದರೆ ಮರು ಜನ್ಮ ಏನಾದರೂ ಇದ್ದರೆ ನಾನು ಮತ್ತೆ ಸಿರಿವಂತನಾಗಿ ಜನಿಸಲು ಖಂಡಿತವಾಗಿಯೂ ಬಯಸುವುದಿಲ್ಲ. ಸಮಾಜಕ್ಕೆ ಒಳಿತನ್ನು ಉಂಟು ಮಾಡುವಂತಹ ಕೆಲ ನಿರ್ದಿಷ್ಟ ಗುಣ ವಿಶೇಷ ಹೊಂದಿದ ವ್ಯಕ್ತಿಯಾಗಿ ಜನಿಸಲು ಬಯಸುವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ಬೆಂಗಳೂರು: ‘</strong>ಭಾರತದ ಕೈಗಾರಿಕೋದ್ಯಮಿಗಳಿಗೆ ದಾನ ಧರ್ಮ ಕಡ್ಡಾಯಗೊಳಿಸುವ ಅಗತ್ಯ ಇಲ್ಲ’ ಎಂದು ಸಾಫ್ಟ್ವೇರ್ ದೈತ್ಯ ಸಂಸ್ಥೆ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್. ಗೋಪಾಲಕೃಷ್ಣನ್ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.<br /> </p>.<p>ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ), ಅಮೆರಿಕದ ಬಂಡವಾಳ ಹೂಡಿಕೆದಾರ ವಾರನ್ ಬಫೆಟ್ ಅವರ ಗೌರವಾರ್ಥ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಮಾತನಾಡುತ್ತಿದ್ದರು. ‘ಉದ್ದಿಮೆದಾರರು ದಾನಶೀಲತೆ ಅನುಸರಿಸುವುದನ್ನು ಕಡ್ಡಾಯಗೊಳಿಸಬೇಕೆಂದು ನನಗೆ ಅನಿಸುವುದಿಲ್ಲ. ದಾನ ನೀಡುವ ಪ್ರವೃತ್ತಿ ರೂಢಿಸಿಕೊಳ್ಳಲು ನಾವು ಜನರನ್ನು ಉತ್ತೇಜಿಸಬೇಕಷ್ಟೆ’ ಎಂದರು.</p>.<p>‘ದಾನ-ಧರ್ಮ ಪ್ರವೃತ್ತಿ ರೂಢಿಸಿಕೊಂಡು ಅದನ್ನು ನಿಷ್ಠೆಯಿಂದ ಪಾಲಿಸುತ್ತಿರುವವರ ಬಗ್ಗೆ ನಾವು ಉತ್ತೇಜಕ ರೀತಿಯಲ್ಲಿ ಮಾತನಾಡಬೇಕು. ದಾನಿಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯಬೇಕು. ದಾನಿಗಳ ಆದರ್ಶ ಇತರರಿಗೆ ಮಾದರಿಯಾಗಬೇಕು. ಇಂತಹ ವಿಷಯದಲ್ಲಿ ಬಫೆಟ್ ಮತ್ತು ಬಿಲ್ ಗೇಟ್ಸ್ ಅತ್ಯುತ್ತಮ ನಿದರ್ಶನವಾಗಿದ್ದಾರೆ.</p>.<p>ಇಂತಹ ಆದರ್ಶ ವ್ಯಕ್ತಿಗಳು ಭಾರತದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇಂತವರ ನಡೆ ನುಡಿ ಬಗ್ಗೆ ನಾವು ಮಾತನಾಡುವುದರಿಂದ ಅವರ ಆದರ್ಶ ಪಾಲಿಸಲು ಇತರರಿಗೆ ಉತ್ತೇಜನ ನೀಡಿದಂತಾಗುವುದು’ ಎಂದರು.<br /> </p>.<p><strong>ಬಫೆಟ್ ಆಶಯ:</strong> ‘ಮತ್ತೊಮ್ಮೆ ಶ್ರೀಮಂತನಾಗಿಯೇ ಜನಿಸುವ ಆಶಯ ನನಗೆ ಇಲ್ಲ’ ಎಂದು ವಾರನ್ ಬಫೆಟ್ ಅಭಿಪ್ರಾಯಪಟ್ಟರು. ‘ನನ್ನ ಉದ್ದಿಮೆ ವಹಿವಾಟಿನ ಸಾಹಸಗಳಲ್ಲಿ ನಾನು ತುಂಬ ಅದೃಷ್ಟಶಾಲಿಯಾಗಿರುವೆ. ನನ್ನಲ್ಲಿ ಅದೃಷ್ಟದ ಗುಣಾನು(ಜೀನ್ಸ್)ಗಳಿವೆ. <br /> </p>.<p>ಆದರೆ ಮರು ಜನ್ಮ ಏನಾದರೂ ಇದ್ದರೆ ನಾನು ಮತ್ತೆ ಸಿರಿವಂತನಾಗಿ ಜನಿಸಲು ಖಂಡಿತವಾಗಿಯೂ ಬಯಸುವುದಿಲ್ಲ. ಸಮಾಜಕ್ಕೆ ಒಳಿತನ್ನು ಉಂಟು ಮಾಡುವಂತಹ ಕೆಲ ನಿರ್ದಿಷ್ಟ ಗುಣ ವಿಶೇಷ ಹೊಂದಿದ ವ್ಯಕ್ತಿಯಾಗಿ ಜನಿಸಲು ಬಯಸುವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>