<p><strong>ಮಂಗಳೂರು:</strong> ಜೆಟ್ ಏರ್ವೇಸ್ ಗಲ್ಫ್ ರಾಷ್ಟ್ರಗಳ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಶಾರ್ಜಾ ಮತ್ತು ಮಂಗಳೂರು ನಡುವೆ ನೇರ ವಿಮಾನ ಸಂಚಾರ ಆರಂಭಿಸಿದೆ. ಭಾನುವಾರದಿಂದ ಈ ಹೊಸ ಸೇವೆಗೆ ಚಾಲನೆ ನೀಡಿದ್ದು, ನಿತ್ಯವೂ ಲಭ್ಯವಾಗಲಿದೆ.<br /> <br /> ಜೆಟ್ ಏರ್ವೇಸ್ 2013ರಲ್ಲಿ ದುಬೈಗೆ ಮಂಗಳೂರಿನಿಂದ ನೇರ ಹಾರಾಟ ಆರಂಭಿಸಿತ್ತು. 2015ರಲ್ಲಿ ಅಬುಧಾಬಿಗೆ ನೇರ ವಿಮಾನ ಸೌಲಭ್ಯಕ್ಕೆ ಚಾಲನೆ ನೀಡಲಾಗಿತ್ತು. ಈಗ ಶಾರ್ಜಾ ನಗರಕ್ಕೆ ನೇರ ವಿಮಾನ ಸೌಕರ್ಯ ಆರಂಭಿಸುವ ಮೂಲಕ ಮತ್ತೊಂದು ಹೆಜ್ಜೆ ಇರಿಸಿದೆ.<br /> <br /> ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರು ಮಂಗಳೂರು– ಶಾರ್ಜಾ ನಡುವಿನ ಮೊದಲ ನೇರ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು.<br /> <br /> ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಸಂಸದ ನಳಿನ್ಕುಮಾರ್ ಕಟೀಲ್, ಎಂಐಎ ನಿರ್ದೇಶಕ ಜೆ.ಟಿ.ರಾಧಾಕೃಷ್ಣ, ಜೆಟ್ ಏರ್ವೇಸ್ನ ಪ್ರಧಾನ ವ್ಯವಸ್ಥಾಪಕ ಯು.ಹರೀಶ್ ಶೆಣೈ, ಪ್ರಾದೇಶಿಕ ವ್ಯವಸ್ಥಾಪಕ ಗಂಗಾಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.<br /> <br /> ಮೊದಲ ದಿನ 156 ಸಾಮಾನ್ಯ ಮತ್ತು ಇಬ್ಬರು ಎಕಾನಮಿ ಶ್ರೇಣಿಯ ಪ್ರಯಾಣಿಕರನ್ನು ಹೊತ್ತ ವಿಮಾನವು ಬೆಳಿಗ್ಗೆ 9.30ಕ್ಕೆ ಶಾರ್ಜಾದತ್ತ ಹೊರಟಿತು. ನಿತ್ಯವೂ ಈ ಸೇವೆ ಲಭ್ಯವಿದ್ದು, ಬೆಳಿಗ್ಗೆ 9.30ಕ್ಕೆ ಎಂಐಎನಿಂದ ಹೊರಡುವ ವಿಮಾನ 11.45ಕ್ಕೆ ಶಾರ್ಜಾ ತಲುಪಲಿದೆ. ಶಾರ್ಜಾದಿಂದ ಮಧ್ಯಾಹ್ನ 12.45ಕ್ಕೆ ಹೊರಡುವ ವಿಮಾನವು ಸಂಜೆ 5.55ಕ್ಕೆ ಎಂಐಎಗೆ ಬರಲಿದೆ ಎಂದು ಜೆಟ್ ಏರ್ವೇಸ್ ಪ್ರತಿನಿಧಿಗಳು ತಿಳಿಸಿದರು.<br /> <br /> ಕಾರ್ಯಕ್ರಮದಲ್ಲಿ ಮಾತನಾಡಿದ ಜೆಟ್ ಏರ್ವೇಸ್ನ ಪೂರ್ಣಾವಧಿ ನಿರ್ದೇಶಕ ಗೌರಂಗ್ ಶೆಟ್ಟಿ, ‘ಮಂಗಳೂರು– ಶಾರ್ಜಾ ನಗರಗಳ ನಡುವೆ ನೇರ ವಿಮಾನಯಾನ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಈ ಎರಡೂ ನಗರಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲು ಇದು ಕಾರಣವಾಗಲಿದೆ. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಈ ನೇರ ವಿಮಾನಯಾನದಿಂದ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.<br /> <br /> ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯವೂ ಆರರಿಂದ ಎಂಟು ವಿಮಾನಗಳು ಗಲ್ಫ್ ರಾಷ್ಟ್ರಗಳಿಗೆ ಹಾರಾಟ ನಡೆಸುತ್ತಿವೆ. ಗಲ್ಫ್ನ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ಮಸ್ಕತ್, ಕುವೈಟ್, ದೋಹಾ, ಬಹರೈನ್, ದಮ್ಮಂಗಳಿಗೆ ಎಂಐಎನಿಂದ ನಿತ್ಯ ವಿಮಾನಯಾನ ಸೇವೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಜೆಟ್ ಏರ್ವೇಸ್ ಗಲ್ಫ್ ರಾಷ್ಟ್ರಗಳ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಶಾರ್ಜಾ ಮತ್ತು ಮಂಗಳೂರು ನಡುವೆ ನೇರ ವಿಮಾನ ಸಂಚಾರ ಆರಂಭಿಸಿದೆ. ಭಾನುವಾರದಿಂದ ಈ ಹೊಸ ಸೇವೆಗೆ ಚಾಲನೆ ನೀಡಿದ್ದು, ನಿತ್ಯವೂ ಲಭ್ಯವಾಗಲಿದೆ.<br /> <br /> ಜೆಟ್ ಏರ್ವೇಸ್ 2013ರಲ್ಲಿ ದುಬೈಗೆ ಮಂಗಳೂರಿನಿಂದ ನೇರ ಹಾರಾಟ ಆರಂಭಿಸಿತ್ತು. 2015ರಲ್ಲಿ ಅಬುಧಾಬಿಗೆ ನೇರ ವಿಮಾನ ಸೌಲಭ್ಯಕ್ಕೆ ಚಾಲನೆ ನೀಡಲಾಗಿತ್ತು. ಈಗ ಶಾರ್ಜಾ ನಗರಕ್ಕೆ ನೇರ ವಿಮಾನ ಸೌಕರ್ಯ ಆರಂಭಿಸುವ ಮೂಲಕ ಮತ್ತೊಂದು ಹೆಜ್ಜೆ ಇರಿಸಿದೆ.<br /> <br /> ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರು ಮಂಗಳೂರು– ಶಾರ್ಜಾ ನಡುವಿನ ಮೊದಲ ನೇರ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು.<br /> <br /> ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಸಂಸದ ನಳಿನ್ಕುಮಾರ್ ಕಟೀಲ್, ಎಂಐಎ ನಿರ್ದೇಶಕ ಜೆ.ಟಿ.ರಾಧಾಕೃಷ್ಣ, ಜೆಟ್ ಏರ್ವೇಸ್ನ ಪ್ರಧಾನ ವ್ಯವಸ್ಥಾಪಕ ಯು.ಹರೀಶ್ ಶೆಣೈ, ಪ್ರಾದೇಶಿಕ ವ್ಯವಸ್ಥಾಪಕ ಗಂಗಾಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.<br /> <br /> ಮೊದಲ ದಿನ 156 ಸಾಮಾನ್ಯ ಮತ್ತು ಇಬ್ಬರು ಎಕಾನಮಿ ಶ್ರೇಣಿಯ ಪ್ರಯಾಣಿಕರನ್ನು ಹೊತ್ತ ವಿಮಾನವು ಬೆಳಿಗ್ಗೆ 9.30ಕ್ಕೆ ಶಾರ್ಜಾದತ್ತ ಹೊರಟಿತು. ನಿತ್ಯವೂ ಈ ಸೇವೆ ಲಭ್ಯವಿದ್ದು, ಬೆಳಿಗ್ಗೆ 9.30ಕ್ಕೆ ಎಂಐಎನಿಂದ ಹೊರಡುವ ವಿಮಾನ 11.45ಕ್ಕೆ ಶಾರ್ಜಾ ತಲುಪಲಿದೆ. ಶಾರ್ಜಾದಿಂದ ಮಧ್ಯಾಹ್ನ 12.45ಕ್ಕೆ ಹೊರಡುವ ವಿಮಾನವು ಸಂಜೆ 5.55ಕ್ಕೆ ಎಂಐಎಗೆ ಬರಲಿದೆ ಎಂದು ಜೆಟ್ ಏರ್ವೇಸ್ ಪ್ರತಿನಿಧಿಗಳು ತಿಳಿಸಿದರು.<br /> <br /> ಕಾರ್ಯಕ್ರಮದಲ್ಲಿ ಮಾತನಾಡಿದ ಜೆಟ್ ಏರ್ವೇಸ್ನ ಪೂರ್ಣಾವಧಿ ನಿರ್ದೇಶಕ ಗೌರಂಗ್ ಶೆಟ್ಟಿ, ‘ಮಂಗಳೂರು– ಶಾರ್ಜಾ ನಗರಗಳ ನಡುವೆ ನೇರ ವಿಮಾನಯಾನ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಈ ಎರಡೂ ನಗರಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲು ಇದು ಕಾರಣವಾಗಲಿದೆ. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಈ ನೇರ ವಿಮಾನಯಾನದಿಂದ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.<br /> <br /> ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯವೂ ಆರರಿಂದ ಎಂಟು ವಿಮಾನಗಳು ಗಲ್ಫ್ ರಾಷ್ಟ್ರಗಳಿಗೆ ಹಾರಾಟ ನಡೆಸುತ್ತಿವೆ. ಗಲ್ಫ್ನ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ಮಸ್ಕತ್, ಕುವೈಟ್, ದೋಹಾ, ಬಹರೈನ್, ದಮ್ಮಂಗಳಿಗೆ ಎಂಐಎನಿಂದ ನಿತ್ಯ ವಿಮಾನಯಾನ ಸೇವೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>