<p>ಹೊಸ ವರ್ಷದ ಹೊಸ್ತಿಲಲ್ಲಿ ನಾನು ಹತಾಶೆಯಿಂದಲೇ ಅಂಕಣ ಆರಂಭಿಸಲು ಇಷ್ಟಪಡುವುದಿಲ್ಲ. ಹಳೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಸ್ವಾಗತಿಸುವ ಈ ಹಂತದಲ್ಲಿ ಜಾಗತಿಕ ಮತ್ತು ದೇಶಿ ಅರ್ಥ ವ್ಯವಸ್ಥೆಯ ಆರೋಗ್ಯದ ಸ್ಥಿತಿಗತಿ ತೋರಿಸುವ ಅಳತೆಗೋಲುಗಳೆಲ್ಲ ನಿರಾಶೆಯ ಚಿತ್ರಣವನ್ನೇ ನೀಡುತ್ತಿವೆ.<br /> <br /> ಹೀಗಾಗಿ ಆರ್ಥಿಕ ವಿದ್ಯಮಾನಗಳ ಬಗ್ಗೆಯೇ ಬರೆಯುವುದರ ಬದಲಿಗೆ ಉದ್ದಿಮೆ ವಹಿವಾಟು ನಿರ್ವಹಣೆಯ (ಬಿಸಿನೆಸ್ ಮ್ಯಾನೇಜ್ಮೆಂಟ್) ಭವಿಷ್ಯದ ಪೀಳಿಗೆ ಸಿದ್ಧಪಡಿಸುವ ಶಿಕ್ಷಣದ ಸದ್ಯದ ಸ್ವರೂಪ ಮತ್ತು ಹದಗೆಟ್ಟ ಶೈಕ್ಷಣಿಕ ಸ್ವರೂಪದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕೆಲ ಅನಿಸಿಕೆಗಳನ್ನು ಓದುಗರ ಜತೆ ಹಂಚಿಕೊಳ್ಳಲು ಬಯಸುತ್ತೇನೆ.<br /> <br /> ವಾಸ್ತವ ಬದುಕಿನ ಪಾಠಗಳು, ತರಗತಿಯಲ್ಲಿ ಬೋಧಿಸುವುದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಈ ಮಾತು ದೇಶದ ಅತ್ಯುತ್ತಮ `ಬಿಸಿನೆಸ್ ಸ್ಕೂಲ್~ಗಳಿಗೂ ಸರಿಯಾಗಿಯೇ ಅನ್ವಯಿಸುತ್ತದೆ.<br /> <br /> ತೀವ್ರ ಏರಿಳಿತ ಕಾಣುತ್ತಿರುವ ಮತ್ತು ಕುಂಠಿತಗೊಂಡಿರುವ ಅರ್ಥ ವ್ಯವಸ್ಥೆಯಲ್ಲಿ `ಎಂಬಿಎ~ ವಿದ್ಯಾರ್ಥಿಗಳಿಗೂ ಸಾಕಷ್ಟು ಉದ್ಯೋಗ ಅವಕಾಶ ಮತ್ತು ಸೂಕ್ತ ಸಂಬಳ- ಭತ್ಯೆಗಳೂ ದೊರೆಯುತ್ತಿಲ್ಲ.<br /> <br /> ನಿಯತಕಾಲಿಕೆಯೊಂದು ಇತ್ತೀಚೆಗೆ ದೇಶದಲ್ಲಿನ `ಬಿಸಿನೆಸ್ ಸ್ಕೂಲ್~ಗಳ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದ್ದು, ದೇಶಿ ಶೈಕ್ಷಣಿಕ ರಂಗದಲ್ಲಿ ಇಂತಹ ಶಾಲೆಗಳ ಸ್ಥಾನಮಾನ (ರ್ಯಾಂಕಿಂಗ್) ಪಟ್ಟಿ ಮಾಡಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ-ಬಿ) ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ.<br /> <br /> ಈ ಲೇಖನ ಓದುತ್ತಿದ್ದಂತೆ ನನಗೆ ಎಪ್ಪತ್ತರ ದಶಕದಲ್ಲಿ `ಎಂಬಿಎ~ ಪದವಿಗೆ ಇದ್ದ ಮಾನ್ಯತೆ ನೆನಪಾಯಿತು. ಅಂದಿನ ದಿನಗಳಲ್ಲಿ `ಎಂಬಿಎ~ ಪದವಿ ಪಡೆಯುವುದು ಎಂದರೆ, ಯಶಸ್ಸಿಗೆ ರಹದಾರಿ ಸಿಕ್ಕಿದಂತೆಯೇ ಸರಿ ಎನ್ನುವ ಭಾವನೆ ಮನೆ ಮಾಡಿತ್ತು. ನಾನು ಆಗ `ಐಐಎಂ-ಬಿ~ನ ಎರಡನೇ ತಂಡದ (ಬ್ಯಾಚ್ನ) ವಿದ್ಯಾರ್ಥಿಯಾಗಿದ್ದೆ.<br /> <br /> ಆ ದಿನಗಳಲ್ಲಿ ಕೆಲವೇ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಈ ವಿಷಯದ ಬೋಧನಾ ಸೌಲಭ್ಯ ಇತ್ತು. ಮೂವತ್ತೈದು ವರ್ಷಗಳ ನಂತರ ಶೈಕ್ಷಣಿಕ ರಂಗದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಬೆಂಗಳೂರು ಮತ್ತು ನಗರದ ಸುತ್ತಮುತ್ತ ನೂರಾರು ಶಿಕ್ಷಣ ಸಂಸ್ಥೆಗಳಲ್ಲಿ `ಎಂಬಿಎ~ ಕಲಿಕಾ ಸೌಲಭ್ಯ ಇದೆ.<br /> <br /> ಸದ್ಯಕ್ಕೆ `ಐಐಎಂ-ಬಿ~ನ ಆಡಳಿತ ಮಂಡಳಿಯ ಸದಸ್ಯನೂ ಆಗಿರುವ ನಾನು, `ಎಂಬಿಎ~ ಬೋಧಿಸುವ ಇನ್ನೊಂದು ಶಿಕ್ಷಣ ಸಂಸ್ಥೆಯ ಜತೆಯಲ್ಲಿಯೂ ಕೆಲಸ ನಿರ್ವಹಿಸುತ್ತಿರುವೆ. <br /> <br /> ದೇಶದಲ್ಲಿನ `ಬಿಸಿನೆಸ್ ಮ್ಯಾನೇಜ್ಮೆಂಟ್~ ಶಿಕ್ಷಣದ ಸ್ವರೂಪದಲ್ಲಿ ವ್ಯಾಪಕ ಬದಲಾವಣೆಗಳು ಆಗಿರುವುದಕ್ಕೂ ನಾನು ಸಾಕ್ಷಿಯಾಗಿರುವೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಎನ್ನುವ ಖ್ಯಾತಿಗೆ ಎರವಾಗಿದ್ದರೂ ಅನೇಕ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಈ ಕೋರ್ಸ್ ಒದಗಿಸುತ್ತಲೇ ಇವೆ.<br /> <br /> 2000ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದ `ಎಂಬಿಎ~ ಕೋರ್ಸ್ನ ಪ್ರವೇಶ ಪರೀಕ್ಷೆಗೆ ಕೇವಲ 2000 ವಿದ್ಯಾರ್ಥಿಗಳು ಹಾಜರಾಗಿದ್ದರು. 2011ರಲ್ಲಿ ಕರ್ನಾಟಕ ಶಿಕ್ಷಣ ಪ್ರಾಧಿಕಾರವು, `ಎಂಬಿಎ~ದ ಸರ್ಕಾರಿ ಸೀಟುಗಳಿಗಾಗಿ ನಡೆಸಿದ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಪಿಜಿಸಿಇಟಿ) 19 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. <br /> ದಶಕವೊಂದರಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ 10 ಪಟ್ಟು ಹೆಚ್ಚಿದೆ. ಇತರ ರಾಜ್ಯಗಳಲ್ಲಿಯೂ ಇದೇ ಬಗೆಯಲ್ಲಿ `ಎಂಬಿಎ~ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿರಬಹುದು ಎಂದೂ ನಾವು ಊಹಿಸಬಹುದು.<br /> <br /> ದೇಶದಾದ್ಯಂತ ಇರುವ ಮೂರು ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ಲಕ್ಷದಷ್ಟು `ಎಂಬಿಎ~ ಸೀಟುಗಳನ್ನು ಸೃಷ್ಟಿಸಲಾಗಿದೆ. ಇಂತಹ ಪ್ರವೃತ್ತಿಯು 2008ರಲ್ಲಿ ಗಮನಾರ್ಹ ಹೆಚ್ಚಳ ಕಂಡಿತು. ಅಲ್ಲಿಂದಾಚೆಗೆ ಬೋಧನಾ ಗುಣಮಟ್ಟವೂ ದಿಢೀರಾಗಿ ಕುಸಿಯತೊಡಗಿತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳೆಲ್ಲ ಒಮ್ಮೆಲೆ ಹಠಾತ್ತಾಗಿ ಬಹಿರಂಗಗೊಳ್ಳತೊಡಗಿದವು.<br /> <br /> ಸಾಕಷ್ಟು ತರಬೇತಿ ಪಡೆದ ಮತ್ತು ಬೋಧನೆಗೆ ಬದ್ಧರಾದ ಶಿಕ್ಷಣ ತಜ್ಞರ ಅಲಭ್ಯತೆ, ಅಷ್ಟೇನೂ ಜಾಣರಲ್ಲದ ವಿದ್ಯಾರ್ಥಿಗಳೂ `ಎಂಬಿಎ~ ಪದವಿ ಪಡೆಯಲು ಬಯಸಿರುವುದು, ಮೂಲ ಸೌಕರ್ಯಗಳ ಕೊರತೆ, ಬೋಧನಾ ಕೊಠಡಿಗಳ ಅಭಾವ, ಬೋಧಕರ ಅಜ್ಞಾನ, ತರಬೇತಿಯಲ್ಲಿ ಹೊಸತನ ಕಾಣದಿರುವುದು, ಆಳವಿಲ್ಲದ ಬರೀ ತೋರಿಕೆಯ ಸಂಶೋಧನೆ ಮತ್ತಿತರ ಕಾರಣಗಳಿಂದಾಗಿ `ಎಂಬಿಎ~ ಪಡೆದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳೂ ದೊರೆಯುತ್ತಿಲ್ಲ.<br /> <br /> ಎಲ್ಲ ಬಗೆಯ ಅರ್ಹತೆ ಮತ್ತು ಗುಣಮಟ್ಟ ಹೊಂದಿರುವ 30 ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ತೃಪ್ತಿದಾಯಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತಿವೆ. ಅನೇಕ `ಎಂಬಿಎ~ ವಿದ್ಯಾರ್ಥಿಗಳು ಗುಮಾಸ್ತ ಹುದ್ದೆಯನ್ನೂ ಒಪ್ಪಿಕೊಂಡ ನಿದರ್ಶನಗಳಿವೆ.<br /> <br /> ಹೀಗಾಗಿ ಇತ್ತೀಚಿನ ದಿನಗಳಲ್ಲಿ `ಎಂಬಿಎ~ ಪದವಿಯ ಆಕರ್ಷಣೆ ಕಡಿಮೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ಶೈಕ್ಷಣಿಕ ವ್ಯವಸ್ಥೆ ಬಲಪಡಿಸುವ ಮತ್ತು ವ್ಯಾಪಕ ಬದಲಾವಣೆ ತರುವ ಪ್ರಯತ್ನಗಳು ನಡೆಯಬಹುದು. ಅಂತಹ ಬದಲಾವಣೆಗಳ ಅಗತ್ಯ ಮತ್ತು ಸ್ವರೂಪವನ್ನು ನಾನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸಿರುವೆ.<br /> <br /> <strong>ಬೋಧಕರ ಗುಣಮಟ್ಟ: </strong>ತರಬೇತಿ ಪಡೆದ ಬೋಧಕರ ಕೊರತೆಯು ಅಗಾಧ ಪ್ರಮಾಣದಲ್ಲಿ ಇದೆ. ಹೆಚ್ಚಿನ ವೇತನ ಮತ್ತು ವೃತ್ತಿಯಲ್ಲಿ ಮುನ್ನಡೆಯುವ ಅವಕಾಶಗಳು ಕಡಿಮೆ ಇರುವ ಕಾರಣಕ್ಕೆ ಪ್ರತಿಭಾವಂತರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. <br /> <br /> ಬೋಧಕರ ಬೋಧನಾ ಕೌಶಲ್ಯ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳೂ ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಬೋಧಕರ ವೃತ್ತಿಯಲ್ಲಿ ಯಾವುದೇ ಸುಧಾರಣೆ ಇಲ್ಲದಿರುವುದರಿಂದ ವೃತ್ತಿ ಬಿಟ್ಟು ತೆರಳುವವರ ಸಂಖ್ಯೆ ಹೆಚ್ಚುತ್ತಿದೆ.<br /> <br /> <strong>ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ: </strong>ಇದೊಂದು ಇನ್ನೊಂದು ಮಹತ್ವದ ಸಂಗತಿ. ಮುಂಚೂಣಿಯಲ್ಲಿ ಇರುವ 50 ರಿಂದ 100 ಶಿಕ್ಷಣ ಸಂಸ್ಥೆಗಳು ಹೊರತುಪಡಿಸಿ ಬಹುತೇಕ ಇತರ ಸಂಸ್ಥೆಗಳಿಗೆ ಗುಣಮಟ್ಟದ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಿಲ್ಲ.<br /> <br /> ಪ್ರವೇಶ ಪರೀಕ್ಷೆಗಳು ಕೇವಲ ತೋರಿಕೆಗೆ ನಡೆಯುತ್ತಿವೆ. ಉದಾಹರಣೆಗೆ 2011ರಲ್ಲಿ ನಡೆದ `ಪಿಜಿಸಿಇಟಿ~ಯಲ್ಲಿ ಭಾಗಿಯಾಗಿದ್ದ 19 ಸಾವಿರ ವಿದ್ಯಾರ್ಥಿಗಳ ಪೈಕಿ ಶೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ 40ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರು.<br /> <br /> ಇಂತಹ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ಸ್ವಾಭಾವಿಕ ಕೌಶಲ, ಪದ ಪ್ರಯೋಗ ಸಾಮರ್ಥ್ಯ, ತಾರ್ಕಿಕ ಚಿಂತನೆ, ಸಂಖ್ಯೆಗಳ ಪರಿಣತಿ ಪರೀಕ್ಷಿಸುತ್ತವೆ. ಈ ಪರೀಕ್ಷೆಗಳು ಮಾಧ್ಯಮಿಕ ಶಾಲಾ ಮಟ್ಟದ ವಿದ್ಯಾರ್ಥಿಗಳ ಜಾಣತನ ಪರೀಕ್ಷಿಸುವ ಮಟ್ಟದಲ್ಲಿ ಇರುತ್ತವೆ. <br /> ಇಂತಹ ಸಾಮರ್ಥ್ಯ ಪರೀಕ್ಷಿಸುವ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣವಾಗಲೂ ವಿಫಲವಾಗಿರುವುದು ನಿಜಕ್ಕೂ ಆಘಾತಕಾರಿಯಾದದ್ದು.<br /> <br /> ವಿಶ್ವವಿದ್ಯಾನಿಲಯದಿಂದ ಹೊರ ಬರುವ ನಾಲ್ಕರಲ್ಲಿ ಮೂವರು ವಿದ್ಯಾರ್ಥಿಗಳು ಉದ್ಯೋಗಕ್ಕೂ ಅರ್ಹವಾಗಿರುವುದಿಲ್ಲ ಎಂದು ಎನ್. ಆರ್. ನಾರಾಯಣ ಮೂರ್ತಿ ಅವರು ಹೇಳಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. <br /> <br /> <strong>ಪಠ್ಯಕ್ರಮ ಅಭಿವೃದ್ಧಿ: </strong>ಉದ್ದಿಮೆ ವಹಿವಾಟಿನ ಜಗತ್ತು ಗಮನಾರ್ಹವಾಗಿ ಬದಲಾಗುತ್ತಿರುವ ಈ ದಿನಗಳಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ರಂಗದ ಅಗತ್ಯಗಳಿಗೆ ತಕ್ಕಂತೆ ಪಠ್ಯಕ್ರಮ ಬದಲಾಯಿಸಲೂ ಮುಂದಾಗಿಲ್ಲ. ಹೀಗಾಗಿ ಉದ್ದಿಮೆ ವಹಿವಾಟಿಗೆ ಹೆಚ್ಚು ಉಪಯೋಗ ಆಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಪ್ರಯತ್ನಗಳು ನಡೆಯುತ್ತಿಲ್ಲ. <br /> <br /> ಉದಾಹರಣೆಗೆ, ವಿಶ್ವದಾದ್ಯಂತ ಹೊಸ ಅಲೆ ಎಬ್ಬಿಸಿರುವ ಸಾಮಾಜಿಕ ಮಾಧ್ಯಮಗಳು ನಿರ್ವಹಿಸುವ ಪಾತ್ರದ ಬಗ್ಗೆ ಯಾವುದೇ ಶಿಕ್ಷಣ ಸಂಸ್ಥೆಯು ಇದುವರೆಗೂ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ.<br /> <br /> ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಬರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಬೋಧನಾ ಕಾರ್ಯಕ್ರಮಗಳು ಒಂದೇ ಬಗೆಯಲ್ಲಿ ಇರುತ್ತವೆ. ಹೀಗಾಗಿ `ಬಿಸಿನೆಸ್ ಮ್ಯಾನೇಜ್ಮೆಂಟ್~ನ ವೈಶಿಷ್ಟ್ಯವೇ ಕಣ್ಮರೆಯಾಗುವ ಅಪಾಯ ಎದುರಿಸುತ್ತಿದೆ.<br /> <br /> <strong>ಭಾರತಕ್ಕೆ ಅನ್ವಯಿಸುವಂತಹ ಸಂಶೋಧನೆಗಳ ಅಭಾವ:</strong> ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಆಡಳಿತ ನಿರ್ವಹಣೆ ವಿಜ್ಞಾನ ರಂಗದಲ್ಲಿ ಸಂಶೋಧನೆಗಳೇ ನಡೆಯುತ್ತಿಲ್ಲ. ಭಾರತದ ನಿದರ್ಶನಗಳ ಅಧ್ಯಯನಗಳೂ ತೀರ ಕಡಿಮೆ ಸಂಖ್ಯೆಯಲ್ಲಿ ಇವೆ. ಬಹುತೇಕ ಸಂಸ್ಥೆಗಳು ಸಂಶೋಧನೆಗೆ ತಮ್ಮ ಬಳಿ ಹಣ ಇಲ್ಲ ಎನ್ನುವ ಸಬೂಬು ನೀಡುತ್ತಲೇ ಇವೆ.<br /> <br /> <strong>ಉದ್ದಿಮೆ ಮತ್ತು ಶೈಕ್ಷಣಿಕ ರಂಗದ ಮಧ್ಯೆ ಸಂಬಂಧ:</strong> ಇದೊಂದು ಇನ್ನೊಂದು ಕಳವಳಕಾರಿ ಸಂಗತಿ. ಈ ಎರಡೂ ರಂಗಗಳ ಮಧ್ಯೆ ದೊಡ್ಡ ಕಂದರ ಉಂಟಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ತಮ್ಮದೇ ಸರಿ ಎನ್ನುವ ಧೋರಣೆ ತಳೆದು ದಂತಗೋಪುರದಲ್ಲಿ ನೆಲೆಸಿದ್ದರೆ, ಇತರ ಸಂಸ್ಥೆಗಳಲ್ಲಿ ಇಂತಹ ಆಲೋಚನೆಗಳೇ ಇಲ್ಲ.<br /> <br /> ದೇಶದ ಎಲ್ಲ ಉದ್ದಿಮೆ ವಲಯಗಳಲ್ಲಿ ಮತ್ತು ಎಲ್ಲ ಹಂತಗಳಲ್ಲಿ ಸೂಕ್ತ ತರಬೇತಿ ಪಡೆದ ಆಡಳಿತಾತ್ಮಕ ನಿರ್ವಾಹಕರ ಅಗತ್ಯ ಇದೆ. ಜನಸಂಖ್ಯೆಯ ಅನುಕೂಲತೆ ಜತೆಗೆ, ಇಂಗ್ಲಿಷ್ ಭಾಷಾ ಜ್ಞಾನ ಹಿನ್ನೆಲೆಯಲ್ಲಿ ಭಾರತದ `ಬಿಸಿನೆಸ್ ಮ್ಯಾನೇಜ್ಮೆಂಟ್~ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಸಾಕಷ್ಟು ಬೇಡಿಕೆ ಇದೆ.<br /> <br /> ಮುಂಚೂಣಿಯಲ್ಲಿ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಷ್ಟೇ ಈ ಬೇಡಿಕೆ ಪೂರೈಸಲಾರವು. ಆದರೆ, ಇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗದಿದ್ದರೆ ಕಂದರ ಭರ್ತಿ ಮಾಡುವ ದೊಡ್ಡ ಸವಾಲನ್ನೇ ಎದುರಿಸಬೇಕಾದೀತು. ಶಿಕ್ಷಣ ಸಂಸ್ಥೆಗಳು ತಮ್ಮ ಅಲ್ಪಾವಧಿ ಲಾಭದ ಉದ್ದೇಶ ಬಲಿಗೊಟ್ಟು ತಮ್ಮೆಲ್ಲ ದೋಷಗಳನ್ನು ಸರಿಪಡಿಸಲು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕಾಗಿದೆ.<br /> <br /> ವಿಶ್ವವಿದ್ಯಾನಿಲಯಗಳೂ `ಬಿಸಿನೆಸ್ ಮ್ಯಾನೇಜ್ಮೆಂಟ್~ ಶಿಕ್ಷಣದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕಾರ್ಯಪ್ರವೃತ್ತವಾಗಬೇಕಾಗಿದೆ. ವಿದೇಶಿ ಭಾಷೆಗಳಾದ ಮಂಡಾರಿನ್ ಅಥವಾ ಸ್ಪಾನಿಷ್ ಭಾಷೆಗಳ ಕಲಿಕೆ ಕಡ್ಡಾಯ ಮಾಡಬೇಕಾಗಿದೆ. <br /> <br /> ಇದರಿಂದ `ಎಂಬಿಎ~ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಸಹಜವಾಗಿಯೇ ಬೇಡಿಕೆ ಹೆಚ್ಚುತ್ತದೆ. ಇದಕ್ಕೆ ಪೂರಕವಾಗಿ ವಿದೇಶಿ ಶಿಕ್ಷಣ ತಜ್ಞರನ್ನೂ ಬೋಧನೆಗಾಗಿ ಆಹ್ವಾನಿಸಬೇಕು.<br /> <br /> ಇಂತಹ ಎಲ್ಲ ಕ್ರಮಗಳ ಜಾರಿಗೆ ದೀರ್ಘಾವಧಿ ಯೋಜನೆ ಮತ್ತು ಹಣಕಾಸಿನ ನೆರವು ಕೂಡ ಅಗತ್ಯ. ಯಾರಾದರೊಬ್ಬರು ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟು ಬೋಧನಾ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಮಾತ್ರ ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲಿವೆ ಎನ್ನಬಹುದು.<br /> <br /> (ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸ ವರ್ಷದ ಹೊಸ್ತಿಲಲ್ಲಿ ನಾನು ಹತಾಶೆಯಿಂದಲೇ ಅಂಕಣ ಆರಂಭಿಸಲು ಇಷ್ಟಪಡುವುದಿಲ್ಲ. ಹಳೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಸ್ವಾಗತಿಸುವ ಈ ಹಂತದಲ್ಲಿ ಜಾಗತಿಕ ಮತ್ತು ದೇಶಿ ಅರ್ಥ ವ್ಯವಸ್ಥೆಯ ಆರೋಗ್ಯದ ಸ್ಥಿತಿಗತಿ ತೋರಿಸುವ ಅಳತೆಗೋಲುಗಳೆಲ್ಲ ನಿರಾಶೆಯ ಚಿತ್ರಣವನ್ನೇ ನೀಡುತ್ತಿವೆ.<br /> <br /> ಹೀಗಾಗಿ ಆರ್ಥಿಕ ವಿದ್ಯಮಾನಗಳ ಬಗ್ಗೆಯೇ ಬರೆಯುವುದರ ಬದಲಿಗೆ ಉದ್ದಿಮೆ ವಹಿವಾಟು ನಿರ್ವಹಣೆಯ (ಬಿಸಿನೆಸ್ ಮ್ಯಾನೇಜ್ಮೆಂಟ್) ಭವಿಷ್ಯದ ಪೀಳಿಗೆ ಸಿದ್ಧಪಡಿಸುವ ಶಿಕ್ಷಣದ ಸದ್ಯದ ಸ್ವರೂಪ ಮತ್ತು ಹದಗೆಟ್ಟ ಶೈಕ್ಷಣಿಕ ಸ್ವರೂಪದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕೆಲ ಅನಿಸಿಕೆಗಳನ್ನು ಓದುಗರ ಜತೆ ಹಂಚಿಕೊಳ್ಳಲು ಬಯಸುತ್ತೇನೆ.<br /> <br /> ವಾಸ್ತವ ಬದುಕಿನ ಪಾಠಗಳು, ತರಗತಿಯಲ್ಲಿ ಬೋಧಿಸುವುದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಈ ಮಾತು ದೇಶದ ಅತ್ಯುತ್ತಮ `ಬಿಸಿನೆಸ್ ಸ್ಕೂಲ್~ಗಳಿಗೂ ಸರಿಯಾಗಿಯೇ ಅನ್ವಯಿಸುತ್ತದೆ.<br /> <br /> ತೀವ್ರ ಏರಿಳಿತ ಕಾಣುತ್ತಿರುವ ಮತ್ತು ಕುಂಠಿತಗೊಂಡಿರುವ ಅರ್ಥ ವ್ಯವಸ್ಥೆಯಲ್ಲಿ `ಎಂಬಿಎ~ ವಿದ್ಯಾರ್ಥಿಗಳಿಗೂ ಸಾಕಷ್ಟು ಉದ್ಯೋಗ ಅವಕಾಶ ಮತ್ತು ಸೂಕ್ತ ಸಂಬಳ- ಭತ್ಯೆಗಳೂ ದೊರೆಯುತ್ತಿಲ್ಲ.<br /> <br /> ನಿಯತಕಾಲಿಕೆಯೊಂದು ಇತ್ತೀಚೆಗೆ ದೇಶದಲ್ಲಿನ `ಬಿಸಿನೆಸ್ ಸ್ಕೂಲ್~ಗಳ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದ್ದು, ದೇಶಿ ಶೈಕ್ಷಣಿಕ ರಂಗದಲ್ಲಿ ಇಂತಹ ಶಾಲೆಗಳ ಸ್ಥಾನಮಾನ (ರ್ಯಾಂಕಿಂಗ್) ಪಟ್ಟಿ ಮಾಡಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ-ಬಿ) ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ.<br /> <br /> ಈ ಲೇಖನ ಓದುತ್ತಿದ್ದಂತೆ ನನಗೆ ಎಪ್ಪತ್ತರ ದಶಕದಲ್ಲಿ `ಎಂಬಿಎ~ ಪದವಿಗೆ ಇದ್ದ ಮಾನ್ಯತೆ ನೆನಪಾಯಿತು. ಅಂದಿನ ದಿನಗಳಲ್ಲಿ `ಎಂಬಿಎ~ ಪದವಿ ಪಡೆಯುವುದು ಎಂದರೆ, ಯಶಸ್ಸಿಗೆ ರಹದಾರಿ ಸಿಕ್ಕಿದಂತೆಯೇ ಸರಿ ಎನ್ನುವ ಭಾವನೆ ಮನೆ ಮಾಡಿತ್ತು. ನಾನು ಆಗ `ಐಐಎಂ-ಬಿ~ನ ಎರಡನೇ ತಂಡದ (ಬ್ಯಾಚ್ನ) ವಿದ್ಯಾರ್ಥಿಯಾಗಿದ್ದೆ.<br /> <br /> ಆ ದಿನಗಳಲ್ಲಿ ಕೆಲವೇ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಈ ವಿಷಯದ ಬೋಧನಾ ಸೌಲಭ್ಯ ಇತ್ತು. ಮೂವತ್ತೈದು ವರ್ಷಗಳ ನಂತರ ಶೈಕ್ಷಣಿಕ ರಂಗದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಬೆಂಗಳೂರು ಮತ್ತು ನಗರದ ಸುತ್ತಮುತ್ತ ನೂರಾರು ಶಿಕ್ಷಣ ಸಂಸ್ಥೆಗಳಲ್ಲಿ `ಎಂಬಿಎ~ ಕಲಿಕಾ ಸೌಲಭ್ಯ ಇದೆ.<br /> <br /> ಸದ್ಯಕ್ಕೆ `ಐಐಎಂ-ಬಿ~ನ ಆಡಳಿತ ಮಂಡಳಿಯ ಸದಸ್ಯನೂ ಆಗಿರುವ ನಾನು, `ಎಂಬಿಎ~ ಬೋಧಿಸುವ ಇನ್ನೊಂದು ಶಿಕ್ಷಣ ಸಂಸ್ಥೆಯ ಜತೆಯಲ್ಲಿಯೂ ಕೆಲಸ ನಿರ್ವಹಿಸುತ್ತಿರುವೆ. <br /> <br /> ದೇಶದಲ್ಲಿನ `ಬಿಸಿನೆಸ್ ಮ್ಯಾನೇಜ್ಮೆಂಟ್~ ಶಿಕ್ಷಣದ ಸ್ವರೂಪದಲ್ಲಿ ವ್ಯಾಪಕ ಬದಲಾವಣೆಗಳು ಆಗಿರುವುದಕ್ಕೂ ನಾನು ಸಾಕ್ಷಿಯಾಗಿರುವೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಎನ್ನುವ ಖ್ಯಾತಿಗೆ ಎರವಾಗಿದ್ದರೂ ಅನೇಕ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಈ ಕೋರ್ಸ್ ಒದಗಿಸುತ್ತಲೇ ಇವೆ.<br /> <br /> 2000ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದ `ಎಂಬಿಎ~ ಕೋರ್ಸ್ನ ಪ್ರವೇಶ ಪರೀಕ್ಷೆಗೆ ಕೇವಲ 2000 ವಿದ್ಯಾರ್ಥಿಗಳು ಹಾಜರಾಗಿದ್ದರು. 2011ರಲ್ಲಿ ಕರ್ನಾಟಕ ಶಿಕ್ಷಣ ಪ್ರಾಧಿಕಾರವು, `ಎಂಬಿಎ~ದ ಸರ್ಕಾರಿ ಸೀಟುಗಳಿಗಾಗಿ ನಡೆಸಿದ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಪಿಜಿಸಿಇಟಿ) 19 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. <br /> ದಶಕವೊಂದರಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ 10 ಪಟ್ಟು ಹೆಚ್ಚಿದೆ. ಇತರ ರಾಜ್ಯಗಳಲ್ಲಿಯೂ ಇದೇ ಬಗೆಯಲ್ಲಿ `ಎಂಬಿಎ~ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿರಬಹುದು ಎಂದೂ ನಾವು ಊಹಿಸಬಹುದು.<br /> <br /> ದೇಶದಾದ್ಯಂತ ಇರುವ ಮೂರು ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ಲಕ್ಷದಷ್ಟು `ಎಂಬಿಎ~ ಸೀಟುಗಳನ್ನು ಸೃಷ್ಟಿಸಲಾಗಿದೆ. ಇಂತಹ ಪ್ರವೃತ್ತಿಯು 2008ರಲ್ಲಿ ಗಮನಾರ್ಹ ಹೆಚ್ಚಳ ಕಂಡಿತು. ಅಲ್ಲಿಂದಾಚೆಗೆ ಬೋಧನಾ ಗುಣಮಟ್ಟವೂ ದಿಢೀರಾಗಿ ಕುಸಿಯತೊಡಗಿತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳೆಲ್ಲ ಒಮ್ಮೆಲೆ ಹಠಾತ್ತಾಗಿ ಬಹಿರಂಗಗೊಳ್ಳತೊಡಗಿದವು.<br /> <br /> ಸಾಕಷ್ಟು ತರಬೇತಿ ಪಡೆದ ಮತ್ತು ಬೋಧನೆಗೆ ಬದ್ಧರಾದ ಶಿಕ್ಷಣ ತಜ್ಞರ ಅಲಭ್ಯತೆ, ಅಷ್ಟೇನೂ ಜಾಣರಲ್ಲದ ವಿದ್ಯಾರ್ಥಿಗಳೂ `ಎಂಬಿಎ~ ಪದವಿ ಪಡೆಯಲು ಬಯಸಿರುವುದು, ಮೂಲ ಸೌಕರ್ಯಗಳ ಕೊರತೆ, ಬೋಧನಾ ಕೊಠಡಿಗಳ ಅಭಾವ, ಬೋಧಕರ ಅಜ್ಞಾನ, ತರಬೇತಿಯಲ್ಲಿ ಹೊಸತನ ಕಾಣದಿರುವುದು, ಆಳವಿಲ್ಲದ ಬರೀ ತೋರಿಕೆಯ ಸಂಶೋಧನೆ ಮತ್ತಿತರ ಕಾರಣಗಳಿಂದಾಗಿ `ಎಂಬಿಎ~ ಪಡೆದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳೂ ದೊರೆಯುತ್ತಿಲ್ಲ.<br /> <br /> ಎಲ್ಲ ಬಗೆಯ ಅರ್ಹತೆ ಮತ್ತು ಗುಣಮಟ್ಟ ಹೊಂದಿರುವ 30 ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ತೃಪ್ತಿದಾಯಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತಿವೆ. ಅನೇಕ `ಎಂಬಿಎ~ ವಿದ್ಯಾರ್ಥಿಗಳು ಗುಮಾಸ್ತ ಹುದ್ದೆಯನ್ನೂ ಒಪ್ಪಿಕೊಂಡ ನಿದರ್ಶನಗಳಿವೆ.<br /> <br /> ಹೀಗಾಗಿ ಇತ್ತೀಚಿನ ದಿನಗಳಲ್ಲಿ `ಎಂಬಿಎ~ ಪದವಿಯ ಆಕರ್ಷಣೆ ಕಡಿಮೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ಶೈಕ್ಷಣಿಕ ವ್ಯವಸ್ಥೆ ಬಲಪಡಿಸುವ ಮತ್ತು ವ್ಯಾಪಕ ಬದಲಾವಣೆ ತರುವ ಪ್ರಯತ್ನಗಳು ನಡೆಯಬಹುದು. ಅಂತಹ ಬದಲಾವಣೆಗಳ ಅಗತ್ಯ ಮತ್ತು ಸ್ವರೂಪವನ್ನು ನಾನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸಿರುವೆ.<br /> <br /> <strong>ಬೋಧಕರ ಗುಣಮಟ್ಟ: </strong>ತರಬೇತಿ ಪಡೆದ ಬೋಧಕರ ಕೊರತೆಯು ಅಗಾಧ ಪ್ರಮಾಣದಲ್ಲಿ ಇದೆ. ಹೆಚ್ಚಿನ ವೇತನ ಮತ್ತು ವೃತ್ತಿಯಲ್ಲಿ ಮುನ್ನಡೆಯುವ ಅವಕಾಶಗಳು ಕಡಿಮೆ ಇರುವ ಕಾರಣಕ್ಕೆ ಪ್ರತಿಭಾವಂತರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. <br /> <br /> ಬೋಧಕರ ಬೋಧನಾ ಕೌಶಲ್ಯ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳೂ ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಬೋಧಕರ ವೃತ್ತಿಯಲ್ಲಿ ಯಾವುದೇ ಸುಧಾರಣೆ ಇಲ್ಲದಿರುವುದರಿಂದ ವೃತ್ತಿ ಬಿಟ್ಟು ತೆರಳುವವರ ಸಂಖ್ಯೆ ಹೆಚ್ಚುತ್ತಿದೆ.<br /> <br /> <strong>ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ: </strong>ಇದೊಂದು ಇನ್ನೊಂದು ಮಹತ್ವದ ಸಂಗತಿ. ಮುಂಚೂಣಿಯಲ್ಲಿ ಇರುವ 50 ರಿಂದ 100 ಶಿಕ್ಷಣ ಸಂಸ್ಥೆಗಳು ಹೊರತುಪಡಿಸಿ ಬಹುತೇಕ ಇತರ ಸಂಸ್ಥೆಗಳಿಗೆ ಗುಣಮಟ್ಟದ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಿಲ್ಲ.<br /> <br /> ಪ್ರವೇಶ ಪರೀಕ್ಷೆಗಳು ಕೇವಲ ತೋರಿಕೆಗೆ ನಡೆಯುತ್ತಿವೆ. ಉದಾಹರಣೆಗೆ 2011ರಲ್ಲಿ ನಡೆದ `ಪಿಜಿಸಿಇಟಿ~ಯಲ್ಲಿ ಭಾಗಿಯಾಗಿದ್ದ 19 ಸಾವಿರ ವಿದ್ಯಾರ್ಥಿಗಳ ಪೈಕಿ ಶೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ 40ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರು.<br /> <br /> ಇಂತಹ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ಸ್ವಾಭಾವಿಕ ಕೌಶಲ, ಪದ ಪ್ರಯೋಗ ಸಾಮರ್ಥ್ಯ, ತಾರ್ಕಿಕ ಚಿಂತನೆ, ಸಂಖ್ಯೆಗಳ ಪರಿಣತಿ ಪರೀಕ್ಷಿಸುತ್ತವೆ. ಈ ಪರೀಕ್ಷೆಗಳು ಮಾಧ್ಯಮಿಕ ಶಾಲಾ ಮಟ್ಟದ ವಿದ್ಯಾರ್ಥಿಗಳ ಜಾಣತನ ಪರೀಕ್ಷಿಸುವ ಮಟ್ಟದಲ್ಲಿ ಇರುತ್ತವೆ. <br /> ಇಂತಹ ಸಾಮರ್ಥ್ಯ ಪರೀಕ್ಷಿಸುವ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣವಾಗಲೂ ವಿಫಲವಾಗಿರುವುದು ನಿಜಕ್ಕೂ ಆಘಾತಕಾರಿಯಾದದ್ದು.<br /> <br /> ವಿಶ್ವವಿದ್ಯಾನಿಲಯದಿಂದ ಹೊರ ಬರುವ ನಾಲ್ಕರಲ್ಲಿ ಮೂವರು ವಿದ್ಯಾರ್ಥಿಗಳು ಉದ್ಯೋಗಕ್ಕೂ ಅರ್ಹವಾಗಿರುವುದಿಲ್ಲ ಎಂದು ಎನ್. ಆರ್. ನಾರಾಯಣ ಮೂರ್ತಿ ಅವರು ಹೇಳಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. <br /> <br /> <strong>ಪಠ್ಯಕ್ರಮ ಅಭಿವೃದ್ಧಿ: </strong>ಉದ್ದಿಮೆ ವಹಿವಾಟಿನ ಜಗತ್ತು ಗಮನಾರ್ಹವಾಗಿ ಬದಲಾಗುತ್ತಿರುವ ಈ ದಿನಗಳಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ರಂಗದ ಅಗತ್ಯಗಳಿಗೆ ತಕ್ಕಂತೆ ಪಠ್ಯಕ್ರಮ ಬದಲಾಯಿಸಲೂ ಮುಂದಾಗಿಲ್ಲ. ಹೀಗಾಗಿ ಉದ್ದಿಮೆ ವಹಿವಾಟಿಗೆ ಹೆಚ್ಚು ಉಪಯೋಗ ಆಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಪ್ರಯತ್ನಗಳು ನಡೆಯುತ್ತಿಲ್ಲ. <br /> <br /> ಉದಾಹರಣೆಗೆ, ವಿಶ್ವದಾದ್ಯಂತ ಹೊಸ ಅಲೆ ಎಬ್ಬಿಸಿರುವ ಸಾಮಾಜಿಕ ಮಾಧ್ಯಮಗಳು ನಿರ್ವಹಿಸುವ ಪಾತ್ರದ ಬಗ್ಗೆ ಯಾವುದೇ ಶಿಕ್ಷಣ ಸಂಸ್ಥೆಯು ಇದುವರೆಗೂ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ.<br /> <br /> ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಬರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಬೋಧನಾ ಕಾರ್ಯಕ್ರಮಗಳು ಒಂದೇ ಬಗೆಯಲ್ಲಿ ಇರುತ್ತವೆ. ಹೀಗಾಗಿ `ಬಿಸಿನೆಸ್ ಮ್ಯಾನೇಜ್ಮೆಂಟ್~ನ ವೈಶಿಷ್ಟ್ಯವೇ ಕಣ್ಮರೆಯಾಗುವ ಅಪಾಯ ಎದುರಿಸುತ್ತಿದೆ.<br /> <br /> <strong>ಭಾರತಕ್ಕೆ ಅನ್ವಯಿಸುವಂತಹ ಸಂಶೋಧನೆಗಳ ಅಭಾವ:</strong> ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಆಡಳಿತ ನಿರ್ವಹಣೆ ವಿಜ್ಞಾನ ರಂಗದಲ್ಲಿ ಸಂಶೋಧನೆಗಳೇ ನಡೆಯುತ್ತಿಲ್ಲ. ಭಾರತದ ನಿದರ್ಶನಗಳ ಅಧ್ಯಯನಗಳೂ ತೀರ ಕಡಿಮೆ ಸಂಖ್ಯೆಯಲ್ಲಿ ಇವೆ. ಬಹುತೇಕ ಸಂಸ್ಥೆಗಳು ಸಂಶೋಧನೆಗೆ ತಮ್ಮ ಬಳಿ ಹಣ ಇಲ್ಲ ಎನ್ನುವ ಸಬೂಬು ನೀಡುತ್ತಲೇ ಇವೆ.<br /> <br /> <strong>ಉದ್ದಿಮೆ ಮತ್ತು ಶೈಕ್ಷಣಿಕ ರಂಗದ ಮಧ್ಯೆ ಸಂಬಂಧ:</strong> ಇದೊಂದು ಇನ್ನೊಂದು ಕಳವಳಕಾರಿ ಸಂಗತಿ. ಈ ಎರಡೂ ರಂಗಗಳ ಮಧ್ಯೆ ದೊಡ್ಡ ಕಂದರ ಉಂಟಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ತಮ್ಮದೇ ಸರಿ ಎನ್ನುವ ಧೋರಣೆ ತಳೆದು ದಂತಗೋಪುರದಲ್ಲಿ ನೆಲೆಸಿದ್ದರೆ, ಇತರ ಸಂಸ್ಥೆಗಳಲ್ಲಿ ಇಂತಹ ಆಲೋಚನೆಗಳೇ ಇಲ್ಲ.<br /> <br /> ದೇಶದ ಎಲ್ಲ ಉದ್ದಿಮೆ ವಲಯಗಳಲ್ಲಿ ಮತ್ತು ಎಲ್ಲ ಹಂತಗಳಲ್ಲಿ ಸೂಕ್ತ ತರಬೇತಿ ಪಡೆದ ಆಡಳಿತಾತ್ಮಕ ನಿರ್ವಾಹಕರ ಅಗತ್ಯ ಇದೆ. ಜನಸಂಖ್ಯೆಯ ಅನುಕೂಲತೆ ಜತೆಗೆ, ಇಂಗ್ಲಿಷ್ ಭಾಷಾ ಜ್ಞಾನ ಹಿನ್ನೆಲೆಯಲ್ಲಿ ಭಾರತದ `ಬಿಸಿನೆಸ್ ಮ್ಯಾನೇಜ್ಮೆಂಟ್~ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಸಾಕಷ್ಟು ಬೇಡಿಕೆ ಇದೆ.<br /> <br /> ಮುಂಚೂಣಿಯಲ್ಲಿ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಷ್ಟೇ ಈ ಬೇಡಿಕೆ ಪೂರೈಸಲಾರವು. ಆದರೆ, ಇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗದಿದ್ದರೆ ಕಂದರ ಭರ್ತಿ ಮಾಡುವ ದೊಡ್ಡ ಸವಾಲನ್ನೇ ಎದುರಿಸಬೇಕಾದೀತು. ಶಿಕ್ಷಣ ಸಂಸ್ಥೆಗಳು ತಮ್ಮ ಅಲ್ಪಾವಧಿ ಲಾಭದ ಉದ್ದೇಶ ಬಲಿಗೊಟ್ಟು ತಮ್ಮೆಲ್ಲ ದೋಷಗಳನ್ನು ಸರಿಪಡಿಸಲು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕಾಗಿದೆ.<br /> <br /> ವಿಶ್ವವಿದ್ಯಾನಿಲಯಗಳೂ `ಬಿಸಿನೆಸ್ ಮ್ಯಾನೇಜ್ಮೆಂಟ್~ ಶಿಕ್ಷಣದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕಾರ್ಯಪ್ರವೃತ್ತವಾಗಬೇಕಾಗಿದೆ. ವಿದೇಶಿ ಭಾಷೆಗಳಾದ ಮಂಡಾರಿನ್ ಅಥವಾ ಸ್ಪಾನಿಷ್ ಭಾಷೆಗಳ ಕಲಿಕೆ ಕಡ್ಡಾಯ ಮಾಡಬೇಕಾಗಿದೆ. <br /> <br /> ಇದರಿಂದ `ಎಂಬಿಎ~ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಸಹಜವಾಗಿಯೇ ಬೇಡಿಕೆ ಹೆಚ್ಚುತ್ತದೆ. ಇದಕ್ಕೆ ಪೂರಕವಾಗಿ ವಿದೇಶಿ ಶಿಕ್ಷಣ ತಜ್ಞರನ್ನೂ ಬೋಧನೆಗಾಗಿ ಆಹ್ವಾನಿಸಬೇಕು.<br /> <br /> ಇಂತಹ ಎಲ್ಲ ಕ್ರಮಗಳ ಜಾರಿಗೆ ದೀರ್ಘಾವಧಿ ಯೋಜನೆ ಮತ್ತು ಹಣಕಾಸಿನ ನೆರವು ಕೂಡ ಅಗತ್ಯ. ಯಾರಾದರೊಬ್ಬರು ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟು ಬೋಧನಾ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಮಾತ್ರ ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲಿವೆ ಎನ್ನಬಹುದು.<br /> <br /> (ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>