<p>ರಾಷ್ಟ್ರೀಯ ಕ್ರೀಡೆ ಎಂಬ ಅಭಿದಾನ ಹೊತ್ತ ಹಾಕಿ ಇಂದು ನಮ್ಮ ನೆಲದಲ್ಲಿಯೇ ಮಹತ್ವ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ ಹಾಕಿಗೆ ಯಾಕೆ ಸಿಗುತ್ತಿಲ್ಲ?<br /> <br /> ಕ್ರಿಕೆಟ್ ಆಟಗಾರರು ಪಂದ್ಯದಲ್ಲಿ ಮೇಲಿಂದ ಮೇಲೆ ಕಳಪೆ ಸಾಧನೆ ಮಾಡಿದರೂ ಕೋಟಿಗಟ್ಟಲೆ ಹಣ ಬಾಚುತ್ತಾರೆ. ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಇದನ್ನೆಲ್ಲ ನೋಡಿದರೆ ನನಗೆ ರೋಮನ್ ಸಾಮ್ರಾಜ್ಯದ ಕುಸ್ತಿಮಲ್ಲರ ನೆನಪಾಗುತ್ತದೆ. <br /> <br /> ಈ ಕುಸ್ತಿಮಲ್ಲರು ಪ್ರೇಕ್ಷಕರನ್ನು ಮೆಚ್ಚಿಸಲು ಎದುರಾಳಿ ಪಟುವನ್ನು ಕೊಲ್ಲದೇ ವಿಧಿ ಇರಲಿಲ್ಲ! ಯಾಕೆಂದರೆ ಜನರು ಕಾಸು ಕೊಟ್ಟು ಈ ಪೈಶಾಚಿಕ ದೃಶ್ಯ ನೋಡಲು ತುದಿಗಾಲ ಮೇಲೆ ನಿಂತಿರುತ್ತಿದ್ದರು. ಇದೆಂಥ ಹೋಲಿಕೆ ಎಂದು ಹುಬ್ಬೇರಿಸಬೇಡಿ. <br /> <br /> ನನಗೆ ಕ್ರಿಕೆಟ್ ಮೇಲೆ ದ್ವೇಷವಿಲ್ಲ. ಅಥವಾ ಕ್ರಿಕೆಟ್ ಆಟಗಾರರಿಗೆ ಭಾರಿ ಹಣ ಕೊಡುವ ಬಗ್ಗೆಯೂ ನಾನೇನು ಹೊಟ್ಟೆಕಿಚ್ಚು ಪಡುತ್ತಿಲ್ಲ. ವಾಸ್ತವ ಸಂಗತಿಯನ್ನು ಬಿಚ್ಚಿಡುತ್ತಿದ್ದೇನೆ, ಅಷ್ಟೆ.<br /> <br /> ಇತ್ತೀಚೆಗೆ ಚೀನಾದ ಓರ್ಡೊಸ್ನಲ್ಲಿ ನಡೆದ ಚೊಚ್ಚಲ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿತು. ನಿಜಕ್ಕೂ ಅದೊಂದು ಸಂಭ್ರಮದ ಗಳಿಗೆ.<br /> <br /> ಪೆನಾಲ್ಟಿ ಶೂಟೌಟ್ನಿಂದ ಭಾರತವು ಗೆದ್ದಿದ್ದು ಪಂದ್ಯವನ್ನು ಇನ್ನಷ್ಟು ರೋಚಕವನ್ನಾಗಿಸಿತ್ತು. ಆದರೆ ಆ ಸಂದರ್ಭದಲ್ಲಿ ಬೆಂಗಳೂರಿನ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದ ನನಗೆ ಚೀನಾದಿಂದ ಹಾಕಿ ಪಂದ್ಯದ ನೇರ ಪ್ರಸಾರವನ್ನು ನೋಡಲು ಸಾಧ್ಯವಾಗಲಿಲ್ಲ. <br /> <br /> `ನಾವು ಹಾಕಿ ಪಂದ್ಯದ ಪ್ರಸಾರವನ್ನು ನಿಲ್ಲಿಸಿದ್ದೇವೆ. ಯಾಕೆಂದರೆ ನಮ್ಮಲ್ಲಿ ತಂಗುವ ಅತಿಥಿಗಳು ಹಾಕಿ ಆಟ ನೋಡಲು ಇಷ್ಟಪಡುವುದಿಲ್ಲ~ ಎಂದು ಹೋಟೆಲ್ ವ್ಯವಸ್ಥಾಪಕರು ನನಗೆ ಸಮಜಾಯಿಷಿ ಕೊಟ್ಟರು. ಆಗ ನನಗೆ ನಿಜಕ್ಕೂ ಅಚ್ಚರಿ ಆಯಿತು.<br /> <br /> ಭಾರತ ಹಾಗೂ ಪಾಕ್ ಹಾಕಿ ಹಣಾಹಣಿ ನೋಡಲೂ ಜನರಿಗೆ ಕಾತರವಿಲ್ಲವೇ ಎಂದುಕೊಂಡೆ. ಭಾರತದಲ್ಲಿ ಹಾಕಿ ಎಷ್ಟು ಹೀನಾಯ ಸ್ಥಿತಿಯಲ್ಲಿದೆ ಎನ್ನುವುದನ್ನು ಬಿಂಬಿಸಲು ಇದಕ್ಕಿಂತ ಇನ್ನೇನು ಪುರಾವೆ ಬೇಕು?<br /> <br /> ಭಾರತದಲ್ಲಿ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ನೇರ ಪ್ರಸಾರವೂ ಇರಲಿಲ್ಲ ಎನ್ನುವುದು ನನಗೆ ನಂತರದಲ್ಲಿ ಗೊತ್ತಾಯಿತು. <br /> <br /> ಹಾಗೆ ನೋಡಿದರೆ ಸುಮಾರು ಆರು ದಶಕಗಳಿಗೂ ಸುದೀರ್ಘ ಅವಧಿಯ ನನ್ನ ವೃತ್ತಿ ಬದುಕಿನಲ್ಲಿ ರಾಜಕೀಯ ವಿಷಯವನ್ನು ಹೊರತುಪಡಿಸಿ ನಾನು ಎಂದಿಗೂ ಕ್ರೀಡೆಯ ಬಗ್ಗೆ ಬರೆದದ್ದೇ ಇಲ್ಲ. ಹಾಗೆ ನೋಡಿದರೆ, ನನಗೆ ಈ ಬಗ್ಗೆ ಬರೆಯುವ ತುರ್ತು ಕೂಡ ಇರಲಿಲ್ಲ. ಇನ್ನೊಂದು ವಿಷಯವೆಂದರೆ ನಾನು ದಿನಪತ್ರಿಕೆಗಳ ಕ್ರೀಡಾ ಪುಟದತ್ತ ಗಮನ ಹರಿಸುವುದು ತೀರಾ ಅಪರೂಪ ಎಂದರೆ ಅದು ಅತಿಶಯೋಕ್ತಿಯಲ್ಲ. <br /> <br /> ಕ್ರಿಕೆಟ್ನಂತೆಯೇ ಹಾಕಿ ಪಂದ್ಯವನ್ನು ನೋಡಲು ಜನ ಯಾಕೆ ಮುಗಿ ಬೀಳುವುದಿಲ್ಲವೋ ನನಗೆ ಅರ್ಥವಾಗುತ್ತಿಲ್ಲ. ಈ ಸಂದರ್ಭದಲ್ಲಿ ನನಗೆ ಭಾರತದ ಹಾಕಿ ಕಲಿ ಮೇಜರ್ ಧ್ಯಾನ್ಚಂದ್ ಸಿಂಗ್ ನೆನಪಾಗುತ್ತಾರೆ.<br /> <br /> ಅವರು ಇಡೀ ಜಗತ್ತು ಕಂಡ ಅಪ್ರತಿಮ ಹಾಕಿ ಪಟು. ಬಹುಶಃ ಇತರ ಯಾವುದೇ ಕ್ರೀಡೆಯಲ್ಲಿಯೂ ಅವರಷ್ಟು ಚತುರ ಆಟಗಾರರು ಕಾಣಸಿಗುವುದಿಲ್ಲವೇನೋ? ಅಂತೆಯೇ ಅವರನ್ನು ಹಾಕಿ ಲೋಕದ ದಂತಕಥೆ ಎಂದೇ ಬಣ್ಣಿಸಲಾಗುತ್ತದೆ. ಧ್ಯಾನ್ಚಂದ್ ಆಟದ ಮೋಡಿಗೆ ಪ್ರೇಕ್ಷಕರು ಮಾತ್ರವಲ್ಲ; ಎದುರಾಳಿಗಳೂ ನಿಬ್ಬೆರಗಾಗುತ್ತಿದ್ದರು.<br /> <br /> ಹಾಗಿರುತ್ತಿತ್ತು ಅವರ ಆಟದ ವೈಖರಿ! ಅವರೊಬ್ಬ ಕಲಾತ್ಮಕ ಆಟಗಾರರಾಗಿದ್ದರು. ಒಲಿಪಿಂಕ್ ಪಂದ್ಯಗಳಲ್ಲಿ ಆಡಿದ್ದ ಧ್ಯಾನ್ಚಂದ್ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. 1956ರಲ್ಲಿ ಅವರಿಗೆ ಪದ್ಮಭೂಷಣ ಸಮ್ಮಾನ ಕೂಡ ದೊರೆತಿದೆ. <br /> <br /> 1932ರಲ್ಲಿ ಬರ್ಲಿನ್ನಲ್ಲಿ ನಡೆದ ಒಲಿಂಪಿಕ್ ಪಂದ್ಯದಲ್ಲಿ ಸರ್ವಾಧಿಕಾರಿ ಹಿಟ್ಲರ್ ಕೂಡ ಧ್ಯಾನ್ಚಂದ್ ಆಟಕ್ಕೆ ಮನಸೋತಿದ್ದ. ಜರ್ಮನಿ ಸೇನೆಯಲ್ಲಿ ಉನ್ನತ ಸ್ಥಾನವನ್ನು ನೀಡುವ ಹಿಟ್ಲರ್ ಆಹ್ವಾನವನ್ನು ಚಂದ್ ಆಗ ನಯವಾಗಿಯೇ ನಿರಾಕರಿಸಿದ್ದರು.<br /> <br /> ಆದರೆ ದೇಶ ಕಂಡ ಇಂಥ ಮಹಾನ್ ಆಟಗಾರ ತನ್ನ ಕೊನೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಹಾಗೂ ಅನಾರೋಗ್ಯದಿಂದ ಬಳಲುವಂತಾಯಿತು. ಹಾಗೆ ನೋಡಿದರೆ ಆ ಕಾಲಘಟ್ಟದಲ್ಲಿ ಹಾಕಿ ಆಟಗಾರರ ಮುಂದೆ, ಇಂದಿನ ಕ್ರಿಕೆಟ್ ಕಲಿಗಳಂತೆ ಹಣದ ಹೊಳೆ ಹರಿಯುತ್ತಿರಲಿಲ್ಲ. ಅಲ್ಲಿ ವ್ಯಕ್ತಿಗಿಂತ ಆಟವೇ ಪ್ರಧಾನವಾಗಿತ್ತು.<br /> <br /> ನನಗೆ ಕ್ರಿಕೆಟ್ ಮೇಲೆ ದ್ವೇಷವೇನೂ ಇಲ್ಲ. ಆದರೆ ಕ್ರಿಕೆಟ್ ನೋಡುವಾಗಲೆಲ್ಲ ಆಟಗಾರರನ್ನು ಬಿಕರಿಗಿಡಲಾಗಿದೆಯೇ ಎನ್ನುವ ಅನುಮಾನ ಮೂಡುತ್ತದೆ. `ಹಣದ ಥೈಲಿಗೆ ತಕ್ಕಂತೆ ಆಟದ ವೈಖರಿ~ ಎನ್ನುವ ಭಾವನೆ ಬಂದುಬಿಡುತ್ತದೆ.<br /> <br /> ಅಲ್ಲದೆ, ಈ ಆಟಗಾರರು ಅತಿಮುದ್ದಿನಿಂದ ಹಾಳಾದ ಉಡಾಳ ಮಕ್ಕಳಂತೆ ಕಾಣುತ್ತಾರೆ. ತಮಗಾದ ಗಾಯವನ್ನು ಮುಚ್ಚಿಡುತ್ತಾ, ಸುಳ್ಳು ಸುಳ್ಳು ವೈದ್ಯಕೀಯ ವರದಿ ಮುಂದಿಟ್ಟುಕೊಂಡು ತಂಡದಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಾರೆ. ಇತ್ತೀಚಿನ ಲಂಡನ್ ಪ್ರವಾಸವೇ ಇದಕ್ಕೆ ನೈಜ ಉದಾಹರಣೆ.<br /> <br /> ಭಾರತದ ಹಾಕಿ ಬಗ್ಗೆ ಮಾತನಾಡುವಾಗ ವಿಲಕ್ಷಣ ಚಿತ್ರಣ ಕಂತೆಯೇ ಕಣ್ಣಿಗೆ ಕಟ್ಟುತ್ತದೆ. ನಮ್ಮಲ್ಲಿ ಆಟಗಾರರಿಗೆ ಬಿಡಿಗಾಸು ಕೊಟ್ಟು ಕೈತೊಳೆದುಕೊಂಡು ಅವರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತದೆ.<br /> <br /> ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸಾಧನೆ ಮೆರೆದ ಕೆಲವರಿಗೆ ಸ್ವಂತ ಮನೆ ಕೂಡ ಇಲ್ಲದಂಥ ಸ್ಥಿತಿಗೆ ಏನನ್ನೋಣ? `ನಮ್ಮ ದೇಶದಲ್ಲಿ ಹಾಕಿ ಹೀನಾಯ ಸ್ಥಿತಿಯಲ್ಲಿದೆ. ಸಾಧನೆಗೆ ಕಿಮ್ಮತ್ತಿಲ್ಲ~ ಎಂದು ಭಾರತ ಹಾಕಿ ತಂಡದ ನಾಯಕ ರಾಜ್ಪಾಲ್ ಸಿಂಗ್ ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ.<br /> <br /> ಹಾಕಿಗೆ ಬಂದಿರುವ ದಯನೀಯ ಸ್ಥಿತಿ, ಈ ಆಟವನ್ನು ನಿಯಂತ್ರಿಸಲು ಯಾರಿಗೆ ನಿಜವಾದ ಅಧಿಕಾರವಿದೆ ಎನ್ನುವುದರ ಕುರಿತ ವಾಗ್ವಾದ, ನಂತರದಲ್ಲಿ ಕ್ರೀಡಾ ಸಚಿವಾಲಯ ಸೃಷ್ಟಿಸಿದ ಗೊಂದಲ -ಈ ಎಲ್ಲ ಅರೆಕೊರೆಗಳ ಮಧ್ಯೆಯೂ ನಮ್ಮ ಹಾಕಿಪಟುಗಳು ಚೀನಾದಲ್ಲಿ ಅಭೂತಪೂರ್ವವಾಗಿ ಆಟವಾಡಿದ್ದು ಮೆಚ್ಚತಕ್ಕ ವಿಷಯ. <br /> ಕೆಲವೊಂದು ವಿವಾದಗಳೂ ಹಾಕಿ ತಂಡವನ್ನು ಸುತ್ತಿಕೊಂಡಿದ್ದವು.<br /> <br /> ಹೊಸ ವಿದೇಶಿ ತರಬೇತುದಾರನ ನೇತೃತ್ವದಲ್ಲಿ ತಂಡವು ಚೀನಾ ಪ್ರವಾಸ ಕೈಗೊಳ್ಳುವ ಮುನ್ನ ಹಿರಿಯ ಆಟಗಾರರಾದ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಅವರು ತಂಡದಿಂದ ಹೊರನಡೆದರು. ಈ ಬೆಳವಣಿಗೆಯು ಆಟಗಾರರಿಗೆ ಹಾಕಿಯ ಮೇಲಿರುವ ಬದ್ಧತೆಯನ್ನು ತೋರಿಸುತ್ತದೆ.<br /> <br /> ಮೂರು ದಶಕಗಳ ಹಿಂದಿನ ಹಾಕಿಯ ವೈಭವ ಮತ್ತೆ ಮರುಕಳಿಸಲಿ ಎನ್ನುವುದು ನನ್ನ ಆಶಯ. 1980ರಲ್ಲಿ ಮಾಸ್ಕೊದಲ್ಲಿ ನಡೆದ ಪಂದ್ಯದಲ್ಲಿ ನಮ್ಮ ಆಟಗಾರರು ಚಿನ್ನ ಗೆದ್ದಿದ್ದರು. ಅಲ್ಲಿಂದ ಮುಂದೆ ಒಲಿಂಪಿಕ್ ಪಂದ್ಯಗಳಿಗೆ ಅರ್ಹತೆಯನ್ನು ಪಡೆಯುವುದಕ್ಕೆ ಹೋರಾಟದ ಹಾದಿಯಲ್ಲಿ ಕ್ರಮಿಸಬೇಕಾಯಿತು. <br /> <br /> ಹಾಕಿಯು ನೇಪಥ್ಯಕ್ಕೆ ಸರಿದ ಈ ಹಂತದಲ್ಲಿ ಕ್ರಿಕೆಟ್ ಹುಚ್ಚು ತನ್ನ ಆಧಿಪತ್ಯ ಸ್ಥಾಪಿಸಿತು. 1983ರಲ್ಲಿ ಭಾರತವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮ್ದ್ದಿದು ನಿಜಕ್ಕೂ ಆಶಾದಾಯಕ ಬೆಳವಣಿಗೆ. <br /> <br /> ಇದರ ನಂತರದಲ್ಲಿ ಬಿಸಿಸಿಐ ಕ್ರಿಕೆಟ್ ಉತ್ತೇಜನಕ್ಕೆ ಟೊಂಕ ಕಟ್ಟಿ ನಿಂತಿತು. ಇದೀಗ ಬಿಸಿಸಿಐ ಇಡೀ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಶ್ರೀಮಂತ ಮಂಡಳಿಯಾಗಿದೆ. ಆದರೆ, ಬಿಸಿಸಿಐ ನಿಜವಾದ ಬದ್ಧತೆಯು ಆಟದ ಮೇಲಿದೆಯೋ ಅಥವಾ ಆಟಗಾರರ ಮೇಲೋ ಎನ್ನುವುದು ಬೇರೆಯೇ ಮಾತು!<br /> <br /> ಈಗ ಮತ್ತೆ ಹಾಕಿ ವಿಷಯಕ್ಕೆ ಬರೋಣ. ಸ್ಪೇನ್, ಹಾಲೆಂಡ್, ಜರ್ಮನಿ ಹಾಗೂ ಆಸ್ಟ್ರೇಲಿಯಾ ದೇಶಗಳು ಹಾಕಿಯ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದು ನಾವೇ ಅಲ್ಲವೇ? ಹಾಗಾಗಿಯೇ ಅವರು ತಮ್ಮ ನೆಲ ಹಾಗೂ ಆಟಕ್ಕೆ ಒಗ್ಗುವ ರೀತಿಯಲ್ಲಿ ನೀತಿ-ನಿಯಮಾವಳಿಗಳನ್ನು ಅತ್ಯಂತ ಚಾಣಾಕ್ಷತನದಿಂದ ಮಾರ್ಪಾಡು ಮಾಡಿಕೊಂಡಿದ್ದಾರೆ.<br /> <br /> ನಮಗೆ ಪಶ್ಚಿಮ ಅಥವಾ ಆಸ್ಟ್ರೇಲಿಯಾದ ಹಾಕಿ ತರಬೇತುದಾರರೇ ಅಂತಿಮ ಎಂಬಂತೆ ಆಗಿಬಿಟ್ಟಿದೆ. ಹಾಗಾಗಿಯೇ ಅವರು ಆಡುವ ಹಾಕಿಯೇ ನಿಜವಾದ ಹಾಕಿ ಎಂಬುದು ನಮ್ಮ ಬಲವಾದ ನಂಬಿಕೆ. <br /> <br /> ಇದರಿಂದಾಗಿ ಸಹಜವಾಗಿಯೇ ಆ ದೇಶಗಳ ಹಾಕಿ ಆಟಗಾರರಿಗೆ `ಹೀರೋ~ ಇಮೇಜು ಪ್ರಾಪ್ತವಾಗಿದೆ. ಆದರೆ ನಮ್ಮ ಆಟಗಾರರ ಪಾಡು ನೋಡಿ, ವಿದೇಶ ಪ್ರವಾಸ ಮುಗಿಸಿಕೊಂಡು ಇವರೆಲ್ಲ ಬರಿಗೈಲಿ ವಾಪಸಾಗುವ ದೃಶ್ಯವನ್ನು ನಾವು ದಯನೀಯವಾಗಿ ನೋಡಬೇಕಾಗಿ ಬಂದಿದೆ.<br /> <br /> ನಮ್ಮ ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳಲ್ಲಿ ದಶಕಗಳಿಂದಲೂ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಉದ್ದೇಶಿತ ಕ್ರೀಡಾ ಮಸೂದೆಯು ಈ ಸಂಸ್ಥೆಗಳನ್ನು ನಿಯಂತ್ರಿಸಲು ಶಿಫಾರಸು ಮಾಡಬಹುದಿತ್ತು ಎನ್ನುವುದರಲ್ಲಿ ಅನುಮಾನ ಇಲ್ಲ. ವಿಪರ್ಯಾಸವೆಂದರೆ ನಮ್ಮಲ್ಲಿ ಕ್ರೀಡೆ ಎನ್ನುವುದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ.<br /> <br /> ಶರದ್ ಪವಾರ್, ಪ್ರಫುಲ್ ಪಟೇಲ್ ಹಾಗೂ ರಾಜೀವ್ ಶುಕ್ಲಾರಂಥ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಸೂದೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ. ಮಸೂದೆಯಲ್ಲಿ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಎಷ್ಟೆಲ್ಲ ಹಣ ಖರ್ಚು ಮಾಡಲಾಗಿದೆ ಎನ್ನುವುದಕ್ಕೆ ಸ್ವತಃ ಬಿಸಿಸಿಐ ಉತ್ತರ ಕೊಡಬೇಕಾಗುತ್ತದೆ. <br /> <br /> (ನಿಮ್ಮ ಅನಿಸಿಕೆಗಳನ್ನು ಕಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a>)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ ಕ್ರೀಡೆ ಎಂಬ ಅಭಿದಾನ ಹೊತ್ತ ಹಾಕಿ ಇಂದು ನಮ್ಮ ನೆಲದಲ್ಲಿಯೇ ಮಹತ್ವ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ ಹಾಕಿಗೆ ಯಾಕೆ ಸಿಗುತ್ತಿಲ್ಲ?<br /> <br /> ಕ್ರಿಕೆಟ್ ಆಟಗಾರರು ಪಂದ್ಯದಲ್ಲಿ ಮೇಲಿಂದ ಮೇಲೆ ಕಳಪೆ ಸಾಧನೆ ಮಾಡಿದರೂ ಕೋಟಿಗಟ್ಟಲೆ ಹಣ ಬಾಚುತ್ತಾರೆ. ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಇದನ್ನೆಲ್ಲ ನೋಡಿದರೆ ನನಗೆ ರೋಮನ್ ಸಾಮ್ರಾಜ್ಯದ ಕುಸ್ತಿಮಲ್ಲರ ನೆನಪಾಗುತ್ತದೆ. <br /> <br /> ಈ ಕುಸ್ತಿಮಲ್ಲರು ಪ್ರೇಕ್ಷಕರನ್ನು ಮೆಚ್ಚಿಸಲು ಎದುರಾಳಿ ಪಟುವನ್ನು ಕೊಲ್ಲದೇ ವಿಧಿ ಇರಲಿಲ್ಲ! ಯಾಕೆಂದರೆ ಜನರು ಕಾಸು ಕೊಟ್ಟು ಈ ಪೈಶಾಚಿಕ ದೃಶ್ಯ ನೋಡಲು ತುದಿಗಾಲ ಮೇಲೆ ನಿಂತಿರುತ್ತಿದ್ದರು. ಇದೆಂಥ ಹೋಲಿಕೆ ಎಂದು ಹುಬ್ಬೇರಿಸಬೇಡಿ. <br /> <br /> ನನಗೆ ಕ್ರಿಕೆಟ್ ಮೇಲೆ ದ್ವೇಷವಿಲ್ಲ. ಅಥವಾ ಕ್ರಿಕೆಟ್ ಆಟಗಾರರಿಗೆ ಭಾರಿ ಹಣ ಕೊಡುವ ಬಗ್ಗೆಯೂ ನಾನೇನು ಹೊಟ್ಟೆಕಿಚ್ಚು ಪಡುತ್ತಿಲ್ಲ. ವಾಸ್ತವ ಸಂಗತಿಯನ್ನು ಬಿಚ್ಚಿಡುತ್ತಿದ್ದೇನೆ, ಅಷ್ಟೆ.<br /> <br /> ಇತ್ತೀಚೆಗೆ ಚೀನಾದ ಓರ್ಡೊಸ್ನಲ್ಲಿ ನಡೆದ ಚೊಚ್ಚಲ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿತು. ನಿಜಕ್ಕೂ ಅದೊಂದು ಸಂಭ್ರಮದ ಗಳಿಗೆ.<br /> <br /> ಪೆನಾಲ್ಟಿ ಶೂಟೌಟ್ನಿಂದ ಭಾರತವು ಗೆದ್ದಿದ್ದು ಪಂದ್ಯವನ್ನು ಇನ್ನಷ್ಟು ರೋಚಕವನ್ನಾಗಿಸಿತ್ತು. ಆದರೆ ಆ ಸಂದರ್ಭದಲ್ಲಿ ಬೆಂಗಳೂರಿನ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದ ನನಗೆ ಚೀನಾದಿಂದ ಹಾಕಿ ಪಂದ್ಯದ ನೇರ ಪ್ರಸಾರವನ್ನು ನೋಡಲು ಸಾಧ್ಯವಾಗಲಿಲ್ಲ. <br /> <br /> `ನಾವು ಹಾಕಿ ಪಂದ್ಯದ ಪ್ರಸಾರವನ್ನು ನಿಲ್ಲಿಸಿದ್ದೇವೆ. ಯಾಕೆಂದರೆ ನಮ್ಮಲ್ಲಿ ತಂಗುವ ಅತಿಥಿಗಳು ಹಾಕಿ ಆಟ ನೋಡಲು ಇಷ್ಟಪಡುವುದಿಲ್ಲ~ ಎಂದು ಹೋಟೆಲ್ ವ್ಯವಸ್ಥಾಪಕರು ನನಗೆ ಸಮಜಾಯಿಷಿ ಕೊಟ್ಟರು. ಆಗ ನನಗೆ ನಿಜಕ್ಕೂ ಅಚ್ಚರಿ ಆಯಿತು.<br /> <br /> ಭಾರತ ಹಾಗೂ ಪಾಕ್ ಹಾಕಿ ಹಣಾಹಣಿ ನೋಡಲೂ ಜನರಿಗೆ ಕಾತರವಿಲ್ಲವೇ ಎಂದುಕೊಂಡೆ. ಭಾರತದಲ್ಲಿ ಹಾಕಿ ಎಷ್ಟು ಹೀನಾಯ ಸ್ಥಿತಿಯಲ್ಲಿದೆ ಎನ್ನುವುದನ್ನು ಬಿಂಬಿಸಲು ಇದಕ್ಕಿಂತ ಇನ್ನೇನು ಪುರಾವೆ ಬೇಕು?<br /> <br /> ಭಾರತದಲ್ಲಿ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ನೇರ ಪ್ರಸಾರವೂ ಇರಲಿಲ್ಲ ಎನ್ನುವುದು ನನಗೆ ನಂತರದಲ್ಲಿ ಗೊತ್ತಾಯಿತು. <br /> <br /> ಹಾಗೆ ನೋಡಿದರೆ ಸುಮಾರು ಆರು ದಶಕಗಳಿಗೂ ಸುದೀರ್ಘ ಅವಧಿಯ ನನ್ನ ವೃತ್ತಿ ಬದುಕಿನಲ್ಲಿ ರಾಜಕೀಯ ವಿಷಯವನ್ನು ಹೊರತುಪಡಿಸಿ ನಾನು ಎಂದಿಗೂ ಕ್ರೀಡೆಯ ಬಗ್ಗೆ ಬರೆದದ್ದೇ ಇಲ್ಲ. ಹಾಗೆ ನೋಡಿದರೆ, ನನಗೆ ಈ ಬಗ್ಗೆ ಬರೆಯುವ ತುರ್ತು ಕೂಡ ಇರಲಿಲ್ಲ. ಇನ್ನೊಂದು ವಿಷಯವೆಂದರೆ ನಾನು ದಿನಪತ್ರಿಕೆಗಳ ಕ್ರೀಡಾ ಪುಟದತ್ತ ಗಮನ ಹರಿಸುವುದು ತೀರಾ ಅಪರೂಪ ಎಂದರೆ ಅದು ಅತಿಶಯೋಕ್ತಿಯಲ್ಲ. <br /> <br /> ಕ್ರಿಕೆಟ್ನಂತೆಯೇ ಹಾಕಿ ಪಂದ್ಯವನ್ನು ನೋಡಲು ಜನ ಯಾಕೆ ಮುಗಿ ಬೀಳುವುದಿಲ್ಲವೋ ನನಗೆ ಅರ್ಥವಾಗುತ್ತಿಲ್ಲ. ಈ ಸಂದರ್ಭದಲ್ಲಿ ನನಗೆ ಭಾರತದ ಹಾಕಿ ಕಲಿ ಮೇಜರ್ ಧ್ಯಾನ್ಚಂದ್ ಸಿಂಗ್ ನೆನಪಾಗುತ್ತಾರೆ.<br /> <br /> ಅವರು ಇಡೀ ಜಗತ್ತು ಕಂಡ ಅಪ್ರತಿಮ ಹಾಕಿ ಪಟು. ಬಹುಶಃ ಇತರ ಯಾವುದೇ ಕ್ರೀಡೆಯಲ್ಲಿಯೂ ಅವರಷ್ಟು ಚತುರ ಆಟಗಾರರು ಕಾಣಸಿಗುವುದಿಲ್ಲವೇನೋ? ಅಂತೆಯೇ ಅವರನ್ನು ಹಾಕಿ ಲೋಕದ ದಂತಕಥೆ ಎಂದೇ ಬಣ್ಣಿಸಲಾಗುತ್ತದೆ. ಧ್ಯಾನ್ಚಂದ್ ಆಟದ ಮೋಡಿಗೆ ಪ್ರೇಕ್ಷಕರು ಮಾತ್ರವಲ್ಲ; ಎದುರಾಳಿಗಳೂ ನಿಬ್ಬೆರಗಾಗುತ್ತಿದ್ದರು.<br /> <br /> ಹಾಗಿರುತ್ತಿತ್ತು ಅವರ ಆಟದ ವೈಖರಿ! ಅವರೊಬ್ಬ ಕಲಾತ್ಮಕ ಆಟಗಾರರಾಗಿದ್ದರು. ಒಲಿಪಿಂಕ್ ಪಂದ್ಯಗಳಲ್ಲಿ ಆಡಿದ್ದ ಧ್ಯಾನ್ಚಂದ್ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. 1956ರಲ್ಲಿ ಅವರಿಗೆ ಪದ್ಮಭೂಷಣ ಸಮ್ಮಾನ ಕೂಡ ದೊರೆತಿದೆ. <br /> <br /> 1932ರಲ್ಲಿ ಬರ್ಲಿನ್ನಲ್ಲಿ ನಡೆದ ಒಲಿಂಪಿಕ್ ಪಂದ್ಯದಲ್ಲಿ ಸರ್ವಾಧಿಕಾರಿ ಹಿಟ್ಲರ್ ಕೂಡ ಧ್ಯಾನ್ಚಂದ್ ಆಟಕ್ಕೆ ಮನಸೋತಿದ್ದ. ಜರ್ಮನಿ ಸೇನೆಯಲ್ಲಿ ಉನ್ನತ ಸ್ಥಾನವನ್ನು ನೀಡುವ ಹಿಟ್ಲರ್ ಆಹ್ವಾನವನ್ನು ಚಂದ್ ಆಗ ನಯವಾಗಿಯೇ ನಿರಾಕರಿಸಿದ್ದರು.<br /> <br /> ಆದರೆ ದೇಶ ಕಂಡ ಇಂಥ ಮಹಾನ್ ಆಟಗಾರ ತನ್ನ ಕೊನೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಹಾಗೂ ಅನಾರೋಗ್ಯದಿಂದ ಬಳಲುವಂತಾಯಿತು. ಹಾಗೆ ನೋಡಿದರೆ ಆ ಕಾಲಘಟ್ಟದಲ್ಲಿ ಹಾಕಿ ಆಟಗಾರರ ಮುಂದೆ, ಇಂದಿನ ಕ್ರಿಕೆಟ್ ಕಲಿಗಳಂತೆ ಹಣದ ಹೊಳೆ ಹರಿಯುತ್ತಿರಲಿಲ್ಲ. ಅಲ್ಲಿ ವ್ಯಕ್ತಿಗಿಂತ ಆಟವೇ ಪ್ರಧಾನವಾಗಿತ್ತು.<br /> <br /> ನನಗೆ ಕ್ರಿಕೆಟ್ ಮೇಲೆ ದ್ವೇಷವೇನೂ ಇಲ್ಲ. ಆದರೆ ಕ್ರಿಕೆಟ್ ನೋಡುವಾಗಲೆಲ್ಲ ಆಟಗಾರರನ್ನು ಬಿಕರಿಗಿಡಲಾಗಿದೆಯೇ ಎನ್ನುವ ಅನುಮಾನ ಮೂಡುತ್ತದೆ. `ಹಣದ ಥೈಲಿಗೆ ತಕ್ಕಂತೆ ಆಟದ ವೈಖರಿ~ ಎನ್ನುವ ಭಾವನೆ ಬಂದುಬಿಡುತ್ತದೆ.<br /> <br /> ಅಲ್ಲದೆ, ಈ ಆಟಗಾರರು ಅತಿಮುದ್ದಿನಿಂದ ಹಾಳಾದ ಉಡಾಳ ಮಕ್ಕಳಂತೆ ಕಾಣುತ್ತಾರೆ. ತಮಗಾದ ಗಾಯವನ್ನು ಮುಚ್ಚಿಡುತ್ತಾ, ಸುಳ್ಳು ಸುಳ್ಳು ವೈದ್ಯಕೀಯ ವರದಿ ಮುಂದಿಟ್ಟುಕೊಂಡು ತಂಡದಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಾರೆ. ಇತ್ತೀಚಿನ ಲಂಡನ್ ಪ್ರವಾಸವೇ ಇದಕ್ಕೆ ನೈಜ ಉದಾಹರಣೆ.<br /> <br /> ಭಾರತದ ಹಾಕಿ ಬಗ್ಗೆ ಮಾತನಾಡುವಾಗ ವಿಲಕ್ಷಣ ಚಿತ್ರಣ ಕಂತೆಯೇ ಕಣ್ಣಿಗೆ ಕಟ್ಟುತ್ತದೆ. ನಮ್ಮಲ್ಲಿ ಆಟಗಾರರಿಗೆ ಬಿಡಿಗಾಸು ಕೊಟ್ಟು ಕೈತೊಳೆದುಕೊಂಡು ಅವರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತದೆ.<br /> <br /> ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸಾಧನೆ ಮೆರೆದ ಕೆಲವರಿಗೆ ಸ್ವಂತ ಮನೆ ಕೂಡ ಇಲ್ಲದಂಥ ಸ್ಥಿತಿಗೆ ಏನನ್ನೋಣ? `ನಮ್ಮ ದೇಶದಲ್ಲಿ ಹಾಕಿ ಹೀನಾಯ ಸ್ಥಿತಿಯಲ್ಲಿದೆ. ಸಾಧನೆಗೆ ಕಿಮ್ಮತ್ತಿಲ್ಲ~ ಎಂದು ಭಾರತ ಹಾಕಿ ತಂಡದ ನಾಯಕ ರಾಜ್ಪಾಲ್ ಸಿಂಗ್ ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ.<br /> <br /> ಹಾಕಿಗೆ ಬಂದಿರುವ ದಯನೀಯ ಸ್ಥಿತಿ, ಈ ಆಟವನ್ನು ನಿಯಂತ್ರಿಸಲು ಯಾರಿಗೆ ನಿಜವಾದ ಅಧಿಕಾರವಿದೆ ಎನ್ನುವುದರ ಕುರಿತ ವಾಗ್ವಾದ, ನಂತರದಲ್ಲಿ ಕ್ರೀಡಾ ಸಚಿವಾಲಯ ಸೃಷ್ಟಿಸಿದ ಗೊಂದಲ -ಈ ಎಲ್ಲ ಅರೆಕೊರೆಗಳ ಮಧ್ಯೆಯೂ ನಮ್ಮ ಹಾಕಿಪಟುಗಳು ಚೀನಾದಲ್ಲಿ ಅಭೂತಪೂರ್ವವಾಗಿ ಆಟವಾಡಿದ್ದು ಮೆಚ್ಚತಕ್ಕ ವಿಷಯ. <br /> ಕೆಲವೊಂದು ವಿವಾದಗಳೂ ಹಾಕಿ ತಂಡವನ್ನು ಸುತ್ತಿಕೊಂಡಿದ್ದವು.<br /> <br /> ಹೊಸ ವಿದೇಶಿ ತರಬೇತುದಾರನ ನೇತೃತ್ವದಲ್ಲಿ ತಂಡವು ಚೀನಾ ಪ್ರವಾಸ ಕೈಗೊಳ್ಳುವ ಮುನ್ನ ಹಿರಿಯ ಆಟಗಾರರಾದ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಅವರು ತಂಡದಿಂದ ಹೊರನಡೆದರು. ಈ ಬೆಳವಣಿಗೆಯು ಆಟಗಾರರಿಗೆ ಹಾಕಿಯ ಮೇಲಿರುವ ಬದ್ಧತೆಯನ್ನು ತೋರಿಸುತ್ತದೆ.<br /> <br /> ಮೂರು ದಶಕಗಳ ಹಿಂದಿನ ಹಾಕಿಯ ವೈಭವ ಮತ್ತೆ ಮರುಕಳಿಸಲಿ ಎನ್ನುವುದು ನನ್ನ ಆಶಯ. 1980ರಲ್ಲಿ ಮಾಸ್ಕೊದಲ್ಲಿ ನಡೆದ ಪಂದ್ಯದಲ್ಲಿ ನಮ್ಮ ಆಟಗಾರರು ಚಿನ್ನ ಗೆದ್ದಿದ್ದರು. ಅಲ್ಲಿಂದ ಮುಂದೆ ಒಲಿಂಪಿಕ್ ಪಂದ್ಯಗಳಿಗೆ ಅರ್ಹತೆಯನ್ನು ಪಡೆಯುವುದಕ್ಕೆ ಹೋರಾಟದ ಹಾದಿಯಲ್ಲಿ ಕ್ರಮಿಸಬೇಕಾಯಿತು. <br /> <br /> ಹಾಕಿಯು ನೇಪಥ್ಯಕ್ಕೆ ಸರಿದ ಈ ಹಂತದಲ್ಲಿ ಕ್ರಿಕೆಟ್ ಹುಚ್ಚು ತನ್ನ ಆಧಿಪತ್ಯ ಸ್ಥಾಪಿಸಿತು. 1983ರಲ್ಲಿ ಭಾರತವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮ್ದ್ದಿದು ನಿಜಕ್ಕೂ ಆಶಾದಾಯಕ ಬೆಳವಣಿಗೆ. <br /> <br /> ಇದರ ನಂತರದಲ್ಲಿ ಬಿಸಿಸಿಐ ಕ್ರಿಕೆಟ್ ಉತ್ತೇಜನಕ್ಕೆ ಟೊಂಕ ಕಟ್ಟಿ ನಿಂತಿತು. ಇದೀಗ ಬಿಸಿಸಿಐ ಇಡೀ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಶ್ರೀಮಂತ ಮಂಡಳಿಯಾಗಿದೆ. ಆದರೆ, ಬಿಸಿಸಿಐ ನಿಜವಾದ ಬದ್ಧತೆಯು ಆಟದ ಮೇಲಿದೆಯೋ ಅಥವಾ ಆಟಗಾರರ ಮೇಲೋ ಎನ್ನುವುದು ಬೇರೆಯೇ ಮಾತು!<br /> <br /> ಈಗ ಮತ್ತೆ ಹಾಕಿ ವಿಷಯಕ್ಕೆ ಬರೋಣ. ಸ್ಪೇನ್, ಹಾಲೆಂಡ್, ಜರ್ಮನಿ ಹಾಗೂ ಆಸ್ಟ್ರೇಲಿಯಾ ದೇಶಗಳು ಹಾಕಿಯ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದು ನಾವೇ ಅಲ್ಲವೇ? ಹಾಗಾಗಿಯೇ ಅವರು ತಮ್ಮ ನೆಲ ಹಾಗೂ ಆಟಕ್ಕೆ ಒಗ್ಗುವ ರೀತಿಯಲ್ಲಿ ನೀತಿ-ನಿಯಮಾವಳಿಗಳನ್ನು ಅತ್ಯಂತ ಚಾಣಾಕ್ಷತನದಿಂದ ಮಾರ್ಪಾಡು ಮಾಡಿಕೊಂಡಿದ್ದಾರೆ.<br /> <br /> ನಮಗೆ ಪಶ್ಚಿಮ ಅಥವಾ ಆಸ್ಟ್ರೇಲಿಯಾದ ಹಾಕಿ ತರಬೇತುದಾರರೇ ಅಂತಿಮ ಎಂಬಂತೆ ಆಗಿಬಿಟ್ಟಿದೆ. ಹಾಗಾಗಿಯೇ ಅವರು ಆಡುವ ಹಾಕಿಯೇ ನಿಜವಾದ ಹಾಕಿ ಎಂಬುದು ನಮ್ಮ ಬಲವಾದ ನಂಬಿಕೆ. <br /> <br /> ಇದರಿಂದಾಗಿ ಸಹಜವಾಗಿಯೇ ಆ ದೇಶಗಳ ಹಾಕಿ ಆಟಗಾರರಿಗೆ `ಹೀರೋ~ ಇಮೇಜು ಪ್ರಾಪ್ತವಾಗಿದೆ. ಆದರೆ ನಮ್ಮ ಆಟಗಾರರ ಪಾಡು ನೋಡಿ, ವಿದೇಶ ಪ್ರವಾಸ ಮುಗಿಸಿಕೊಂಡು ಇವರೆಲ್ಲ ಬರಿಗೈಲಿ ವಾಪಸಾಗುವ ದೃಶ್ಯವನ್ನು ನಾವು ದಯನೀಯವಾಗಿ ನೋಡಬೇಕಾಗಿ ಬಂದಿದೆ.<br /> <br /> ನಮ್ಮ ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳಲ್ಲಿ ದಶಕಗಳಿಂದಲೂ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಉದ್ದೇಶಿತ ಕ್ರೀಡಾ ಮಸೂದೆಯು ಈ ಸಂಸ್ಥೆಗಳನ್ನು ನಿಯಂತ್ರಿಸಲು ಶಿಫಾರಸು ಮಾಡಬಹುದಿತ್ತು ಎನ್ನುವುದರಲ್ಲಿ ಅನುಮಾನ ಇಲ್ಲ. ವಿಪರ್ಯಾಸವೆಂದರೆ ನಮ್ಮಲ್ಲಿ ಕ್ರೀಡೆ ಎನ್ನುವುದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ.<br /> <br /> ಶರದ್ ಪವಾರ್, ಪ್ರಫುಲ್ ಪಟೇಲ್ ಹಾಗೂ ರಾಜೀವ್ ಶುಕ್ಲಾರಂಥ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಸೂದೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ. ಮಸೂದೆಯಲ್ಲಿ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಎಷ್ಟೆಲ್ಲ ಹಣ ಖರ್ಚು ಮಾಡಲಾಗಿದೆ ಎನ್ನುವುದಕ್ಕೆ ಸ್ವತಃ ಬಿಸಿಸಿಐ ಉತ್ತರ ಕೊಡಬೇಕಾಗುತ್ತದೆ. <br /> <br /> (ನಿಮ್ಮ ಅನಿಸಿಕೆಗಳನ್ನು ಕಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a>)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>