<p>ಅದೊಂದು ಸುಂದರವಾದ ಕೊಳವಾಗಿತ್ತು. ಬೆಟ್ಟಗಳ ಶೃಂಗಗಳಿಂದ ಹರಿದುಬಂದ ನೀರು ಹನ್ನೆರಡು ತಿಂಗಳೂ ಇರುತ್ತಿತ್ತು. ಅದರಲ್ಲಿ ಅನೇಕ ಜೀವರಾಶಿಗಳು ನೆಲೆಯಾಗಿದ್ದವು. ಆ ಪ್ರಾಣಿಗಳಲ್ಲಿ ಮೂವರು ತುಂಬ ಸ್ನೇಹಿತರಾಗಿದ್ದರು. ಅವುಗಳಲ್ಲಿ ಎರಡು ಹಂಸಪಕ್ಷಿಗಳು ಹಾಗೂ ಒಂದು ಆಮೆ. ಸಾಮಾನ್ಯವಾಗಿ ನಿಧಾನ ಹಾಗೂ ಆಲಸಿಯಾಗಿರುವ ಆಮೆಗಳಿಗೆ ಇದೊಂದು ಅಪವಾದವಾಗಿತ್ತು.<br /> <br /> ಅದು ಸದಾಕಾಲ ಚಟುವಟಿಕೆಯಿಂದಿರುತ್ತಿತ್ತು. ಸರೋವರದಲ್ಲಿ ಅಲ್ಲಲ್ಲಿ ಯಾವಾಗಲೂ ಸುತ್ತಾಡುತ್ತ ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುತ್ತಿತ್ತು. ಎಲ್ಲಿಯಾದರೂ, ಯಾವುದೇ ಪ್ರಾಣಿಗೆ ಅನ್ಯಾಯವಾದರೆ ಮೊದಲು ಪ್ರತಿಭಟನೆ ತೋರುತ್ತಿದ್ದುದು ಈ ಆಮೆಯೇ. ದಿನಕ್ಕೆ ಒಂದೆರಡು ಬಾರಿಯಾದರೂ ಎರಡೂ ಹಂಸಗಳು ಆಮೆಯನ್ನು ಭೆಟ್ಟಿಯಾಗುತ್ತಿದ್ದವು. </p>.<p>ಹಂಸಗಳಿಗೆ ಆಮೆಯ ನಾಯಕತ್ವ ಗುಣ, ನಿರ್ಭೀತಿ ಮೆಚ್ಚುಗೆಯಾದರೂ ಅದರ ಒಂದು ಸ್ವಭಾವ ಇಷ್ಟವಾಗುತ್ತಿರಲಿಲ್ಲ, ಅದೆಂದರೆ ಯಾವುದೇ ವಿಷಯಕ್ಕೆ ತಕ್ಷಣ ಪ್ರತಿಕ್ರಿಯಿಸುವುದು. ಅದಕ್ಕೆ ಕೋಪ ತಡೆದುಕೊಳ್ಳುವುದೇ ಸಾಧ್ಯವಿಲ್ಲ. ಅದರ ಮಾತೂ ಸಿಡಿಲಿನ ಹಾಗೆ. ಯಾರಾದರೂ ಏನಾದರೂ ಹೇಳಿದರೆ ಅದಕ್ಕೆ ಮರುಕ್ಷಣದಲ್ಲಿಯೇ ಥಟ್ಟೆಂದು ಪ್ರತಿಕ್ರಿಯೆ ನೀಡಲೇಬೇಕು.<br /> <br /> ಹಲವಾರು ಬಾರಿ ಈ ಆತುರದ ಮಾತುಗಳಲ್ಲಿ ತೂಕ ತಪ್ಪುತ್ತಿತ್ತು, ಅದು ಅನೇಕ ಜಗಳಗಳಿಗೂ ಕಾರಣವಾಗುತ್ತಿತ್ತು. ಹಂಸಗಳು ಅನೇಕ ಬಾರಿ ಅದರ ಬಗ್ಗೆ ಆಮೆಗೆ ಹೇಳಿ ನೋಡಿದವು. ಆಮೆ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಬದಲು ಮತ್ತಷ್ಟು ರೇಗಿತು. ‘ಹೇ, ನೀವಿಬ್ಬರೂ ನಿಷ್ಪ್ರಯೋಜಕರು, ಪ್ರತಿಯೊಂದಕ್ಕೂ ಹೆದರುತ್ತೀರಿ. ನಾನು ಯಾರಿಗೂ ಹೆದರುವವನಲ್ಲ. ನನ್ನ ನಡೆ, ನುಡಿ ಯಾವಾಗಲೂ ನೇರ. ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.<br /> <br /> ನನ್ನದೇನಿದ್ದರೂ ಒಂದು ಹೊಡೆತ, ಎರಡು ತುಂಡು. ಅದೇ ನನ್ನ ನಾಯಕತ್ವದ ಶಕ್ತಿ’ ಎಂದು ಗುಡುಗಿತು. ಇದಕ್ಕೆ ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದು ಹಂಸಗಳು ಸುಮ್ಮನಾದವು. ಮರುವರ್ಷ ಬೆಟ್ಟಗಳ ಇಳಿಜಾರಿನಲ್ಲಿ ಕೆಲವು ಕಾರ್ಖಾನೆಗಳು ಆರಂಭಗೊಂಡವು. ಅವುಗಳ ಕಟ್ಟಡಗಳು ಎಲ್ಲೆಡೆ ಹರಡತೊಡಗಿದವು. ಇದರಿಂದ ಎರಡು ರೀತಿಯ ಹಾನಿ ಕೊಳಕ್ಕೆ ಆಗತೊಡಗಿತು. ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರು ನಿಂತುಹೋಯಿತು. <br /> <br /> ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ಕೊಳಕ್ಕೆ ಸೇರಿ, ನೀರು ವಿಷಮಯವಾಗತೊಡಗಿತು. ಇದನ್ನು ಮೊದಲು ಗಮನಿಸಿದ್ದು ಆಮೆ. ಸಣ್ಣಪುಟ್ಟ ಮೀನುಗಳು ಸಾಯುವುದನ್ನು ಕಂಡೊಡನೆ ಅದಕ್ಕೆ ಈ ಸರೋವರ ಇನ್ನು ಬದುಕಲಾರದು ಎನ್ನಿಸಿತು. ತಕ್ಷಣವೇ ಅದು ಹಂಸಗಳನ್ನು ಕರೆದು ಸುತ್ತಮುತ್ತ ಹಾರಾಡಿ ಬೇರೆ ಕೊಳಗಳು ಇರುವುದನ್ನು ನೋಡಿಕೊಂಡು ಬರಲು ಒತ್ತಾಯಿಸಿತು. ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ಹಂಸಗಳು ಹಿಂದೆಮುಂದೆ ನೋಡಿದಾಗ ಅವುಗಳಿಗೆ ಬೈಯ್ದು, ಪ್ರೋತ್ಸಾಹಿಸಿ ಒಪ್ಪಿಸಿತು. ನಾಲ್ಕು ದಿನಗಳಲ್ಲಿ ಅವು ಮತ್ತೊಂದು ಸುಂದರ ಕೊಳವನ್ನು ನೋಡಿಕೊಂಡು ಬಂದವು. </p>.<p>ಆದರೆ, ಅದು ಈ ಕೊಳದಿಂದ ಒಂದು ಮೈಲಿ ದೂರವಿತ್ತು. ಹಂಸಗಳೇನೋ ಹಾರಿಹೋದಾವು, ಆಮೆ ಹೋಗುವುದು ಹೇಗೆ? ಕೊನೆಗೆ ಅದೇ ಸಲಹೆ ನೀಡಿತು. ‘ನೀವಿಬ್ಬರೂ ನಿಮ್ಮ ಬಾಯಿಯಲ್ಲಿ ಒಂದು ಕಡ್ಡಿ ಹಿಡಿದುಕೊಂಡು ಒಮ್ಮೆಗೇ ಹಾರಿ. ನಾನು ಆ ಕಡ್ಡಿಯ ಮಧ್ಯಭಾಗವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುತ್ತೇನೆ. ಆಗ ನೀವು ನನ್ನನ್ನು ಎತ್ತಿಕೊಂಡು ಆ ಕೊಳಕ್ಕೆ ಹೋಗಿ ಇಳಿಸಿಬಿಡಿ’. ಅಂತೆಯೇ ಪಕ್ಷಿಗಳು ಉದ್ದ ಕಡ್ಡಿಯ ಎರಡು ತುದಿಗಳನ್ನು ಕಚ್ಚಿಕೊಂಡು ಸಿದ್ಧವಾದವು. <br /> <br /> ಆಮೆ ಮಧ್ಯಭಾಗವನ್ನು ಗಟ್ಟಿಯಾಗಿ ಬಾಯಲ್ಲಿ ಹಿಡಿಯಿತು. ಪಕ್ಷಿಗಳು ಮೇಲೆ ಹಾರಿದವು. ನಡುವೆ ಆಮೆ ಗಾಳಿಯಲ್ಲಿ ತೇಲುತ್ತ ಸಾಗಿತ್ತು. ಈ ದೃಶ್ಯವನ್ನು ಕಂಡು ಎಲ್ಲ ಪ್ರಾಣಿಗಳು, ಜನ ಆಶ್ಚರ್ಯಪಟ್ಟರು, ಕೆಲವರು ಕೈ ತಟ್ಟಿ ನಕ್ಕರು. ಹೀಗೆ ನಕ್ಕಿದ್ದು ಆಮೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಸಿಟ್ಟು ಸರ್ರನೇ ಏರಿತು. ‘ದರಿದ್ರಗಳಾ, ನನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳುವ ಬದಲು ನಗುತ್ತೀರಾ?’ ಎಂದು ಕೋಪದಿಂದ ಕೂಗಿತು. <br /> <br /> ಆಗ ಕಡ್ಡಿಯ ಹಿಡಿತ ತಪ್ಪಿ ಹೋಗಿ ಎತ್ತರದಿಂದ ಕೆಳಗೆ ಬಿದ್ದು ಚಿಪ್ಪೊಡೆದು ಸತ್ತ್ತು ಹೋಯಿತು. ಎಷ್ಟೇ ದೊಡ್ಡ ನಾಯಕರಾದರೂ, ಎಲ್ಲ ನಾಯಕತ್ವದ ಗುಣಗಳಿದ್ದರೂ ಸಿಟ್ಟನ್ನು ನಿಗ್ರಹಿಸದಿದ್ದರೆ, ತಕ್ಷಣದ ಪ್ರತಿಕ್ರಿಯೆಯ ಉದ್ವೇಗ ತಡೆದುಕೊಳ್ಳದಿದ್ದರೆ ಅದೊಂದು ದಿನ ಬಹುದೊಡ್ಡ ಅಪಾಯ ತಂದೊಡ್ಡುತ್ತದೆ. ಅಂತಹ ಪ್ರಕರಣಗಳನ್ನು ನಾವು ಸಾಕಷ್ಟು ಕಂಡಿದ್ದೇವೆಯಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅದೊಂದು ಸುಂದರವಾದ ಕೊಳವಾಗಿತ್ತು. ಬೆಟ್ಟಗಳ ಶೃಂಗಗಳಿಂದ ಹರಿದುಬಂದ ನೀರು ಹನ್ನೆರಡು ತಿಂಗಳೂ ಇರುತ್ತಿತ್ತು. ಅದರಲ್ಲಿ ಅನೇಕ ಜೀವರಾಶಿಗಳು ನೆಲೆಯಾಗಿದ್ದವು. ಆ ಪ್ರಾಣಿಗಳಲ್ಲಿ ಮೂವರು ತುಂಬ ಸ್ನೇಹಿತರಾಗಿದ್ದರು. ಅವುಗಳಲ್ಲಿ ಎರಡು ಹಂಸಪಕ್ಷಿಗಳು ಹಾಗೂ ಒಂದು ಆಮೆ. ಸಾಮಾನ್ಯವಾಗಿ ನಿಧಾನ ಹಾಗೂ ಆಲಸಿಯಾಗಿರುವ ಆಮೆಗಳಿಗೆ ಇದೊಂದು ಅಪವಾದವಾಗಿತ್ತು.<br /> <br /> ಅದು ಸದಾಕಾಲ ಚಟುವಟಿಕೆಯಿಂದಿರುತ್ತಿತ್ತು. ಸರೋವರದಲ್ಲಿ ಅಲ್ಲಲ್ಲಿ ಯಾವಾಗಲೂ ಸುತ್ತಾಡುತ್ತ ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುತ್ತಿತ್ತು. ಎಲ್ಲಿಯಾದರೂ, ಯಾವುದೇ ಪ್ರಾಣಿಗೆ ಅನ್ಯಾಯವಾದರೆ ಮೊದಲು ಪ್ರತಿಭಟನೆ ತೋರುತ್ತಿದ್ದುದು ಈ ಆಮೆಯೇ. ದಿನಕ್ಕೆ ಒಂದೆರಡು ಬಾರಿಯಾದರೂ ಎರಡೂ ಹಂಸಗಳು ಆಮೆಯನ್ನು ಭೆಟ್ಟಿಯಾಗುತ್ತಿದ್ದವು. </p>.<p>ಹಂಸಗಳಿಗೆ ಆಮೆಯ ನಾಯಕತ್ವ ಗುಣ, ನಿರ್ಭೀತಿ ಮೆಚ್ಚುಗೆಯಾದರೂ ಅದರ ಒಂದು ಸ್ವಭಾವ ಇಷ್ಟವಾಗುತ್ತಿರಲಿಲ್ಲ, ಅದೆಂದರೆ ಯಾವುದೇ ವಿಷಯಕ್ಕೆ ತಕ್ಷಣ ಪ್ರತಿಕ್ರಿಯಿಸುವುದು. ಅದಕ್ಕೆ ಕೋಪ ತಡೆದುಕೊಳ್ಳುವುದೇ ಸಾಧ್ಯವಿಲ್ಲ. ಅದರ ಮಾತೂ ಸಿಡಿಲಿನ ಹಾಗೆ. ಯಾರಾದರೂ ಏನಾದರೂ ಹೇಳಿದರೆ ಅದಕ್ಕೆ ಮರುಕ್ಷಣದಲ್ಲಿಯೇ ಥಟ್ಟೆಂದು ಪ್ರತಿಕ್ರಿಯೆ ನೀಡಲೇಬೇಕು.<br /> <br /> ಹಲವಾರು ಬಾರಿ ಈ ಆತುರದ ಮಾತುಗಳಲ್ಲಿ ತೂಕ ತಪ್ಪುತ್ತಿತ್ತು, ಅದು ಅನೇಕ ಜಗಳಗಳಿಗೂ ಕಾರಣವಾಗುತ್ತಿತ್ತು. ಹಂಸಗಳು ಅನೇಕ ಬಾರಿ ಅದರ ಬಗ್ಗೆ ಆಮೆಗೆ ಹೇಳಿ ನೋಡಿದವು. ಆಮೆ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಬದಲು ಮತ್ತಷ್ಟು ರೇಗಿತು. ‘ಹೇ, ನೀವಿಬ್ಬರೂ ನಿಷ್ಪ್ರಯೋಜಕರು, ಪ್ರತಿಯೊಂದಕ್ಕೂ ಹೆದರುತ್ತೀರಿ. ನಾನು ಯಾರಿಗೂ ಹೆದರುವವನಲ್ಲ. ನನ್ನ ನಡೆ, ನುಡಿ ಯಾವಾಗಲೂ ನೇರ. ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.<br /> <br /> ನನ್ನದೇನಿದ್ದರೂ ಒಂದು ಹೊಡೆತ, ಎರಡು ತುಂಡು. ಅದೇ ನನ್ನ ನಾಯಕತ್ವದ ಶಕ್ತಿ’ ಎಂದು ಗುಡುಗಿತು. ಇದಕ್ಕೆ ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದು ಹಂಸಗಳು ಸುಮ್ಮನಾದವು. ಮರುವರ್ಷ ಬೆಟ್ಟಗಳ ಇಳಿಜಾರಿನಲ್ಲಿ ಕೆಲವು ಕಾರ್ಖಾನೆಗಳು ಆರಂಭಗೊಂಡವು. ಅವುಗಳ ಕಟ್ಟಡಗಳು ಎಲ್ಲೆಡೆ ಹರಡತೊಡಗಿದವು. ಇದರಿಂದ ಎರಡು ರೀತಿಯ ಹಾನಿ ಕೊಳಕ್ಕೆ ಆಗತೊಡಗಿತು. ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರು ನಿಂತುಹೋಯಿತು. <br /> <br /> ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ಕೊಳಕ್ಕೆ ಸೇರಿ, ನೀರು ವಿಷಮಯವಾಗತೊಡಗಿತು. ಇದನ್ನು ಮೊದಲು ಗಮನಿಸಿದ್ದು ಆಮೆ. ಸಣ್ಣಪುಟ್ಟ ಮೀನುಗಳು ಸಾಯುವುದನ್ನು ಕಂಡೊಡನೆ ಅದಕ್ಕೆ ಈ ಸರೋವರ ಇನ್ನು ಬದುಕಲಾರದು ಎನ್ನಿಸಿತು. ತಕ್ಷಣವೇ ಅದು ಹಂಸಗಳನ್ನು ಕರೆದು ಸುತ್ತಮುತ್ತ ಹಾರಾಡಿ ಬೇರೆ ಕೊಳಗಳು ಇರುವುದನ್ನು ನೋಡಿಕೊಂಡು ಬರಲು ಒತ್ತಾಯಿಸಿತು. ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ಹಂಸಗಳು ಹಿಂದೆಮುಂದೆ ನೋಡಿದಾಗ ಅವುಗಳಿಗೆ ಬೈಯ್ದು, ಪ್ರೋತ್ಸಾಹಿಸಿ ಒಪ್ಪಿಸಿತು. ನಾಲ್ಕು ದಿನಗಳಲ್ಲಿ ಅವು ಮತ್ತೊಂದು ಸುಂದರ ಕೊಳವನ್ನು ನೋಡಿಕೊಂಡು ಬಂದವು. </p>.<p>ಆದರೆ, ಅದು ಈ ಕೊಳದಿಂದ ಒಂದು ಮೈಲಿ ದೂರವಿತ್ತು. ಹಂಸಗಳೇನೋ ಹಾರಿಹೋದಾವು, ಆಮೆ ಹೋಗುವುದು ಹೇಗೆ? ಕೊನೆಗೆ ಅದೇ ಸಲಹೆ ನೀಡಿತು. ‘ನೀವಿಬ್ಬರೂ ನಿಮ್ಮ ಬಾಯಿಯಲ್ಲಿ ಒಂದು ಕಡ್ಡಿ ಹಿಡಿದುಕೊಂಡು ಒಮ್ಮೆಗೇ ಹಾರಿ. ನಾನು ಆ ಕಡ್ಡಿಯ ಮಧ್ಯಭಾಗವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುತ್ತೇನೆ. ಆಗ ನೀವು ನನ್ನನ್ನು ಎತ್ತಿಕೊಂಡು ಆ ಕೊಳಕ್ಕೆ ಹೋಗಿ ಇಳಿಸಿಬಿಡಿ’. ಅಂತೆಯೇ ಪಕ್ಷಿಗಳು ಉದ್ದ ಕಡ್ಡಿಯ ಎರಡು ತುದಿಗಳನ್ನು ಕಚ್ಚಿಕೊಂಡು ಸಿದ್ಧವಾದವು. <br /> <br /> ಆಮೆ ಮಧ್ಯಭಾಗವನ್ನು ಗಟ್ಟಿಯಾಗಿ ಬಾಯಲ್ಲಿ ಹಿಡಿಯಿತು. ಪಕ್ಷಿಗಳು ಮೇಲೆ ಹಾರಿದವು. ನಡುವೆ ಆಮೆ ಗಾಳಿಯಲ್ಲಿ ತೇಲುತ್ತ ಸಾಗಿತ್ತು. ಈ ದೃಶ್ಯವನ್ನು ಕಂಡು ಎಲ್ಲ ಪ್ರಾಣಿಗಳು, ಜನ ಆಶ್ಚರ್ಯಪಟ್ಟರು, ಕೆಲವರು ಕೈ ತಟ್ಟಿ ನಕ್ಕರು. ಹೀಗೆ ನಕ್ಕಿದ್ದು ಆಮೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಸಿಟ್ಟು ಸರ್ರನೇ ಏರಿತು. ‘ದರಿದ್ರಗಳಾ, ನನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳುವ ಬದಲು ನಗುತ್ತೀರಾ?’ ಎಂದು ಕೋಪದಿಂದ ಕೂಗಿತು. <br /> <br /> ಆಗ ಕಡ್ಡಿಯ ಹಿಡಿತ ತಪ್ಪಿ ಹೋಗಿ ಎತ್ತರದಿಂದ ಕೆಳಗೆ ಬಿದ್ದು ಚಿಪ್ಪೊಡೆದು ಸತ್ತ್ತು ಹೋಯಿತು. ಎಷ್ಟೇ ದೊಡ್ಡ ನಾಯಕರಾದರೂ, ಎಲ್ಲ ನಾಯಕತ್ವದ ಗುಣಗಳಿದ್ದರೂ ಸಿಟ್ಟನ್ನು ನಿಗ್ರಹಿಸದಿದ್ದರೆ, ತಕ್ಷಣದ ಪ್ರತಿಕ್ರಿಯೆಯ ಉದ್ವೇಗ ತಡೆದುಕೊಳ್ಳದಿದ್ದರೆ ಅದೊಂದು ದಿನ ಬಹುದೊಡ್ಡ ಅಪಾಯ ತಂದೊಡ್ಡುತ್ತದೆ. ಅಂತಹ ಪ್ರಕರಣಗಳನ್ನು ನಾವು ಸಾಕಷ್ಟು ಕಂಡಿದ್ದೇವೆಯಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>