<p>ಮೊನ್ನೆ ಒಬ್ಬರು, `ನಾನು ನಿವೃತ್ತನಾಗಿ ಇಪ್ಪತ್ತು ವರ್ಷವಾದರೂ ನನ್ನ ಪಿಂಚಣಿ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿಗಳಿಂದ ಹಿಡಿದು ಆಫೀಸಿನ ಜವಾನ್ವರೆಗೂ ಎಲ್ಲರ ಕೈಕಾಲು ಹಿಡಿದಿದ್ದೇನೆ. ಇನ್ನೂ ಇತ್ಯರ್ಥವಾಗಿಲ್ಲ, ನಾನು ಅಸಹಾಯಕನಾಗಿದ್ದೆೀನೆ~ ಎಂದು ಹೇಳುತ್ತಿದ್ದರು. <br /> <br /> ಇನ್ನೊಬ್ಬರು, `ನನ್ನ ಜಮೀನಿಗೆ ಬರಬೇಕಾದ ಪರಿಹಾರ ಧನ ನಾಲ್ಕು ವರ್ಷಗಳಿಂದ ಬಂದಿಲ್ಲ. ಮನೆಯ್ಲ್ಲಲಿ ಬದುಕೇ ಕಷ್ಟವಾಗಿದೆ. ಯಾರಿಗೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ~ ಎಂದು ಹಲುಬುತ್ತಿದ್ದರು. ಹೀಗೆ ಪ್ರತಿಯೊಬ್ಬರಲ್ಲೂ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ದುಡ್ಡು ಕೊಡದೇ ಯಾವ ಕೆಲಸವೂ ಆಗುವುದಿಲ್ಲ. <br /> <br /> ಕಣ್ಣಿಗೆ ಢಾಳಾಗಿ ಕಾಣುವಷ್ಟು ಭ್ರಷ್ಟರಾದ ಜನ ಆರಾಮವಾಗಿ ಹೊರಗೇ ಗೌರವ ಪಡೆಯುತ್ತ ಓಡಾಡುತ್ತಿದ್ದಾರೆ. ಪ್ರಾಮಾಣಿಕರಾದವರು ಒದ್ದಾಡುತ್ತಲೇ ಇದ್ದಾರೆ. ಯಾರನ್ನು ಕೇಳಿದರೂ ವ್ಯವಸ್ಥೆಯೇ ಹಾಗಿದೆ, ಯಾರಿಗೆ ಹೇಳುವುದು ಎಂದು ಅಸಹಾಯಕತೆ ವ್ಯಕ್ತಪಡಿಸುವಾಗ ಮಹಾಭಾರತದ ಪುಟ್ಟ ಪ್ರಸಂಗ ನೆನಪಾಯಿತು. <br /> <br /> ಚಕ್ರವರ್ತಿ ಜನಮೇಜಯ ಮಹಾಯಾಗವೊಂದನ್ನು ಮಾಡಲು ಯೋಜಿಸಿದ. ಎಲ್ಲ ತಯಾರಿ ನಡೆದು ಇನ್ನೇನು ಯಾಗ ಪ್ರಾರಂಭವಾಗಬೇಕು ಎನ್ನುವಾಗ ಸೇವಕರು ಯಾಗ ಮಂಟಪದಿಂದ ಸ್ವಲ್ಪ ದೂರದ್ಲ್ಲಲಿ ನಾಯಿ ಮರಿಯೊಂದು ಕುಳಿತಿರುವುದನ್ನು ನೋಡಿದರು.<br /> <br /> ಅದು ಯಾವ ತೊಂದರೆಯನ್ನು ಮಾಡದೇ, ಕೇವಲ ದೂರದಿಂದ ಎಲ್ಲವನ್ನೂ ನೋಡುತ್ತ ಕುಳಿತಿತ್ತು. ಯಾಗದ ಪಾವಿತ್ರ್ಯವನ್ನು ಕೆಡಿಸುವ ಯಾವ ಕೆಲಸವನ್ನೂ ದು ಮಾಡಿರಲಿಲ್ಲ.<br /> <br /> ಸೇವಕರು ನೋಡುತ್ತಿರುವಂತೆಯೇ ಯಾಗದ ಕೊನೆಕ್ಷಣದ ಸಿದ್ಧತೆಗಳನ್ನು ಗಮನಿಸಲು ಜನಮೇಜಯನ ತಮ್ಮಂದಿರಾದ ಶ್ರುತಸೇನ, ಉಗ್ರಸೇನ ಭೀಮರು ಅಲ್ಲಿಗೆ ಬಂದರು. ನಾಯಿಮರಿಯನ್ನು ಕಂಡು ಕೋಪ ಉಕ್ಕಿ ಅದನ್ನು ಹೊಡೆದು ದೂರಕ್ಕೆ ಅಟ್ಟಿಬಿಟ್ಟರು. <br /> <br /> ಈ ನಾಯಿಮರಿ ಸಾಮಾನ್ಯವಾದದ್ದಲ್ಲ. ಅದರ ತಾಯಿ ಸರಮೆ. ಅದು ದೇವಲೋಕದ ನಾಯಿ. ತನ್ನ ಮರಿಗೆ ಆದ ಅಪಮಾನ, ಪೆಟ್ಟುಗಳಿಂದ ಸಿಟ್ಟಾದ ಸರಮೆ, ಜನಮೇಜಯನ ಯಾಗ ಮಂಟಪಕ್ಕೆ ಬಂದಿತು.<br /> <br /> ಯಾವ ತಪ್ಪನ್ನೂ ಮಾಡದ ತನ್ನ ಮರಿಗೆ ಅಧಿಕಾರ ಮದದಿಂದ ಕುರುಡಾಗಿದ್ದ ಜನಮೇಜನ ತಮ್ಮಂದಿರು ಹೊಡೆದದ್ದೆೀಕೆ ಎಂದು ವಾದ ಮಾಡಿ ಚಕ್ರವರ್ತಿಯನ್ನು ಅಲ್ಲಿಗೆ ಬರಲು ಒತ್ತಾಯಿಸಿತು. <br /> <br /> ಯಾಗದಂಥ ಮಹಾಕಾರ್ಯದ್ಲ್ಲಲಿ ನಾಯಿಮರಿಗೆ ಹೊಡೆದ ಘಟನೆ ತೀರ ಅಲ್ಪವಾದದ್ದು ಎಂದು ಭಾವಿಸಿ ಜನಮೇಜಯನಾಗಲೀ, ಅವನ ತಮ್ಮಂದಿರಾಗಲೀ ಯಾವ ಉತ್ತರವನ್ನೂ ನೀಡಲು ಬರಲಿಲ್ಲ. <br /> <br /> ಸರಮೆಗೆ ಈ ಅಹಂಕಾರ ಇನ್ನೂ ಕೋಪ ತಂದಿತು. ಆಗ ಸರಮೆ, ಯಾವ ಕಾರಣವೂ ಇಲ್ಲದೇ ಮರಿಗೆ ಹಿಂಸೆ ನೀಡಿದ್ದೀರಿ. ನಿರಪರಾಧಿಯನ್ನು ಅಸಹಾಯತೆಗೆ ದೂಡಿದ ನೀವು ಶಾಪಕ್ಕೆ ಅರ್ಹರಾಗಿದ್ದೀರಿ. ಇನ್ನು ನಿಮ್ಮ ಮನೆತನದವರು ಯಾರ ಊಹೆಗೂ ನಿಲುಕದಷ್ಟು ಆಕಸ್ಮಿಕ ತೊಂದರೆಗೆ ಸಿಲುಕಿಕೊಳ್ಳುತ್ತೀರಿ ಎಂದಿತು.<br /> <br /> ಈ ಶಾಪದ ನುಡಿ ಜನಮೇಜನಿಗೆ ತಲುಪಿದಾಗ ಆತ ಓಡಿ ಬಂದು ಕ್ಷಮೆ ಕೇಳಿದ. ನಂತರ ಶಾಪ ವಿಮೋಚನೆಗೆ ಸರಮೆ ಪರಿಹಾರೋಪಾಯಗಳನ್ನು ತಿಳಿಸಿತು. ಚಕ್ರವರ್ತಿಯ ಕ್ಷಮೆ ಯಾಚನೆಯನ್ನು ಮನ್ನಿಸಿ ಅವರನ್ನು ಕ್ಷಮಿಸಿ ಮರಿಯನ್ನು ಕರೆದುಕೊಂಡು ಹೋಯಿತು. ಇದರಲ್ಲಿ ನನಗೆ ಆ ಕಾಲದ ಕೆಲವು ಸಂಗತಿಗಳು ಹೊಳೆದದ್ದು ಹೀಗೆ -<br /> <br /> 1. ಎಷ್ಟೇ ಎತ್ತರದ ಅಧಿಕಾರದಲ್ಲಿ ಇದ್ದವರಿಗೂ ನಾಯಿಮರಿಯಂತಹ ಪುಟ್ಟ ಪ್ರಾಣಿಯನ್ನು ಅನವಶ್ಯಕವಾಗಿ ಹಿಂಸಿಸುವ ಅಧಿಕಾರ ಇರಲಿಲ್ಲ. <br /> <br /> 2. ಒಂದು ಅಸಹಾಯಕ ನಾಯಿ, ಚಕ್ರವರ್ತಿಯನ್ನು ಕರೆಸಿ ಶಾಪಕೊಡುವಷ್ಟು ನೈತಿಕ ಸ್ಥೈರ್ಯ ಪಡೆದಿತ್ತು. <br /> <br /> 3.ನಾಯಿಯ ಶಾಪ ಕೂಡ ಚಕ್ರವರ್ತಿಯನ್ನು ಅಲುಗಾಡಿಸಿ ಕ್ಷಮೆ ಕೇಳಿಸುವಷ್ಟು ಪ್ರಬಲವಾಗಿತ್ತು.<br /> <br /> ಆ ಕಾಲದ ನಾಯಿಗೆ ದೊರಕಿದಷ್ಟು ಸ್ವಾತಂತ್ರ್ಯ, ಅಧಿಕಾರ, ಪ್ರಜೆಗಳ, ಪ್ರಜೆಗಳಿಗಾಗಿ, ಪ್ರಜೆಗಳಿಂದಲೇ ರಚಿತವಾದ ಪ್ರಜಾಪ್ರಭುತ್ವದ್ಲ್ಲಲಿ ಒಂದಂಶ ಬರುವುದಾದರೆ ಎಷ್ಟು ಚೆನ್ನ ಅಲ್ಲವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊನ್ನೆ ಒಬ್ಬರು, `ನಾನು ನಿವೃತ್ತನಾಗಿ ಇಪ್ಪತ್ತು ವರ್ಷವಾದರೂ ನನ್ನ ಪಿಂಚಣಿ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿಗಳಿಂದ ಹಿಡಿದು ಆಫೀಸಿನ ಜವಾನ್ವರೆಗೂ ಎಲ್ಲರ ಕೈಕಾಲು ಹಿಡಿದಿದ್ದೇನೆ. ಇನ್ನೂ ಇತ್ಯರ್ಥವಾಗಿಲ್ಲ, ನಾನು ಅಸಹಾಯಕನಾಗಿದ್ದೆೀನೆ~ ಎಂದು ಹೇಳುತ್ತಿದ್ದರು. <br /> <br /> ಇನ್ನೊಬ್ಬರು, `ನನ್ನ ಜಮೀನಿಗೆ ಬರಬೇಕಾದ ಪರಿಹಾರ ಧನ ನಾಲ್ಕು ವರ್ಷಗಳಿಂದ ಬಂದಿಲ್ಲ. ಮನೆಯ್ಲ್ಲಲಿ ಬದುಕೇ ಕಷ್ಟವಾಗಿದೆ. ಯಾರಿಗೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ~ ಎಂದು ಹಲುಬುತ್ತಿದ್ದರು. ಹೀಗೆ ಪ್ರತಿಯೊಬ್ಬರಲ್ಲೂ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ದುಡ್ಡು ಕೊಡದೇ ಯಾವ ಕೆಲಸವೂ ಆಗುವುದಿಲ್ಲ. <br /> <br /> ಕಣ್ಣಿಗೆ ಢಾಳಾಗಿ ಕಾಣುವಷ್ಟು ಭ್ರಷ್ಟರಾದ ಜನ ಆರಾಮವಾಗಿ ಹೊರಗೇ ಗೌರವ ಪಡೆಯುತ್ತ ಓಡಾಡುತ್ತಿದ್ದಾರೆ. ಪ್ರಾಮಾಣಿಕರಾದವರು ಒದ್ದಾಡುತ್ತಲೇ ಇದ್ದಾರೆ. ಯಾರನ್ನು ಕೇಳಿದರೂ ವ್ಯವಸ್ಥೆಯೇ ಹಾಗಿದೆ, ಯಾರಿಗೆ ಹೇಳುವುದು ಎಂದು ಅಸಹಾಯಕತೆ ವ್ಯಕ್ತಪಡಿಸುವಾಗ ಮಹಾಭಾರತದ ಪುಟ್ಟ ಪ್ರಸಂಗ ನೆನಪಾಯಿತು. <br /> <br /> ಚಕ್ರವರ್ತಿ ಜನಮೇಜಯ ಮಹಾಯಾಗವೊಂದನ್ನು ಮಾಡಲು ಯೋಜಿಸಿದ. ಎಲ್ಲ ತಯಾರಿ ನಡೆದು ಇನ್ನೇನು ಯಾಗ ಪ್ರಾರಂಭವಾಗಬೇಕು ಎನ್ನುವಾಗ ಸೇವಕರು ಯಾಗ ಮಂಟಪದಿಂದ ಸ್ವಲ್ಪ ದೂರದ್ಲ್ಲಲಿ ನಾಯಿ ಮರಿಯೊಂದು ಕುಳಿತಿರುವುದನ್ನು ನೋಡಿದರು.<br /> <br /> ಅದು ಯಾವ ತೊಂದರೆಯನ್ನು ಮಾಡದೇ, ಕೇವಲ ದೂರದಿಂದ ಎಲ್ಲವನ್ನೂ ನೋಡುತ್ತ ಕುಳಿತಿತ್ತು. ಯಾಗದ ಪಾವಿತ್ರ್ಯವನ್ನು ಕೆಡಿಸುವ ಯಾವ ಕೆಲಸವನ್ನೂ ದು ಮಾಡಿರಲಿಲ್ಲ.<br /> <br /> ಸೇವಕರು ನೋಡುತ್ತಿರುವಂತೆಯೇ ಯಾಗದ ಕೊನೆಕ್ಷಣದ ಸಿದ್ಧತೆಗಳನ್ನು ಗಮನಿಸಲು ಜನಮೇಜಯನ ತಮ್ಮಂದಿರಾದ ಶ್ರುತಸೇನ, ಉಗ್ರಸೇನ ಭೀಮರು ಅಲ್ಲಿಗೆ ಬಂದರು. ನಾಯಿಮರಿಯನ್ನು ಕಂಡು ಕೋಪ ಉಕ್ಕಿ ಅದನ್ನು ಹೊಡೆದು ದೂರಕ್ಕೆ ಅಟ್ಟಿಬಿಟ್ಟರು. <br /> <br /> ಈ ನಾಯಿಮರಿ ಸಾಮಾನ್ಯವಾದದ್ದಲ್ಲ. ಅದರ ತಾಯಿ ಸರಮೆ. ಅದು ದೇವಲೋಕದ ನಾಯಿ. ತನ್ನ ಮರಿಗೆ ಆದ ಅಪಮಾನ, ಪೆಟ್ಟುಗಳಿಂದ ಸಿಟ್ಟಾದ ಸರಮೆ, ಜನಮೇಜಯನ ಯಾಗ ಮಂಟಪಕ್ಕೆ ಬಂದಿತು.<br /> <br /> ಯಾವ ತಪ್ಪನ್ನೂ ಮಾಡದ ತನ್ನ ಮರಿಗೆ ಅಧಿಕಾರ ಮದದಿಂದ ಕುರುಡಾಗಿದ್ದ ಜನಮೇಜನ ತಮ್ಮಂದಿರು ಹೊಡೆದದ್ದೆೀಕೆ ಎಂದು ವಾದ ಮಾಡಿ ಚಕ್ರವರ್ತಿಯನ್ನು ಅಲ್ಲಿಗೆ ಬರಲು ಒತ್ತಾಯಿಸಿತು. <br /> <br /> ಯಾಗದಂಥ ಮಹಾಕಾರ್ಯದ್ಲ್ಲಲಿ ನಾಯಿಮರಿಗೆ ಹೊಡೆದ ಘಟನೆ ತೀರ ಅಲ್ಪವಾದದ್ದು ಎಂದು ಭಾವಿಸಿ ಜನಮೇಜಯನಾಗಲೀ, ಅವನ ತಮ್ಮಂದಿರಾಗಲೀ ಯಾವ ಉತ್ತರವನ್ನೂ ನೀಡಲು ಬರಲಿಲ್ಲ. <br /> <br /> ಸರಮೆಗೆ ಈ ಅಹಂಕಾರ ಇನ್ನೂ ಕೋಪ ತಂದಿತು. ಆಗ ಸರಮೆ, ಯಾವ ಕಾರಣವೂ ಇಲ್ಲದೇ ಮರಿಗೆ ಹಿಂಸೆ ನೀಡಿದ್ದೀರಿ. ನಿರಪರಾಧಿಯನ್ನು ಅಸಹಾಯತೆಗೆ ದೂಡಿದ ನೀವು ಶಾಪಕ್ಕೆ ಅರ್ಹರಾಗಿದ್ದೀರಿ. ಇನ್ನು ನಿಮ್ಮ ಮನೆತನದವರು ಯಾರ ಊಹೆಗೂ ನಿಲುಕದಷ್ಟು ಆಕಸ್ಮಿಕ ತೊಂದರೆಗೆ ಸಿಲುಕಿಕೊಳ್ಳುತ್ತೀರಿ ಎಂದಿತು.<br /> <br /> ಈ ಶಾಪದ ನುಡಿ ಜನಮೇಜನಿಗೆ ತಲುಪಿದಾಗ ಆತ ಓಡಿ ಬಂದು ಕ್ಷಮೆ ಕೇಳಿದ. ನಂತರ ಶಾಪ ವಿಮೋಚನೆಗೆ ಸರಮೆ ಪರಿಹಾರೋಪಾಯಗಳನ್ನು ತಿಳಿಸಿತು. ಚಕ್ರವರ್ತಿಯ ಕ್ಷಮೆ ಯಾಚನೆಯನ್ನು ಮನ್ನಿಸಿ ಅವರನ್ನು ಕ್ಷಮಿಸಿ ಮರಿಯನ್ನು ಕರೆದುಕೊಂಡು ಹೋಯಿತು. ಇದರಲ್ಲಿ ನನಗೆ ಆ ಕಾಲದ ಕೆಲವು ಸಂಗತಿಗಳು ಹೊಳೆದದ್ದು ಹೀಗೆ -<br /> <br /> 1. ಎಷ್ಟೇ ಎತ್ತರದ ಅಧಿಕಾರದಲ್ಲಿ ಇದ್ದವರಿಗೂ ನಾಯಿಮರಿಯಂತಹ ಪುಟ್ಟ ಪ್ರಾಣಿಯನ್ನು ಅನವಶ್ಯಕವಾಗಿ ಹಿಂಸಿಸುವ ಅಧಿಕಾರ ಇರಲಿಲ್ಲ. <br /> <br /> 2. ಒಂದು ಅಸಹಾಯಕ ನಾಯಿ, ಚಕ್ರವರ್ತಿಯನ್ನು ಕರೆಸಿ ಶಾಪಕೊಡುವಷ್ಟು ನೈತಿಕ ಸ್ಥೈರ್ಯ ಪಡೆದಿತ್ತು. <br /> <br /> 3.ನಾಯಿಯ ಶಾಪ ಕೂಡ ಚಕ್ರವರ್ತಿಯನ್ನು ಅಲುಗಾಡಿಸಿ ಕ್ಷಮೆ ಕೇಳಿಸುವಷ್ಟು ಪ್ರಬಲವಾಗಿತ್ತು.<br /> <br /> ಆ ಕಾಲದ ನಾಯಿಗೆ ದೊರಕಿದಷ್ಟು ಸ್ವಾತಂತ್ರ್ಯ, ಅಧಿಕಾರ, ಪ್ರಜೆಗಳ, ಪ್ರಜೆಗಳಿಗಾಗಿ, ಪ್ರಜೆಗಳಿಂದಲೇ ರಚಿತವಾದ ಪ್ರಜಾಪ್ರಭುತ್ವದ್ಲ್ಲಲಿ ಒಂದಂಶ ಬರುವುದಾದರೆ ಎಷ್ಟು ಚೆನ್ನ ಅಲ್ಲವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>