<p>ದೇವತೆಗಳ ದಯೆಯಿಂದ ಮಕ್ಕಳು ಆರೋಗ್ಯವಂತರಾಗಿಯೇ ಇದ್ದರು. ಅದಲ್ಲದೆ ಆ ಮುದುಕ ಬ್ರಾಹ್ಮಣನ ತಲೆಯ ಮೇಲೂ ದೇವತೆಗಳು ಏರಿದ್ದರು. ಹೀಗಾಗಿ ಆತ ತನ್ನ ಊರಾದ ಕಳಿಂಗ ದೇಶವನ್ನು ತಲುಪುವುದರ ಬದಲಾಗಿ, ಜೆತುತ್ತರ ನಗರಕ್ಕೆ ಬಂದುಬಿಟ್ಟ. ಆ ದಿನ ಬೆಳಗ್ಗಿನ ಮುಹೂರ್ತದಲ್ಲಿ ರಾಜನಾದ ಸಿವಿ ಚಕ್ರವರ್ತಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ರಾಜ ತನ್ನ ದರ್ಬಾರಿನಲ್ಲಿ ಕುಳಿತಿದ್ದ. ಆಗ ಮನುಷ್ಯನೊಬ್ಬ ಮುಂದೆ ಬಂದು ಎರಡು ಕಮಲದ ಹೂವುಗಳನ್ನು ತಂದು ಕೊಟ್ಟ. ಅದೇಕೋ, ಅವುಗಳ ಮೇಲೆ ತುಂಬ ಪ್ರೀತಿ ಉಕ್ಕಿ ಬಂದು ಆ ಹೂವುಗಳನ್ನು ತನ್ನ ಎರಡೂ ಕಿವಿಗಳ ಮೇಲೆ ಸಿಕ್ಕಿಸಿಕೊಂಡ. ಹಾಗೆ ಸಿಕ್ಕಿಸಿಕೊಳ್ಳುತ್ತಿರುವಾಗ ಕಮಲದ ರೇಣುಗಳು ಅವನ ಹೊಟ್ಟೆಯ ಮೇಲೆ ಉದುರಿದವು. ಆಗ ಅವನಿಗೆ ಎಚ್ಚರವಾಯಿತು. ತನ್ನ ದರ್ಬಾರಿನಲ್ಲಿದ್ದ ಜ್ಯೋತಿಷಿಗಳನ್ನು ಕರೆದು ಈ ಕನಸಿನ ಅರ್ಥವನ್ನು ಕೇಳಿದ. ಅವರು ಕನಸನ್ನು ಅರ್ಥೈಸಿಕೊಂಡು ಹೇಳಿದರು, ‘ಪ್ರಭೂ, ಇದೊಂದು ಶುಭ ಶಕುನ. ಬಹಳ ದಿನಗಳಿಂದ ನಿಮ್ಮನ್ನು ಅಗಲಿಹೋಗಿದ್ದ ನಿಮ್ಮ ರಕ್ತಸಂಬಂಧಿಗಳು ಮರಳಿ ಬಂದು ತಮ್ಮನ್ನು ಕಾಣುತ್ತಾರೆ’.</p>.<p>ದಿನದಂತೆ, ಮಧ್ಯಾಹ್ನ ರಾಜ ಬಂದು ದರ್ಬಾರಿನಲ್ಲಿ ಕುಳಿತ. ಯಾವ ದೇವತೆಗಳು ಮುದುಕ ಬ್ರಾಹ್ಮಣನನ್ನು ಜೆತುತ್ತರ ನಗರಕ್ಕೆ ಕರೆದು ತಂದಿದ್ದರೋ, ಅವರು ಆ ಮೂವರನ್ನು ರಾಜಾಂಗಣಕ್ಕೇ ಕರೆದುಕೊಂಡು ಬಿಟ್ಟರು. ರಾಜನ ದೃಷ್ಟಿ ಮಕ್ಕಳ ಮೇಲೆ ಬಿತ್ತು. ಆತ ಅವರನ್ನು ನೋಡಿ ಹೇಳಿದ, ‘ಅಕ್ಕಸಾಲಿಗನ ಬೆಂಕಿಯಿಂದ ಹಾದು ಬಂದ ಬಂಗಾರದಂತೆ, ಪುಟಕ್ಕಿಟ್ಟ ಚಿನ್ನದಂತೆ ಈ ಮಕ್ಕಳ ಮುಖಗಳು ಹೊಳೆಯುತ್ತಿವೆ. ಇಬ್ಬರೂ ಮಕ್ಕಳ ಅಂಗ-ಪ್ರತ್ಯಂಗಗಳು ಒಂದೇ ತೆರನದವಾಗಿವೆ. ಇಬ್ಬರ ಲಕ್ಷಣಗಳೂ ಒಂದೇ ಆಗಿವೆ. ಗಮನಿಸಿ ನೋಡಿದರೆ ಹುಡುಗ ಜಾಲಿಕುಮಾರನಂತೆ ಮತ್ತು ಹುಡುಗಿ ಕೃಷ್ಣಾಜಿನಳಂತೆ ಕಾಣುತ್ತಾರೆ. ಸ್ವರ್ಗದಲ್ಲಿರುವ ದೇವತೆಗಳಂತೆ ಹೊಳೆಯುತ್ತಿದ್ದಾರೆ. ಗುಹೆಯಿಂದ ಸಕಲ ಶಕ್ತಿಗಳೊಂದಿಗೆ ಅಬ್ಬರಿಸಿ ಹೊರಬರುತ್ತಿರುವ ಸಿಂಹಗಳಂತೆ ಆಕರ್ಷಕರಾಗಿದ್ದಾರೆ’.</p>.<p>ನಂತರ ಅಮಾತ್ಯರಿಗೆ ಹೇಳಿ ಮಕ್ಕಳನ್ನು ಹಾಗೂ ಮುದುಕನನ್ನು ಹತ್ತಿರಕ್ಕೆ ಕರೆಸಿದ. ಮುದುಕನನ್ನು ಕೇಳಿದ, ‘ಅಯ್ಯಾ, ಈ ಮಕ್ಕಳು ಯಾರು? ನೀನು ಬಂದದ್ದು ಎಲ್ಲಿಂದ?’. ಮುದುಕ ಹೇಳಿದ, ‘ಸಂಜಯ ಮಹಾರಾಜಾ, ನನಗೆ ಒಬ್ಬ ಮಹಾತ್ಮನಿಂದ ಈ ಮಕ್ಕಳು ದೊರೆತಿವೆ. ಅವರಿಬ್ಬರೂ ನನ್ನ ಜೊತೆಗೇ ಇದ್ದು ಹದಿನೈದು ದಿನಗಳಾದವು’. ‘ಯಾವನು ಆ ಮಹಾತ್ಮ ನಿನಗೆ ಮಕ್ಕಳನ್ನು ಕೊಟ್ಟವನು? ಈ ಮಕ್ಕಳು ಅವನ ಪುತ್ರ, ಪುತ್ರಿಯರೆ? ಯಾರಾದರೂ ಪುತ್ರ, ಪುತ್ರಿಯರನ್ನು ದಾನ ಮಾಡುತ್ತಾರೆಯೆ? ದಯವಿಟ್ಟು ಅದನ್ನು ಹೇಳಿ ನನ್ನಲ್ಲಿ ಶ್ರದ್ಧೆಯನ್ನುಂಟು ಮಾಡು. ಯಾಕೆಂದರೆ ಪುತ್ರದಾನ ಅತ್ಯಂತ ಕಷ್ಟವಾದದ್ದು ಮತ್ತು ಶ್ರೇಷ್ಠವಾದದ್ದು’ ಎಂದು ಕೇಳಿದ ರಾಜ. ಆಗ ಆ ಮುದುಕ ಬಾಯಿಬಿಟ್ಟ. ‘ಮಹಾರಾಜಾ, ಪ್ರಾಣಿಗಳಿಗೆ ಈ ಭೂಮಿಯೇ ಆಧಾರವಾಗಿರುವಂತೆ, ಎಲ್ಲ ಯಾಚಕರಿಗೂ ಆಧಾರನಾಗಿರುವ ವೆಸ್ಸಂತರ ಬೋಧಿಸತ್ವ ಕಾಡಿನಲ್ಲಿರುವಾಗ ಈ ಮಕ್ಕಳನ್ನು ನನಗೆ ದಾನವಾಗಿ ಕೊಟ್ಟುಬಿಟ್ಟ. ಎಲ್ಲ ನದಿಗಳ ನೀರಿಗೆ ಆಧಾರವಾದ ಸಮುದ್ರದಂತೆ, ಬೇಡುವವರಿಗೆ ಆಶ್ರಯಸ್ಥಾನವಾದ ವೆಸ್ಸಂತರ ಬೋಧಿಸತ್ವ ತನ್ನ ಸ್ವಂತ ಮಕ್ಕಳನ್ನು ನನಗೆ ದಾನವಾಗಿ ಕೊಟ್ಟಿದ್ದಾನೆ’.</p>.<p>ಈ ಮಾತನ್ನು ಕೇಳಿ ಮಹಾರಾಜ ಸಂಜಯ ಬೆರಗಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವತೆಗಳ ದಯೆಯಿಂದ ಮಕ್ಕಳು ಆರೋಗ್ಯವಂತರಾಗಿಯೇ ಇದ್ದರು. ಅದಲ್ಲದೆ ಆ ಮುದುಕ ಬ್ರಾಹ್ಮಣನ ತಲೆಯ ಮೇಲೂ ದೇವತೆಗಳು ಏರಿದ್ದರು. ಹೀಗಾಗಿ ಆತ ತನ್ನ ಊರಾದ ಕಳಿಂಗ ದೇಶವನ್ನು ತಲುಪುವುದರ ಬದಲಾಗಿ, ಜೆತುತ್ತರ ನಗರಕ್ಕೆ ಬಂದುಬಿಟ್ಟ. ಆ ದಿನ ಬೆಳಗ್ಗಿನ ಮುಹೂರ್ತದಲ್ಲಿ ರಾಜನಾದ ಸಿವಿ ಚಕ್ರವರ್ತಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ರಾಜ ತನ್ನ ದರ್ಬಾರಿನಲ್ಲಿ ಕುಳಿತಿದ್ದ. ಆಗ ಮನುಷ್ಯನೊಬ್ಬ ಮುಂದೆ ಬಂದು ಎರಡು ಕಮಲದ ಹೂವುಗಳನ್ನು ತಂದು ಕೊಟ್ಟ. ಅದೇಕೋ, ಅವುಗಳ ಮೇಲೆ ತುಂಬ ಪ್ರೀತಿ ಉಕ್ಕಿ ಬಂದು ಆ ಹೂವುಗಳನ್ನು ತನ್ನ ಎರಡೂ ಕಿವಿಗಳ ಮೇಲೆ ಸಿಕ್ಕಿಸಿಕೊಂಡ. ಹಾಗೆ ಸಿಕ್ಕಿಸಿಕೊಳ್ಳುತ್ತಿರುವಾಗ ಕಮಲದ ರೇಣುಗಳು ಅವನ ಹೊಟ್ಟೆಯ ಮೇಲೆ ಉದುರಿದವು. ಆಗ ಅವನಿಗೆ ಎಚ್ಚರವಾಯಿತು. ತನ್ನ ದರ್ಬಾರಿನಲ್ಲಿದ್ದ ಜ್ಯೋತಿಷಿಗಳನ್ನು ಕರೆದು ಈ ಕನಸಿನ ಅರ್ಥವನ್ನು ಕೇಳಿದ. ಅವರು ಕನಸನ್ನು ಅರ್ಥೈಸಿಕೊಂಡು ಹೇಳಿದರು, ‘ಪ್ರಭೂ, ಇದೊಂದು ಶುಭ ಶಕುನ. ಬಹಳ ದಿನಗಳಿಂದ ನಿಮ್ಮನ್ನು ಅಗಲಿಹೋಗಿದ್ದ ನಿಮ್ಮ ರಕ್ತಸಂಬಂಧಿಗಳು ಮರಳಿ ಬಂದು ತಮ್ಮನ್ನು ಕಾಣುತ್ತಾರೆ’.</p>.<p>ದಿನದಂತೆ, ಮಧ್ಯಾಹ್ನ ರಾಜ ಬಂದು ದರ್ಬಾರಿನಲ್ಲಿ ಕುಳಿತ. ಯಾವ ದೇವತೆಗಳು ಮುದುಕ ಬ್ರಾಹ್ಮಣನನ್ನು ಜೆತುತ್ತರ ನಗರಕ್ಕೆ ಕರೆದು ತಂದಿದ್ದರೋ, ಅವರು ಆ ಮೂವರನ್ನು ರಾಜಾಂಗಣಕ್ಕೇ ಕರೆದುಕೊಂಡು ಬಿಟ್ಟರು. ರಾಜನ ದೃಷ್ಟಿ ಮಕ್ಕಳ ಮೇಲೆ ಬಿತ್ತು. ಆತ ಅವರನ್ನು ನೋಡಿ ಹೇಳಿದ, ‘ಅಕ್ಕಸಾಲಿಗನ ಬೆಂಕಿಯಿಂದ ಹಾದು ಬಂದ ಬಂಗಾರದಂತೆ, ಪುಟಕ್ಕಿಟ್ಟ ಚಿನ್ನದಂತೆ ಈ ಮಕ್ಕಳ ಮುಖಗಳು ಹೊಳೆಯುತ್ತಿವೆ. ಇಬ್ಬರೂ ಮಕ್ಕಳ ಅಂಗ-ಪ್ರತ್ಯಂಗಗಳು ಒಂದೇ ತೆರನದವಾಗಿವೆ. ಇಬ್ಬರ ಲಕ್ಷಣಗಳೂ ಒಂದೇ ಆಗಿವೆ. ಗಮನಿಸಿ ನೋಡಿದರೆ ಹುಡುಗ ಜಾಲಿಕುಮಾರನಂತೆ ಮತ್ತು ಹುಡುಗಿ ಕೃಷ್ಣಾಜಿನಳಂತೆ ಕಾಣುತ್ತಾರೆ. ಸ್ವರ್ಗದಲ್ಲಿರುವ ದೇವತೆಗಳಂತೆ ಹೊಳೆಯುತ್ತಿದ್ದಾರೆ. ಗುಹೆಯಿಂದ ಸಕಲ ಶಕ್ತಿಗಳೊಂದಿಗೆ ಅಬ್ಬರಿಸಿ ಹೊರಬರುತ್ತಿರುವ ಸಿಂಹಗಳಂತೆ ಆಕರ್ಷಕರಾಗಿದ್ದಾರೆ’.</p>.<p>ನಂತರ ಅಮಾತ್ಯರಿಗೆ ಹೇಳಿ ಮಕ್ಕಳನ್ನು ಹಾಗೂ ಮುದುಕನನ್ನು ಹತ್ತಿರಕ್ಕೆ ಕರೆಸಿದ. ಮುದುಕನನ್ನು ಕೇಳಿದ, ‘ಅಯ್ಯಾ, ಈ ಮಕ್ಕಳು ಯಾರು? ನೀನು ಬಂದದ್ದು ಎಲ್ಲಿಂದ?’. ಮುದುಕ ಹೇಳಿದ, ‘ಸಂಜಯ ಮಹಾರಾಜಾ, ನನಗೆ ಒಬ್ಬ ಮಹಾತ್ಮನಿಂದ ಈ ಮಕ್ಕಳು ದೊರೆತಿವೆ. ಅವರಿಬ್ಬರೂ ನನ್ನ ಜೊತೆಗೇ ಇದ್ದು ಹದಿನೈದು ದಿನಗಳಾದವು’. ‘ಯಾವನು ಆ ಮಹಾತ್ಮ ನಿನಗೆ ಮಕ್ಕಳನ್ನು ಕೊಟ್ಟವನು? ಈ ಮಕ್ಕಳು ಅವನ ಪುತ್ರ, ಪುತ್ರಿಯರೆ? ಯಾರಾದರೂ ಪುತ್ರ, ಪುತ್ರಿಯರನ್ನು ದಾನ ಮಾಡುತ್ತಾರೆಯೆ? ದಯವಿಟ್ಟು ಅದನ್ನು ಹೇಳಿ ನನ್ನಲ್ಲಿ ಶ್ರದ್ಧೆಯನ್ನುಂಟು ಮಾಡು. ಯಾಕೆಂದರೆ ಪುತ್ರದಾನ ಅತ್ಯಂತ ಕಷ್ಟವಾದದ್ದು ಮತ್ತು ಶ್ರೇಷ್ಠವಾದದ್ದು’ ಎಂದು ಕೇಳಿದ ರಾಜ. ಆಗ ಆ ಮುದುಕ ಬಾಯಿಬಿಟ್ಟ. ‘ಮಹಾರಾಜಾ, ಪ್ರಾಣಿಗಳಿಗೆ ಈ ಭೂಮಿಯೇ ಆಧಾರವಾಗಿರುವಂತೆ, ಎಲ್ಲ ಯಾಚಕರಿಗೂ ಆಧಾರನಾಗಿರುವ ವೆಸ್ಸಂತರ ಬೋಧಿಸತ್ವ ಕಾಡಿನಲ್ಲಿರುವಾಗ ಈ ಮಕ್ಕಳನ್ನು ನನಗೆ ದಾನವಾಗಿ ಕೊಟ್ಟುಬಿಟ್ಟ. ಎಲ್ಲ ನದಿಗಳ ನೀರಿಗೆ ಆಧಾರವಾದ ಸಮುದ್ರದಂತೆ, ಬೇಡುವವರಿಗೆ ಆಶ್ರಯಸ್ಥಾನವಾದ ವೆಸ್ಸಂತರ ಬೋಧಿಸತ್ವ ತನ್ನ ಸ್ವಂತ ಮಕ್ಕಳನ್ನು ನನಗೆ ದಾನವಾಗಿ ಕೊಟ್ಟಿದ್ದಾನೆ’.</p>.<p>ಈ ಮಾತನ್ನು ಕೇಳಿ ಮಹಾರಾಜ ಸಂಜಯ ಬೆರಗಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>