<p><span style="color:#B22222;"><strong>ಖಲಃ ಕರೋತಿ ದುರ್ವೃತ್ತಂ ನೂನಂ ಫಲತಿ ಸಾಧುಷು ।</strong></span><br /><span style="color:#B22222;"><strong>ದಶಾನನೋsಹರತ್ ಸೀತಾಂ ಬಂಧನಂ ತು ಮಹೋದಧೇಃ ।।</strong></span></p>.<p><strong>ಇದರ ತಾತ್ಪರ್ಯ ಹೀಗೆ:</strong><br />‘ಕೆಟ್ಟ ದಾರಿಯಲ್ಲಿ ನಡೆಯುವುದು ದುಷ್ಟರು; ಆದರೆ ಅದರ ಪರಿಣಾಮವನ್ನು ಅನುಭವಿಸುವವರು ಸಜ್ಜನರು. ಇದು ಹೇಗೆಂದರೆ, ಸೀತೆಯನ್ನು ಅಪಹರಿಸಿದ್ದು ರಾವಣ; ಆದರೆ ಬಂಧನವನ್ನು ಅನುಭವಿಸಿದ್ದು ಮಹಾಸಾಗರ.‘</p>.<p>ಈಗಿನ ಸಂದರ್ಭದಲ್ಲಿ ಹಲವರು ಮನೆಯಲ್ಲಿ ಶಿಸ್ತುಬದ್ಧವಾಗಿರುತ್ತಾರೆ; ಅನವಶ್ಯಕವಾದ ಓಡಾಟವನ್ನೂ ಮಾಡುವುದಿಲ್ಲ; ಅಕಸ್ಮಾತ್ ಹೊರಗೆ ಹೋಗಬೇಕಾಗಿಬಂದರೂ ಎಚ್ಚರಿಕೆಯಿಂದಲೇ ಇರುತ್ತಾರೆ. ಆದರೂ ಯಾರೋ ಒಬ್ಬ ಅಸಡ್ಡಾಳನ ಕಾರಣದಿಂದ ಕೋವಿಡ್ನ ಸೋಂಕು ಅಂಟುತ್ತದೆ. ಒಬ್ಬ ದುಷ್ಟನಿಂದ ಹತ್ತಾರು ಜನಕ್ಕೆ ತೊಂದರೆ!</p>.<p>ಇಂಥ ಹಲವು ಪ್ರಸಂಗಗಳನ್ನು ನಿತ್ಯಜೀವನದಲ್ಲಿ ನೋಡುತ್ತಲೇ ಇರುತ್ತೇವೆ.</p>.<p>ಒಬ್ಬ ವ್ಯಕ್ತಿ ಫುಟ್ಪಾತ್ ಮೇಲೆ, ಎಲ್ಲ ರೀತಿಯ ಸುರಕ್ಷಾಕ್ರಮಗಳನ್ನು ಅನುಸರಿಸಿಕೊಂಡೇ, ನಡೆದುಹೋಗುತ್ತಿರುತ್ತಾರೆ. ಆದರೆ ಯಾರೋ ಒಬ್ಬ ದುರಹಂಕಾರಿ, ಅಯೋಗ್ಯ ಫುಟ್ಪಾತ್ನ ಮೇಲೇಯೇ ವಾಹನವನ್ನು ಚಲಾಯಿಸಿ, ಅಲ್ಲಿ ಅಪಘಾತವನ್ನು ಉಂಟುಮಾಡುತ್ತಾನೆ. ಒಬ್ಬ ದುಷ್ಟನಿಂದ ಹಲವು ಜನರು ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ.</p>.<p>ಸುಭಾಷಿತ ಹೇಳುತ್ತಿರುವುದು ಇಂಥ ಸಂದರ್ಭಗಳನ್ನು ಕುರಿತು. ದುಷ್ಟರು ಮಾಡುವ ಅಯೋಗ್ಯದ ಪರಿಣಾಮವನ್ನು ಸಜ್ಜನರು ಅನುಭವಿಸಬೇಕಾಗುತ್ತದೆ. ಸುಭಾಷಿತ ಇಲ್ಲಿ ನೀಡಿರುವ ಉದಾಹರಣೆಯೂ ಸೊಗಸಾಗಿದೆ: ಸೀತೆಯನ್ನು ಅಪಹರಿಸಿದ್ದು ದುಷ್ಟನಾದ ರಾವಣ. ಆದರೆ ಇದರ ಪರಿಣಾಮವಾಗಿ ಬಂಧನವನ್ನು ಅನುಭವಿಸಿದ್ದು ಸಮುದ್ರರಾಜ. ಲಂಕೆಯನ್ನು ತಲಪಲು ರಾಮಸೇನೆಯು ಸಮುದ್ರವನ್ನು ದಾಟಬೇಕಿತ್ತು. ಆದರೆ ಹೇಗೆ ದಾಟುವುದು? ಸಮುದ್ರಕ್ಕೆ ಬಂಧಿಸಿ, ಎಂದರೆ ಸೇತುವೆಯನ್ನು ಕಟ್ಟಬೇಕಾಯಿತು. ಹೀಗೆ ಸ್ವತಂತ್ರವಾಗಿದ್ದ, ಜೀವಿಗಳಿಗೆ ಉಪಕಾರಿಯಾಗಿದ್ದ ಸಮುದ್ರವೇ ಬಂಧನಕ್ಕೆ ಒಳಪಡಬೇಕಾಯಿತು.</p>.<p>ನಮ್ಮ ಜೀವನದಲ್ಲಿಯ ಇನ್ನೊಂದು ಉದಾಹರಣೆಯನ್ನೂ ಇಲ್ಲಿ ನೋಡಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳು ಮಾಡುವ ಅಯೋಗ್ಯಕಾರ್ಯಗಳ ಪರಿಣಾಮವಾಗಿ ಹೆತ್ತವರು ಅಪಮಾನವನ್ನು ಅನುಭವಿಸಬೇಕಾಗುತ್ತದೆ, ಅಲ್ಲವೆ?</p>.<p>ಹೀಗಾಗಿಯೇ ದುಷ್ಟರು ಯಾರೇ ಆಗಿದ್ದರೂ – ನಮ್ಮ ಮಕ್ಕಳು, ಬಂಧುಗಳು, ಸ್ನೇಹಿತರು, ಪಕ್ಷದವರು – ಯಾರೇ ಆಗಿದ್ದರೂ, ಅವರು ದುಷ್ಟರೇ ಹೌದು. ಅವರನ್ನು ತೊರೆಯದ ಹೊರತು ನಮಗೆ ಅಪಾಯ ತಪ್ಪಿದ್ದಲ್ಲ. ಈ ವಿವೇಕವನ್ನು ಈ ಪದ್ಯ ಸೊಗಸಾಗಿ ಹೇಳಿದೆ:</p>.<p><span style="color:#B22222;"><strong>ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |</strong></span><br /><span style="color:#B22222;"><strong>ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ||</strong></span></p>.<p>’ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗಮಾಡಬೇಕು; ಗ್ರಾಮದ ಹಿತಕ್ಕಾಗಿ ಕುಲವನ್ನೂ, ರಾಷ್ಟ್ರದ ಹಿತಕ್ಕಾಗಿ ಗ್ರಾಮವನ್ನೂ ತ್ಯಾಗಮಾಡಬೇಕು; ಕೊನೆಗೆ, ತನ್ನ ಹಿತಕ್ಕಾಗಿ ಈ ಭೂಮಿಯನ್ನೇ ತೊರೆಯುವಂಥ ಸ್ಥಿತಿ ಎದುರಾದರೆ ಆಗ ಈ ಪೃಥ್ವಿಯನ್ನೇ ತ್ಯಾಗಮಾಡಬೇಕು‘ ಎಂದು ಹೇಳುತ್ತಿದೆ, ಈ ಸುಭಾಷಿತ.</p>.<p>ರಾವಣನಿಗೆ ವಿಭಿಷಣ ಇಂಥದೇ ಬುದ್ಧಿವಾದವನ್ನು ಹೇಳುತ್ತಾನೆ. ’ನಿನ್ನ ದುಷ್ಟಕಾರ್ಯದಿಂದ ಕುಲವೇ ನಾಶವಾಗುತ್ತದೆ‘ ಎಂದು ಎಚ್ಚರಿಸುತ್ತಾನೆ. ಆದರೆ ಅವನು ಕೇಳುವುದಿಲ್ಲ. ದುರ್ಯೋಧನನಿಗೂ ಇಂಥದೇ ಉಪದೇಶ ಸಿಕ್ಕುತ್ತದೆ. ಆದರೆ ಅವನೂ ಕೇಳುವುದಿಲ್ಲ. ಕೊನೆಗೆ ರಾಕ್ಷಸಕುಲವೇ ನಾಶವಾಗುವಂಥ ಸ್ಥಿತಿ ಎದುರಾಗುತ್ತದೆ; ಕೌರವರಿಗೂ ಇಂಥದೇ ಸ್ಥಿತಿ ಒದಗುತ್ತದೆ.</p>.<p>ಹೀಗಾಗಿ ಮಕ್ಕಳು ದುಷ್ಟರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಲಕ–ಪೋಷಕರ ಮೇಲಿದೆ; ಪ್ರಜೆಗಳು ದುಷ್ಟರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮನ್ನು ನಾವು ಸದಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಿರಬೇಕು; ದುಷ್ಟತನ ನಮ್ಮ ಹತ್ತಿರ ಬರದಂತೆ ಎಚ್ಚರ ವಹಿಸಬೇಕು. ನಮ್ಮ ಒಬ್ಬರ ದುಷ್ಟತನದಿಂದ ಇಡಿಯ ಸಮಾಜವೇ ಸಂಕಷ್ಟಕ್ಕೆ ಒಳಗಾಗುವಂಥ ಸ್ಥಿತಿ ಎದುರಾಗಬಹುದು. ಎಚ್ಚರದಿಂದ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="color:#B22222;"><strong>ಖಲಃ ಕರೋತಿ ದುರ್ವೃತ್ತಂ ನೂನಂ ಫಲತಿ ಸಾಧುಷು ।</strong></span><br /><span style="color:#B22222;"><strong>ದಶಾನನೋsಹರತ್ ಸೀತಾಂ ಬಂಧನಂ ತು ಮಹೋದಧೇಃ ।।</strong></span></p>.<p><strong>ಇದರ ತಾತ್ಪರ್ಯ ಹೀಗೆ:</strong><br />‘ಕೆಟ್ಟ ದಾರಿಯಲ್ಲಿ ನಡೆಯುವುದು ದುಷ್ಟರು; ಆದರೆ ಅದರ ಪರಿಣಾಮವನ್ನು ಅನುಭವಿಸುವವರು ಸಜ್ಜನರು. ಇದು ಹೇಗೆಂದರೆ, ಸೀತೆಯನ್ನು ಅಪಹರಿಸಿದ್ದು ರಾವಣ; ಆದರೆ ಬಂಧನವನ್ನು ಅನುಭವಿಸಿದ್ದು ಮಹಾಸಾಗರ.‘</p>.<p>ಈಗಿನ ಸಂದರ್ಭದಲ್ಲಿ ಹಲವರು ಮನೆಯಲ್ಲಿ ಶಿಸ್ತುಬದ್ಧವಾಗಿರುತ್ತಾರೆ; ಅನವಶ್ಯಕವಾದ ಓಡಾಟವನ್ನೂ ಮಾಡುವುದಿಲ್ಲ; ಅಕಸ್ಮಾತ್ ಹೊರಗೆ ಹೋಗಬೇಕಾಗಿಬಂದರೂ ಎಚ್ಚರಿಕೆಯಿಂದಲೇ ಇರುತ್ತಾರೆ. ಆದರೂ ಯಾರೋ ಒಬ್ಬ ಅಸಡ್ಡಾಳನ ಕಾರಣದಿಂದ ಕೋವಿಡ್ನ ಸೋಂಕು ಅಂಟುತ್ತದೆ. ಒಬ್ಬ ದುಷ್ಟನಿಂದ ಹತ್ತಾರು ಜನಕ್ಕೆ ತೊಂದರೆ!</p>.<p>ಇಂಥ ಹಲವು ಪ್ರಸಂಗಗಳನ್ನು ನಿತ್ಯಜೀವನದಲ್ಲಿ ನೋಡುತ್ತಲೇ ಇರುತ್ತೇವೆ.</p>.<p>ಒಬ್ಬ ವ್ಯಕ್ತಿ ಫುಟ್ಪಾತ್ ಮೇಲೆ, ಎಲ್ಲ ರೀತಿಯ ಸುರಕ್ಷಾಕ್ರಮಗಳನ್ನು ಅನುಸರಿಸಿಕೊಂಡೇ, ನಡೆದುಹೋಗುತ್ತಿರುತ್ತಾರೆ. ಆದರೆ ಯಾರೋ ಒಬ್ಬ ದುರಹಂಕಾರಿ, ಅಯೋಗ್ಯ ಫುಟ್ಪಾತ್ನ ಮೇಲೇಯೇ ವಾಹನವನ್ನು ಚಲಾಯಿಸಿ, ಅಲ್ಲಿ ಅಪಘಾತವನ್ನು ಉಂಟುಮಾಡುತ್ತಾನೆ. ಒಬ್ಬ ದುಷ್ಟನಿಂದ ಹಲವು ಜನರು ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ.</p>.<p>ಸುಭಾಷಿತ ಹೇಳುತ್ತಿರುವುದು ಇಂಥ ಸಂದರ್ಭಗಳನ್ನು ಕುರಿತು. ದುಷ್ಟರು ಮಾಡುವ ಅಯೋಗ್ಯದ ಪರಿಣಾಮವನ್ನು ಸಜ್ಜನರು ಅನುಭವಿಸಬೇಕಾಗುತ್ತದೆ. ಸುಭಾಷಿತ ಇಲ್ಲಿ ನೀಡಿರುವ ಉದಾಹರಣೆಯೂ ಸೊಗಸಾಗಿದೆ: ಸೀತೆಯನ್ನು ಅಪಹರಿಸಿದ್ದು ದುಷ್ಟನಾದ ರಾವಣ. ಆದರೆ ಇದರ ಪರಿಣಾಮವಾಗಿ ಬಂಧನವನ್ನು ಅನುಭವಿಸಿದ್ದು ಸಮುದ್ರರಾಜ. ಲಂಕೆಯನ್ನು ತಲಪಲು ರಾಮಸೇನೆಯು ಸಮುದ್ರವನ್ನು ದಾಟಬೇಕಿತ್ತು. ಆದರೆ ಹೇಗೆ ದಾಟುವುದು? ಸಮುದ್ರಕ್ಕೆ ಬಂಧಿಸಿ, ಎಂದರೆ ಸೇತುವೆಯನ್ನು ಕಟ್ಟಬೇಕಾಯಿತು. ಹೀಗೆ ಸ್ವತಂತ್ರವಾಗಿದ್ದ, ಜೀವಿಗಳಿಗೆ ಉಪಕಾರಿಯಾಗಿದ್ದ ಸಮುದ್ರವೇ ಬಂಧನಕ್ಕೆ ಒಳಪಡಬೇಕಾಯಿತು.</p>.<p>ನಮ್ಮ ಜೀವನದಲ್ಲಿಯ ಇನ್ನೊಂದು ಉದಾಹರಣೆಯನ್ನೂ ಇಲ್ಲಿ ನೋಡಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳು ಮಾಡುವ ಅಯೋಗ್ಯಕಾರ್ಯಗಳ ಪರಿಣಾಮವಾಗಿ ಹೆತ್ತವರು ಅಪಮಾನವನ್ನು ಅನುಭವಿಸಬೇಕಾಗುತ್ತದೆ, ಅಲ್ಲವೆ?</p>.<p>ಹೀಗಾಗಿಯೇ ದುಷ್ಟರು ಯಾರೇ ಆಗಿದ್ದರೂ – ನಮ್ಮ ಮಕ್ಕಳು, ಬಂಧುಗಳು, ಸ್ನೇಹಿತರು, ಪಕ್ಷದವರು – ಯಾರೇ ಆಗಿದ್ದರೂ, ಅವರು ದುಷ್ಟರೇ ಹೌದು. ಅವರನ್ನು ತೊರೆಯದ ಹೊರತು ನಮಗೆ ಅಪಾಯ ತಪ್ಪಿದ್ದಲ್ಲ. ಈ ವಿವೇಕವನ್ನು ಈ ಪದ್ಯ ಸೊಗಸಾಗಿ ಹೇಳಿದೆ:</p>.<p><span style="color:#B22222;"><strong>ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |</strong></span><br /><span style="color:#B22222;"><strong>ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ||</strong></span></p>.<p>’ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗಮಾಡಬೇಕು; ಗ್ರಾಮದ ಹಿತಕ್ಕಾಗಿ ಕುಲವನ್ನೂ, ರಾಷ್ಟ್ರದ ಹಿತಕ್ಕಾಗಿ ಗ್ರಾಮವನ್ನೂ ತ್ಯಾಗಮಾಡಬೇಕು; ಕೊನೆಗೆ, ತನ್ನ ಹಿತಕ್ಕಾಗಿ ಈ ಭೂಮಿಯನ್ನೇ ತೊರೆಯುವಂಥ ಸ್ಥಿತಿ ಎದುರಾದರೆ ಆಗ ಈ ಪೃಥ್ವಿಯನ್ನೇ ತ್ಯಾಗಮಾಡಬೇಕು‘ ಎಂದು ಹೇಳುತ್ತಿದೆ, ಈ ಸುಭಾಷಿತ.</p>.<p>ರಾವಣನಿಗೆ ವಿಭಿಷಣ ಇಂಥದೇ ಬುದ್ಧಿವಾದವನ್ನು ಹೇಳುತ್ತಾನೆ. ’ನಿನ್ನ ದುಷ್ಟಕಾರ್ಯದಿಂದ ಕುಲವೇ ನಾಶವಾಗುತ್ತದೆ‘ ಎಂದು ಎಚ್ಚರಿಸುತ್ತಾನೆ. ಆದರೆ ಅವನು ಕೇಳುವುದಿಲ್ಲ. ದುರ್ಯೋಧನನಿಗೂ ಇಂಥದೇ ಉಪದೇಶ ಸಿಕ್ಕುತ್ತದೆ. ಆದರೆ ಅವನೂ ಕೇಳುವುದಿಲ್ಲ. ಕೊನೆಗೆ ರಾಕ್ಷಸಕುಲವೇ ನಾಶವಾಗುವಂಥ ಸ್ಥಿತಿ ಎದುರಾಗುತ್ತದೆ; ಕೌರವರಿಗೂ ಇಂಥದೇ ಸ್ಥಿತಿ ಒದಗುತ್ತದೆ.</p>.<p>ಹೀಗಾಗಿ ಮಕ್ಕಳು ದುಷ್ಟರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಲಕ–ಪೋಷಕರ ಮೇಲಿದೆ; ಪ್ರಜೆಗಳು ದುಷ್ಟರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮನ್ನು ನಾವು ಸದಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಿರಬೇಕು; ದುಷ್ಟತನ ನಮ್ಮ ಹತ್ತಿರ ಬರದಂತೆ ಎಚ್ಚರ ವಹಿಸಬೇಕು. ನಮ್ಮ ಒಬ್ಬರ ದುಷ್ಟತನದಿಂದ ಇಡಿಯ ಸಮಾಜವೇ ಸಂಕಷ್ಟಕ್ಕೆ ಒಳಗಾಗುವಂಥ ಸ್ಥಿತಿ ಎದುರಾಗಬಹುದು. ಎಚ್ಚರದಿಂದ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>