<p><strong>ಬ್ರಹ್ಮಾನಂದ ನಿಧಿರ್ಮಹಾಬಲವತಾsಹಂಕಾರ–ಘೋರಾಹಿನಾ</strong></p>.<p><strong>ಸಂವೇಷ್ಟ್ಯಾತ್ಮನಿ ರಕ್ಷತೇ ಗುಣಮಯೈಶ್ಚಂಡೈಸ್ತ್ರಿಭಿರ್ಮಸ್ತಕೈಃ ।</strong></p>.<p><strong>ವಿಜ್ಞಾನಾಖ್ಯಮಹಾಸಿನಾ ದ್ಯುತಿಮತಾ ವಿಚ್ಛಿದ್ಯ ಶೀರ್ಷತ್ರಯಂ</strong></p>.<p><strong>ನಿರ್ಮೂಲ್ಯಾಹಿಮಿಮಂ ವಿಧಿಂ ಸುಖಕರಂ ಧೀರೋsಭೋಕ್ತುಂ ಕ್ಷಮಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮಹಾಬಲವುಳ್ಳ ಅಹಂಕಾರ ಎಂಬ ಘೋರಸರ್ಪವು ಬ್ರಹ್ಮಾನಂದ ಎಂಬ ನಿಧಿಯನ್ನು ಸತ್ತ್ವ ರಜಸ್ಸು ತಮಸ್ಸು ಎಂಬ ಗುಣಗಳಿಂದ ರೋಷಗೊಂಡಿರುವ ಮೂರು ಹೆಡೆಗಳಿಂದ ಸುತ್ತುಕೊಂಡು ತನ್ನಲ್ಲಿಯೇ ರಕ್ಷಣೆಯನ್ನು ಪಡೆದಿರುತ್ತದೆ. ಬ್ರಹ್ಮಜ್ಞಾನ ಎಂಬ ಥಳಥಳಿಸುವ ದೊಡ್ಡ ಕತ್ತಿಯಿಂದ ಮೂರು ಹೆಡೆಗಳನ್ನೂ ಕತ್ತರಿಸಿ, ಈ ಸರ್ಪವನ್ನು ನಾಶಮಾಡಿ, ಆನಂದಕರವಾದ ಈ ನಿಧಿಯನ್ನು ಅನುಭವಿಸಲು ಧೀಮಂತನಾದವನೇ ಶಕ್ತನಾಗಿರುತ್ತಾನೆ.’</p>.<p>ಇಲ್ಲಿ ಅಹಂಕಾರದ ಖಂಡನೆಯಿದೆ. ನಾನು–ನನ್ನದು, ನನ್ನ ಈ ಶರೀರವೇ ನಾನು – ಇಂಥ ಸ್ವಾರ್ಥಕೇಂದ್ರಿತ ಬುದ್ಧಿಯೇ ಅಹಂಕಾರ. ಇಲ್ಲಿ ಅಹಂಕಾರವನ್ನು ದೊಡ್ಡ ಹಾವಿಗೆ ಹೋಲಿಸಲಾಗಿದೆ. ಈ ಹಾವಿಗಾದರೋ ಮೂರು ಹೆಡೆಗಳು; ಅವೇ ಸತ್ತ್ವ ರಜಸ್ಸು ಮತ್ತು ತಮಸ್ಸುಗಳು. ಈ ಮೂರು ಗುಣಗಳೇ ಮನುಷ್ಯನ ಅಹಂಕಾರಕ್ಕೆ, ಎಂದರೆ ಅಭಿಮಾನಕ್ಕೆ ಕಾರಣ. ಈ ಗುಣಗಳು ಇರುವುದಾದರೂ ಎಲ್ಲಿ? ನಮ್ಮಲ್ಲಿಯೇ. ಇದನ್ನೇ ಈ ಪದ್ಯ ಹೇಳುತ್ತಿರುವುದು, ಮೂರು ಹೆಡೆಗಳ ಈ ಮಹಾಸರ್ಪ ನಮ್ಮಲ್ಲಿಯೇ ಸುತ್ತುಕೊಂಡು ಆಶ್ರಯವನ್ನು ಪಡೆದಿರುತ್ತದೆ ಎಂದು.</p>.<p>ಬ್ರಹ್ಮಾನಂದಕ್ಕೆ ಅಡ್ಡಿಯಾಗಿರುವುದೇ ಈ ಅಹಂಕಾರ; ಈ ಸಂಕುಚಿತ ಬುದ್ಧಿ, ಎಂದರೆ ಅವಿದ್ಯೆಯಿಂದ ಮುಕ್ತನಾಗದ ವಿನಾ ನಮಗೆ ಬ್ರಹ್ಮಾನಂದ ದಕ್ಕದು ಎಂಬುದು ಶಾಸ್ತ್ರಗಳ ಒಕ್ಕಣೆ. ಹೀಗಾಗಿ ವಿದ್ಯೆ ಎಂಬ, ಅರಿವು ಎಂಬ ಹರಿತವಾದ ಕತ್ತಿಯಿಂದ ಈ ಹಾವನ್ನು ಕತ್ತರಿಸಬೇಕು; ಆಮೇಲಷ್ಟೆ ಅವಿದ್ಯೆಯು ತೊಲಗುತ್ತದೆ, ಬ್ರಹ್ಮಾನಂದದ ಅನುಭೂತಿಯಾದ ಆನಂದವು ಸಿಕ್ಕುತ್ತದೆ.</p>.<p>ಇಲ್ಲಿ ಆನಂದನಿಧಿ ಎಂದು ಹೇಳಿರುವುದು ಕೂಡ ಗಮನಾರ್ಹ. ನಿಧಿಯನ್ನು ಸರ್ಪ ಕಾಯುತ್ತಿರುತ್ತದೆ ಎಂಬ ನಂಬಿಕೆ ಲೋಕದಲ್ಲಿರುವುದಷ್ಟೆ. ಅಂತೆಯೇ ಬ್ರಹ್ಮಾನಂದ ಎಂಬ ನಿಧಿಯನ್ನು ಅಹಂಕಾರ ಎಂಬ ಮೂರು ಹೆಡೆಗಳ ಹಾವು ಕಾಯುತ್ತಿದೆ ಎಂದು ತಾತ್ಪರ್ಯ. ಈ ಹಾವನ್ನು ಓಡಿಸಿದರೆ ಮಾತ್ರ ನಮಗೆ ಆ ನಿಧಿ ದೊರಕುತ್ತದೆ. ಈ ಕೆಲಸವನ್ನು ಧೀಮಂತ, ಎಂದರೆ ಜ್ಞಾನಿಯಾದವನು ಮಾತ್ರವೇ ಮಾಡಬಲ್ಲ; ಅವನೇ ನಿಜವಾದ ಶೂರ ಕೂಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾನಂದ ನಿಧಿರ್ಮಹಾಬಲವತಾsಹಂಕಾರ–ಘೋರಾಹಿನಾ</strong></p>.<p><strong>ಸಂವೇಷ್ಟ್ಯಾತ್ಮನಿ ರಕ್ಷತೇ ಗುಣಮಯೈಶ್ಚಂಡೈಸ್ತ್ರಿಭಿರ್ಮಸ್ತಕೈಃ ।</strong></p>.<p><strong>ವಿಜ್ಞಾನಾಖ್ಯಮಹಾಸಿನಾ ದ್ಯುತಿಮತಾ ವಿಚ್ಛಿದ್ಯ ಶೀರ್ಷತ್ರಯಂ</strong></p>.<p><strong>ನಿರ್ಮೂಲ್ಯಾಹಿಮಿಮಂ ವಿಧಿಂ ಸುಖಕರಂ ಧೀರೋsಭೋಕ್ತುಂ ಕ್ಷಮಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮಹಾಬಲವುಳ್ಳ ಅಹಂಕಾರ ಎಂಬ ಘೋರಸರ್ಪವು ಬ್ರಹ್ಮಾನಂದ ಎಂಬ ನಿಧಿಯನ್ನು ಸತ್ತ್ವ ರಜಸ್ಸು ತಮಸ್ಸು ಎಂಬ ಗುಣಗಳಿಂದ ರೋಷಗೊಂಡಿರುವ ಮೂರು ಹೆಡೆಗಳಿಂದ ಸುತ್ತುಕೊಂಡು ತನ್ನಲ್ಲಿಯೇ ರಕ್ಷಣೆಯನ್ನು ಪಡೆದಿರುತ್ತದೆ. ಬ್ರಹ್ಮಜ್ಞಾನ ಎಂಬ ಥಳಥಳಿಸುವ ದೊಡ್ಡ ಕತ್ತಿಯಿಂದ ಮೂರು ಹೆಡೆಗಳನ್ನೂ ಕತ್ತರಿಸಿ, ಈ ಸರ್ಪವನ್ನು ನಾಶಮಾಡಿ, ಆನಂದಕರವಾದ ಈ ನಿಧಿಯನ್ನು ಅನುಭವಿಸಲು ಧೀಮಂತನಾದವನೇ ಶಕ್ತನಾಗಿರುತ್ತಾನೆ.’</p>.<p>ಇಲ್ಲಿ ಅಹಂಕಾರದ ಖಂಡನೆಯಿದೆ. ನಾನು–ನನ್ನದು, ನನ್ನ ಈ ಶರೀರವೇ ನಾನು – ಇಂಥ ಸ್ವಾರ್ಥಕೇಂದ್ರಿತ ಬುದ್ಧಿಯೇ ಅಹಂಕಾರ. ಇಲ್ಲಿ ಅಹಂಕಾರವನ್ನು ದೊಡ್ಡ ಹಾವಿಗೆ ಹೋಲಿಸಲಾಗಿದೆ. ಈ ಹಾವಿಗಾದರೋ ಮೂರು ಹೆಡೆಗಳು; ಅವೇ ಸತ್ತ್ವ ರಜಸ್ಸು ಮತ್ತು ತಮಸ್ಸುಗಳು. ಈ ಮೂರು ಗುಣಗಳೇ ಮನುಷ್ಯನ ಅಹಂಕಾರಕ್ಕೆ, ಎಂದರೆ ಅಭಿಮಾನಕ್ಕೆ ಕಾರಣ. ಈ ಗುಣಗಳು ಇರುವುದಾದರೂ ಎಲ್ಲಿ? ನಮ್ಮಲ್ಲಿಯೇ. ಇದನ್ನೇ ಈ ಪದ್ಯ ಹೇಳುತ್ತಿರುವುದು, ಮೂರು ಹೆಡೆಗಳ ಈ ಮಹಾಸರ್ಪ ನಮ್ಮಲ್ಲಿಯೇ ಸುತ್ತುಕೊಂಡು ಆಶ್ರಯವನ್ನು ಪಡೆದಿರುತ್ತದೆ ಎಂದು.</p>.<p>ಬ್ರಹ್ಮಾನಂದಕ್ಕೆ ಅಡ್ಡಿಯಾಗಿರುವುದೇ ಈ ಅಹಂಕಾರ; ಈ ಸಂಕುಚಿತ ಬುದ್ಧಿ, ಎಂದರೆ ಅವಿದ್ಯೆಯಿಂದ ಮುಕ್ತನಾಗದ ವಿನಾ ನಮಗೆ ಬ್ರಹ್ಮಾನಂದ ದಕ್ಕದು ಎಂಬುದು ಶಾಸ್ತ್ರಗಳ ಒಕ್ಕಣೆ. ಹೀಗಾಗಿ ವಿದ್ಯೆ ಎಂಬ, ಅರಿವು ಎಂಬ ಹರಿತವಾದ ಕತ್ತಿಯಿಂದ ಈ ಹಾವನ್ನು ಕತ್ತರಿಸಬೇಕು; ಆಮೇಲಷ್ಟೆ ಅವಿದ್ಯೆಯು ತೊಲಗುತ್ತದೆ, ಬ್ರಹ್ಮಾನಂದದ ಅನುಭೂತಿಯಾದ ಆನಂದವು ಸಿಕ್ಕುತ್ತದೆ.</p>.<p>ಇಲ್ಲಿ ಆನಂದನಿಧಿ ಎಂದು ಹೇಳಿರುವುದು ಕೂಡ ಗಮನಾರ್ಹ. ನಿಧಿಯನ್ನು ಸರ್ಪ ಕಾಯುತ್ತಿರುತ್ತದೆ ಎಂಬ ನಂಬಿಕೆ ಲೋಕದಲ್ಲಿರುವುದಷ್ಟೆ. ಅಂತೆಯೇ ಬ್ರಹ್ಮಾನಂದ ಎಂಬ ನಿಧಿಯನ್ನು ಅಹಂಕಾರ ಎಂಬ ಮೂರು ಹೆಡೆಗಳ ಹಾವು ಕಾಯುತ್ತಿದೆ ಎಂದು ತಾತ್ಪರ್ಯ. ಈ ಹಾವನ್ನು ಓಡಿಸಿದರೆ ಮಾತ್ರ ನಮಗೆ ಆ ನಿಧಿ ದೊರಕುತ್ತದೆ. ಈ ಕೆಲಸವನ್ನು ಧೀಮಂತ, ಎಂದರೆ ಜ್ಞಾನಿಯಾದವನು ಮಾತ್ರವೇ ಮಾಡಬಲ್ಲ; ಅವನೇ ನಿಜವಾದ ಶೂರ ಕೂಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>