<p>ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್ ।</p>.<p>ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಓದುವವನಿಗೆ ದಡ್ಡತನ ಇರುವುದಿಲ್ಲ; ಜಪ ಮಾಡುವವನಿಗೆ ಪಾಪ ಇರುವುದಿಲ್ಲ; ಮೌನವಾಗಿರುವವನಿಗೆ ಜಗಳದ ಭಯ ಇರುವುದಿಲ್ಲ; ಸದಾ ಎಚ್ಚರವಾಗಿರುವವನಿಗೆ ಯಾವುದರಿಂದಲೂ ಭಯ ಇರುವುದಿಲ್ಲ.’</p>.<p>ನಮ್ಮಲ್ಲಿ ಎಷ್ಟೋ ದೋಷಗಳು ಇರುತ್ತವೆ; ಕೆಲವೊಂದು ಹುಟ್ಟಿನಿಂದಲೇ ಇರುತ್ತವೆ, ಕೆಲವೊಂದು ಆಮೇಲೆ ಸೇರಿಕೊಳ್ಳುತ್ತವೆ. ಆದರೆ ಎಷ್ಟೋ ದೋಷಗಳಿಗೆ ಪರಿಹಾರದ ದಾರಿಯೂ ಇರುತ್ತದೆ. ಅದನ್ನು ನಾವು ಕಂಡುಕೊಳ್ಳಬೇಕು. ಆ ದಾರಿಯಲ್ಲಿ ನಡೆಯಬೇಕು. ಆಗ ದೋಷದಿಂದ ನಾವು ಮುಕ್ತರಾಗಬಹುದು.</p>.<p>ಸುಭಾಷಿತ ಅಂಥ ಕೆಲವೊಂದು ಪರಿಹಾರದ ದಾರಿಗಳನ್ನು ಸೂಚಿಸಿದೆ.</p>.<p>ನಾವು ಎಲ್ಲರೂ ಹುಟ್ಟಿನಿಂದ ದಡ್ಡರೇ. ಈ ದಡ್ಡತನನ್ನು ಹೋಗಾಲಾಡಿಸಿಕೊಳ್ಳಲು ಇರುವ ದಾರಿ ಎಂದರೆ ಓದು. ಈ ಓದಿನ ಆಯ್ಕೆಯಲ್ಲೂ ಜಾಣತನ ಇರಬೇಕು. ಕೇವಲ ನಮಗೆ ಇಷ್ಟವಾದುದುನ್ನು ಮಾತ್ರವೇ ಓದುವುದಲ್ಲ; ನಮ್ಮ ಅಭಿಪ್ರಾಯಗಳಿಗೆ ವಿರುದ್ಧವಾಗಿರುವುದನ್ನೂ ಓದಬೇಕು. ಆಗ ಎರಡೂ ಅಭಿಪ್ರಾಯಗಳ ನಡುವೆ ಮಂಥನ ನಡೆದು, ನಾವು ಸರಿಯಾದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ.</p>.<p>ನಮ್ಮಿಂದ ಎಷ್ಟೋ ಅಧಾರ್ಮಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಅವುಗಳಿಂದ ಪಾಪವೂ ಉಂಟಾಗುತ್ತಿರುತ್ತದೆ. ಭಗವಂತನನ್ನು ಕುರಿತ ಜಪಸಾಧನೆಯೇ ನಮ್ಮ ಎಲ್ಲ ಪಾಪಗಳನ್ನು ಹೋಗಲಾಡಿಸುತ್ತದೆ ಎನ್ನುವುದು ಶಾಸ್ತ್ರಗಳ ಮಾತು.</p>.<p>ಜಗಳದ ಮೂಲ ಎಲ್ಲಿರುತ್ತದೆ? ನಮ್ಮ ಮಾತಿನಲ್ಲಿಯೇ ಹೌದು. ನಾವಾಡುವ ಮಾತುಗಳೇ ಜಗಳಕ್ಕೆ ಕಾರಣ ಎನ್ನುವುದು ಸ್ಪಷ್ಟ. ಎಷ್ಟೋ ಸಂದರ್ಭಗಳಲ್ಲಿ ಮೌನವಾಗಿದ್ದರೆ ಆಗ ಜಗಳದ ಪ್ರಸಕ್ತಿಯೇ ಉಂಟಾಗುವುದಿಲ್ಲ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬ ಅರಿವು ತುಂಬ ಮುಖ್ಯ.</p>.<p>ಸುಭಾಷಿತ ಹೇಳಿರುವ ಕೊನೆಯ ಮಾತು ತುಂಬ ಸ್ವಾರಸ್ಯಕರವಾಗಿದೆ. ನಾವು ಸದಾ ಎಚ್ಚರವಾಗಿದ್ದರೆ ಆಗ ಯಾವುದರಿಂದಲೂ ಭಯವೇ ಎದುರಾಗದು. ಎಂದರೆ ನಾವು ಮಾಡುವ ಪ್ರತಿ ಕೆಲಸವನ್ನೂ ತುಂಬ ಎಚ್ಚರಿಕೆಯಿಂದ, ಮೈಯೆಲ್ಲ ಕಣ್ಣಾಗಿಸಿಕೊಂಡು, ಮಾಡಬೇಕು. ಈ ಕೆಲಸ ಮಾಡುವುದರಿಂದ ಹೀಗೆಲ್ಲ ಆಗಬಹುದು – ಎಂಬ ಎಚ್ಚರಿಕೆ ನಮ್ಮ ಕೆಲಸವನ್ನು ಸರಿಯಾಗಿ ಮೌಲ್ಯಮಾಪನ ಮಾಡುತ್ತದೆ. ಆಗ ನಾವು ಮುಂದೆ ಎದುರಾಗಬಹುದುದಾದ ತೊಂದರೆಯಿಂದ ಹೆದರುವ ಆವಶ್ಯಕತೆಯೇ ಉಂಟಾಗದು.</p>.<p>ಸದಾ ಎಚ್ಚರವಾಗಿರೋಣ; ಭಯದಿಂದ ಮುಕ್ತರಾಗೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್ ।</p>.<p>ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಓದುವವನಿಗೆ ದಡ್ಡತನ ಇರುವುದಿಲ್ಲ; ಜಪ ಮಾಡುವವನಿಗೆ ಪಾಪ ಇರುವುದಿಲ್ಲ; ಮೌನವಾಗಿರುವವನಿಗೆ ಜಗಳದ ಭಯ ಇರುವುದಿಲ್ಲ; ಸದಾ ಎಚ್ಚರವಾಗಿರುವವನಿಗೆ ಯಾವುದರಿಂದಲೂ ಭಯ ಇರುವುದಿಲ್ಲ.’</p>.<p>ನಮ್ಮಲ್ಲಿ ಎಷ್ಟೋ ದೋಷಗಳು ಇರುತ್ತವೆ; ಕೆಲವೊಂದು ಹುಟ್ಟಿನಿಂದಲೇ ಇರುತ್ತವೆ, ಕೆಲವೊಂದು ಆಮೇಲೆ ಸೇರಿಕೊಳ್ಳುತ್ತವೆ. ಆದರೆ ಎಷ್ಟೋ ದೋಷಗಳಿಗೆ ಪರಿಹಾರದ ದಾರಿಯೂ ಇರುತ್ತದೆ. ಅದನ್ನು ನಾವು ಕಂಡುಕೊಳ್ಳಬೇಕು. ಆ ದಾರಿಯಲ್ಲಿ ನಡೆಯಬೇಕು. ಆಗ ದೋಷದಿಂದ ನಾವು ಮುಕ್ತರಾಗಬಹುದು.</p>.<p>ಸುಭಾಷಿತ ಅಂಥ ಕೆಲವೊಂದು ಪರಿಹಾರದ ದಾರಿಗಳನ್ನು ಸೂಚಿಸಿದೆ.</p>.<p>ನಾವು ಎಲ್ಲರೂ ಹುಟ್ಟಿನಿಂದ ದಡ್ಡರೇ. ಈ ದಡ್ಡತನನ್ನು ಹೋಗಾಲಾಡಿಸಿಕೊಳ್ಳಲು ಇರುವ ದಾರಿ ಎಂದರೆ ಓದು. ಈ ಓದಿನ ಆಯ್ಕೆಯಲ್ಲೂ ಜಾಣತನ ಇರಬೇಕು. ಕೇವಲ ನಮಗೆ ಇಷ್ಟವಾದುದುನ್ನು ಮಾತ್ರವೇ ಓದುವುದಲ್ಲ; ನಮ್ಮ ಅಭಿಪ್ರಾಯಗಳಿಗೆ ವಿರುದ್ಧವಾಗಿರುವುದನ್ನೂ ಓದಬೇಕು. ಆಗ ಎರಡೂ ಅಭಿಪ್ರಾಯಗಳ ನಡುವೆ ಮಂಥನ ನಡೆದು, ನಾವು ಸರಿಯಾದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ.</p>.<p>ನಮ್ಮಿಂದ ಎಷ್ಟೋ ಅಧಾರ್ಮಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಅವುಗಳಿಂದ ಪಾಪವೂ ಉಂಟಾಗುತ್ತಿರುತ್ತದೆ. ಭಗವಂತನನ್ನು ಕುರಿತ ಜಪಸಾಧನೆಯೇ ನಮ್ಮ ಎಲ್ಲ ಪಾಪಗಳನ್ನು ಹೋಗಲಾಡಿಸುತ್ತದೆ ಎನ್ನುವುದು ಶಾಸ್ತ್ರಗಳ ಮಾತು.</p>.<p>ಜಗಳದ ಮೂಲ ಎಲ್ಲಿರುತ್ತದೆ? ನಮ್ಮ ಮಾತಿನಲ್ಲಿಯೇ ಹೌದು. ನಾವಾಡುವ ಮಾತುಗಳೇ ಜಗಳಕ್ಕೆ ಕಾರಣ ಎನ್ನುವುದು ಸ್ಪಷ್ಟ. ಎಷ್ಟೋ ಸಂದರ್ಭಗಳಲ್ಲಿ ಮೌನವಾಗಿದ್ದರೆ ಆಗ ಜಗಳದ ಪ್ರಸಕ್ತಿಯೇ ಉಂಟಾಗುವುದಿಲ್ಲ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬ ಅರಿವು ತುಂಬ ಮುಖ್ಯ.</p>.<p>ಸುಭಾಷಿತ ಹೇಳಿರುವ ಕೊನೆಯ ಮಾತು ತುಂಬ ಸ್ವಾರಸ್ಯಕರವಾಗಿದೆ. ನಾವು ಸದಾ ಎಚ್ಚರವಾಗಿದ್ದರೆ ಆಗ ಯಾವುದರಿಂದಲೂ ಭಯವೇ ಎದುರಾಗದು. ಎಂದರೆ ನಾವು ಮಾಡುವ ಪ್ರತಿ ಕೆಲಸವನ್ನೂ ತುಂಬ ಎಚ್ಚರಿಕೆಯಿಂದ, ಮೈಯೆಲ್ಲ ಕಣ್ಣಾಗಿಸಿಕೊಂಡು, ಮಾಡಬೇಕು. ಈ ಕೆಲಸ ಮಾಡುವುದರಿಂದ ಹೀಗೆಲ್ಲ ಆಗಬಹುದು – ಎಂಬ ಎಚ್ಚರಿಕೆ ನಮ್ಮ ಕೆಲಸವನ್ನು ಸರಿಯಾಗಿ ಮೌಲ್ಯಮಾಪನ ಮಾಡುತ್ತದೆ. ಆಗ ನಾವು ಮುಂದೆ ಎದುರಾಗಬಹುದುದಾದ ತೊಂದರೆಯಿಂದ ಹೆದರುವ ಆವಶ್ಯಕತೆಯೇ ಉಂಟಾಗದು.</p>.<p>ಸದಾ ಎಚ್ಚರವಾಗಿರೋಣ; ಭಯದಿಂದ ಮುಕ್ತರಾಗೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>