<p><em><strong>ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಂ<br />ಮಾನೋನ್ನತಿಂ ದಿಶತಿ ಪಾಪಮಪಾಕರೋತಿ ।<br />ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ<br />ಸತ್ಸಂಗತಿಃ ಕಥಯ ಕಿಂ ನ ಕರೋತಿ ಪುಂಸಾಮ್ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸತ್ಪುರುಷರ ಸಹವಾಸವು ಬುದ್ಧಿಯ ಜಡತ್ವವನ್ನು ಹೋಗಲಾಡಿಸುತ್ತದೆ; ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ; ಗೌರವವನ್ನು ಹೆಚ್ಚಿಸುತ್ತದೆ; ಪಾಪವನ್ನು ದೂರಮಾಡುತ್ತದೆ; ಮನಸ್ಸನ್ನು ಪ್ರಸನ್ನಗೊಳಿಸುತ್ತದೆ; ಎಲ್ಲ ದಿಕ್ಕುಗಳಲ್ಲಿಯೂ ಕೀರ್ತಿಯನ್ನು ಹರಡುತ್ತದೆ. ಒಳ್ಳೆಯ ಸಹವಾವು ಜನರಿಗೆ ಏನು ತಾನೆ ಮಾಡುವುದಿಲ್ಲ?’</p>.<p>ನಮ್ಮ ಹಿರಿಯರು ನಮಗೆ ಚಿಕ್ಕವಯಸ್ಸಿನಿಂದಲೇ ಒಂದು ಎಚ್ಚರಿಕೆಯನ್ನು ಕೊಡುತ್ತಿರುತ್ತಾರೆ: ಒಳ್ಳೆಯವರ ಸಹವಾಸ ಮಾಡಿ.</p>.<p>ಈ ದೊಡ್ಡವರು ಯಾವಾಗಲೂ ನಮಗೆ ಉಪದೇಶ ಕೊಡ್ತಾನೆ ಇರ್ತಾರೆ; ಯಾಕಾದರೂ ಹೀಗೆ ಹೇಳ್ತಾರೋ – ಎಂದೂ ನಮಗೆ ಅನಿಸಿರುತ್ತದೆ. ಒಳ್ಳೆಯವರ ಸ್ನೇಹದಿಂದ ಏನೆಲ್ಲ ಲಾಭಗಳಾಗುತ್ತವೆ – ಎಂಬುದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ನಮ್ಮ ಎಲ್ಲ ದೋಷಗಳಿಗೂ ದೊಡ್ಡ ಕಾರಣ ಎಂದರೆ ನಮ್ಮ ಬುದ್ಧಿಯ ನಿಷ್ಕ್ರಿಯತೆ; ಎಂದರೆ ಜಡತೆ. ಕಲ್ಲಿನಂತೆ ಯಾವಾಗಲೂ ಮಲಗಿರುವ, ನಿಂತ ನೀರಿನಂತೆ ಕಲುಷಿತವಾಗಿರುವ ಬುದ್ಧಿಯೇ ನಿಷ್ಕ್ರಿಯಬುದ್ಧಿ. ಸತ್ಸಹವಾಸದಿಂದ ಬುದ್ಧಿಯ ಇಂಥ ಜಡತೆ ತೊಲಗುತ್ತದೆ. ಇದು ನಮಗೆ ಒಳ್ಳೆಯವರಿಂದ ಆಗವ ಪ್ರಥಮ ಮತ್ತು ಪ್ರಧಾನ ಪ್ರಯೋಜನ.</p>.<p>ನಮ್ಮ ಬುದ್ಧಿಯನ್ನು ಚುರುಕುಗೊಳಿಸಿದಮೇಲೆ ಸಜ್ಜನರ ಸ್ನೇಹವು ನಮಗೊಂದು ವ್ಯಕ್ತಿತ್ವವನ್ನೂ ಕಟ್ಟಿಕೊಡುತ್ತದೆ. ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ – ಎಂದರೆ ಇದೇ ಅರ್ಥ; ನಮಗೊಂದು ಗಟ್ಟಿಯಾದ ವ್ಯಕ್ತಿತ್ವ ಒದಗುತ್ತದೆ. ಮಾತಿನ ಪ್ರಾಮಾಣಿಕತೆಯ ಮೂಲಕ ಸುಭಾಷಿತ ನಮ್ಮ ವ್ಯಕ್ತಿತ್ವದ ಸೌರಭವನ್ನು ಸೂಚಿಸಿದೆ.</p>.<p>ಈಗ ನಮ್ಮ ವ್ಯಕ್ತಿತ್ವವನ್ನು ಸಮಾಜ ಗುರುತಿಸುತ್ತದೆ, ನಮ್ಮ ನಡೆ–ನುಡಿಗಳಿಗೆ ಸಮಾಜದಿಂದ ಬೆಲೆ ಬಂದಿರುತ್ತದೆ; ಎಂದರೆ ನಮ್ಮನ್ನು ಈಗ ಸಮಾಜ ಗೌರವದಿಂದ ನೋಡುತ್ತಿರುತ್ತದೆ. ಸತ್ಸಹವಾಸದಿಂದ ಪಾಪವೂ ದೂರವಾಗುತ್ತದೆಯಂತೆ. ಸಜ್ಜನರು ನಾವು ಕೆಟ್ಟ ದಾರಿಯನ್ನು ಹಿಡಿಯದಂತೆ ನಮ್ಮನ್ನು ಕಾಪಾಡುತ್ತಿರುತ್ತಾರೆ.</p>.<p>ಸಜ್ಜನರು ಪ್ರಸನ್ನತೆ, ಸಂತೋಷ, ಉತ್ಸಾಹಗಳ ಮೂಲವೇ ಆಗಿರುವುದರಿಂದ ಅವರ ಸಾಮೀಪ್ಯದಿಂದ ನಮ್ಮಲ್ಲೂ ಪ್ರಸನ್ನತೆ ಎನ್ನುವುದು ಸಹಜಸ್ವಭಾವವಾಗಿಯೇ ನೆಲೆ ನಿಲ್ಲುತ್ತದೆ.</p>.<p>ಇಷ್ಟೆಲ್ಲ ಗುಣಗಳು ನಮ್ಮ ವ್ಯಕ್ತಿತ್ವಕ್ಕೆ ಒದಗಿದೆ ಎಂದರೆ ಅದು ಈಗ ಸದೃಢವೂ ಸುಂದರವೂ ಆಗಿದೆ ಎಂದೇ ಅರ್ಥ ಅಲ್ಲವೆ? ಇಂಥ ವ್ಯಕ್ತಿತ್ವ ನಮ್ಮದಾಗಿದ್ದಾಗ ಸಮಾಜವೂ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತದೆ. ಎಂದರೆ ಸಮಾಜದಲ್ಲಿ ನಮಗೆ ಕೀರ್ತಿ ಲಭಿಸುತ್ತಿದೆ ಎಂದೇ ತಾತ್ಪರ್ಯ.</p>.<p>ನಾವು ಎಂಥವರ ಸ್ನೇಹವನ್ನು ಮಾಡಬೇಕು ಎಂಬ ಸಂಕಲ್ಪ ಮತ್ತು ತೀರ್ಮಾನ – ಈ ಎರಡನ್ನೂ ನಿರ್ಧಾರಮಾಡಬೇಕಾದವರು ನಾವೇ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಂ<br />ಮಾನೋನ್ನತಿಂ ದಿಶತಿ ಪಾಪಮಪಾಕರೋತಿ ।<br />ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ<br />ಸತ್ಸಂಗತಿಃ ಕಥಯ ಕಿಂ ನ ಕರೋತಿ ಪುಂಸಾಮ್ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸತ್ಪುರುಷರ ಸಹವಾಸವು ಬುದ್ಧಿಯ ಜಡತ್ವವನ್ನು ಹೋಗಲಾಡಿಸುತ್ತದೆ; ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ; ಗೌರವವನ್ನು ಹೆಚ್ಚಿಸುತ್ತದೆ; ಪಾಪವನ್ನು ದೂರಮಾಡುತ್ತದೆ; ಮನಸ್ಸನ್ನು ಪ್ರಸನ್ನಗೊಳಿಸುತ್ತದೆ; ಎಲ್ಲ ದಿಕ್ಕುಗಳಲ್ಲಿಯೂ ಕೀರ್ತಿಯನ್ನು ಹರಡುತ್ತದೆ. ಒಳ್ಳೆಯ ಸಹವಾವು ಜನರಿಗೆ ಏನು ತಾನೆ ಮಾಡುವುದಿಲ್ಲ?’</p>.<p>ನಮ್ಮ ಹಿರಿಯರು ನಮಗೆ ಚಿಕ್ಕವಯಸ್ಸಿನಿಂದಲೇ ಒಂದು ಎಚ್ಚರಿಕೆಯನ್ನು ಕೊಡುತ್ತಿರುತ್ತಾರೆ: ಒಳ್ಳೆಯವರ ಸಹವಾಸ ಮಾಡಿ.</p>.<p>ಈ ದೊಡ್ಡವರು ಯಾವಾಗಲೂ ನಮಗೆ ಉಪದೇಶ ಕೊಡ್ತಾನೆ ಇರ್ತಾರೆ; ಯಾಕಾದರೂ ಹೀಗೆ ಹೇಳ್ತಾರೋ – ಎಂದೂ ನಮಗೆ ಅನಿಸಿರುತ್ತದೆ. ಒಳ್ಳೆಯವರ ಸ್ನೇಹದಿಂದ ಏನೆಲ್ಲ ಲಾಭಗಳಾಗುತ್ತವೆ – ಎಂಬುದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ನಮ್ಮ ಎಲ್ಲ ದೋಷಗಳಿಗೂ ದೊಡ್ಡ ಕಾರಣ ಎಂದರೆ ನಮ್ಮ ಬುದ್ಧಿಯ ನಿಷ್ಕ್ರಿಯತೆ; ಎಂದರೆ ಜಡತೆ. ಕಲ್ಲಿನಂತೆ ಯಾವಾಗಲೂ ಮಲಗಿರುವ, ನಿಂತ ನೀರಿನಂತೆ ಕಲುಷಿತವಾಗಿರುವ ಬುದ್ಧಿಯೇ ನಿಷ್ಕ್ರಿಯಬುದ್ಧಿ. ಸತ್ಸಹವಾಸದಿಂದ ಬುದ್ಧಿಯ ಇಂಥ ಜಡತೆ ತೊಲಗುತ್ತದೆ. ಇದು ನಮಗೆ ಒಳ್ಳೆಯವರಿಂದ ಆಗವ ಪ್ರಥಮ ಮತ್ತು ಪ್ರಧಾನ ಪ್ರಯೋಜನ.</p>.<p>ನಮ್ಮ ಬುದ್ಧಿಯನ್ನು ಚುರುಕುಗೊಳಿಸಿದಮೇಲೆ ಸಜ್ಜನರ ಸ್ನೇಹವು ನಮಗೊಂದು ವ್ಯಕ್ತಿತ್ವವನ್ನೂ ಕಟ್ಟಿಕೊಡುತ್ತದೆ. ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ – ಎಂದರೆ ಇದೇ ಅರ್ಥ; ನಮಗೊಂದು ಗಟ್ಟಿಯಾದ ವ್ಯಕ್ತಿತ್ವ ಒದಗುತ್ತದೆ. ಮಾತಿನ ಪ್ರಾಮಾಣಿಕತೆಯ ಮೂಲಕ ಸುಭಾಷಿತ ನಮ್ಮ ವ್ಯಕ್ತಿತ್ವದ ಸೌರಭವನ್ನು ಸೂಚಿಸಿದೆ.</p>.<p>ಈಗ ನಮ್ಮ ವ್ಯಕ್ತಿತ್ವವನ್ನು ಸಮಾಜ ಗುರುತಿಸುತ್ತದೆ, ನಮ್ಮ ನಡೆ–ನುಡಿಗಳಿಗೆ ಸಮಾಜದಿಂದ ಬೆಲೆ ಬಂದಿರುತ್ತದೆ; ಎಂದರೆ ನಮ್ಮನ್ನು ಈಗ ಸಮಾಜ ಗೌರವದಿಂದ ನೋಡುತ್ತಿರುತ್ತದೆ. ಸತ್ಸಹವಾಸದಿಂದ ಪಾಪವೂ ದೂರವಾಗುತ್ತದೆಯಂತೆ. ಸಜ್ಜನರು ನಾವು ಕೆಟ್ಟ ದಾರಿಯನ್ನು ಹಿಡಿಯದಂತೆ ನಮ್ಮನ್ನು ಕಾಪಾಡುತ್ತಿರುತ್ತಾರೆ.</p>.<p>ಸಜ್ಜನರು ಪ್ರಸನ್ನತೆ, ಸಂತೋಷ, ಉತ್ಸಾಹಗಳ ಮೂಲವೇ ಆಗಿರುವುದರಿಂದ ಅವರ ಸಾಮೀಪ್ಯದಿಂದ ನಮ್ಮಲ್ಲೂ ಪ್ರಸನ್ನತೆ ಎನ್ನುವುದು ಸಹಜಸ್ವಭಾವವಾಗಿಯೇ ನೆಲೆ ನಿಲ್ಲುತ್ತದೆ.</p>.<p>ಇಷ್ಟೆಲ್ಲ ಗುಣಗಳು ನಮ್ಮ ವ್ಯಕ್ತಿತ್ವಕ್ಕೆ ಒದಗಿದೆ ಎಂದರೆ ಅದು ಈಗ ಸದೃಢವೂ ಸುಂದರವೂ ಆಗಿದೆ ಎಂದೇ ಅರ್ಥ ಅಲ್ಲವೆ? ಇಂಥ ವ್ಯಕ್ತಿತ್ವ ನಮ್ಮದಾಗಿದ್ದಾಗ ಸಮಾಜವೂ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತದೆ. ಎಂದರೆ ಸಮಾಜದಲ್ಲಿ ನಮಗೆ ಕೀರ್ತಿ ಲಭಿಸುತ್ತಿದೆ ಎಂದೇ ತಾತ್ಪರ್ಯ.</p>.<p>ನಾವು ಎಂಥವರ ಸ್ನೇಹವನ್ನು ಮಾಡಬೇಕು ಎಂಬ ಸಂಕಲ್ಪ ಮತ್ತು ತೀರ್ಮಾನ – ಈ ಎರಡನ್ನೂ ನಿರ್ಧಾರಮಾಡಬೇಕಾದವರು ನಾವೇ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>