<p>ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ</p>.<p>ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್ ।</p>.<p>ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ</p>.<p>ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಆಕಾಶಕ್ಕೆ ಸೂರ್ಯನೂ, ಕಮಲವನಕ್ಕೆ ದುಂಬಿಯೂ, ಮಾತಿಗೆ ಸತ್ಯವೂ, ಹೆಚ್ಚಾಗಿರುವ ಸಂಪತ್ತಿಗೆ ದಾನವೂ, ಮನಸ್ಸಿಗೆ ಸ್ನೇಹವೂ, ವಸಂತಕಾಲಕ್ಕೆ ಪ್ರೇಮವೂ, ಸಭೆಗೆ ಸೂಕ್ತಿಯೂ, ಎಲ್ಲ ಗುಣಗಳಿಗೂ ವಿನಯವೂ ಭೂಷಣಗಳು.‘</p>.<p>ಪ್ರತಿಯೊಂದು ವಸ್ತುವಿಗೂ ಅದರ ಸೊಗಸನ್ನು ಹೆಚ್ಚಿಸಬಲ್ಲ ಅದರದ್ದೇ ಆದ ಅಂಗವೊಂದು ಇದ್ದೇ ಇರುತ್ತದೆ; ಸೊಗಸಿನ ಜೊತೆಗೆ ಅದು ಅದರ ಬೆಲೆಯನ್ನೂ ಹೆಚ್ಚಿಸುತ್ತದೆ. ಆ ವಸ್ತುವಿನ ಪ್ರಯೋಜನಕ್ಕೂ ಸಾರ್ಥಕತೆಗೂ ಅದು ಕಾರಣವಾಗಿರುತ್ತದೆ. ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು.</p>.<p>ಇಡಿಯ ಆಕಾಶಕ್ಕೆ ಭೂಷಣ ಎಂದರೆ ಸೂರ್ಯ. ಹೌದು, ಸೂರ್ಯನಿಲ್ಲದ ಆಕಾಶವನ್ನು ಊಹಿಸಿಕೊಳ್ಳಲೂ ಆಗದು. ಕಮಲವನಕ್ಕೆ ದುಂಬಿಯೇ ಭೂಷಣ; ದುಂಬಿಗಳು ಅಲ್ಲಿವೆ ಎಂದರೆ ಹೂವಿನಲ್ಲಿ ಮಕರಂದವೂ ಇದೆ ಎಂಬುದು ಗೊತ್ತಾಗುತ್ತದೆ; ಜೊತೆಗೆ ಕಮಲಗಳ ದೃಶ್ಯವೈಭವಕ್ಕೆ ದುಂಬಿಗಳ ಝೇಂಕಾರ ಸಂಗೀತವಾಗಿ ಒದಗಿ, ಅಲ್ಲಿಯ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.</p>.<p>ಸಾವಿರ ಮಾತುಗಳನ್ನು ಆಡಬಹುದು; ಆದರೆ ಆ ಎಲ್ಲ ಮಾತುಗಳಿಗೂ ಒಂದು ವ್ಯಕ್ತಿತ್ವ ಬರುವುದೇ ಅವು ಸತ್ಯವನ್ನು ಹೇಳಲು ಹೊರಟಾಗ. ಹೀಗಾಗಿ ಮಾತಿಗೆ ಭೂಷಣವೇ ಸತ್ಯ.</p>.<p>ನಮ್ಮ ಸಂಪತ್ತಿಗೆ ಅಲಂಕಾರ ಯಾವುದು? ದಾನವೇ ಸಂಪತ್ತಿಗೆ ಭೂಷಣ. ನಾವು ಕೂಡಿಟ್ಟ ಸಂಪತ್ತು ನಾಲ್ಕು ಜನರಿಗೆ ಉಪಯೋಗವಾಗಬೇಕು; ಆದರೆ ಅದಕ್ಕೆ ಸಾರ್ಥಕತೆ.</p>.<p>ಸ್ನೇಹವೇ ಮನಸ್ಸಿಗೆ ಭೂಷಣ ಎಂದಿದೆ ಸುಭಾಷಿತ. ಮನಸ್ಸಿನ ವೈಶಾಲ್ಯಕ್ಕೂ ಇದು ಸಂಕೇತ; ಸೊಗಸಿಗೂ ಸಂಕೇತ; ಆರೋಗ್ಯಕ್ಕೂ ಸಂಕೇತ.</p>.<p>ಪ್ರಕೃತಿಯಲ್ಲಿ ಕಾಣುವ ಸುಂದರ ಋತು ಎಂದರೆ ವಸಂತಋತು. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇದರ ಸಾರ್ಥಕತೆ ಪ್ರೇಮಭಾವದಲ್ಲಿಯೇ ಇದೆ.ಪ್ರೀತಿ–ಪ್ರೇಮ–ಶೃಂಗಾರಗಳಿಗೆ ಇದು ಒಪ್ಪುವಂಥ ಸಮಯವೂ ಹೌದು. ಹೀಗಾಗಿ ವಸಂತಸಮಯದಲ್ಲಿ ಮನ್ಮಥನೇ ಭೂಷಣ.</p>.<p>ಸಭೆ ಎಂದರೆ ಭಾಷಣ ಆಗಬಹುದು; ನಾಲ್ಕಾರು ಜನರ ಮಧ್ಯೆ ನಿಂತು ಆಡುವ ಮಾತುಗಳು. ಈ ಮಾತುಗಳಿಗೆ ಕಳೆ ಬರುವುದೇ ಸೂಕ್ತಿಗಳ ಮೂಲಕ. ಸೂಕ್ತಿ ಎಂದರೇನೆ ಒಳ್ಳೆಯ ಮಾತು ಎಂಬ ಅರ್ಥವಿದೆ. ಮಹಾಪುರುಷರ ವಿಚಾರಪ್ರದ ಮಾತುಗಳೂ ಸೂಕ್ತಿಗಳೇ ಹೌದು. ಸುಂದರವೂ ಅರ್ಥಪೂರ್ಣವೂ ಆದ ಸೂಕ್ತಿಗಳನ್ನು ಉದ್ಧರಿಸಿ ಮಾತನಾಡಿದರೆ ಇಡಿಯ ಪರಿಸರಕ್ಕೇ ಜೀವಕಳೆ ಬರುತ್ತದೆ; ಕೇಳುಗರಲ್ಲೂ ಆಕರ್ಷಣೆ–ಉತ್ಸಾಹಗಳು ಹೆಚ್ಚುತ್ತವೆ.</p>.<p>ನಮ್ಮಲ್ಲಿ ನೂರು ಒಳ್ಳೆಯ ಗುಣಗಳು ಇರಬಹುದು; ನಮ್ಮದು ಸಾವಿರ ಸಾಧನೆಗಳೂ ಇರಬಹುದು. ಆದರೆ ಅವುಗಳಿಗೆ ಬೆಲೆ ಬರುವುದು ನಮ್ಮಲ್ಲಿ ವಿನಯ ಇದ್ದಾಗ ಮಾತ್ರ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಖ್ಯಾತ ಹಿನ್ನೆಲೆಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ವಿನಯಗುಣವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಅಷ್ಟೆಲ್ಲ ಸಾಧನೆಮಾಡಿದ್ದರೂ ಅವರಲ್ಲಿ ಅಹಂಕಾರ ಇರಲಿಲ್ಲ; ವಿನಯದ ಮೂರ್ತರೂಪವೇ ಆಗಿದ್ದ ಅವರನ್ನು ಜನರು ನೂರ್ಕಾಲ ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ.</p>.<p>ನಮ್ಮ ಕಾಲದ ದೊಡ್ಡ ದುರಂತ ಎಂದರೆ ನಮಗೆ ವಿನಯದ ಬೆಲೆ ಗೊತ್ತಿಲ್ಲ; ವಿನಯದ ಸೊಗಸೂ ಗೊತ್ತಿಲ್ಲ. ವಿನಯವೇ ನಮ್ಮ ಎಲ್ಲ ಸಾಧನೆಗಳನ್ನೂ ಕಾಪಾಡುವ ಮಹಾಶಕ್ತಿ ಎಂಬುದನ್ನು ನಾವು ಇನ್ನಾದರೂ ತಿಳಿದುಕೊಳ್ಳಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ</p>.<p>ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್ ।</p>.<p>ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ</p>.<p>ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಆಕಾಶಕ್ಕೆ ಸೂರ್ಯನೂ, ಕಮಲವನಕ್ಕೆ ದುಂಬಿಯೂ, ಮಾತಿಗೆ ಸತ್ಯವೂ, ಹೆಚ್ಚಾಗಿರುವ ಸಂಪತ್ತಿಗೆ ದಾನವೂ, ಮನಸ್ಸಿಗೆ ಸ್ನೇಹವೂ, ವಸಂತಕಾಲಕ್ಕೆ ಪ್ರೇಮವೂ, ಸಭೆಗೆ ಸೂಕ್ತಿಯೂ, ಎಲ್ಲ ಗುಣಗಳಿಗೂ ವಿನಯವೂ ಭೂಷಣಗಳು.‘</p>.<p>ಪ್ರತಿಯೊಂದು ವಸ್ತುವಿಗೂ ಅದರ ಸೊಗಸನ್ನು ಹೆಚ್ಚಿಸಬಲ್ಲ ಅದರದ್ದೇ ಆದ ಅಂಗವೊಂದು ಇದ್ದೇ ಇರುತ್ತದೆ; ಸೊಗಸಿನ ಜೊತೆಗೆ ಅದು ಅದರ ಬೆಲೆಯನ್ನೂ ಹೆಚ್ಚಿಸುತ್ತದೆ. ಆ ವಸ್ತುವಿನ ಪ್ರಯೋಜನಕ್ಕೂ ಸಾರ್ಥಕತೆಗೂ ಅದು ಕಾರಣವಾಗಿರುತ್ತದೆ. ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು.</p>.<p>ಇಡಿಯ ಆಕಾಶಕ್ಕೆ ಭೂಷಣ ಎಂದರೆ ಸೂರ್ಯ. ಹೌದು, ಸೂರ್ಯನಿಲ್ಲದ ಆಕಾಶವನ್ನು ಊಹಿಸಿಕೊಳ್ಳಲೂ ಆಗದು. ಕಮಲವನಕ್ಕೆ ದುಂಬಿಯೇ ಭೂಷಣ; ದುಂಬಿಗಳು ಅಲ್ಲಿವೆ ಎಂದರೆ ಹೂವಿನಲ್ಲಿ ಮಕರಂದವೂ ಇದೆ ಎಂಬುದು ಗೊತ್ತಾಗುತ್ತದೆ; ಜೊತೆಗೆ ಕಮಲಗಳ ದೃಶ್ಯವೈಭವಕ್ಕೆ ದುಂಬಿಗಳ ಝೇಂಕಾರ ಸಂಗೀತವಾಗಿ ಒದಗಿ, ಅಲ್ಲಿಯ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.</p>.<p>ಸಾವಿರ ಮಾತುಗಳನ್ನು ಆಡಬಹುದು; ಆದರೆ ಆ ಎಲ್ಲ ಮಾತುಗಳಿಗೂ ಒಂದು ವ್ಯಕ್ತಿತ್ವ ಬರುವುದೇ ಅವು ಸತ್ಯವನ್ನು ಹೇಳಲು ಹೊರಟಾಗ. ಹೀಗಾಗಿ ಮಾತಿಗೆ ಭೂಷಣವೇ ಸತ್ಯ.</p>.<p>ನಮ್ಮ ಸಂಪತ್ತಿಗೆ ಅಲಂಕಾರ ಯಾವುದು? ದಾನವೇ ಸಂಪತ್ತಿಗೆ ಭೂಷಣ. ನಾವು ಕೂಡಿಟ್ಟ ಸಂಪತ್ತು ನಾಲ್ಕು ಜನರಿಗೆ ಉಪಯೋಗವಾಗಬೇಕು; ಆದರೆ ಅದಕ್ಕೆ ಸಾರ್ಥಕತೆ.</p>.<p>ಸ್ನೇಹವೇ ಮನಸ್ಸಿಗೆ ಭೂಷಣ ಎಂದಿದೆ ಸುಭಾಷಿತ. ಮನಸ್ಸಿನ ವೈಶಾಲ್ಯಕ್ಕೂ ಇದು ಸಂಕೇತ; ಸೊಗಸಿಗೂ ಸಂಕೇತ; ಆರೋಗ್ಯಕ್ಕೂ ಸಂಕೇತ.</p>.<p>ಪ್ರಕೃತಿಯಲ್ಲಿ ಕಾಣುವ ಸುಂದರ ಋತು ಎಂದರೆ ವಸಂತಋತು. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇದರ ಸಾರ್ಥಕತೆ ಪ್ರೇಮಭಾವದಲ್ಲಿಯೇ ಇದೆ.ಪ್ರೀತಿ–ಪ್ರೇಮ–ಶೃಂಗಾರಗಳಿಗೆ ಇದು ಒಪ್ಪುವಂಥ ಸಮಯವೂ ಹೌದು. ಹೀಗಾಗಿ ವಸಂತಸಮಯದಲ್ಲಿ ಮನ್ಮಥನೇ ಭೂಷಣ.</p>.<p>ಸಭೆ ಎಂದರೆ ಭಾಷಣ ಆಗಬಹುದು; ನಾಲ್ಕಾರು ಜನರ ಮಧ್ಯೆ ನಿಂತು ಆಡುವ ಮಾತುಗಳು. ಈ ಮಾತುಗಳಿಗೆ ಕಳೆ ಬರುವುದೇ ಸೂಕ್ತಿಗಳ ಮೂಲಕ. ಸೂಕ್ತಿ ಎಂದರೇನೆ ಒಳ್ಳೆಯ ಮಾತು ಎಂಬ ಅರ್ಥವಿದೆ. ಮಹಾಪುರುಷರ ವಿಚಾರಪ್ರದ ಮಾತುಗಳೂ ಸೂಕ್ತಿಗಳೇ ಹೌದು. ಸುಂದರವೂ ಅರ್ಥಪೂರ್ಣವೂ ಆದ ಸೂಕ್ತಿಗಳನ್ನು ಉದ್ಧರಿಸಿ ಮಾತನಾಡಿದರೆ ಇಡಿಯ ಪರಿಸರಕ್ಕೇ ಜೀವಕಳೆ ಬರುತ್ತದೆ; ಕೇಳುಗರಲ್ಲೂ ಆಕರ್ಷಣೆ–ಉತ್ಸಾಹಗಳು ಹೆಚ್ಚುತ್ತವೆ.</p>.<p>ನಮ್ಮಲ್ಲಿ ನೂರು ಒಳ್ಳೆಯ ಗುಣಗಳು ಇರಬಹುದು; ನಮ್ಮದು ಸಾವಿರ ಸಾಧನೆಗಳೂ ಇರಬಹುದು. ಆದರೆ ಅವುಗಳಿಗೆ ಬೆಲೆ ಬರುವುದು ನಮ್ಮಲ್ಲಿ ವಿನಯ ಇದ್ದಾಗ ಮಾತ್ರ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಖ್ಯಾತ ಹಿನ್ನೆಲೆಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ವಿನಯಗುಣವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಅಷ್ಟೆಲ್ಲ ಸಾಧನೆಮಾಡಿದ್ದರೂ ಅವರಲ್ಲಿ ಅಹಂಕಾರ ಇರಲಿಲ್ಲ; ವಿನಯದ ಮೂರ್ತರೂಪವೇ ಆಗಿದ್ದ ಅವರನ್ನು ಜನರು ನೂರ್ಕಾಲ ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ.</p>.<p>ನಮ್ಮ ಕಾಲದ ದೊಡ್ಡ ದುರಂತ ಎಂದರೆ ನಮಗೆ ವಿನಯದ ಬೆಲೆ ಗೊತ್ತಿಲ್ಲ; ವಿನಯದ ಸೊಗಸೂ ಗೊತ್ತಿಲ್ಲ. ವಿನಯವೇ ನಮ್ಮ ಎಲ್ಲ ಸಾಧನೆಗಳನ್ನೂ ಕಾಪಾಡುವ ಮಹಾಶಕ್ತಿ ಎಂಬುದನ್ನು ನಾವು ಇನ್ನಾದರೂ ತಿಳಿದುಕೊಳ್ಳಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>