<p><strong>ಕ್ಚಚಿದ್ವಿದ್ವಗೋಷ್ಠೀ ಕ್ವಚಿದಪಿ ಸುರಾಮತ್ತಕಲಹಃ</strong></p>.<p><strong>ಕ್ವಚಿದ್ವೀಣಾನಾದಃ ಕ್ವಚಿದಪಿ ಚ ಹಾಹೇತಿ ರುದಿತಮ್ ।</strong></p>.<p><strong>ಕ್ವಚಿದ್ರಮ್ಯಾ ರಾಮಾ ಕ್ವಚಿದಪಿ ಜರಾಜರ್ಜರತನುಃ</strong></p>.<p><strong>ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಒಂದು ಕಡೆ ವಿದ್ವಾಂಸರ ಗೋಷ್ಠಿ; ಇನ್ನೊಂದು ಕಡೆ ಹೆಂಡಕುಡುಕರ ಜಗಳ. ಒಂದು ಕಡೆ ವೀಣಾನಾದ; ಇನ್ನೊಂದೆಡೆ ಹಾಹಾ ಎಂಬ ರೋದನ. ಒಂದು ಕಡೆ ಸುಂದರಿಯಾದ ತರುಣಿ; ಇನ್ನೊಂದು ಕಡೆ ಮುಪ್ಪಿನಿಂದ ಸೊರಗಿದ ಮುದುಕಿ. ಈ ಸಂಸಾರವು ಅಮೃತಮಯವೋ ವಿಷಯವೋ – ತಿಳಿಯುತ್ತಿಲ್ಲ.‘</p>.<p>ಜೀವನ ಎನ್ನುವುದು ಸಂಕೀರ್ಣ; ಹಲವು ವೈರುದ್ಧ್ಯಗಳ ನಡುವೆಯೇ ನಡೆಯುತ್ತಿರುತ್ತದೆ. ಹೀಗಾಗಿ ಜೀವನವನ್ನು ಹೀಗೆ – ಎಂದು ಹೇಳಲು ಕಷ್ಟವಾಗುತ್ತದೆ. ಒಮ್ಮೆ ಜೀವನ ಸುಖಮಯ ಎಂದು ಅನಿಸುತ್ತಿರುತ್ತದೆ; ಮರುಕ್ಷಣವೇ ಇಲ್ಲ ದುಃಖಮಯ ಎನಿಸಿಕೊಳ್ಳುತ್ತಿದೆ. ಸುಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ; ದುಃಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ. ಆದರೆ ಸುಖಮಯ ಎನ್ನುವುದೋ ಅಥವಾ ದುಃಖಮಯ ಎನ್ನುವುದೋ – ಹೇಗೆ ನಿರ್ಧರಿಸುವುದು.</p>.<p>ಸುಭಾಷಿತ ಹೇಳುತ್ತಿರುವುದು ಇದನ್ನೇ. ನಮಗೆ ಹಿತವಾಗಿರುವಂಥ ವಿವರಗಳೂ ಜೀವನದಲ್ಲಿ ಎದುರಾಗುತ್ತಲೇ ಇರುತ್ತವೆ, ಅಹಿತವಾಗಿರುವಂಥವೂ ಎದುರಾಗುತ್ತಲೇ ಇರುತ್ತವೆ. ಇದರ ನಡುವೆ ನಮಗೆ ಪ್ರಶ್ನೆಯೊಂದು ಉಳಿದುಕೊಳ್ಳುತ್ತದೆ: ಜೀವನಕ್ಕೆ ಅರ್ಥವೇನು?</p>.<p>ಬಸವಣ್ಣನವರ ವಚನವೊಂದನ್ನು ಈ ಸುಭಾಷಿತದ ಜೊತೆ ನೋಡಬಹುದು:</p>.<p><strong>ಹಬ್ಬಕ್ಕೆ ತಂದ ಹರಕೆಯ ಕುರಿ</strong></p>.<p><strong>ತೋರಣಕ್ಕೆ ತಂದ ತಳಿರ ಮೇಯಿತ್ತು !</strong></p>.<p><strong>ಕೊಂದಹರೆಂಬುದನರಿಯದೆ</strong></p>.<p><strong>ಬೆಂದ ಒಡಲ ಹೊರೆಯಹೋಯಿತ್ತಲ್ಲದೆ !</strong></p>.<p><strong>ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು:</strong></p>.<p><strong>ಕೊಂದವರುಳಿದರೆ ಕೂಡಲಸಂಗಮದೇವ ?</strong></p>.<p>ಜೀವನವನ್ನು ಹಬ್ಬ ಎಂದು ಭಾವಿಸಿಕೊಂಡು ಸಂಭ್ರಮಪಡುತ್ತಿರುತ್ತೇವೆ. ಆದರೆ ಆ ಸಂಭ್ರಮದ ಒಡಲಲ್ಲಿಯೇ ದುಃಖದ ಮಡುವೂ ತುಂಬಿಕೊಂಡಿರುತ್ತದೆ; ಆದರೆ ಅದು ಆ ಕ್ಷಣ ನಮ್ಮ ಗಮನಕ್ಕೆ ಬಂದಿರುವುದಿಲ್ಲ.</p>.<p>ಬಲಿ ಕೊಡಲು ಕುರಿಯೊಂದನ್ನು ತಂದಿದ್ದಾರೆ; ಆದರೆ ಪಾಪ! ಆ ಕುರಿಗೆ ಇದು ಹೇಗೆ ಗೊತ್ತಾದೀತು? ಹಬ್ಬದಲ್ಲಿ ಕಟ್ಟಲು ತೋರಣವನ್ನು ಸಿದ್ಧಮಾಡಿಟ್ಟಿದ್ದಾರೆ. ಆ ಕುರಿ ಅದನ್ನೇ ತಿನ್ನುತ್ತಿದೆಯಂತೆ, ಮುಂದಿನ ಕ್ಷಣವೇ ಅದಕ್ಕೆ ಸಾವು ಇದೆ ಎಂದು ತಿಳಿಯದೆಯೇ!</p>.<p>ನಮ್ಮ ಜೀವನದಲ್ಲಿ ಎದುರಾಗುವ ಸುಖದ ಸಂದರ್ಭಗಳೂ ಹೀಗೇ ಇರುತ್ತವೆ; ಅಥವಾ ಕಷ್ಟಪರಂಪರೆಗಳೂ ಹೀಗೇ ಇರುತ್ತವೆ – ಒಂದು ಇನ್ನೊಂದರಲ್ಲಿ ಬೆರೆತುಕೊಂಡಿರುತ್ತದೆ.</p>.<p>ಮಂಕುತಿಮ್ಮನ ಕಗ್ಗದ ಪದ್ಯವೊಂದು ಹೀಗಿದೆ:</p>.<p><strong>ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।<br />ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ।।<br />ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।<br />ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ।।</strong></p>.<p>ಜೀವನದಲ್ಲಿ ಇಂಥ ವೈರುದ್ಧ್ಯಗಳೇ ತುಂಬಿ ತುಳುಕುತ್ತಿದ್ದರೂ ನಮಗೆ ಅದನ್ನು ಮೀರಿ ನಡೆಯುವಂಥ ಅವಕಾಶ ಇಲ್ಲ. ನಾವು ಹತ್ತಿ ಕುಳಿತಿರುವ ಜಟಕಾಬಂಡಿಯನ್ನು ನಡೆಸುತ್ತಿರುವವನು ಬೇರೊಬ್ಬನಿದ್ದಾನೆ; ನಾವು ಪ್ರಯಾಣಿಕರು ಮಾತ್ರವಷ್ಟೆ. ಪ್ರಯಾಣದ ದಿಕ್ಕನ್ನೇ ನಿಯಂತ್ರಿಸಬಲ್ಲ ಚುಕ್ಕಾಣಿಯಾಗಲೀ ಶಕ್ತಿಯಾಗಲೀ ನಮಗೆ ಒದಗಿಲ್ಲ. ಹೀಗಾಗಿ ಜೀವನ ನಮ್ಮನ್ನು ಕರೆದುಕೊಂಡುಹೋಗುವ ದಿಕ್ಕಿಗೆ ನಾವು ಹಜ್ಜೆ ಹಾಕಬೇಕಷ್ಟೆ.</p>.<p>ಆದರೆ ನಾವು ಈ ಕಾರಣದಿಂದ ಹೆದರಬೇಕಿಲ್ಲ, ಧೃತಿಗೆಡಬೇಕಿಲ್ಲ ಎಂದೂ ಡಿವಿಜಿಯವರು ಹೇಳುತ್ತಿದ್ದಾರೆ. ಈ ಪ್ರಯಾಣದಲ್ಲಿ ನಾವು ಬೀಳಬಹುದು; ಆದರೆ ಅದರಿಂದ ಹೆದರಬೇಡಿ. ಏಕೆಂದರೆ ನಾವು ಬಿದ್ದರೆ ಎಲ್ಲಿ ಬೀಳುತ್ತೇವೆ? ಈ ನೆಲದ ಮೇಲೆಯೇ ಬೀಳುತ್ತೇವೆ; ಭೂಮಿಯ ಒಳಗೆ, ಪಾತಾಳಕ್ಕೆ ಜಾರುವುದಿಲ್ಲವಷ್ಟೆ! ಪದ ಕುಸಿಯೆ ನೆಲವಿಹದು – ಎಂದರೆ ಕಾಲು ಸೋತಾಗ ನೆಲದ ಮೇಲೆ ಕುಸಿಯುತ್ತವೇಯೇ ಹೊರತು ಪಾತಾಳವನ್ನು ಸೇರುವುದಿಲ್ಲ. ಹೀಗಾಗಿ ಜೀವನದಲ್ಲಿ ಬಂದದ್ದನ್ನು ಧೈರ್ಯವಾಗಿ ಸ್ವೀಕರಿಸಿ, ಮುಂದಕ್ಕೆ ಸಾಗುವುದನ್ನು ಕಲಿಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ಚಚಿದ್ವಿದ್ವಗೋಷ್ಠೀ ಕ್ವಚಿದಪಿ ಸುರಾಮತ್ತಕಲಹಃ</strong></p>.<p><strong>ಕ್ವಚಿದ್ವೀಣಾನಾದಃ ಕ್ವಚಿದಪಿ ಚ ಹಾಹೇತಿ ರುದಿತಮ್ ।</strong></p>.<p><strong>ಕ್ವಚಿದ್ರಮ್ಯಾ ರಾಮಾ ಕ್ವಚಿದಪಿ ಜರಾಜರ್ಜರತನುಃ</strong></p>.<p><strong>ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಒಂದು ಕಡೆ ವಿದ್ವಾಂಸರ ಗೋಷ್ಠಿ; ಇನ್ನೊಂದು ಕಡೆ ಹೆಂಡಕುಡುಕರ ಜಗಳ. ಒಂದು ಕಡೆ ವೀಣಾನಾದ; ಇನ್ನೊಂದೆಡೆ ಹಾಹಾ ಎಂಬ ರೋದನ. ಒಂದು ಕಡೆ ಸುಂದರಿಯಾದ ತರುಣಿ; ಇನ್ನೊಂದು ಕಡೆ ಮುಪ್ಪಿನಿಂದ ಸೊರಗಿದ ಮುದುಕಿ. ಈ ಸಂಸಾರವು ಅಮೃತಮಯವೋ ವಿಷಯವೋ – ತಿಳಿಯುತ್ತಿಲ್ಲ.‘</p>.<p>ಜೀವನ ಎನ್ನುವುದು ಸಂಕೀರ್ಣ; ಹಲವು ವೈರುದ್ಧ್ಯಗಳ ನಡುವೆಯೇ ನಡೆಯುತ್ತಿರುತ್ತದೆ. ಹೀಗಾಗಿ ಜೀವನವನ್ನು ಹೀಗೆ – ಎಂದು ಹೇಳಲು ಕಷ್ಟವಾಗುತ್ತದೆ. ಒಮ್ಮೆ ಜೀವನ ಸುಖಮಯ ಎಂದು ಅನಿಸುತ್ತಿರುತ್ತದೆ; ಮರುಕ್ಷಣವೇ ಇಲ್ಲ ದುಃಖಮಯ ಎನಿಸಿಕೊಳ್ಳುತ್ತಿದೆ. ಸುಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ; ದುಃಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ. ಆದರೆ ಸುಖಮಯ ಎನ್ನುವುದೋ ಅಥವಾ ದುಃಖಮಯ ಎನ್ನುವುದೋ – ಹೇಗೆ ನಿರ್ಧರಿಸುವುದು.</p>.<p>ಸುಭಾಷಿತ ಹೇಳುತ್ತಿರುವುದು ಇದನ್ನೇ. ನಮಗೆ ಹಿತವಾಗಿರುವಂಥ ವಿವರಗಳೂ ಜೀವನದಲ್ಲಿ ಎದುರಾಗುತ್ತಲೇ ಇರುತ್ತವೆ, ಅಹಿತವಾಗಿರುವಂಥವೂ ಎದುರಾಗುತ್ತಲೇ ಇರುತ್ತವೆ. ಇದರ ನಡುವೆ ನಮಗೆ ಪ್ರಶ್ನೆಯೊಂದು ಉಳಿದುಕೊಳ್ಳುತ್ತದೆ: ಜೀವನಕ್ಕೆ ಅರ್ಥವೇನು?</p>.<p>ಬಸವಣ್ಣನವರ ವಚನವೊಂದನ್ನು ಈ ಸುಭಾಷಿತದ ಜೊತೆ ನೋಡಬಹುದು:</p>.<p><strong>ಹಬ್ಬಕ್ಕೆ ತಂದ ಹರಕೆಯ ಕುರಿ</strong></p>.<p><strong>ತೋರಣಕ್ಕೆ ತಂದ ತಳಿರ ಮೇಯಿತ್ತು !</strong></p>.<p><strong>ಕೊಂದಹರೆಂಬುದನರಿಯದೆ</strong></p>.<p><strong>ಬೆಂದ ಒಡಲ ಹೊರೆಯಹೋಯಿತ್ತಲ್ಲದೆ !</strong></p>.<p><strong>ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು:</strong></p>.<p><strong>ಕೊಂದವರುಳಿದರೆ ಕೂಡಲಸಂಗಮದೇವ ?</strong></p>.<p>ಜೀವನವನ್ನು ಹಬ್ಬ ಎಂದು ಭಾವಿಸಿಕೊಂಡು ಸಂಭ್ರಮಪಡುತ್ತಿರುತ್ತೇವೆ. ಆದರೆ ಆ ಸಂಭ್ರಮದ ಒಡಲಲ್ಲಿಯೇ ದುಃಖದ ಮಡುವೂ ತುಂಬಿಕೊಂಡಿರುತ್ತದೆ; ಆದರೆ ಅದು ಆ ಕ್ಷಣ ನಮ್ಮ ಗಮನಕ್ಕೆ ಬಂದಿರುವುದಿಲ್ಲ.</p>.<p>ಬಲಿ ಕೊಡಲು ಕುರಿಯೊಂದನ್ನು ತಂದಿದ್ದಾರೆ; ಆದರೆ ಪಾಪ! ಆ ಕುರಿಗೆ ಇದು ಹೇಗೆ ಗೊತ್ತಾದೀತು? ಹಬ್ಬದಲ್ಲಿ ಕಟ್ಟಲು ತೋರಣವನ್ನು ಸಿದ್ಧಮಾಡಿಟ್ಟಿದ್ದಾರೆ. ಆ ಕುರಿ ಅದನ್ನೇ ತಿನ್ನುತ್ತಿದೆಯಂತೆ, ಮುಂದಿನ ಕ್ಷಣವೇ ಅದಕ್ಕೆ ಸಾವು ಇದೆ ಎಂದು ತಿಳಿಯದೆಯೇ!</p>.<p>ನಮ್ಮ ಜೀವನದಲ್ಲಿ ಎದುರಾಗುವ ಸುಖದ ಸಂದರ್ಭಗಳೂ ಹೀಗೇ ಇರುತ್ತವೆ; ಅಥವಾ ಕಷ್ಟಪರಂಪರೆಗಳೂ ಹೀಗೇ ಇರುತ್ತವೆ – ಒಂದು ಇನ್ನೊಂದರಲ್ಲಿ ಬೆರೆತುಕೊಂಡಿರುತ್ತದೆ.</p>.<p>ಮಂಕುತಿಮ್ಮನ ಕಗ್ಗದ ಪದ್ಯವೊಂದು ಹೀಗಿದೆ:</p>.<p><strong>ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।<br />ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ।।<br />ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।<br />ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ।।</strong></p>.<p>ಜೀವನದಲ್ಲಿ ಇಂಥ ವೈರುದ್ಧ್ಯಗಳೇ ತುಂಬಿ ತುಳುಕುತ್ತಿದ್ದರೂ ನಮಗೆ ಅದನ್ನು ಮೀರಿ ನಡೆಯುವಂಥ ಅವಕಾಶ ಇಲ್ಲ. ನಾವು ಹತ್ತಿ ಕುಳಿತಿರುವ ಜಟಕಾಬಂಡಿಯನ್ನು ನಡೆಸುತ್ತಿರುವವನು ಬೇರೊಬ್ಬನಿದ್ದಾನೆ; ನಾವು ಪ್ರಯಾಣಿಕರು ಮಾತ್ರವಷ್ಟೆ. ಪ್ರಯಾಣದ ದಿಕ್ಕನ್ನೇ ನಿಯಂತ್ರಿಸಬಲ್ಲ ಚುಕ್ಕಾಣಿಯಾಗಲೀ ಶಕ್ತಿಯಾಗಲೀ ನಮಗೆ ಒದಗಿಲ್ಲ. ಹೀಗಾಗಿ ಜೀವನ ನಮ್ಮನ್ನು ಕರೆದುಕೊಂಡುಹೋಗುವ ದಿಕ್ಕಿಗೆ ನಾವು ಹಜ್ಜೆ ಹಾಕಬೇಕಷ್ಟೆ.</p>.<p>ಆದರೆ ನಾವು ಈ ಕಾರಣದಿಂದ ಹೆದರಬೇಕಿಲ್ಲ, ಧೃತಿಗೆಡಬೇಕಿಲ್ಲ ಎಂದೂ ಡಿವಿಜಿಯವರು ಹೇಳುತ್ತಿದ್ದಾರೆ. ಈ ಪ್ರಯಾಣದಲ್ಲಿ ನಾವು ಬೀಳಬಹುದು; ಆದರೆ ಅದರಿಂದ ಹೆದರಬೇಡಿ. ಏಕೆಂದರೆ ನಾವು ಬಿದ್ದರೆ ಎಲ್ಲಿ ಬೀಳುತ್ತೇವೆ? ಈ ನೆಲದ ಮೇಲೆಯೇ ಬೀಳುತ್ತೇವೆ; ಭೂಮಿಯ ಒಳಗೆ, ಪಾತಾಳಕ್ಕೆ ಜಾರುವುದಿಲ್ಲವಷ್ಟೆ! ಪದ ಕುಸಿಯೆ ನೆಲವಿಹದು – ಎಂದರೆ ಕಾಲು ಸೋತಾಗ ನೆಲದ ಮೇಲೆ ಕುಸಿಯುತ್ತವೇಯೇ ಹೊರತು ಪಾತಾಳವನ್ನು ಸೇರುವುದಿಲ್ಲ. ಹೀಗಾಗಿ ಜೀವನದಲ್ಲಿ ಬಂದದ್ದನ್ನು ಧೈರ್ಯವಾಗಿ ಸ್ವೀಕರಿಸಿ, ಮುಂದಕ್ಕೆ ಸಾಗುವುದನ್ನು ಕಲಿಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>