<p>ನಾಂತರಜ್ಞಾಃ ಶ್ರಿಯೋ ಜಾತು ಪ್ರಿಯೈರಾಸಾಂ ನ ಭೂಯತೇ ।</p>.<p>ಆಸಕ್ತಾಸ್ತಾಸ್ವಮೀ ಮೂಢಾಃ ವಾಮಶೀಲಾ ಹಿ ಜಂತವಃ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಸಂಪತ್ತು ನೀಚ ಮತ್ತು ಉತ್ತಮ ಎಂಬ ಅಂತರವನ್ನು ತಿಳಿಯದೆ ಎಲ್ಲರನ್ನೂ ಸೇರುತ್ತದೆ. ಯಾರೂ ಸಂಪತ್ತಿಗೆ ಪ್ರಿಯರಾಗಿ ಬಹುಕಾಲ ಇರುವುದು ಸಾಧ್ಯವಿಲ್ಲ. ಆದರೂ ಮೂರ್ಖರು ಮಾತ್ರ ಸಂಪತ್ತನ್ನು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ. ಏಕೆಂದರೆ ಜನರ ಸ್ವಭಾವವೇ ವಕ್ರ.‘</p>.<p>ಕೆಲವೊಮ್ಮೆ ನಾವು ಗೊಣಗಿಕೊಳ್ಳುವುದುಂಟು: ಸಂಪತ್ತು ಸೇರುವುದೇ ನೀಚರಿಗೆ, ಅಯೋಗ್ಯರಿಗೆ; ಒಳ್ಳೆಯವರು ಎಂದೂ ಬಡತನದಲ್ಲಿಯೇ ಇರಬೇಕಾಗುತ್ತದೆ.</p>.<p>ಆದರೆ ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದಕ್ಕಿಂತಲೂ ಭಿನ್ನವಾದ ವಿಷಯವನ್ನು. ಸಂಪತ್ತು ಎನ್ನುವುದು ಭೇದಮಾಡುವುದಿಲ್ಲ. ಇವನು ನೀಚ, ಇವನಲ್ಲಿಗೆ ಹೋಗಬಾರದು; ಇವನು ಉತ್ತಮ, ಇವನಲ್ಲಿಗೆ ಹೋಗಬೇಕು – ಹೀಗೆ ಯಾವುದೇ ಅಂತರ ಮಾಡದೆ ಅದು ಎಲ್ಲರಲ್ಲೂ ಹೋಗುತ್ತದೆ. ಸಂಪತ್ತು ಕಷ್ಟದಿಂದಲೂ ನಮ್ಮನ್ನು ಸೇರಿರಬಹುದು; ಮೋಸದಿಂದಲೂ ಸೇರಿರಬಹುದು.</p>.<p>ಸುಭಾಷಿತ ಇಲ್ಲಿ ಇನ್ನೊಂದು ಅಂಶವನ್ನೂ ನಮ್ಮ ಗಮನಕ್ಕೆ ತರುತ್ತಿದೆ. ಸಂಪತ್ತಿಗೆ ಯಾರೂ ಪ್ರಿಯರಾಗಿರಲೂ ಸಾಧ್ಯವಿಲ್ಲ. ಹೀಗಾಗಿ ಅದು ನೀಚರಲ್ಲೂ ಶಾಶ್ವತವಾಗಿ ಇರುವುದಿಲ್ಲ, ಸಜ್ಜನರಲ್ಲೂ ಶಾಶ್ವತವಾಗಿ ಇರುವುದಿಲ್ಲ. ಇದನ್ನೇ ಜನರ ಮಾತಿನಲ್ಲಿ ’ಲಕ್ಷ್ಮೀ ಚಂಚಲೆ‘ ಎಂದಾಗಿರುವುದು.</p>.<p>ಸಂಪತ್ತು ಶಾಶ್ವತವಾದುದಲ್ಲ; ಹೀಗಾಗಿ ಅದರ ಬಗ್ಗೆ ತುಂಬ ವ್ಯಾಮೋಹವನ್ನು ಇಟ್ಟುಕೊಳ್ಳಬಾರದು ಎಂದೂ ಸುಭಾಷಿತ ಎಚ್ಚರಿಕೆ ಕೊಡುತ್ತಿದೆ. ಹೀಗಿದ್ದರೂ ಮೂರ್ಖರು ಮಾತ್ರ ಸಂಪತ್ತು ಸ್ಥಿರವಾಗಿರುತ್ತದೆ ಎಂಬಂತೆ ನಡೆದುಕೊಳ್ಳುತ್ತಾರೆ. ಮನುಷ್ಯರ ಬುದ್ಧಿ ಯಾವಾಗಲೂ ಡೊಂಕು ತಾನೆ!</p>.<p>ಇದು ನಮ್ಮ ಗಮನಕ್ಕೂ ಬಂದಿರುತ್ತದೆ. ಅಥವಾ ಆ ಮೂರ್ಖರು ನಾವೇ ಆಗಿರಬಹುದು.</p>.<p>ಜೀವನದಲ್ಲಿ ಕೇವಲ ದುಡ್ಡು–ಸಂಪತ್ತುಗಳು ಮಾತ್ರವೇ ಮುಖ್ಯವಲ್ಲ. ಭೌತಿಕ ಸಂಪತ್ತಿನ ಹೊರತಾಗಿಯೂ ಇನ್ನೂ ಹಲವು ಸಂಪತ್ತುಗಳು ಇವೆ; ಮಾತ್ರವಲ್ಲ, ಅವು ನಮ್ಮ ಜೀವನವನ್ನು ದಿಟವಾಗಿಯೂ ಶ್ರೀಮಂತಗೊಳಿಸುತ್ತಿರುತ್ತವೆ. ಇದನ್ನು ನಾವು ಅರ್ಥಮಾಡಿಕೊಳ್ಳದೆ ಬರಿಯ ದುಡ್ಡಿನ ಹಿಂದೆ ಓಡಿದರೆ ಜೀವನದ ಸತ್ಯ ಶಿವ ಸುಂದರಗಳಿಂದ ವಂಚಿತರಾಗುತ್ತೇವಷ್ಟೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಂತರಜ್ಞಾಃ ಶ್ರಿಯೋ ಜಾತು ಪ್ರಿಯೈರಾಸಾಂ ನ ಭೂಯತೇ ।</p>.<p>ಆಸಕ್ತಾಸ್ತಾಸ್ವಮೀ ಮೂಢಾಃ ವಾಮಶೀಲಾ ಹಿ ಜಂತವಃ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಸಂಪತ್ತು ನೀಚ ಮತ್ತು ಉತ್ತಮ ಎಂಬ ಅಂತರವನ್ನು ತಿಳಿಯದೆ ಎಲ್ಲರನ್ನೂ ಸೇರುತ್ತದೆ. ಯಾರೂ ಸಂಪತ್ತಿಗೆ ಪ್ರಿಯರಾಗಿ ಬಹುಕಾಲ ಇರುವುದು ಸಾಧ್ಯವಿಲ್ಲ. ಆದರೂ ಮೂರ್ಖರು ಮಾತ್ರ ಸಂಪತ್ತನ್ನು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ. ಏಕೆಂದರೆ ಜನರ ಸ್ವಭಾವವೇ ವಕ್ರ.‘</p>.<p>ಕೆಲವೊಮ್ಮೆ ನಾವು ಗೊಣಗಿಕೊಳ್ಳುವುದುಂಟು: ಸಂಪತ್ತು ಸೇರುವುದೇ ನೀಚರಿಗೆ, ಅಯೋಗ್ಯರಿಗೆ; ಒಳ್ಳೆಯವರು ಎಂದೂ ಬಡತನದಲ್ಲಿಯೇ ಇರಬೇಕಾಗುತ್ತದೆ.</p>.<p>ಆದರೆ ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದಕ್ಕಿಂತಲೂ ಭಿನ್ನವಾದ ವಿಷಯವನ್ನು. ಸಂಪತ್ತು ಎನ್ನುವುದು ಭೇದಮಾಡುವುದಿಲ್ಲ. ಇವನು ನೀಚ, ಇವನಲ್ಲಿಗೆ ಹೋಗಬಾರದು; ಇವನು ಉತ್ತಮ, ಇವನಲ್ಲಿಗೆ ಹೋಗಬೇಕು – ಹೀಗೆ ಯಾವುದೇ ಅಂತರ ಮಾಡದೆ ಅದು ಎಲ್ಲರಲ್ಲೂ ಹೋಗುತ್ತದೆ. ಸಂಪತ್ತು ಕಷ್ಟದಿಂದಲೂ ನಮ್ಮನ್ನು ಸೇರಿರಬಹುದು; ಮೋಸದಿಂದಲೂ ಸೇರಿರಬಹುದು.</p>.<p>ಸುಭಾಷಿತ ಇಲ್ಲಿ ಇನ್ನೊಂದು ಅಂಶವನ್ನೂ ನಮ್ಮ ಗಮನಕ್ಕೆ ತರುತ್ತಿದೆ. ಸಂಪತ್ತಿಗೆ ಯಾರೂ ಪ್ರಿಯರಾಗಿರಲೂ ಸಾಧ್ಯವಿಲ್ಲ. ಹೀಗಾಗಿ ಅದು ನೀಚರಲ್ಲೂ ಶಾಶ್ವತವಾಗಿ ಇರುವುದಿಲ್ಲ, ಸಜ್ಜನರಲ್ಲೂ ಶಾಶ್ವತವಾಗಿ ಇರುವುದಿಲ್ಲ. ಇದನ್ನೇ ಜನರ ಮಾತಿನಲ್ಲಿ ’ಲಕ್ಷ್ಮೀ ಚಂಚಲೆ‘ ಎಂದಾಗಿರುವುದು.</p>.<p>ಸಂಪತ್ತು ಶಾಶ್ವತವಾದುದಲ್ಲ; ಹೀಗಾಗಿ ಅದರ ಬಗ್ಗೆ ತುಂಬ ವ್ಯಾಮೋಹವನ್ನು ಇಟ್ಟುಕೊಳ್ಳಬಾರದು ಎಂದೂ ಸುಭಾಷಿತ ಎಚ್ಚರಿಕೆ ಕೊಡುತ್ತಿದೆ. ಹೀಗಿದ್ದರೂ ಮೂರ್ಖರು ಮಾತ್ರ ಸಂಪತ್ತು ಸ್ಥಿರವಾಗಿರುತ್ತದೆ ಎಂಬಂತೆ ನಡೆದುಕೊಳ್ಳುತ್ತಾರೆ. ಮನುಷ್ಯರ ಬುದ್ಧಿ ಯಾವಾಗಲೂ ಡೊಂಕು ತಾನೆ!</p>.<p>ಇದು ನಮ್ಮ ಗಮನಕ್ಕೂ ಬಂದಿರುತ್ತದೆ. ಅಥವಾ ಆ ಮೂರ್ಖರು ನಾವೇ ಆಗಿರಬಹುದು.</p>.<p>ಜೀವನದಲ್ಲಿ ಕೇವಲ ದುಡ್ಡು–ಸಂಪತ್ತುಗಳು ಮಾತ್ರವೇ ಮುಖ್ಯವಲ್ಲ. ಭೌತಿಕ ಸಂಪತ್ತಿನ ಹೊರತಾಗಿಯೂ ಇನ್ನೂ ಹಲವು ಸಂಪತ್ತುಗಳು ಇವೆ; ಮಾತ್ರವಲ್ಲ, ಅವು ನಮ್ಮ ಜೀವನವನ್ನು ದಿಟವಾಗಿಯೂ ಶ್ರೀಮಂತಗೊಳಿಸುತ್ತಿರುತ್ತವೆ. ಇದನ್ನು ನಾವು ಅರ್ಥಮಾಡಿಕೊಳ್ಳದೆ ಬರಿಯ ದುಡ್ಡಿನ ಹಿಂದೆ ಓಡಿದರೆ ಜೀವನದ ಸತ್ಯ ಶಿವ ಸುಂದರಗಳಿಂದ ವಂಚಿತರಾಗುತ್ತೇವಷ್ಟೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>