<p><strong>ಅಗುಣಸ್ಯ ಹತಂ ರೂಪಂ ಅಶೀಲಸ್ಯ ಹತಂ ಕುಲಮ್ ।<br />ಅಸಿದ್ಧೇಸ್ತು ಹತಾ ವಿದ್ಯಾ ಅಭೋಗಸ್ಯ ಹತಂ ಧನಮ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಗುಣವಿಲ್ಲದ ರೂಪ, ಶೀಲವಿಲ್ಲದ ಕುಲ, ಸಿದ್ಧಿಯನ್ನು ಪಡೆಯದ ವಿದ್ಯೆ, ಅನುಭವಿಸದೆ ಇರುವವನ ಹಣ – ಇವು ನಾಲ್ಕು ಕೂಡ ಹತವಾದಂತೆಯೇ.’</p>.<p>ಸಾಮಾನ್ಯವಾಗಿ ನಮ್ಮ ಎಣಿಕೆಯಲ್ಲಿ ರೂಪ, ಕುಲ, ವಿದ್ಯೆ, ಹಣ – ಇವು ತುಂಬ ಮಹತ್ವವಾದದ್ದು. ಆದರೆ ಇವು ಸ್ವಯಂ ಮಹತ್ವದ್ದು ಎನಿಸದು, ಅವುಗಳ ಜೊತೆಗೆ ಇನ್ನಷ್ಟು ಗುಣಗಳು ಸೇರಿಕೊಂಡರೆ ಮಾತ್ರ ಇವುಗಳಿಗೆ ಮಹತ್ವ ಎಂಬುದನ್ನುಸುಭಾಷಿತ ಹೇಳುತ್ತಿದೆ.</p>.<p>ರೂಪವನ್ನು ನಾವು ಇಷ್ಟಪಡುತ್ತೇವೆ; ಆರಾಧಿಸುತ್ತೇವೆ. ರೂಪವನ್ನೇ ನಾವು ಗುಣ ಎಂದೂ ಅಂದುಕೊಳ್ಳುತ್ತೇವೆ. ಆದರೆ ಸುಭಾಷಿತ ಹೇಳುತ್ತಿದೆ: ಗುಣವಿಲ್ಲದ ರೂಪ ವ್ಯರ್ಥ; ರೂಪವಷ್ಟೇ ಇದ್ದರೆ ಆಗ ಅದು ಇದ್ದೂ ಇಲ್ಲದಂತೆಯೇ ಸರಿ. ಗುಣ ಎಂದರೆ ಒಳ್ಳೆಯ ನಡತೆ; ರೂಪವೇ ನಡತೆ ಅಲ್ಲವಷ್ಟೆ!</p>.<p>ಕುಲ ಎಂದರೆ ವಂಶ, ಕುಟುಂಬ. ನಾವು ಯಾವುದೋ ಒಂದು ದೊಡ್ಡ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೇ ದೊಡ್ಡವರಾಗುವುದಿಲ್ಲ. ಶೀಲಗಳನ್ನು ರೂಢಿಸಿಕೊಂಡರೆ ಮಾತ್ರವೇ ದೊಡ್ಡವರು ಆಗುವುದು. ಶೀಲ ಎಂದರೆ ಮಾನಸಿಕ ಮತ್ತು ದೈಹಿಕ ಶುದ್ಧ ನಡೆವಳಿಕೆಗಳು; ನೈತಿಕತೆ. ನಮ್ಮ ತಾತನೋ ಅವರಪ್ಪನೋ ದೊಡ್ಡ ವ್ಯಕ್ತಿಗಳಾಗಿದ್ದರು ಎಂದಮಾತ್ರಕ್ಕೆ ನಾವೂ ದೊಡ್ಡವರು ಆಗುವುದಿಲ್ಲ; ನಾವು ದೊಡ್ಡತನವನ್ನು ರೂಢಿಸಿಕೊಳ್ಳಬೇಕು, ಅಲ್ಲವೆ?</p>.<p>ಶಿಕ್ಷಣದ ಬಗ್ಗೆ ನಮಗೆ ಇಂದು ತುಂಬ ವ್ಯಾಮೋಹ. ಆದರೆ ಸುಭಾಷಿತ ಹೇಳುತ್ತಿದೆ – ನೀವು ವಿದ್ಯಾವಂತರು ಎಂದೆನಿಸಿಕೊಂಡರಷ್ಟೆ ಸಾಲದು, ಅದರ ಸಿದ್ಧಿಯನ್ನೂ ಪಡೆದುಕೊಂಡರೆ ಮಾತ್ರ ನಿಮ್ಮ ವಿದ್ಯೆಗೆ ಬೆಲೆ. ಸಿದ್ಧಿಯನ್ನು ಪಡೆಯುವುದು ಎಂದರೆ ನಾವು ಕಲಿತ ವಿದ್ಯೆ ಜೀವನಕ್ಕೆ ಒದಗಬೇಕು; ಜೀವನವನ್ನು ರೂಪಿಸಿಕೊಳ್ಳಲು ಅದು ನೇರವಾಗಿ ಪ್ರಯೋಜನಕ್ಕೆ ಬರಬೇಕು.</p>.<p>ಹಣ. ಇದು ಇರುವುದಾದರೂ ಏಕೆ? ಕೆಲವರು ಹಣ ಇರುವುದು ಕೂಡಿಡುವುದಕ್ಕೆ ಮಾತ್ರ ಎಂದುಕೊಂಡಿರುತ್ತಾರೆ. ಆದರೆ ನಮ್ಮ ಸಂಪಾದನೆ ನಮ್ಮ ನೆರವಿಗೆ ಬರಬೇಕು. ಅದರಿಂದ ನಮ್ಮ ಜೀವನವೂ ಚೆನ್ನಾಗಿ ಆಗಬೇಕು; ನಮ್ಮ ಮನೆಯವರ ಜೀವನವೂ ಚೆನ್ನಾಗಿ ಆಗಬೇಕು. ಸಮಾಜದ ಇತರ ನಾಲ್ಕು ಜನರ ಜೀವನವೂ ಚೆನ್ನಾಗಿ ಆಗಬೇಕು.</p>.<p>ಯಾವುದೇ ಸಾಧನೆ, ವಸ್ತುಗಳು ನಿಜವಾಗಿಯೂ ಸಾರ್ಥಕ ಎನಿಸಿಕೊಳ್ಳುವುದು ಅವುಗಳ ಜೀವನಕ್ಕೆ ಪೋಷಕವಾದಾಗಲೇ. ನಮ್ಮ ಬಳಿ ನೂರಾರು ಕೋಟಿ ಆಸ್ತಿ ಇರಬಹುದು; ಆದರೆ ಅದರ ಒಂದೇ ಒಂದು ಪೈಸೆಯಷ್ಟನ್ನೂ ನಾವು ಅನುಭವಿಸಲು ಆಗುತ್ತಿಲ್ಲ ಎಂದಾದಲ್ಲಿ, ಅಷ್ಟು ಹಣ ಇದ್ದೂ ಏನು ಪ್ರಯೋಜನ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಗುಣಸ್ಯ ಹತಂ ರೂಪಂ ಅಶೀಲಸ್ಯ ಹತಂ ಕುಲಮ್ ।<br />ಅಸಿದ್ಧೇಸ್ತು ಹತಾ ವಿದ್ಯಾ ಅಭೋಗಸ್ಯ ಹತಂ ಧನಮ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಗುಣವಿಲ್ಲದ ರೂಪ, ಶೀಲವಿಲ್ಲದ ಕುಲ, ಸಿದ್ಧಿಯನ್ನು ಪಡೆಯದ ವಿದ್ಯೆ, ಅನುಭವಿಸದೆ ಇರುವವನ ಹಣ – ಇವು ನಾಲ್ಕು ಕೂಡ ಹತವಾದಂತೆಯೇ.’</p>.<p>ಸಾಮಾನ್ಯವಾಗಿ ನಮ್ಮ ಎಣಿಕೆಯಲ್ಲಿ ರೂಪ, ಕುಲ, ವಿದ್ಯೆ, ಹಣ – ಇವು ತುಂಬ ಮಹತ್ವವಾದದ್ದು. ಆದರೆ ಇವು ಸ್ವಯಂ ಮಹತ್ವದ್ದು ಎನಿಸದು, ಅವುಗಳ ಜೊತೆಗೆ ಇನ್ನಷ್ಟು ಗುಣಗಳು ಸೇರಿಕೊಂಡರೆ ಮಾತ್ರ ಇವುಗಳಿಗೆ ಮಹತ್ವ ಎಂಬುದನ್ನುಸುಭಾಷಿತ ಹೇಳುತ್ತಿದೆ.</p>.<p>ರೂಪವನ್ನು ನಾವು ಇಷ್ಟಪಡುತ್ತೇವೆ; ಆರಾಧಿಸುತ್ತೇವೆ. ರೂಪವನ್ನೇ ನಾವು ಗುಣ ಎಂದೂ ಅಂದುಕೊಳ್ಳುತ್ತೇವೆ. ಆದರೆ ಸುಭಾಷಿತ ಹೇಳುತ್ತಿದೆ: ಗುಣವಿಲ್ಲದ ರೂಪ ವ್ಯರ್ಥ; ರೂಪವಷ್ಟೇ ಇದ್ದರೆ ಆಗ ಅದು ಇದ್ದೂ ಇಲ್ಲದಂತೆಯೇ ಸರಿ. ಗುಣ ಎಂದರೆ ಒಳ್ಳೆಯ ನಡತೆ; ರೂಪವೇ ನಡತೆ ಅಲ್ಲವಷ್ಟೆ!</p>.<p>ಕುಲ ಎಂದರೆ ವಂಶ, ಕುಟುಂಬ. ನಾವು ಯಾವುದೋ ಒಂದು ದೊಡ್ಡ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೇ ದೊಡ್ಡವರಾಗುವುದಿಲ್ಲ. ಶೀಲಗಳನ್ನು ರೂಢಿಸಿಕೊಂಡರೆ ಮಾತ್ರವೇ ದೊಡ್ಡವರು ಆಗುವುದು. ಶೀಲ ಎಂದರೆ ಮಾನಸಿಕ ಮತ್ತು ದೈಹಿಕ ಶುದ್ಧ ನಡೆವಳಿಕೆಗಳು; ನೈತಿಕತೆ. ನಮ್ಮ ತಾತನೋ ಅವರಪ್ಪನೋ ದೊಡ್ಡ ವ್ಯಕ್ತಿಗಳಾಗಿದ್ದರು ಎಂದಮಾತ್ರಕ್ಕೆ ನಾವೂ ದೊಡ್ಡವರು ಆಗುವುದಿಲ್ಲ; ನಾವು ದೊಡ್ಡತನವನ್ನು ರೂಢಿಸಿಕೊಳ್ಳಬೇಕು, ಅಲ್ಲವೆ?</p>.<p>ಶಿಕ್ಷಣದ ಬಗ್ಗೆ ನಮಗೆ ಇಂದು ತುಂಬ ವ್ಯಾಮೋಹ. ಆದರೆ ಸುಭಾಷಿತ ಹೇಳುತ್ತಿದೆ – ನೀವು ವಿದ್ಯಾವಂತರು ಎಂದೆನಿಸಿಕೊಂಡರಷ್ಟೆ ಸಾಲದು, ಅದರ ಸಿದ್ಧಿಯನ್ನೂ ಪಡೆದುಕೊಂಡರೆ ಮಾತ್ರ ನಿಮ್ಮ ವಿದ್ಯೆಗೆ ಬೆಲೆ. ಸಿದ್ಧಿಯನ್ನು ಪಡೆಯುವುದು ಎಂದರೆ ನಾವು ಕಲಿತ ವಿದ್ಯೆ ಜೀವನಕ್ಕೆ ಒದಗಬೇಕು; ಜೀವನವನ್ನು ರೂಪಿಸಿಕೊಳ್ಳಲು ಅದು ನೇರವಾಗಿ ಪ್ರಯೋಜನಕ್ಕೆ ಬರಬೇಕು.</p>.<p>ಹಣ. ಇದು ಇರುವುದಾದರೂ ಏಕೆ? ಕೆಲವರು ಹಣ ಇರುವುದು ಕೂಡಿಡುವುದಕ್ಕೆ ಮಾತ್ರ ಎಂದುಕೊಂಡಿರುತ್ತಾರೆ. ಆದರೆ ನಮ್ಮ ಸಂಪಾದನೆ ನಮ್ಮ ನೆರವಿಗೆ ಬರಬೇಕು. ಅದರಿಂದ ನಮ್ಮ ಜೀವನವೂ ಚೆನ್ನಾಗಿ ಆಗಬೇಕು; ನಮ್ಮ ಮನೆಯವರ ಜೀವನವೂ ಚೆನ್ನಾಗಿ ಆಗಬೇಕು. ಸಮಾಜದ ಇತರ ನಾಲ್ಕು ಜನರ ಜೀವನವೂ ಚೆನ್ನಾಗಿ ಆಗಬೇಕು.</p>.<p>ಯಾವುದೇ ಸಾಧನೆ, ವಸ್ತುಗಳು ನಿಜವಾಗಿಯೂ ಸಾರ್ಥಕ ಎನಿಸಿಕೊಳ್ಳುವುದು ಅವುಗಳ ಜೀವನಕ್ಕೆ ಪೋಷಕವಾದಾಗಲೇ. ನಮ್ಮ ಬಳಿ ನೂರಾರು ಕೋಟಿ ಆಸ್ತಿ ಇರಬಹುದು; ಆದರೆ ಅದರ ಒಂದೇ ಒಂದು ಪೈಸೆಯಷ್ಟನ್ನೂ ನಾವು ಅನುಭವಿಸಲು ಆಗುತ್ತಿಲ್ಲ ಎಂದಾದಲ್ಲಿ, ಅಷ್ಟು ಹಣ ಇದ್ದೂ ಏನು ಪ್ರಯೋಜನ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>