ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಎಸ್.ಸೂರ್ಯಪ್ರಕಾಶ್ ಪಂಡಿತ್ ಅವರು ಬರೆದ "ರಾಮಾಯಣ ರಸಯಾನ" ಎಂಬ ಅಂಕಣ ಬರಹ ಮತ್ತು ಅದಕ್ಕೆ ಪೂರಕವಾಗಿ ಬಿ.ಕೆ.ಎಸ್.ವರ್ಮಾ ಅವರ ಚಿತ್ರ - ಇವೆರಡೂ ಓದುಗರ ಮನ್ನಣೆಗೆ ಪಾತ್ರವಾಗಿದ್ದವು.
ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು. ರಾಮಾಯಣದ ಅಂತರಂಗದಲ್ಲಿ ಹಲವು ರಸಗಳ ಒರತೆಯಿದೆ; ಸಾಮಾಜಿಕ ತಲ್ಲಣಗಳಿವೆ; ರಾಜಕೀಯದ ಸಂಕ್ಷೋಭೆಗಳಿವೆ; ಶಾಸ್ತ್ರಗಳ ಅನುಸಂಧಾನವಿದೆ; ಜಾನಪದದ ಸಂವೇದನೆಗಳಿವೆ; ಭಾವಗಳ ಬೆದಕಾಟವಿದೆ; ಧನ್ಯತೆಯ ತಡಕಾಟವಿದೆ; ಜೀವನಕ್ಕೆ ಬೇಕಾದ ಆದರ್ಶಗಳಿವೆ; ಅಧ್ಯಾತ್ಮದ ಬೆಳಕಿದೆ; ಎಲ್ಲಕ್ಕಿಂತಲೂ ಮಿಗಿಲಾಗಿ ರಾಮಾಯಣವೇ ಜೀವನ ಎನಿಸಿದೆ.
ಈ ಎಲ್ಲ ದಾರಿಗಳ ಸಂಗಮವೇ ‘ರಾಮಾಯಣ ರಸಯಾನ’.
ಎಲ್ಲ ಅಂಕಣಗಳನ್ನು ನೀವು ಇಲ್ಲಿ ಓದಬಹುದು: https://www.prajavani.net/ramayana-rasayana