ಅಕ್ಷಯ ತೃತೀಯಾ ಎಂದ ಕೂಡಲೇ ಇತ್ತೀಚಿನ ವರ್ಷಗಳಲ್ಲಿ ಬಂಗಾರ, ಚಿನ್ನಾಭರಣದ ಅಂಗಡಿಗಳೇ ಕಣ್ಣಮುಂದೆ ಬರುತ್ತಿದ್ದವು. ಆದರೆ ಕಳೆದ ವರ್ಷದಿಂದ ಈ ಚಿತ್ರಣ ಬದಲಾದಂತಿದೆ. ಇದಕ್ಕೆ ಕಾರಣ ಚಿನ್ನವಾಗಲೀ ಅಂಗಡಿಗಳಾಗಲೀ ಅಲ್ಲ; ಕೋವಿಡ್ನ ಉಪಟಳ. ಲಾಕ್ಡೌನ್ನ ಕಾರಣದಿಂದಾಗಿ ಈ ಸಲವೂ ಜನರಿಗೆ ಬಂಗಾರವನ್ನು ಕೊಳ್ಳಲಾಗದಿರಬಹುದು! ಆದರೆ ಅಕ್ಷಯ ತೃತೀಯಕ್ಕೂ ಬಂಗಾರಕ್ಕೂ ನೇರ ಸಂಬಂಧವೇನೂ ಇಲ್ಲ. ಈ ದಿನ ನಾವು ಏನನ್ನೂ ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆಯ ಮೇಲೆ ಚಿನ್ನದ ನಂಟು ಗಟ್ಟಿಯಾದದ್ದಷ್ಟೆ. ಚಿನ್ನ ನಮ್ಮ ಭಾಗ್ಯಕ್ಕೆ ಸಂಕೇತ. ನಮ್ಮ ಸಂಪತ್ತು ಅಕ್ಷಯವಾಗಿರಲಿ ಎಂಬುದು ಇದರ ಹಿಂದಿರುವ ಮನೋಭಾವ.