<p>ಅಕ್ಷಯ ತೃತೀಯಾ ಎಂದ ಕೂಡಲೇ ಇತ್ತೀಚಿನ ವರ್ಷಗಳಲ್ಲಿ ಬಂಗಾರ, ಚಿನ್ನಾಭರಣದ ಅಂಗಡಿಗಳೇ ಕಣ್ಣಮುಂದೆ ಬರುತ್ತಿದ್ದವು. ಆದರೆ ಕಳೆದ ವರ್ಷದಿಂದ ಈ ಚಿತ್ರಣ ಬದಲಾದಂತಿದೆ. ಇದಕ್ಕೆ ಕಾರಣ ಚಿನ್ನವಾಗಲೀ ಅಂಗಡಿಗಳಾಗಲೀ ಅಲ್ಲ; ಕೋವಿಡ್ನ ಉಪಟಳ. ಲಾಕ್ಡೌನ್ನ ಕಾರಣದಿಂದಾಗಿ ಈ ಸಲವೂ ಜನರಿಗೆ ಬಂಗಾರವನ್ನು ಕೊಳ್ಳಲಾಗದಿರಬಹುದು! ಆದರೆ ಅಕ್ಷಯ ತೃತೀಯಕ್ಕೂ ಬಂಗಾರಕ್ಕೂ ನೇರ ಸಂಬಂಧವೇನೂ ಇಲ್ಲ. ಈ ದಿನ ನಾವು ಏನನ್ನೂ ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆಯ ಮೇಲೆ ಚಿನ್ನದ ನಂಟು ಗಟ್ಟಿಯಾದದ್ದಷ್ಟೆ. ಚಿನ್ನ ನಮ್ಮ ಭಾಗ್ಯಕ್ಕೆ ಸಂಕೇತ. ನಮ್ಮ ಸಂಪತ್ತು ಅಕ್ಷಯವಾಗಿರಲಿ ಎಂಬುದು ಇದರ ಹಿಂದಿರುವ ಮನೋಭಾವ.</p>.<p>ಇಂದು ನಮಗೆ ಬೇಕಾದ ದಿಟವಾದ ಭಾಗ್ಯ ಎಂದರೆ ಅದು ಆರೋಗ್ಯಭಾಗ್ಯವೇ ಹೌದು ಎಂಬುದು ಸ್ಪಷ್ಟವಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಅಕ್ಷಯ ತೃತೀಯಾದ ನಿಜವಾದ ತಾತ್ವಿಕತೆಯನ್ನು ಅನುಸಂಧಾನಿಸಬಹುದು.</p>.<p>ವೈಶಾಖಮಾಸದ ಶುಕ್ಲಪಕ್ಷದ ತೃತೀಯಾದಿನವೇ ‘ಅಕ್ಷಯ ತೃತೀಯಾ’. ಸತ್ಯಯುಗ ಆರಂಭವಾದದ್ದು ‘ಅಕ್ಷಯ ತೃತೀಯಾ’ದಂದು ಎನ್ನುವ ನಂಬಿಕೆ ಉಂಟು. ಅಂದು ಆಚರಿಸುವ ಆಚರಣೆಗಳು ಅಕ್ಷಯವಾದ, ಎಂದರೆ ಮಿತಿಯೇ ಇಲ್ಲದಷ್ಟು ಫಲವನ್ನು ಕೊಡುತ್ತದೆ ಎನ್ನುವುದು ಇದರ ಹೆಗ್ಗಳಿಕೆ. ಆದುದರಿಂದ ಈ ದಿನ ದೇವತಾಪೂಜೆಯನ್ನು ಆಚರಿಸಬೇಕು; ದಾನವನ್ನು ಕೊಡಬೇಕು; ಜಪವನ್ನು ಮಾಡಬೇಕು; ತೀರ್ಥಸ್ನಾನವನ್ನು ಮಾಡಬೇಕು; ಅಧ್ಯಯನವನ್ನು ಆಚರಿಸಬೇಕು – ಎನ್ನುವುದು ಸಂಪ್ರದಾಯದ ನಿಲುವು. ನಮ್ಮ ಆರೋಗ್ಯ ಅಕ್ಷಯವಾಗಿರಲಿ ಎಂಬ ಸಂಕಲ್ಪವನ್ನು ನಾವಿಂದು ಮಾಡೋಣ; ಅದಕ್ಕಾಗಿ ಅಗತ್ಯವಾಗಿರುವ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳೋಣ. ಅವುಗಳನ್ನು ಅನುಷ್ಠಾನಕ್ಕೂ ತರೋಣ. ಇವೇ ಈ ಸಲದ ಆಕ್ಷಯ ತೃತೀಯಾ ಆಚರಣೆಗಳಾಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಕ್ಷಯ ತೃತೀಯಾ ಎಂದ ಕೂಡಲೇ ಇತ್ತೀಚಿನ ವರ್ಷಗಳಲ್ಲಿ ಬಂಗಾರ, ಚಿನ್ನಾಭರಣದ ಅಂಗಡಿಗಳೇ ಕಣ್ಣಮುಂದೆ ಬರುತ್ತಿದ್ದವು. ಆದರೆ ಕಳೆದ ವರ್ಷದಿಂದ ಈ ಚಿತ್ರಣ ಬದಲಾದಂತಿದೆ. ಇದಕ್ಕೆ ಕಾರಣ ಚಿನ್ನವಾಗಲೀ ಅಂಗಡಿಗಳಾಗಲೀ ಅಲ್ಲ; ಕೋವಿಡ್ನ ಉಪಟಳ. ಲಾಕ್ಡೌನ್ನ ಕಾರಣದಿಂದಾಗಿ ಈ ಸಲವೂ ಜನರಿಗೆ ಬಂಗಾರವನ್ನು ಕೊಳ್ಳಲಾಗದಿರಬಹುದು! ಆದರೆ ಅಕ್ಷಯ ತೃತೀಯಕ್ಕೂ ಬಂಗಾರಕ್ಕೂ ನೇರ ಸಂಬಂಧವೇನೂ ಇಲ್ಲ. ಈ ದಿನ ನಾವು ಏನನ್ನೂ ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆಯ ಮೇಲೆ ಚಿನ್ನದ ನಂಟು ಗಟ್ಟಿಯಾದದ್ದಷ್ಟೆ. ಚಿನ್ನ ನಮ್ಮ ಭಾಗ್ಯಕ್ಕೆ ಸಂಕೇತ. ನಮ್ಮ ಸಂಪತ್ತು ಅಕ್ಷಯವಾಗಿರಲಿ ಎಂಬುದು ಇದರ ಹಿಂದಿರುವ ಮನೋಭಾವ.</p>.<p>ಇಂದು ನಮಗೆ ಬೇಕಾದ ದಿಟವಾದ ಭಾಗ್ಯ ಎಂದರೆ ಅದು ಆರೋಗ್ಯಭಾಗ್ಯವೇ ಹೌದು ಎಂಬುದು ಸ್ಪಷ್ಟವಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಅಕ್ಷಯ ತೃತೀಯಾದ ನಿಜವಾದ ತಾತ್ವಿಕತೆಯನ್ನು ಅನುಸಂಧಾನಿಸಬಹುದು.</p>.<p>ವೈಶಾಖಮಾಸದ ಶುಕ್ಲಪಕ್ಷದ ತೃತೀಯಾದಿನವೇ ‘ಅಕ್ಷಯ ತೃತೀಯಾ’. ಸತ್ಯಯುಗ ಆರಂಭವಾದದ್ದು ‘ಅಕ್ಷಯ ತೃತೀಯಾ’ದಂದು ಎನ್ನುವ ನಂಬಿಕೆ ಉಂಟು. ಅಂದು ಆಚರಿಸುವ ಆಚರಣೆಗಳು ಅಕ್ಷಯವಾದ, ಎಂದರೆ ಮಿತಿಯೇ ಇಲ್ಲದಷ್ಟು ಫಲವನ್ನು ಕೊಡುತ್ತದೆ ಎನ್ನುವುದು ಇದರ ಹೆಗ್ಗಳಿಕೆ. ಆದುದರಿಂದ ಈ ದಿನ ದೇವತಾಪೂಜೆಯನ್ನು ಆಚರಿಸಬೇಕು; ದಾನವನ್ನು ಕೊಡಬೇಕು; ಜಪವನ್ನು ಮಾಡಬೇಕು; ತೀರ್ಥಸ್ನಾನವನ್ನು ಮಾಡಬೇಕು; ಅಧ್ಯಯನವನ್ನು ಆಚರಿಸಬೇಕು – ಎನ್ನುವುದು ಸಂಪ್ರದಾಯದ ನಿಲುವು. ನಮ್ಮ ಆರೋಗ್ಯ ಅಕ್ಷಯವಾಗಿರಲಿ ಎಂಬ ಸಂಕಲ್ಪವನ್ನು ನಾವಿಂದು ಮಾಡೋಣ; ಅದಕ್ಕಾಗಿ ಅಗತ್ಯವಾಗಿರುವ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳೋಣ. ಅವುಗಳನ್ನು ಅನುಷ್ಠಾನಕ್ಕೂ ತರೋಣ. ಇವೇ ಈ ಸಲದ ಆಕ್ಷಯ ತೃತೀಯಾ ಆಚರಣೆಗಳಾಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>