<p>2026ರ ಜನವರಿ 3ರಂದು ‘ಬನದ ಹುಣ್ಣಿಮೆ’ ಅಥವಾ ‘ಬನಶಂಕರಿ ಪೂಜೆ’ಯನ್ನು ಆಚರಿಸಲಾಗುತ್ತದೆ. ಈ ದಿನ ಕೆಲವು ಆಚರಣೆಗಳನ್ನು ಪಾಲಿಸಿದರೆ ಪತಿಯ ಆಯಸ್ಸು ಗಟ್ಟಿಯಾಗುತ್ತದೆ. ಅಲ್ಲದೇ ಲಕ್ಷ್ಮೀಯ ಅನುಗ್ರಹವೂ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಬನಹುಣ್ಣಿಮೆ ಆಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.</p><p>ಬನದ ಹುಣ್ಣಿಮೆಯನ್ನು ಕೇರಳ ಹಾಗೂ ತಮಿಳುನಾಡಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಆಚರಿಸಲಾಗುತ್ತದೆ. ಈ ದಿನ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ. </p>.ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಸತ್ಯನಾರಾಯಣ ವ್ರತವನ್ನು ಹೀಗೆ ಮಾಡಿ.ಗಮನಿಸಿ: ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗುವುದು ನಿಷಿದ್ಧ.<p>ಹುಣ್ಣಿಮೆಯ ತಿಥಿಯಂದು ಆಚರಿಸುವ ಬನ ಹುಣ್ಣಿಮೆ ದಿನ ಉಪವಾಸವಿದ್ದು, ದೀಪ ಬೆಳಗಿಸಿ, ಮದುವೆಯಾಗಿರುವ ಹೆಣ್ಣು ಮಕ್ಕಳು ತನ್ನ ಪತಿಯ ಆಯಸ್ಸು, ಯಶಸ್ಸು ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿ ಎಂದು ಶಿವನನ್ನು ಪ್ರಾರ್ಥಿಸುತ್ತಾರೆ.</p><p>ಈ ದಿನ ಶಾಕಾಂಬರಿ ದೇವಿಯನ್ನು ಪೂಜಿಸುವುದರಿಂದ ಬಡತನ ದೂರವಾಗುವುದರ ಜೊತೆಗೆ ಗಂಡ ಹೆಂಡತಿಯ ಆರೋಗ್ಯ ವೃದ್ಧಿಯಾಗಿ ಆಯಸ್ಸು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ.</p><p><strong>ಪೂಜಾ ಸಮಯ:</strong> ಜನವರಿ 2ರ ಸಂಜೆ 6:35 ರಿಂದ ಜನವರಿ 3ರ ಮಧ್ಯಾಹ್ನ 03:32ಕ್ಕೆ ಮುಕ್ತಾಯವಾಗುತ್ತದೆ. </p><p>ವ್ರತ ಆಚರಿಸುವವರು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆ ಧರಿಸಬೇಕು. ಶಿವನ ಸ್ವರೂಪವಾದ ನಟರಾಜನ ಫೋಟೊ ಅಥವಾ ಮೂರ್ತಿಯನ್ನು ಇಟ್ಟು, ಹಾಲು ಮತ್ತು ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಬೇಕು. </p><p>ಈ ದಿನ ಶಿವನನ್ನು ಪೂಜಿಸುವುದರ ಜೊತೆಗೆ ಪಾರ್ವತಿಯನ್ನು ಪೂಜಿಸಬೇಕು. ಪೂಜೆಯಲ್ಲಿ ವಿಭೂತಿ ಇಡುವುದು ಕಡ್ಡಾಯ. ಪೂಜೆಯಾದ ನಂತರ ಆ ವಿಭೂತಿಯನ್ನು ಪುರುಷರು ಹಣೆಗೆ ಹಚ್ಚಿಕೊಳ್ಳುವುದರಿಂದ ಮನೆಯ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನಂಬಲಾಗಿದೆ.</p><p>ಈ ದಿನ ಶಿವ ಹಾಗೂ ಪಾರ್ವತಿಗೆ ವಿಶೇಷವಾಗಿ ಪೂಜೆ ಸಲ್ಲಿಸುವುದರಿಂದ ಮನೆಯ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2026ರ ಜನವರಿ 3ರಂದು ‘ಬನದ ಹುಣ್ಣಿಮೆ’ ಅಥವಾ ‘ಬನಶಂಕರಿ ಪೂಜೆ’ಯನ್ನು ಆಚರಿಸಲಾಗುತ್ತದೆ. ಈ ದಿನ ಕೆಲವು ಆಚರಣೆಗಳನ್ನು ಪಾಲಿಸಿದರೆ ಪತಿಯ ಆಯಸ್ಸು ಗಟ್ಟಿಯಾಗುತ್ತದೆ. ಅಲ್ಲದೇ ಲಕ್ಷ್ಮೀಯ ಅನುಗ್ರಹವೂ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಬನಹುಣ್ಣಿಮೆ ಆಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.</p><p>ಬನದ ಹುಣ್ಣಿಮೆಯನ್ನು ಕೇರಳ ಹಾಗೂ ತಮಿಳುನಾಡಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಆಚರಿಸಲಾಗುತ್ತದೆ. ಈ ದಿನ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ. </p>.ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಸತ್ಯನಾರಾಯಣ ವ್ರತವನ್ನು ಹೀಗೆ ಮಾಡಿ.ಗಮನಿಸಿ: ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗುವುದು ನಿಷಿದ್ಧ.<p>ಹುಣ್ಣಿಮೆಯ ತಿಥಿಯಂದು ಆಚರಿಸುವ ಬನ ಹುಣ್ಣಿಮೆ ದಿನ ಉಪವಾಸವಿದ್ದು, ದೀಪ ಬೆಳಗಿಸಿ, ಮದುವೆಯಾಗಿರುವ ಹೆಣ್ಣು ಮಕ್ಕಳು ತನ್ನ ಪತಿಯ ಆಯಸ್ಸು, ಯಶಸ್ಸು ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿ ಎಂದು ಶಿವನನ್ನು ಪ್ರಾರ್ಥಿಸುತ್ತಾರೆ.</p><p>ಈ ದಿನ ಶಾಕಾಂಬರಿ ದೇವಿಯನ್ನು ಪೂಜಿಸುವುದರಿಂದ ಬಡತನ ದೂರವಾಗುವುದರ ಜೊತೆಗೆ ಗಂಡ ಹೆಂಡತಿಯ ಆರೋಗ್ಯ ವೃದ್ಧಿಯಾಗಿ ಆಯಸ್ಸು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ.</p><p><strong>ಪೂಜಾ ಸಮಯ:</strong> ಜನವರಿ 2ರ ಸಂಜೆ 6:35 ರಿಂದ ಜನವರಿ 3ರ ಮಧ್ಯಾಹ್ನ 03:32ಕ್ಕೆ ಮುಕ್ತಾಯವಾಗುತ್ತದೆ. </p><p>ವ್ರತ ಆಚರಿಸುವವರು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆ ಧರಿಸಬೇಕು. ಶಿವನ ಸ್ವರೂಪವಾದ ನಟರಾಜನ ಫೋಟೊ ಅಥವಾ ಮೂರ್ತಿಯನ್ನು ಇಟ್ಟು, ಹಾಲು ಮತ್ತು ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಬೇಕು. </p><p>ಈ ದಿನ ಶಿವನನ್ನು ಪೂಜಿಸುವುದರ ಜೊತೆಗೆ ಪಾರ್ವತಿಯನ್ನು ಪೂಜಿಸಬೇಕು. ಪೂಜೆಯಲ್ಲಿ ವಿಭೂತಿ ಇಡುವುದು ಕಡ್ಡಾಯ. ಪೂಜೆಯಾದ ನಂತರ ಆ ವಿಭೂತಿಯನ್ನು ಪುರುಷರು ಹಣೆಗೆ ಹಚ್ಚಿಕೊಳ್ಳುವುದರಿಂದ ಮನೆಯ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನಂಬಲಾಗಿದೆ.</p><p>ಈ ದಿನ ಶಿವ ಹಾಗೂ ಪಾರ್ವತಿಗೆ ವಿಶೇಷವಾಗಿ ಪೂಜೆ ಸಲ್ಲಿಸುವುದರಿಂದ ಮನೆಯ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>