ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ| ಮತ್ತೊಮ್ಮೆ ಅವತರಿಸಿ

Last Updated 17 ಜನವರಿ 2020, 19:45 IST
ಅಕ್ಷರ ಗಾತ್ರ

ಸಿದ್ಧಗಂಗಾಶ್ರೀಮಠದ ಶಿವಕುಮಾರಸ್ವಾಮಿಗಳು ಶಿವೈಕ್ಯರಾಗಿ ಒಂದು ವರ್ಷವಾಯಿತು. ಸ್ವಾಮಿಗಳನ್ನು ಸ್ವರಿಸುತ್ತ ಈ ನುಡಿನಮನಗಳು...

ಇಡೀ ಭಾರತದ ಅತ್ಯಮೂಲ್ಯ ಸಂಪತ್ತು; ಕಣ್ಣಿಗೆ ಕಾಣಿಸುತ್ತಿದ್ದ ದೇವರು;ಸನ್ಯಾಸಜೀವನ ಎಂಬ ಪಥದಲ್ಲಿ ಪರಮಾದ್ಭುತವಾಗಿ ನಡೆದಾಡುತ್ತಿದ್ದ ದೇವರು; ತ್ರಿವಿಧ ದಾಸೋಹದ ಸಿರಿಯನ್ನು ಇಡೀ ಜಗತ್ತಿಗೆ ಸಾರಿದ ತ್ಯಾಗಜೀವಿ; ಅಗಣಿತರ ಬಾಳನ್ನು ಬೆಳಗಿದ ದಿವ್ಯಮಾನವ; ಸಿದ್ಧಗಂಗೆಯ ಅವತಾರಪುರುಷ; ಕಲ್ಲುಬಂಡೆಗಳ ಪ್ರದೇಶವಾಗಿದ್ದ ಸಿದ್ಧಗಂಗೆಯನ್ನು ನಂದನವನವನ್ನಾಗಿ ಪರಿವರ್ತಿಸಿದ ಋಷಿವರ್ಯ; ಸಿದ್ಧಗಂಗೆಕ್ಷೇತ್ರ ಶಿಕ್ಷಣಕಾಶಿಯಾಗಲು ಕಾಲವೆಲ್ಲವನ್ನೂ ಕರ್ಮದಲ್ಲೇ ಮಣಿಸಿ ಮುನ್ನಡೆದ ಕಾಯಕಯೋಗಿ; ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಮಠವನ್ನು ಅತ್ಯನ್ನತ ಮಟ್ಟಕ್ಕೆ ಏರಿಸಿದ ಶತಮಾನದ ಸಂತ; ಬತ್ತದ ಜೀವನದಿಯಾಗಿ ಬದುಕಿ, ಅನಂತದೆಡೆಗೆ ನಡೆದ ಯುಗಪುರುಷ; ಜಗಮೆಚ್ಚಿದ ಶಾಂತಿದೂತ; ತಪಸ್ವಿ; ಅನಾಥಬಂಧು; ಕೋಟ್ಯಂತರ ಭಕ್ತರ ದಾರಿದೀಪ; ಅಧ್ಯಾತ್ಮಜೀವಿ; ಮಹಾಮಾನವತಾವಾದಿ; ಲಕ್ಷಾಂತ ಮಕ್ಕಳಿಗೆ ಆಶ್ರಯದಾತ, ಅನ್ನದಾತ: ಮಠಾಧಿಪತಿಯಾಗಿ ಪವಾಡಗಳನ್ನು ಸೃಷ್ಟಿಸಿದ ಮಹಾಪುರುಷ; ಪ್ರಶಸ್ತಿ ಹೊಗಳಿಕೆ ಪ್ರಶಂಸೆಗಳಿಗೆ ಆಸೆಪಡದ ವೈರಾಗ್ಯಮೂರ್ತಿ; ಜಾತಿ ಮತ ಕುಲ ಪಂಗಡಗಳಿಗೆ ಅತೀತವಾಗಿ ಶ್ರೀಮಠವನ್ನು ಭಾವೈಕ್ಯತೆಗೆ ಸಾಕ್ಷಿಯಾಗಲು ಕಾರಣರಾದ ‘ಬುದ್ಧಿಯವರು’; ಸನ್ಯಾಸಾಶ್ರಮದ ರೀತಿ–ರಿವಾಜುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮಹಾಸನ್ಯಾಸಿ; ‘ವಸುದೈವ ಕುಟುಂಬಕಮ್‌’ ಎಂಬ ಮಾತಿಗೆ ಉದಾಹರಣೆಯಾಗಿ ಪವಿತ್ರಜೀವನವನ್ನು ನಡೆಸಿದ ಪರಮಯೋಗಿ; ಜನಮಾಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸಿದ್ಧಗಂಗಾರತ್ನ; ಕರ್ನಾಟಕದ ಅನರ್ಘ್ಯರತ್ನ; ಭಾರತಮಾತೆಯ ಹೆಮ್ಮೆಯ ಪುತ್ರ; ವಿಶ್ವಮಾನ್ಯರಾದ ಮೇರುವ್ಯಕ್ತಿತ್ವ; ಜಗದ್ವಂದ್ಯ; ಶಿವೈಕ್ಯರಾಗಿ ಆತ್ಮರೂಪಿಯಾಗಿ ಗದ್ದುಗನ್ನೆಯನ್ನೇರಿ ಕೈಲಾಸವನ್ನು ಸೇರಿದ ಶಿವಕುಮಾರಸ್ವಾಮಿಯವರಿಗೆ ಗುರುಭಕ್ತಿಪೂರ್ವಕ ನುಡಿನಮನಗಳು.

ವಿಶ್ವಕಲ್ಯಾಣಕ್ಕಾಗಿ ಮತ್ತೊಮ್ಮೆ ಅವತರಿಸಿ ಬನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT