<p><em><strong>ಸಿದ್ಧಗಂಗಾಶ್ರೀಮಠದ ಶಿವಕುಮಾರಸ್ವಾಮಿಗಳು ಶಿವೈಕ್ಯರಾಗಿ ಒಂದು ವರ್ಷವಾಯಿತು. ಸ್ವಾಮಿಗಳನ್ನು ಸ್ವರಿಸುತ್ತ ಈ ನುಡಿನಮನಗಳು...</strong></em></p>.<p>ಇಡೀ ಭಾರತದ ಅತ್ಯಮೂಲ್ಯ ಸಂಪತ್ತು; ಕಣ್ಣಿಗೆ ಕಾಣಿಸುತ್ತಿದ್ದ ದೇವರು;ಸನ್ಯಾಸಜೀವನ ಎಂಬ ಪಥದಲ್ಲಿ ಪರಮಾದ್ಭುತವಾಗಿ ನಡೆದಾಡುತ್ತಿದ್ದ ದೇವರು; ತ್ರಿವಿಧ ದಾಸೋಹದ ಸಿರಿಯನ್ನು ಇಡೀ ಜಗತ್ತಿಗೆ ಸಾರಿದ ತ್ಯಾಗಜೀವಿ; ಅಗಣಿತರ ಬಾಳನ್ನು ಬೆಳಗಿದ ದಿವ್ಯಮಾನವ; ಸಿದ್ಧಗಂಗೆಯ ಅವತಾರಪುರುಷ; ಕಲ್ಲುಬಂಡೆಗಳ ಪ್ರದೇಶವಾಗಿದ್ದ ಸಿದ್ಧಗಂಗೆಯನ್ನು ನಂದನವನವನ್ನಾಗಿ ಪರಿವರ್ತಿಸಿದ ಋಷಿವರ್ಯ; ಸಿದ್ಧಗಂಗೆಕ್ಷೇತ್ರ ಶಿಕ್ಷಣಕಾಶಿಯಾಗಲು ಕಾಲವೆಲ್ಲವನ್ನೂ ಕರ್ಮದಲ್ಲೇ ಮಣಿಸಿ ಮುನ್ನಡೆದ ಕಾಯಕಯೋಗಿ; ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಮಠವನ್ನು ಅತ್ಯನ್ನತ ಮಟ್ಟಕ್ಕೆ ಏರಿಸಿದ ಶತಮಾನದ ಸಂತ; ಬತ್ತದ ಜೀವನದಿಯಾಗಿ ಬದುಕಿ, ಅನಂತದೆಡೆಗೆ ನಡೆದ ಯುಗಪುರುಷ; ಜಗಮೆಚ್ಚಿದ ಶಾಂತಿದೂತ; ತಪಸ್ವಿ; ಅನಾಥಬಂಧು; ಕೋಟ್ಯಂತರ ಭಕ್ತರ ದಾರಿದೀಪ; ಅಧ್ಯಾತ್ಮಜೀವಿ; ಮಹಾಮಾನವತಾವಾದಿ; ಲಕ್ಷಾಂತ ಮಕ್ಕಳಿಗೆ ಆಶ್ರಯದಾತ, ಅನ್ನದಾತ: ಮಠಾಧಿಪತಿಯಾಗಿ ಪವಾಡಗಳನ್ನು ಸೃಷ್ಟಿಸಿದ ಮಹಾಪುರುಷ; ಪ್ರಶಸ್ತಿ ಹೊಗಳಿಕೆ ಪ್ರಶಂಸೆಗಳಿಗೆ ಆಸೆಪಡದ ವೈರಾಗ್ಯಮೂರ್ತಿ; ಜಾತಿ ಮತ ಕುಲ ಪಂಗಡಗಳಿಗೆ ಅತೀತವಾಗಿ ಶ್ರೀಮಠವನ್ನು ಭಾವೈಕ್ಯತೆಗೆ ಸಾಕ್ಷಿಯಾಗಲು ಕಾರಣರಾದ ‘ಬುದ್ಧಿಯವರು’; ಸನ್ಯಾಸಾಶ್ರಮದ ರೀತಿ–ರಿವಾಜುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮಹಾಸನ್ಯಾಸಿ; ‘ವಸುದೈವ ಕುಟುಂಬಕಮ್’ ಎಂಬ ಮಾತಿಗೆ ಉದಾಹರಣೆಯಾಗಿ ಪವಿತ್ರಜೀವನವನ್ನು ನಡೆಸಿದ ಪರಮಯೋಗಿ; ಜನಮಾಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸಿದ್ಧಗಂಗಾರತ್ನ; ಕರ್ನಾಟಕದ ಅನರ್ಘ್ಯರತ್ನ; ಭಾರತಮಾತೆಯ ಹೆಮ್ಮೆಯ ಪುತ್ರ; ವಿಶ್ವಮಾನ್ಯರಾದ ಮೇರುವ್ಯಕ್ತಿತ್ವ; ಜಗದ್ವಂದ್ಯ; ಶಿವೈಕ್ಯರಾಗಿ ಆತ್ಮರೂಪಿಯಾಗಿ ಗದ್ದುಗನ್ನೆಯನ್ನೇರಿ ಕೈಲಾಸವನ್ನು ಸೇರಿದ ಶಿವಕುಮಾರಸ್ವಾಮಿಯವರಿಗೆ ಗುರುಭಕ್ತಿಪೂರ್ವಕ ನುಡಿನಮನಗಳು.</p>.<p>ವಿಶ್ವಕಲ್ಯಾಣಕ್ಕಾಗಿ ಮತ್ತೊಮ್ಮೆ ಅವತರಿಸಿ ಬನ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಸಿದ್ಧಗಂಗಾಶ್ರೀಮಠದ ಶಿವಕುಮಾರಸ್ವಾಮಿಗಳು ಶಿವೈಕ್ಯರಾಗಿ ಒಂದು ವರ್ಷವಾಯಿತು. ಸ್ವಾಮಿಗಳನ್ನು ಸ್ವರಿಸುತ್ತ ಈ ನುಡಿನಮನಗಳು...</strong></em></p>.<p>ಇಡೀ ಭಾರತದ ಅತ್ಯಮೂಲ್ಯ ಸಂಪತ್ತು; ಕಣ್ಣಿಗೆ ಕಾಣಿಸುತ್ತಿದ್ದ ದೇವರು;ಸನ್ಯಾಸಜೀವನ ಎಂಬ ಪಥದಲ್ಲಿ ಪರಮಾದ್ಭುತವಾಗಿ ನಡೆದಾಡುತ್ತಿದ್ದ ದೇವರು; ತ್ರಿವಿಧ ದಾಸೋಹದ ಸಿರಿಯನ್ನು ಇಡೀ ಜಗತ್ತಿಗೆ ಸಾರಿದ ತ್ಯಾಗಜೀವಿ; ಅಗಣಿತರ ಬಾಳನ್ನು ಬೆಳಗಿದ ದಿವ್ಯಮಾನವ; ಸಿದ್ಧಗಂಗೆಯ ಅವತಾರಪುರುಷ; ಕಲ್ಲುಬಂಡೆಗಳ ಪ್ರದೇಶವಾಗಿದ್ದ ಸಿದ್ಧಗಂಗೆಯನ್ನು ನಂದನವನವನ್ನಾಗಿ ಪರಿವರ್ತಿಸಿದ ಋಷಿವರ್ಯ; ಸಿದ್ಧಗಂಗೆಕ್ಷೇತ್ರ ಶಿಕ್ಷಣಕಾಶಿಯಾಗಲು ಕಾಲವೆಲ್ಲವನ್ನೂ ಕರ್ಮದಲ್ಲೇ ಮಣಿಸಿ ಮುನ್ನಡೆದ ಕಾಯಕಯೋಗಿ; ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಮಠವನ್ನು ಅತ್ಯನ್ನತ ಮಟ್ಟಕ್ಕೆ ಏರಿಸಿದ ಶತಮಾನದ ಸಂತ; ಬತ್ತದ ಜೀವನದಿಯಾಗಿ ಬದುಕಿ, ಅನಂತದೆಡೆಗೆ ನಡೆದ ಯುಗಪುರುಷ; ಜಗಮೆಚ್ಚಿದ ಶಾಂತಿದೂತ; ತಪಸ್ವಿ; ಅನಾಥಬಂಧು; ಕೋಟ್ಯಂತರ ಭಕ್ತರ ದಾರಿದೀಪ; ಅಧ್ಯಾತ್ಮಜೀವಿ; ಮಹಾಮಾನವತಾವಾದಿ; ಲಕ್ಷಾಂತ ಮಕ್ಕಳಿಗೆ ಆಶ್ರಯದಾತ, ಅನ್ನದಾತ: ಮಠಾಧಿಪತಿಯಾಗಿ ಪವಾಡಗಳನ್ನು ಸೃಷ್ಟಿಸಿದ ಮಹಾಪುರುಷ; ಪ್ರಶಸ್ತಿ ಹೊಗಳಿಕೆ ಪ್ರಶಂಸೆಗಳಿಗೆ ಆಸೆಪಡದ ವೈರಾಗ್ಯಮೂರ್ತಿ; ಜಾತಿ ಮತ ಕುಲ ಪಂಗಡಗಳಿಗೆ ಅತೀತವಾಗಿ ಶ್ರೀಮಠವನ್ನು ಭಾವೈಕ್ಯತೆಗೆ ಸಾಕ್ಷಿಯಾಗಲು ಕಾರಣರಾದ ‘ಬುದ್ಧಿಯವರು’; ಸನ್ಯಾಸಾಶ್ರಮದ ರೀತಿ–ರಿವಾಜುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮಹಾಸನ್ಯಾಸಿ; ‘ವಸುದೈವ ಕುಟುಂಬಕಮ್’ ಎಂಬ ಮಾತಿಗೆ ಉದಾಹರಣೆಯಾಗಿ ಪವಿತ್ರಜೀವನವನ್ನು ನಡೆಸಿದ ಪರಮಯೋಗಿ; ಜನಮಾಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸಿದ್ಧಗಂಗಾರತ್ನ; ಕರ್ನಾಟಕದ ಅನರ್ಘ್ಯರತ್ನ; ಭಾರತಮಾತೆಯ ಹೆಮ್ಮೆಯ ಪುತ್ರ; ವಿಶ್ವಮಾನ್ಯರಾದ ಮೇರುವ್ಯಕ್ತಿತ್ವ; ಜಗದ್ವಂದ್ಯ; ಶಿವೈಕ್ಯರಾಗಿ ಆತ್ಮರೂಪಿಯಾಗಿ ಗದ್ದುಗನ್ನೆಯನ್ನೇರಿ ಕೈಲಾಸವನ್ನು ಸೇರಿದ ಶಿವಕುಮಾರಸ್ವಾಮಿಯವರಿಗೆ ಗುರುಭಕ್ತಿಪೂರ್ವಕ ನುಡಿನಮನಗಳು.</p>.<p>ವಿಶ್ವಕಲ್ಯಾಣಕ್ಕಾಗಿ ಮತ್ತೊಮ್ಮೆ ಅವತರಿಸಿ ಬನ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>