ನವರಾತ್ರಿಯ ಮೂರನೇ ದಿನ ಜಗನ್ಮಾತೆಯನ್ನು ಚಂದ್ರಘಂಟಾ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಸಿಂಹವಾಹಿನಿಯಾಗಿ ದೇವಿಯು ತನ್ನ ಹತ್ತು ಕೈಗಳಲ್ಲಿ ಖಡ್ಗ, ಬಿಲ್ಲು–ಬಾಣ, ತ್ರಿಶೂಲ ಮುಂತಾದ ಆಯುಧಗಳನ್ನು ಹಿಡಿದಿದ್ದಾಳೆ. ಇವು ದೇವಿಯ ದುಷ್ಟಶಿಕ್ಷಣ ಮತ್ತು ಶಿಷ್ಟರಕ್ಷಣದ ಸಂಕಲ್ಪಗಳನ್ನು ಪ್ರಕಟಿಸುತ್ತವೆ. ಕೆಂಪುಬಣ್ಣವು ಲೋಕಮಾತೆಯ ಸಂಹಾರಶಕ್ತಿಗೂ ಸಂರಕ್ಷಣಶಕ್ತಿಗೂ ಸಂಕೇತ. ಶಕ್ತಿಯ ಸ್ವರೂಪವಾಗಿರುವ ಕೆಂಪುಬಣ್ಣದ ಸೀರೆಯಲ್ಲಿ ಸಂಭ್ರಮಿಸಿರುವ ಸಾರಿಯರ ಕೆಲವು ಚಿತ್ರಗಳು ಇಲ್ಲಿವೆ