<p>ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗಿಸುವುದು ಸಾಮಾನ್ಯ ಸಂಗತಿ. ದೀಪ ಬೆಳಗಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಹೇಳುತ್ತಾರೆ. </p><p><strong>ಯಾವ ತಪ್ಪುಗಳನ್ನು ಮಾಡಬಾರದು?</strong></p><ul><li><p>ದೀಪಾವಳಿಯಂದು ಹಳೆಯ ಅಥವಾ ಹಿಂದಿನ ವರ್ಷ ಬಳಸಿದ ದೀಪಗಳನ್ನು ಮರು ಬಳಕೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. </p></li><li><p>ಭಿನ್ನವಾಗಿರುವ ಅಥವಾ ಒಡೆದು ಹೋಗಿರುವ ದೀಪಗಳನ್ನು ಹಚ್ಚಬಾರದು.</p></li><li><p>ಹೊಸ ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ಶುದ್ಧ ಎಣ್ಣೆ ಹಾಗೂ ಹೊಸ ಬತ್ತಿ ಹಾಕಿ ದೀಪ ಹಚ್ಚುವುದು ಶುಭಕರ.</p></li><li><p>ಪ್ಲಾಸ್ಟಿಕ್, ಫೈಬರ್ ಅಥವಾ ವಿದ್ಯುತ್ ದೀಪಗಳನ್ನು ಬಳಸಬಾರದು. ಮಣ್ಣಿನ ದೀಪ ಹೆಚ್ಚು ಶ್ರೇಷ್ಠ. ಹಾಗಾಗಿ ಮಣ್ಣಿನ ದೀಪಗಳನ್ನು ಹೆಚ್ಚು ಬಳಸುವುದು ಸೂಕ್ತ. </p></li><li><p>ದೀಪಾವಳಿಯಲ್ಲಿ ದೀಪ ಬೆಳಗಿಸುವ ಮುನ್ನ ಮನೆಯ ಮುಂದೆ ರಂಗೋಲಿ ಬಿಡುವುದನ್ನು ಶುಭ ಎಂದು ಹೇಳಲಾಗುತ್ತದೆ. </p></li><li><p>ದೀಪಾವಳಿಯಂದು ಧನಲಕ್ಷ್ಮಿ ಹಾಗೂ ಗಣೇಶನನ್ನು ಪೂಜಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. </p></li><li><p>ದೀಪಾವಳಿಯಂದು ಹೊಸ ಬಟ್ಟೆ ಧರಿಸುವುದರಿಂದ ಶುಭ ಯೋಗ ಕೂಡಿ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.</p></li><li><p>ದೀಪಾವಳಿಯ ದಿನ ಸ್ನೇಹಿತರಿಗೆ ಸಂಬಂಧಿಕರಿಗೆ ಹಾಗೂ ನೆರೆಹೊರೆಯವರಿಗೆ ಸಿಹಿ ಹಂಚಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗಿಸುವುದು ಸಾಮಾನ್ಯ ಸಂಗತಿ. ದೀಪ ಬೆಳಗಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಹೇಳುತ್ತಾರೆ. </p><p><strong>ಯಾವ ತಪ್ಪುಗಳನ್ನು ಮಾಡಬಾರದು?</strong></p><ul><li><p>ದೀಪಾವಳಿಯಂದು ಹಳೆಯ ಅಥವಾ ಹಿಂದಿನ ವರ್ಷ ಬಳಸಿದ ದೀಪಗಳನ್ನು ಮರು ಬಳಕೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. </p></li><li><p>ಭಿನ್ನವಾಗಿರುವ ಅಥವಾ ಒಡೆದು ಹೋಗಿರುವ ದೀಪಗಳನ್ನು ಹಚ್ಚಬಾರದು.</p></li><li><p>ಹೊಸ ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ಶುದ್ಧ ಎಣ್ಣೆ ಹಾಗೂ ಹೊಸ ಬತ್ತಿ ಹಾಕಿ ದೀಪ ಹಚ್ಚುವುದು ಶುಭಕರ.</p></li><li><p>ಪ್ಲಾಸ್ಟಿಕ್, ಫೈಬರ್ ಅಥವಾ ವಿದ್ಯುತ್ ದೀಪಗಳನ್ನು ಬಳಸಬಾರದು. ಮಣ್ಣಿನ ದೀಪ ಹೆಚ್ಚು ಶ್ರೇಷ್ಠ. ಹಾಗಾಗಿ ಮಣ್ಣಿನ ದೀಪಗಳನ್ನು ಹೆಚ್ಚು ಬಳಸುವುದು ಸೂಕ್ತ. </p></li><li><p>ದೀಪಾವಳಿಯಲ್ಲಿ ದೀಪ ಬೆಳಗಿಸುವ ಮುನ್ನ ಮನೆಯ ಮುಂದೆ ರಂಗೋಲಿ ಬಿಡುವುದನ್ನು ಶುಭ ಎಂದು ಹೇಳಲಾಗುತ್ತದೆ. </p></li><li><p>ದೀಪಾವಳಿಯಂದು ಧನಲಕ್ಷ್ಮಿ ಹಾಗೂ ಗಣೇಶನನ್ನು ಪೂಜಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. </p></li><li><p>ದೀಪಾವಳಿಯಂದು ಹೊಸ ಬಟ್ಟೆ ಧರಿಸುವುದರಿಂದ ಶುಭ ಯೋಗ ಕೂಡಿ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.</p></li><li><p>ದೀಪಾವಳಿಯ ದಿನ ಸ್ನೇಹಿತರಿಗೆ ಸಂಬಂಧಿಕರಿಗೆ ಹಾಗೂ ನೆರೆಹೊರೆಯವರಿಗೆ ಸಿಹಿ ಹಂಚಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>