ಭಕ್ತಿ, ಅಧ್ಯಾತ್ಮ, ಸಾಮಾಜಿಕ ಕಳಕಳಿ, ಮನೋರಂಜನೆ, ಸಾಂಸ್ಕೃತಿಕ ಭವ್ಯ ರಥದ ಜೊತೆಗೆ ಜನಜೀವನ ಸುಧಾರಿಸುವ ಈ ಜಾತ್ರೆ ವಿಶೇಷವಾದದು. ಗುಡ್ಡ, ಬೆಟ್ಟ, ಕಲ್ಲುಬಂಡೆಗಳ ಪ್ರಾಕೃತಿಕ ಸೌಂದರ್ಯದ ಗಣಿಯಾಗಿರುವ ಶ್ರೀಮಠ ಭಕ್ತರ ಕಾಮಧೇನುವಾಗಿದೆ. ಬರುವ ಭಕ್ತರಿಗೆ ಅಂತ್ರ, ತಂತ್ರ, ಚೀಟಿ, ಪುಡಿಯನ್ನು ನೀಡದೇ ಆಯುರ್ವೇದ ಮಹತ್ವ, ಆರೋಗ್ಯದ ಸಮಸ್ಯೆ ಪರಿಹರಿಸುವ ದೈಹಿಕ, ಮನೋವೇದನೆ ಕಳೆಯುವ ಮಠವಾಗಿದೆ.