‘ಕೂಡಲಸಂಗನ ಒಲಿಸಲು ಬಂದ ಪ್ರಸಾದಕಾಯ ಕೆಡಿಸಬಾರದು’ ಎಂದು ಬಸವಣ್ಣ ಹೇಳುತ್ತಾರೆ. ಇದನ್ನು ಚೆನ್ನಾಗಿ ಬಳಸಿದರೆ ಸಮಾಜಕ್ಕೆ ಕೊಡುಗೆಯಾಗುತ್ತದೆ. ಚೆನ್ನಾಗಿ ಬಳಸಬೇಕು. ಚಾಕು, ಈಳಿಗೆ ಅಡುಗೆ ಮನೆಯಲ್ಲಿ ಬಳಸುತ್ತ ಇದ್ದರೆ ಬಹಳ ದಿವಸಗಳವರೆಗೆ ಬಳಕೆಯಾಗುತ್ತವೆ. ಬಳಸದೆ ಬಿಟ್ಟಾಗ ತುಕ್ಕು ಹಿಡಿದು ಕೆಲಸಕ್ಕೆ ಬರುವುದಿಲ್ಲ. ಪ್ರಸಾದಕಾಯ ಸತ್ಕಾರ್ಯಕ್ಕೆ ಬಳಸುತ್ತ ಇದ್ದಾಗ ಇದರ ಸದುಪಯೋಗವಾಗುತ್ತದೆ.