ಸಮಾನ್ಯವಾಗಿ ನಮಗೆ ತೋರುವುದು ಪುರುಷಾರ್ಥಸಿದ್ಧಿಗೋಸ್ಕರ ಕರ್ಮ ಎಂದು. ಕರ್ಮ ಏಕೆ ಮಾಡಬೇಕು? ಜೀವಿಕೆ ಸಂಪಾದಿಸಿಕೊಳ್ಳುವುದಕ್ಕೆ. ಮತ್ತೂ ಏಕೆ ಮಾಡಬೇಕು? ಸಂಪಾದಿಸಿಕೊಂಡದ್ದು ಸಾಲದೆಹೋದರೆ ಭಗವಂತನು ಇನ್ನೂ ಸ್ವಲ್ಪ ಅನುಗ್ರಹಿಸಿಯಾನೆಂಬ ನಿರೀಕ್ಷೆಯಿಂದ. ಹೀಗೆ ಅನೇಕ ಕಾರಣಗಳಿಂದ ಕರ್ಮ ಮಾಡುತ್ತೇವೆ. ಕೇವಲ ಈಶ್ವರಾಧನೆಯೆಂದು ಸ್ವಕರ್ಮಮಾಡಿರೆಂದು ಭಗವಂತನ ಉಪದೇಶ. ಅಂಥ ಕರ್ಮಾಚರಣೇಯೇ ಆತ್ಮಜ್ಞಾನಕ್ಕೆ ದಾರಿ.