ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸಿದ ಬಸವಾದಿ ಶಿವಶರಣರು ಸಕಲರಿಗೂ ಆದರ್ಶ ಪಥವನ್ನೂ ನಿರ್ಮಿಸಿದವರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸರ್ವರಿಗೂ ಸಮ ಪಾಲು– ಸಮ ಬಾಳು ಎಂಬ ತತ್ವ– ಸಿದ್ಧಾಂತದಲ್ಲಿ ಬದುಕಿದವರು. ಜಗತ್ತಿಗೆ ಸಮಾನತೆಯ ಸಂದೇಶ ಸಾರಿದವರು ನಮ್ಮ ಶರಣರು. ಮಾನವೀಯತೆಯು ಅಮಾನವೀಯವಾಗುತ್ತಿರುವ ಈ ಸಂದರ್ಭದಲ್ಲಿ ವಿಶ್ವ ಗುರು ಬಸವಣ್ಣನವರ ಈ ಮೇಲಿನ ವಚನವು ಪ್ರಸ್ತುತ ಎನಿಸುತ್ತದೆ. ಎಲ್ಲರೂ ನನ್ನವರೆಂದಾಗ ದೊರೆಯುವ ಆನಂದವು ಬೇರೆ ಯಾವ ಸಂದರ್ಭದಲ್ಲೂ ದೊರೆಯುವುದಿಲ್ಲ. ಆದರೆ, ವಿಶಾಲ ಮನೋಭಾವವು ಕಡಿಮೆಯಾಗಿ ಸಂಕುಚಿತತೆ ತಾಂಡವವಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಬಸವಣ್ಣನವರ ಈ ನುಡಿಪುಷ್ಪಗಳು ಸಕಲರ ಅಂತರಾಳದಲ್ಲಿ ಇಳಿದರೆ ಕೆಲವೊಂದಿಷ್ಟಾದರೂ ಬದಲಾವಣೆ ಸಾಧ್ಯವಾಗಬಹುದು ಎನ್ನುವ ಆಶಯ ನನ್ನದು.