‘ಗುತ್ತಿಗೆ ಸಿಬ್ಬಂದಿ ಲಾಲಸಾಬ್ ಟಕ್ಕಳಕಿ ಅವರೇ ಹಿರಿಯ ವಿದ್ಯಾರ್ಥಿಗಳಿಗೆ ಹೇಳಿ, ನಮ್ಮನ್ನು ಚಾದರ್ನಲ್ಲಿ ಕಟ್ಟಿ, ಬಾಗಿಲು ಹಾಕಿ ಹೊಡೆಸಿದ್ದಾರೆ. ನಮ್ಮನ್ನು ಹೊಡೆದವರು ವಸತಿ ನಿಲಯದಲ್ಲಿ ಬೀಡಿ, ಸಿಗರೇಟ್ ಸೇದುತ್ತಾರೆ. ಶಾಲೆಗೂ ಸರಿಯಾಗಿ ಹೋಗುವುದಿಲ್ಲ. ಅವರಿಗೆ ವಾರ್ಡನ್ ಏನೂ ಹೇಳುವುದಿಲ್ಲ. ಈ ವಿಷಯವನ್ನು ನಾವು ಹೇಳಿದ್ದೇವೆ ಎಂದು ಗೊತ್ತಾದರೆ, ನಮ್ಮನ್ನು ಮತ್ತೆ ಹೊಡೆಯುತ್ತಾರೆ. ನಮಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಏಟು ತಿಂದ ಕಿರಿಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.