<p><strong>ಮಹಾಲಿಂಗಪುರ</strong>: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆಯೇ ಹೆಚ್ಚು. ಆದರೆ, ಇಲ್ಲೊಬ್ಬ ಕೃಷಿಕ ಕೇವಲ 40 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು ₹40 ಸಾವಿರ ಗಳಿಸಿದ್ದಾರೆ.</p>.<p>ಸಮೀಪದ ಢವಳೇಶ್ವರ ಗ್ರಾಮದ ರೈತ ರವಿ ಬೀರನಗಡ್ಡಿ ಅವರಿಗೆ 12 ಎಕರೆ ಜಮೀನು ಇದ್ದು, ಅದರಲ್ಲಿ 1 ಎಕರೆ 10 ಗುಂಟೆ ಜಮೀನಿನಲ್ಲಿ ಮಾತ್ರ ಕೊತ್ತಂಬರಿ ಬೀಜ ಬಿತ್ತಿದ್ದರು. ಕೆಜಿಗೆ ₹110 ದರದಲ್ಲಿ 80 ಕೆಜಿ ಕೊತ್ತಂಬರಿ ಬೀಜ ಖರೀದಿಸಿದ್ದರು. ಒಮ್ಮೆ ರಸಗೊಬ್ಬರ ಹಾಕಿ ಎರಡು ಬಾರಿ ರಾಸಾಯನಿಕ ಸಿಂಪಡಿಸಿದ್ದರು. ನಾಲ್ಕು ಬಾರಿ ನೀರುಣಿಸಿ ಕಳೆ ತೆಗೆದಿದ್ದರು. ನೀರಿನ ವ್ಯವಸ್ಥೆಯೂ ಇರುವುದರಿಂದ ಉತ್ತಮ ಇಳುವರಿ ಬಂದಿದೆ.</p>.<p>ಕೊತ್ತಂಬರಿ ಸೊಪ್ಪು ನೋಡಿದ ವರ್ತಕರೊಬ್ಬರು ₹50 ಸಾವಿರಕ್ಕೆ ಎಲ್ಲವನ್ನೂ ಗುತ್ತಿಗೆ ಪಡೆದಿದ್ದರು. ರವಿ ಅವರಿಗೆ ಕೂಲಿಯಾಳು, ಸಾಗಣೆ ಮತ್ತು ಮಾರುಕಟ್ಟೆ ವೆಚ್ಚ ಉಳಿದಿದೆ. 40 ದಿನಕ್ಕೆ ಕಟಾವಿಗೆ ಬಂದ ಈ ಬೆಳೆಗೆ ಅವರು ₹10 ಸಾವಿರ ವೆಚ್ಚ ಮಾಡಿದ್ದಾರೆ. ಖರ್ಚು ತೆಗೆದು ₹40 ಸಾವಿರ ಲಾಭ ಗಳಿಸಿಕೊಂಡಿದ್ದಾರೆ.</p>.<p>ಗುತ್ತಿಗೆ ಪಡೆದ ವರ್ತಕ 1 ಟ್ರೇಗೆ 50 ರಂತೆ ಅಂದಾಜು 750 ಟ್ರೇಯಲ್ಲಿ ಒಂದು ಹಿಡಿ ಕೊತ್ತಂಬರಿ ಕಟ್ಟಿಕೊಂಡು ಹುಬ್ಬಳ್ಳಿ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಮಾರುಕಟ್ಟೆ ದರದಂತೆ ಒಂದು ಹಿಡಿ ಕೊತ್ತಂಬರಿಗೆ ₹5 ರಂತೆ ಲೆಕ್ಕ ಹಾಕಿದರೆ ₹1.50 ಲಕ್ಷಕ್ಕೂ ಅಧಿಕ ಲಾಭ ವರ್ತಕನಿಗೆ ಆಗಿದೆ.</p>.<p>‘ಮೂರು ವರ್ಷ ಕಬ್ಬು ಬೆಳೆದ ನಂತರ ಅಲ್ಪಾವಧಿ ಬೆಳೆ ಬೆಳೆದು ಮತ್ತೆ ಕಬ್ಬು ನಾಟಿ ಮಾಡಿದರೆ ಕಬ್ಬಿನ ಇಳುವರಿ ಹೆಚ್ಚಾಗುತ್ತದೆ. ಈ ಕಾರಣದಿಂದ ಕೊತ್ತಂಬರಿ ಸೊಪ್ಪು ಬೆಳೆಯಲು ಉತ್ಸುಕನಾದೆ. ವ್ಯಾಪಾರಿ ರಮೇಶ ಕಡಕೋಳ ಅವರ ಮಾರ್ಗದರ್ಶನದಲ್ಲಿ ಕೊತ್ತಂಬರಿ ಬೆಳೆಯಲು ಮುಂದಾದೆ’ ಎನ್ನುತ್ತಾರೆ ರೈತ ರವಿ ಬೀರನಗಡ್ಡಿ.</p>.<blockquote>1 ಎಕರೆ 10 ಗುಂಟೆ ಜಮೀನಿನಲ್ಲಿ ಬಿತ್ತನೆ 80 ಕೆಜಿ ಕೊತ್ತಂಬರಿ ಬೀಜ ಖರೀದಿ ಉತ್ತಮ ಇಳುವರಿ ಪಡೆದ ರೈತ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ</strong>: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆಯೇ ಹೆಚ್ಚು. ಆದರೆ, ಇಲ್ಲೊಬ್ಬ ಕೃಷಿಕ ಕೇವಲ 40 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು ₹40 ಸಾವಿರ ಗಳಿಸಿದ್ದಾರೆ.</p>.<p>ಸಮೀಪದ ಢವಳೇಶ್ವರ ಗ್ರಾಮದ ರೈತ ರವಿ ಬೀರನಗಡ್ಡಿ ಅವರಿಗೆ 12 ಎಕರೆ ಜಮೀನು ಇದ್ದು, ಅದರಲ್ಲಿ 1 ಎಕರೆ 10 ಗುಂಟೆ ಜಮೀನಿನಲ್ಲಿ ಮಾತ್ರ ಕೊತ್ತಂಬರಿ ಬೀಜ ಬಿತ್ತಿದ್ದರು. ಕೆಜಿಗೆ ₹110 ದರದಲ್ಲಿ 80 ಕೆಜಿ ಕೊತ್ತಂಬರಿ ಬೀಜ ಖರೀದಿಸಿದ್ದರು. ಒಮ್ಮೆ ರಸಗೊಬ್ಬರ ಹಾಕಿ ಎರಡು ಬಾರಿ ರಾಸಾಯನಿಕ ಸಿಂಪಡಿಸಿದ್ದರು. ನಾಲ್ಕು ಬಾರಿ ನೀರುಣಿಸಿ ಕಳೆ ತೆಗೆದಿದ್ದರು. ನೀರಿನ ವ್ಯವಸ್ಥೆಯೂ ಇರುವುದರಿಂದ ಉತ್ತಮ ಇಳುವರಿ ಬಂದಿದೆ.</p>.<p>ಕೊತ್ತಂಬರಿ ಸೊಪ್ಪು ನೋಡಿದ ವರ್ತಕರೊಬ್ಬರು ₹50 ಸಾವಿರಕ್ಕೆ ಎಲ್ಲವನ್ನೂ ಗುತ್ತಿಗೆ ಪಡೆದಿದ್ದರು. ರವಿ ಅವರಿಗೆ ಕೂಲಿಯಾಳು, ಸಾಗಣೆ ಮತ್ತು ಮಾರುಕಟ್ಟೆ ವೆಚ್ಚ ಉಳಿದಿದೆ. 40 ದಿನಕ್ಕೆ ಕಟಾವಿಗೆ ಬಂದ ಈ ಬೆಳೆಗೆ ಅವರು ₹10 ಸಾವಿರ ವೆಚ್ಚ ಮಾಡಿದ್ದಾರೆ. ಖರ್ಚು ತೆಗೆದು ₹40 ಸಾವಿರ ಲಾಭ ಗಳಿಸಿಕೊಂಡಿದ್ದಾರೆ.</p>.<p>ಗುತ್ತಿಗೆ ಪಡೆದ ವರ್ತಕ 1 ಟ್ರೇಗೆ 50 ರಂತೆ ಅಂದಾಜು 750 ಟ್ರೇಯಲ್ಲಿ ಒಂದು ಹಿಡಿ ಕೊತ್ತಂಬರಿ ಕಟ್ಟಿಕೊಂಡು ಹುಬ್ಬಳ್ಳಿ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಮಾರುಕಟ್ಟೆ ದರದಂತೆ ಒಂದು ಹಿಡಿ ಕೊತ್ತಂಬರಿಗೆ ₹5 ರಂತೆ ಲೆಕ್ಕ ಹಾಕಿದರೆ ₹1.50 ಲಕ್ಷಕ್ಕೂ ಅಧಿಕ ಲಾಭ ವರ್ತಕನಿಗೆ ಆಗಿದೆ.</p>.<p>‘ಮೂರು ವರ್ಷ ಕಬ್ಬು ಬೆಳೆದ ನಂತರ ಅಲ್ಪಾವಧಿ ಬೆಳೆ ಬೆಳೆದು ಮತ್ತೆ ಕಬ್ಬು ನಾಟಿ ಮಾಡಿದರೆ ಕಬ್ಬಿನ ಇಳುವರಿ ಹೆಚ್ಚಾಗುತ್ತದೆ. ಈ ಕಾರಣದಿಂದ ಕೊತ್ತಂಬರಿ ಸೊಪ್ಪು ಬೆಳೆಯಲು ಉತ್ಸುಕನಾದೆ. ವ್ಯಾಪಾರಿ ರಮೇಶ ಕಡಕೋಳ ಅವರ ಮಾರ್ಗದರ್ಶನದಲ್ಲಿ ಕೊತ್ತಂಬರಿ ಬೆಳೆಯಲು ಮುಂದಾದೆ’ ಎನ್ನುತ್ತಾರೆ ರೈತ ರವಿ ಬೀರನಗಡ್ಡಿ.</p>.<blockquote>1 ಎಕರೆ 10 ಗುಂಟೆ ಜಮೀನಿನಲ್ಲಿ ಬಿತ್ತನೆ 80 ಕೆಜಿ ಕೊತ್ತಂಬರಿ ಬೀಜ ಖರೀದಿ ಉತ್ತಮ ಇಳುವರಿ ಪಡೆದ ರೈತ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>