<p><strong>ಗುಳೇದಗುಡ್ಡ</strong>: ಪಟ್ಟಣದ ಲಾಲಬಹ್ದೂರ ಶಾಸ್ತ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ 10 ವರ್ಷ ತುಂಬುತ್ತಿರುವುದರಿಂದ ದಶಮಾನೋತ್ಸವದ ಸಂಭ್ರಮ ಆಚರಿಸಲಾಗುತ್ತಿದ್ದು ಹಾಗೂ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜ.22ರಂದು ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ 5 ಸಾವಿರ ಠೇವಣಿ ಇರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಪ್ರಶಾಂತ ಜವಳಿ ತಿಳಿಸಿದ್ದಾರೆ.</p>.<p>ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಇಡೀ ದೇಶಕ್ಕೆ ಒಂದು ಐತಿಹಾಸ ಕ್ಷಣವಾಗಿದ್ದು, ಅಲ್ಲದೇ ನಮ್ಮ ಸಂಘವು 10ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಪ್ರಯುಕ್ತ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಈ ಯೋಜನೆ ಹಾಕಿಕೊಳ್ಳಲಾಗಿದೆ. ಜ.22ರಂದು ಜನಿಸುವ ಮಗುವಿಗೆ ದಿನ 5 ಸಾವಿರ ಕೊಟ್ಟರೆ ಹಣ ಉಳಿಯುವದಿಲ್ಲ. ಅದನ್ನೇ ಠೇವಣಿ ರೂಪದಲ್ಲಿಟ್ಟರೇ 18 ವರ್ಷದ ನಂತರ ಮಗುವಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಅಲ್ಲದೇ ರಾಮ ಮಂದಿರ ಉದ್ಘಾಟನೆಯ ದಿನವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಈ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.</p>.<p>ಜ.22ರಂದು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಅಥವಾ ಹೆಣ್ಣು ಯಾವುದೇ ಮಗು ಜನಿಸಿದರೂ ಆ ಮಗುವಿನ ಹೆಸರಿಗೆ ₹5 ಸಾವಿರ ಠೇವಣಿ ಇರಿಸಲಾಗುವುದು ₹5 ಸಾವಿರ 18 ವರ್ಷ ಠೇವಣಿ ಇರಿಸಿ, 18 ವರ್ಷದ ನಂತರ ₹25 ಸಾವಿರ ಮಗುವಿಗೆ ನೀಡಲಾಗುವುದು ಎಂದು ಹೇಳಿದರು.</p>.<p>ಸಂಘದ ನಿರ್ದೇಶಕರಾದ ಶೇಖರ ರಾಠೋಡ, ರಾಚಪ್ಪ ಸಾರಂಗಿ, ಸುನಂದಾ ಸತ್ತಿಗೇರಿ, ರೂಪಾ ಪವಾರ, ಯಲ್ಲಪ್ಪ ಪವಾರ, ವ್ಯವಸ್ಥಾಪಕಿ ಭಾವನಾ ಅಲದಿ, ಎಂ.ಎಸ್.ಕಾಳನ್ನವರ, ಎಸ್.ಎಚ್.ಗೌಡರ, ದ್ರಾಕ್ಷಾಯಣಿ ವಾಳದುಂಕಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ಪಟ್ಟಣದ ಲಾಲಬಹ್ದೂರ ಶಾಸ್ತ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ 10 ವರ್ಷ ತುಂಬುತ್ತಿರುವುದರಿಂದ ದಶಮಾನೋತ್ಸವದ ಸಂಭ್ರಮ ಆಚರಿಸಲಾಗುತ್ತಿದ್ದು ಹಾಗೂ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜ.22ರಂದು ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ 5 ಸಾವಿರ ಠೇವಣಿ ಇರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಪ್ರಶಾಂತ ಜವಳಿ ತಿಳಿಸಿದ್ದಾರೆ.</p>.<p>ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಇಡೀ ದೇಶಕ್ಕೆ ಒಂದು ಐತಿಹಾಸ ಕ್ಷಣವಾಗಿದ್ದು, ಅಲ್ಲದೇ ನಮ್ಮ ಸಂಘವು 10ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಪ್ರಯುಕ್ತ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಈ ಯೋಜನೆ ಹಾಕಿಕೊಳ್ಳಲಾಗಿದೆ. ಜ.22ರಂದು ಜನಿಸುವ ಮಗುವಿಗೆ ದಿನ 5 ಸಾವಿರ ಕೊಟ್ಟರೆ ಹಣ ಉಳಿಯುವದಿಲ್ಲ. ಅದನ್ನೇ ಠೇವಣಿ ರೂಪದಲ್ಲಿಟ್ಟರೇ 18 ವರ್ಷದ ನಂತರ ಮಗುವಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಅಲ್ಲದೇ ರಾಮ ಮಂದಿರ ಉದ್ಘಾಟನೆಯ ದಿನವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಈ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.</p>.<p>ಜ.22ರಂದು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಅಥವಾ ಹೆಣ್ಣು ಯಾವುದೇ ಮಗು ಜನಿಸಿದರೂ ಆ ಮಗುವಿನ ಹೆಸರಿಗೆ ₹5 ಸಾವಿರ ಠೇವಣಿ ಇರಿಸಲಾಗುವುದು ₹5 ಸಾವಿರ 18 ವರ್ಷ ಠೇವಣಿ ಇರಿಸಿ, 18 ವರ್ಷದ ನಂತರ ₹25 ಸಾವಿರ ಮಗುವಿಗೆ ನೀಡಲಾಗುವುದು ಎಂದು ಹೇಳಿದರು.</p>.<p>ಸಂಘದ ನಿರ್ದೇಶಕರಾದ ಶೇಖರ ರಾಠೋಡ, ರಾಚಪ್ಪ ಸಾರಂಗಿ, ಸುನಂದಾ ಸತ್ತಿಗೇರಿ, ರೂಪಾ ಪವಾರ, ಯಲ್ಲಪ್ಪ ಪವಾರ, ವ್ಯವಸ್ಥಾಪಕಿ ಭಾವನಾ ಅಲದಿ, ಎಂ.ಎಸ್.ಕಾಳನ್ನವರ, ಎಸ್.ಎಚ್.ಗೌಡರ, ದ್ರಾಕ್ಷಾಯಣಿ ವಾಳದುಂಕಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>