<p><strong>ಗುಳೇದಗುಡ್ಡ: ಒ</strong>ಬ್ಬ ಸಾಮಾನ್ಯ ವ್ಯಕ್ತಿಯೂ ಮನಸ್ಸು ಮಾಡಿದರೆ ಉನ್ನತವಾದ ಸಾಧನೆ ಮಾಡಬಹುದು. ಎಂ.ಆರ್.ಎನ್. ಗ್ರುಪ್ ಕಟ್ಟಿ ಅತಿ ಕಡಿಮೆ ಬಂಡವಾಳ ಹೂಡಿ ಹಲವು ಉದ್ಯಮಗಳನ್ನು ಆರಂಭಿಸಿ ಇಂದು 6 ಸಾವಿರ ಕೋಟಿ ವ್ಯವಹಾರ ಮಾಡುತ್ತಿದ್ದೇವೆ. ಬೆಳವಣಿಗೆ, ಹೆಸರು ಒಮ್ಮಿಂದೊಮ್ಮೆಲೆ ಬರುವುದಿಲ್ಲ, ಶ್ರಮ ಪಟ್ಟಾಗ ಅದು ಸಾಧ್ಯ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.</p>.<p>ಪಟ್ಟಣದಲ್ಲಿ ಭಾನುವಾರ ಜರುಗಿದ ವಿಶಾಲ(ಎಮ್.ಆರ್.ಎನ್.)ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಗುಳೇದಗುಡ್ಡ ಪಟ್ಟಣದಲ್ಲಿ 5 ನೇ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಹಕಾರಿ ಕ್ಷೇತ್ರದಲ್ಲಿ ಮೊದಲಬಾರಿಗೆ 17 ಲಕ್ಷ ಹೂಡಿಕೆ ಮಾಡಿ 60 ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಲಾಗಿದೆ. 35 ಸಾವಿರ ಕೋಟಿ ವ್ಯವಹಾರವಿದೆ, 1700 ಕೋಟಿ ಡಿಪಾಜಿಟ್ ಹೊಂದಿದೆ’ ಎಂದರು.</p>.<p>‘ಪಟ್ಟಣದ ಜನರು ಬ್ಯಾಂಕಿನ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.</p>.<p>ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ‘ವಿಶಾಲ ಸಹಕಾರಿ ಪತ್ತಿನ ಸಂಘ ನಾಲ್ಕು ಸಾವಿರ ಸದಸ್ಯರನ್ನು ಹೊಂದಿದ್ದು, ₹ 84 ಕೋಟಿ ಸಾಲ ನೀಡಲಾಗಿದೆ, ₹407 ಕೋಟಿ ವ್ಯಾಪಾರ, ವಹಿವಾಟು ಹೊಂದಿದೆ. ಶೇ 18 ಪ್ರತಿಶತ ಗ್ರಾಹಕರಿಗೆ ಡಿವಿಡೆಂಡ್ ವಿತರಿಸಲಾಗಿದೆ’ ಎಂದರು.</p>.<p>ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜಸೇಖರ ಶೀಲವಂತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು. ಮುರುಘಾಮಠದ ಮ.ನಿ.ಪ್ರ ಕಾಶೀನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಇದೇ ಸಂದರ್ಭದಲ್ಲಿ ಗುಳೇದಗುಡ್ಡ ಶಾಖೆಯ ಸಲಹಾ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.</p>.<p>ವೇದಿಕೆಯ ಮೇಲೆ ಮಹಾಂತೇಶ ಮಮದಾಪೂರ, ಮಾಜಿಶಾಸಕ ಮಲ್ಲಿಕಾರ್ಜುನ ಬನ್ನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಸಂಜು ಬರಗುಂಡಿ, ಆಸಂಗೆಪ್ಪ ನಕ್ಕರಗುಂದಿ, ಹೊಳಬಸು ಶೆಟ್ಟರ್, ಚಂದ್ರಕಾಂತ ಶೇಖಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ: ಒ</strong>ಬ್ಬ ಸಾಮಾನ್ಯ ವ್ಯಕ್ತಿಯೂ ಮನಸ್ಸು ಮಾಡಿದರೆ ಉನ್ನತವಾದ ಸಾಧನೆ ಮಾಡಬಹುದು. ಎಂ.ಆರ್.ಎನ್. ಗ್ರುಪ್ ಕಟ್ಟಿ ಅತಿ ಕಡಿಮೆ ಬಂಡವಾಳ ಹೂಡಿ ಹಲವು ಉದ್ಯಮಗಳನ್ನು ಆರಂಭಿಸಿ ಇಂದು 6 ಸಾವಿರ ಕೋಟಿ ವ್ಯವಹಾರ ಮಾಡುತ್ತಿದ್ದೇವೆ. ಬೆಳವಣಿಗೆ, ಹೆಸರು ಒಮ್ಮಿಂದೊಮ್ಮೆಲೆ ಬರುವುದಿಲ್ಲ, ಶ್ರಮ ಪಟ್ಟಾಗ ಅದು ಸಾಧ್ಯ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.</p>.<p>ಪಟ್ಟಣದಲ್ಲಿ ಭಾನುವಾರ ಜರುಗಿದ ವಿಶಾಲ(ಎಮ್.ಆರ್.ಎನ್.)ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಗುಳೇದಗುಡ್ಡ ಪಟ್ಟಣದಲ್ಲಿ 5 ನೇ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಹಕಾರಿ ಕ್ಷೇತ್ರದಲ್ಲಿ ಮೊದಲಬಾರಿಗೆ 17 ಲಕ್ಷ ಹೂಡಿಕೆ ಮಾಡಿ 60 ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಲಾಗಿದೆ. 35 ಸಾವಿರ ಕೋಟಿ ವ್ಯವಹಾರವಿದೆ, 1700 ಕೋಟಿ ಡಿಪಾಜಿಟ್ ಹೊಂದಿದೆ’ ಎಂದರು.</p>.<p>‘ಪಟ್ಟಣದ ಜನರು ಬ್ಯಾಂಕಿನ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.</p>.<p>ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ‘ವಿಶಾಲ ಸಹಕಾರಿ ಪತ್ತಿನ ಸಂಘ ನಾಲ್ಕು ಸಾವಿರ ಸದಸ್ಯರನ್ನು ಹೊಂದಿದ್ದು, ₹ 84 ಕೋಟಿ ಸಾಲ ನೀಡಲಾಗಿದೆ, ₹407 ಕೋಟಿ ವ್ಯಾಪಾರ, ವಹಿವಾಟು ಹೊಂದಿದೆ. ಶೇ 18 ಪ್ರತಿಶತ ಗ್ರಾಹಕರಿಗೆ ಡಿವಿಡೆಂಡ್ ವಿತರಿಸಲಾಗಿದೆ’ ಎಂದರು.</p>.<p>ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜಸೇಖರ ಶೀಲವಂತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು. ಮುರುಘಾಮಠದ ಮ.ನಿ.ಪ್ರ ಕಾಶೀನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಇದೇ ಸಂದರ್ಭದಲ್ಲಿ ಗುಳೇದಗುಡ್ಡ ಶಾಖೆಯ ಸಲಹಾ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.</p>.<p>ವೇದಿಕೆಯ ಮೇಲೆ ಮಹಾಂತೇಶ ಮಮದಾಪೂರ, ಮಾಜಿಶಾಸಕ ಮಲ್ಲಿಕಾರ್ಜುನ ಬನ್ನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಸಂಜು ಬರಗುಂಡಿ, ಆಸಂಗೆಪ್ಪ ನಕ್ಕರಗುಂದಿ, ಹೊಳಬಸು ಶೆಟ್ಟರ್, ಚಂದ್ರಕಾಂತ ಶೇಖಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>