ಏಕಾಂಗಿಯಾಗಿ ಬಾವಿಗಳನ್ನು ತೋಡಿ ಮನೆಗೆ, ಅಂಗನವಾಡಿ ಮಕ್ಕಳಿಗೆ ನೀರಿನ ಆಸರೆಯಾಗಿ ನಿಂತ 57 ವರ್ಷ ವಯಸ್ಸಿನ ಗೌರಮ್ಮ ಅವರ ಏಕಾಂಗಿ ಸಾಹಸಕ್ಕೆ ಈ ಪ್ರಶಸ್ತಿ ಅರಸಿಕೊಂಡು ಬಂದಿದೆ. ಏ. 23 ರಂದು ಬೆಳಿಗ್ಗೆ 9ಕ್ಕೆ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ.